ಮೂರು ಗಂಟಿನಲಿ ನಂಟಾಗಿ
ಏಳು ಹೆಜ್ಜೆಗಳು ನಡೆದು ಜಂಟಿಯಾಗಿ
ಕೈ ಹಿಡಿದು ಅಗ್ನಿಸಾಕ್ಷಿಯಾಗಿ
ಬದುಕಬೇಕು ಮನಸಾಕ್ಷಿಯಾಗಿ
ಭಾವಗಳು ಮನಸುಗಳ ಬೆಸೆದು
ಬೆಸೆದ ಜೀವಗಳ ಮನಸುಗಳು
ಸಾವಿರ ಕನಸುಗಳ ಹೊಸೆದು
ಅಡಿ ಇಡುವರು ನವ ಜೀವನಕೆ
ಮೂರು ಗಂಟಿನೊಳಗಿದೆ ಸಾವಿರ ಮರ್ಮ
ನಗು ನಗುತ ಬಾಳುವುದು ಸತಿ ಪತಿಗಳ ಧರ್ಮ
ಎರಡು ಜೀವಗಳ ಕೈಗಳ ಬೆಸುಗೆ
ಎರಡು ಸಂಸಾರಗಳಿಗೆ ಬಾಳ ತುಂಬ ಹೊಸುಗೆ
ಸೋಲಿಸಲು ಹವಣಿಸದೆ ಒಬ್ಬರನೊಬ್ಬರು
ನಂಬಿಕೊಂಡು ಮನಸಾರೆ ಎಂದೂ ಒಂದೇ ನಾವಿಬ್ಬರು
ತಿಳಿದು ಬೆಸುಗೆಯ ಜೊತೆ ಬಂದವರೆಲ್ಲ ನಮ್ಮವರು
ಅರಿತು ಜೊತೆಗೆ ನಡೆಯುತ ಕೆಡಿಸುವವರು ಯಾರಿದ್ದರು
ನಗಿಸಿ ನಗುತ ಸಾಗಬೇಕು ಸಾವಿರ ನೋವಿದ್ದರು
ಕಣ್ಣು ಕಣ್ಣಲ್ಲೇ ಕವನ
ಮೂಡಿದ ಕ್ಷಣವೇ ಮೌನ
ಒಂದೊಂದು ಪದಗಳ ಪ್ರತಿರೂಪವು ನೀನಾಗಿ
ಬರೆದೆ ನಿನಗಾಗಿ ನಾ ಕವಿಯಾಗಿ
ಭಾವನೆಗಳು ತುಂಬಿರುವ ಈ ಕವನ
ಅನುದಿನ ಪ್ರತಿಕ್ಷಣ
ನಾ ನೆನೆಯುವೆ ನಿನ್ನನು
ನಿನ್ನ ನೆನೆನೆನೆದ ಪ್ರತಿಕ್ಷಣವು
ಜನನವಾಗುತಿವೆ ಒಂದೊಂದು ಕವನ
ಕಳೆದು ಹೋಗಿದ್ದೆನೆ ನನ್ನೊಳಗೆ ನಾನು
ಉಸಿರಲ್ಲಿ ಉಸಿರಾಗಿ ಬೆರೆತು ನಾನು ನೀನಾಗಿ
ಹಗಲಿಲ್ಲ ಇರುಳಿಲ್ಲ ನೀನಿರುವೆ ಮನವೆಲ್ಲ
ಮನವಿದು ನಿನ್ನ ನೆನೆಯದ ಕ್ಷಣವಿಲ್ಲ..
ಮರೆತರೂ ಮರೆಯಲಾಗದ
ನೆನೆಸಿಕೊಂಡಷ್ಟು ಖುಷಿ ಕೊಡುವ
ದೂರವಾದರೂ ಬೇಕೆನಿಸುವ
ಹಸಿವಿದ್ದರೂ ಊಟಮಾಡಲಾಗದ
ಮಲಗಿದ್ದರೂ ನಿದ್ರಿಸಲಾಗದ
ನೋಡಿದರೆ ಮತ್ತೆ ನೋಡಬೇಕೆನಿಸುವ
ಮನಸ್ಸಿನಲ್ಲಿದ್ದರೂ ಹೇಳಲಾಗದ
ಭಾವನೆಗಳು ಮನದಲಿ ತುಂಬಿರಲು…
ನಿನ್ನೆ ಪ್ರೀತಿಸುವೆ ಈ ಜನುಮ ಇರೊವರೆಗೆ
ನೆರಳಾಗುವೇ ಬದುಕಾಗುವೆ
ಎದೆ ಬಡಿತ ನಿಲ್ಲೋ ಕ್ಷಣದವರೆಗೂ...
ನಿನ್ನವನಾಗಿರುವೆ ನಿನ್ನವನಾಗಿರುವೆ
ಬಿಸಿಲಿನಂಚಿನ ಭಾಸ್ಕರ ಮಿತ್ರ
ವಿವಿಧ ಜನಾಂಗದ ಸಹಮತ ಸೂತ್ರ
ರಾಜಕೀಯವೋ? ಇಂದ್ರಜಾಲವೋ? ಸಂಗಮನಾಳಿದ ರಾಜತಂತ್ರವೋ?
ಅರಿಯದ ಯೋಜನೆ ಪ್ರತಿಫಲ ಸಜವೋ?
ದಾಹವಾಗಿದೆ....! ಸ್ಥಿತಿಯನು ನೋಡಿ
ಬಳ್ಳಾರಿ ಜನರ ಮತಿಯನು ನೋಡಿ!
ಇತಿಹಾಸ ಪುಟವ ಮೆಲ್ಲಗೆ ತೆರೆದಿರೆ
ಕಾನಿಷ್ಕ ದೊರೆಯು ಬಾಳಿದ ನೆರೆಹೊರೆ
ಸಂಪತ್ಭರಿತ ನಿಗೂಢ ಧನಸೆರೆ
ಗಣಿಧಣಿ ನಾಡಿನ ಸಂಗ್ರಾಮ ಮೆರೆದಿರೆ
ಕೃಷಿಯ ಮಕ್ಕಳಿರೊ ಅಧಿಕವು ಭೂಮಿ
ತುಂಗಭದ್ರೆಯು ನಮ್ಮಯ ತಾಯಿ
ಆದರೆ....
ಕೃತಕ ಫ್ಯಾಕ್ಟ್ರಿಯ ಅಟ್ಟಹಾಸದಿ
ಪರಿಸರ ಮಾತೆಯು ದುಃಖವು ಮರುಕದಿ
ಸರ್ವೋತ್ತಮವೂ ದುಡಿದಿರೆ ತವಕದಿ
ಗೆಳತೀ.
ಇನ್ನೂ ಒಂದು ಜನ್ಮವಿರುವುದಾದರೇ
ನಿನ್ನ ಕಣ್ಣೀರಾಗಿ ಜನಿಸುವೆ...
ಕಾರಣ.
ನಿನ್ನ ಮನಸ್ಸಿನ ಅಣತಿಯತೆ
ಕಣ್ಣಲ್ಲಿ ಜನಿಸಿ
ಮೃದು ಕೆನ್ನೆಯ ಸವರಿ
ನಿನ್ನ ಮಡಿಲಲ್ಲಿ ಬಿದ್ದು ಸಾಯಬಹುದಲ್ಲವೇ
ಮನಸ್ಸು ಭಾರ ವಾಯ್ತು.
ಹೃದಯಕ್ಕೆ ನೋವಾಯ್ತು.
ಸ್ವಾಭಿಮಾನಕ್ಕೆ ದಕ್ಕೆಯಾಯ್ತು.
ಹೀಯಾಳಿಸುವ ಜನಕ್ಕೆ ಸಾಧಿಸಿ ತೋರಿಸುವ ಛಲವಾಯ್ತು
ಜೀವನವೆಂಬ ರಣರಂಗದಲಿ ಚರಿತ್ರೆ ಸೃಷ್ಠಿಸುವ ಕಾಲ ಬಂದಾಯ್ತು
ಚರಿತ್ರೆಯ ಪುಟ ಪುಟದಲ್ಲೂ ಮಿಂಚುವ ರೋಷ ಉಕ್ಕಾಯ್ತು
ಇದೋ ನಿನ್ನ ಸಂಪತ್ತಿಗೆ ಈ ಸ್ವಾಭಿಮಾನಿಯ ಸವಾಲ್ !
ಕಣ್ಣಲ್ಲಿ ಕಾಣಿಸೊ ಕಲ್ಪನೆಯೆ ಕವನ
ನನ್ನಲಿ ಮೂಡೊ ಬಾವನೆಯೆ ಕವನ
ಮನಸ್ಸು ಮನಸ್ಸುಗಳ ಮಾತೇ ಕವನ
ನೆನಪಿನ ಹಾದಿಯಲಿ ಸಾಗೊ ಕವನ
ಹರಿವ ನೀರಲ್ಲೂ ಕೇಳೊ ಕವನ
ಇಂಪಾಗಿ ಬೀಸೊ ತಂಗಾಳಿಯಲ್ಲೂ ಕವನ
ನೊಂದ ಹ್ರುದಯದಿ ಬೆಂದ ಕವನ
ಬಿಳಿ ಹಾಳೆಯ ಮೇಲೆ ಅರಳಿದ ಕವನ
ಬಿಡದೆ ಕಾಡೊ ನೆನಪುಗಳೆ ಕವನ……
ಬಣ್ಣಿಸಲಾಗದ ಚೆಲುವನಿವ
ಈ ಅವನಿಗೇನೆ ಇನಿಯನಿವ...
ಅವಳ ಸೇರುತ ಮೋಡಿಯ ಮಾಡಿರುವ...
ಸುಡುತಿರುವಳು ಧರಣಿ ಸಹಿಸಲಾಗದೆ ಬಿಸಿಲ ಬೇಗೆಯ ವಿರಹವ...
ಕಾಣೆಯಾಗುತಿವೆ ಜೀವಗಳು ತಾಳಲಾರದೆ ಅವಳ ತಾಪವ...
ನೋವಲೆ ನಲಗುತಿರುವಳು ತಾಯಿ ನೋಡಿ ಅಳಿಯುತ್ತಿರುವ ಸಂಕುಲವ..
ನೀನೆ ಅವಳ ಒಡಲ ಕಾಯುವವ..
ಅಪ್ಪಿಕೊ ಒಮ್ಮೆ ಮರೆತು ಬಿಂಕವ..
ಇಳಿದು ಸೇರು ಅವಳ , ತೊರೆದು ಗಗನವ..
ಆಸೆಯಲಿ ಕಾಯುತಿದೆ ಜೀವ ಸಂಕುಲ ನೋಡಲು ನಿಮ್ಮಿಬ್ಬರ ಸಂಗಮವ..
ಬಂದು ಹಸಿರ ಸೀರೆ ಉಡಿಸಿ ನೋಡು ಬುವಿಯ ಚೆಂದವ..
ನೀನಾಗುವೆ ಎಲ್ಲವ ಮರೆತು ಅವಳ ಅಂದಕೆ ತಲೆದೂಗುವವ....
ಮರೆಯದೆ ಬಂದು ತಣಿಸು ತಾಪವ,ಉಳಿಸು ಮೂಕ ಜೀವಸಂಕುಲವ...