Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ

ಭಾಷೆಯಲಿ ಕನ್ನಡವು
ಅತಿ ಮಧುರ ಹೊನ್ನುಡಿಯು!!
ಬರಹದಲಿ ಕನ್ನಡವು
ಸಿರಿತನದ ಮುನ್ನುಡಿಯು!!

ತೊದಲು ನುಡಿಯಲಿ ಕಲಿತ
ಮೊದಲ ಮಾತದು ಮಧುರ!!
ಸ್ವರದಿ ನುಡಿಯಲು ಪದವ
ದೊರೆತ ವರವದು ಜಿಹ್ವೆ ಅದರ!!

ಕಲೆತು ನುಡಿಯಲು ಬಲ್ಲೆ
ಬರೆದು ಓದುವುದ ಬಲ್ಲೆ!!
ಬೆಲ್ಲದ ಸಿಹಿತನವು ಈ ಭಾಷೆ
ಕೇಳಿ ನುಡಿಯದಿರೆ ಹತಾಶೆ!!

ಹೆಮ್ಮೆಯ ಪದವದು
ಅದ ನುಡಿಯಲು ತವಕ!!
ಕಸ್ತೂರಿ ಕನ್ನಡವೇ
ನಮ್ಮ ಕರುನಾಡ ತಿಲಕ!!

- ಪಿ.ಜಿ.ಜ್ಯೋತಿ

14 Apr 2017, 11:16 am

ವಿಷತನ

ಕಾಳಿಂಗದ ಸಂಗವ ಮಾಡಿ
ಮೈಯೆಲ್ಲ ವಿಷವಾಗಿ
ಒಳಿತನ್ನು ನಾಶ ಮಾಡುವ ಬದಲು
ಕೊಂದುಬಿಡು ನಿನ್ನ ವಿಷತನವ!!

ಹಾಲನ್ನೇ ಉಂಡರೂ
ಹಾಲಾಹಲವ ಕಕ್ಕುವ ಆ
ದುಷ್ಟ ಹಾವಿನ ಗೆಳೆತನವದೂ
ಸಲ್ಲದೂ ನಿನಗೆ!!

ಕೆಟ್ಟ ಯೋಚನೆಯಲಿ
ಹೊಂಚು ಹಾಕಿ ನೀ ಕಬಳಿಸಿದರೆ
ಆ ಭಾಗ್ಯ ಅದೆಷ್ಟು ದಿನ
ನಿನ್ನ ಹಿಂಬಾಲಿಸಿ ಬರುವುದು!!

ನುಡಿಯಲಿ ಸತ್ಯವಿರಲಿ
ನಡತೆಯು ಶ್ರೇಷ್ಠವಾಗಿ ಇರಲಿ
ಎಲ್ಲರೂ ಮೆಚ್ಚುವ ಕಾಯಕವ ನೀ
ಮಾಡಿದರೆ ಕರಗುವುದು ನಿನ್ನ ವಿಷತನ!!

- ಪಿ.ಜಿ.ಜ್ಯೋತಿ

14 Apr 2017, 11:02 am

ಹೆಜ್ಜೆ ಹಿಂದೆ

ಸಾಗಿದಷ್ಟು ಹೆಜ್ಜೆ ಹಿಂದೆ
ಚಲಿಸಿದಷ್ಟು ದಾರಿ ಮುಂದೆ!!
ಏರಿದಷ್ಟು ಬೆಟ್ಟ ಮುಗಿಲೆತ್ತರ
ಹತ್ತಿದಷ್ಟು ಮೆಟ್ಟಿಲು ಅಸಂಖ್ಯ!!

ನಿಂತಷ್ಟು ಅಸ್ತಿರ ಈ ಬದುಕು
ಕುಳಿತಷ್ಟು ಆಲಸ್ಯ ಈ ಜೀವನ!!
ಕ್ಷಣ ಮಾತ್ರಕೆ ಇರುವ ಸ್ತಿರತೆ
ನಿಲ್ಲದೇ ಓಡಿ ಮುಗಿಸುವುದು ಬದುಕ!!

ಬಿದ್ದಾಗ ಬರುವ ಸೋಲು ಮರೆತು
ಎದ್ದು ನಡೆದರೆ ಅದೇ ಗೆಲುವು!!
ನಡೆವ ದಾರಿಯಲಿ ಮತ್ತೆ ಎಡವಿದರೇ
ಅದೇ ಜೀವನದ ಸೋಲು ಗೆಲುವು!!

ಇಡೀ ವಿಶ್ವವ ಕಟ್ಟಲಾಗದಿರೆ ನೀ
ಈ ಬದುಕಿಗೊಂದು ಸೂರು ಕಟ್ಟಿಕೋ!!
ನೆನಪಿಡು ಕ್ಷಣಮಾತ್ರದ ಈ
ಬದುಕಿಗೆ ಒಂದು ಕೊನೆ ಇಹುದು!!

- ಪಿ.ಜಿ.ಜ್ಯೋತಿ

14 Apr 2017, 10:51 am

ನಮ್ಮ ಕಿನ್ನರಿ....

ನಗುತಿದೆ ಬಿಂದಿ..
ಕುಳಿತು ಹಣೆಯ ತುದಿ..
ನಲಿಯುತಿದೆ ನವಿಲ್ಗರಿ..
ಕಣ್ಣ ಒಳ ಸೇರಿ..
ಕೆಣಕುತಿದೆ ಮುಂಗುರುಳು..
ಮಾಡಿ ಎಲ್ಲರಿಗೂ ಮರುಳು..
ಮುಗುಳ್ನಗುತಿದೆ ಗುಲಾಬಿ..
ಕೆಂದುಟಿಗೆ ಮುತ್ತಿಕ್ಕಿ..
ಕಿರುನಗುತಿಹಳು ಕಿನ್ನರಿ
ಇವಲ್ಲಾ ತನ್ನದೇ
ಎಂದೆಣಿಸಿ....

- KR Sreekamala

14 Apr 2017, 10:20 am

ಚಂದದ ಚಂದಿರ

ಸಂಜೆಯಲಿ ತುಂತುರು ಮಳೆಯ
ಆ ಚಂದ್ರ ಭೂಮಿಗೆ ಸುರಿದ!!
ಕನಸುಗಳ ಮೂಟೆಯ ಹೊತ್ತು
ಆಗಸದಿ ನಗುತಲಿ ನಿಂತ!!

ಹುಣ್ಣಿಮೆಯ ಚಂದದ ರೂಪ
ಹೆಣ್ಣುಗಳನ್ನು ನಾಚಿಸೋ ಭೂಪ!!
ತಂಗಾಳಿ ಜೊತೆಯಲಿ
ಅವನ ಸರಸ ಸಲ್ಲಪ!!

ತಾರೆಗಳ ತೋಟದ ಒಡೆಯ
ಭೂಮಿಗೆ ಬಾರದ ಚಲುವ!!
ತಿಂಗಳ ಬೆಳಕನು ಚೆಲ್ಲಿ
ಕಂಗಳಿಗೆ ಕಾಂತಿಯ ತಂದ!!

ಮೋಡದ ಮರೆಯಲಿ ಅಡಗುವ
ಚತುರ ಚಂದಿರನು ಅವನು!!
ಇರುಳ ಈ ಪಯಣದಲ್ಲಿ
ಜೊತೆಯಾದ ಸುಂದರನು!!

- ಪಿ.ಜಿ.ಜ್ಯೋತಿ

14 Apr 2017, 09:57 am

ಮುಗಿಯದ ಮುಳ್ಳಿನ ರಕ್ತದ ಹಾದಿಯಲ್ಲಿ

ಅಂದಿನ ರಾಜ ಮಹಾರಾಜರು
ಜಾತಿ ಧರ್ಮಕ್ಕೆ ನೀರೆದರು
ಬುಡ ಬುಡಿಕೆ ಮಾತು ಕೇಳಿ ಕುಣಿದರು
ಕಡಲೆಕಾಳು ವರ್ಗದವರಿಗೆ ಕಾಲಿಗೆ ಬೀಳಿಸಿದರು
ಸಾಸಿವೆಕಾಳು ವರ್ಗಕ್ಕೆ ಪೋಷಿಸಿದರು

ಇಂದಿನ ರಾಜಕೀಯ ಸೂತ್ರಧಾರರು
ಜೀವನ ನಡೆಸಲು ಜಾತಿಗೆ ಶರಣಾದರು
ಜಾತಿ ಸಂಘರ್ಷಕ್ಕೆ ನಮ್ಮನ್ನು ಆಹುತಿಮಾಡಿದರು
ಮಾನವೀಯತೆಯ ಮೌಲ್ಯಗಳನ್ನು ಮರೆತರು
ತಂಪಾದ ಗಾಳಿಗೆ ಸೆಳೆಯಾದರು
ಅವರ ವಂಶವಾಹಿಗಳಿಗೆ ನೆಲೆ ನಿಂತರು

ನಾವೆಲ್ಲರೂ....‌
ಕುರಿಯಂತೆ ಪಾಠ
ಗಿಳಿಯಂತೆ ರಾಮನ ಭಜನೆ
ಮಂಗನಂತೆ ಆಟ
ನಾಯಿಯಂತೆ ವಾಸದ ಮನೆ

ನಮ್ಮ ದುರ್ಬಲರ ನೋಟ
ಮುಗಿಯಿತ್ತಿದೆ ನಮ್ಮ ಆಟ
ಕೊನೆಗೆ ಅವರ ಹಟ್ಟಹಾಸ
ಮುಗಿಯದು ನಮ್ಮ ಉಪವಾಸ

- Shinan

14 Apr 2017, 06:59 am

ಎದೆ ಗೀರು

ಜಂಟಿ ಪಾದ ಒಂದಾಗುವ ಉಮೇದಿಗೆ
ಹಿತ್ತಲ ಮೊಗ್ಗು ಬಿರಿಯುತ್ತದೆ
ಕಾಡ ದಾರಿಯಲ್ಲಿ ಏಕಾಂತ
ಸರಿಯುವುದು ಆ ಕ್ಷಣದಲ್ಲಿಯೇ
**
ಬೀಜಯೊಡೆಯುವ ಪ್ರಕ್ರಿಯೆಗೆ
ಅವಳೊಂದು ನೆಪ ಆಗುತ್ತಾಳೆ
ಬಿಂಕ ಸರಿದ ರಾತ್ರಿ
ಶುರುವಾಗವುದು ಅವಳಿಂದಲೇ
**
ಒಮ್ಮೊಮ್ಮೆ ಪುಳಕವೊಂದು
ಸರಿಯುತ್ತಿರುತ್ತದೆ
ಎದೆ ಗೀರಿನ ಅಚಾನಕ್
ತೋರ್ಪಡಿಕೆ ಬೆಚ್ಚಗಿಸಿರುವ
ಪ್ರಯತ್ನವಷ್ಟೇ
**
ಮೊದಲ ಮಳೆಗೂ ಮೊದಲಿನ
ಹನಿಯವಳು
ಮೂಡಿದ ವಿಷಯ ತಿಳಿಯದ
ವಿಚಾರ ನನ್ನೊಳಗೆ..
**
ಮುಂದಿನ ಎಲ್ಲಾ ಪ್ರಮಾದಗಳಿಗೆ
ಅಧಿಕೃತ ಹೊಣೆಗಾರ್ತಿ
ಜಾಮೀನು ರಹಿತ ಸಜೆಗೂ
ಒಡಂಬಡಿಕೆ ಮಾಡುವುದೇ
ಒಪ್ಪಂದಗಳಿರದ ವಿಶೇಷಣಗಳು

-ಹೊಸತು ಸಾಲುಗಳು

#ಅವಿಜ್ಞಾನಿ

- ಅವಿಜ್ಞಾನಿ

13 Apr 2017, 08:41 pm

ಬಾಳ ಸಂಗಾತಿ

ಅರಿವಿರದೆ ಒರಿಸಿದ ನಿನ್ನ ಅಂಗೈಯ
ಹಿಡಿದು ಹೇಳುವೆ ...
ಹರಿಯೋ ನದಿಯ ಮಧ್ಯೆ ನಿನ್ನೆಂದು
ಬಿಡೆನು ....
ಮುಳುಗುವ ಸಂದರ್ಭ ಬಂದರೆ ನಾ
ನಿನ್ನ ಹೆಗಲ ಮೇಲೆ ಕುರಿಸಿ ನಡೆಯುವೆ ...

ನಾ ಉಸಿರು ಕಟ್ಟಿ ಅಲ್ಲಿಯೇ ಕೆಸರಾದರೂ
ಸರಿಯೆ....
ನಿನ್ನ ಬಿಗಿಯಾಗಿಡಿದ ಈ ಮೃದು ಕೈಯಾ
ಬಿಡೆನು ಸಖಿಯೆ ....
ನೀ ನಿನ್ನ ತವರೂರ ಗಣಿಯೆ ನಾ ನಿನ್ನ
ಗಣಿಯ ಕಾಯೋ ಕಾವಲುಗಾರನೇ ....

ನಿನ್ನ ಕಾಯುವುದಷ್ಟೆ ನನ್ನ ಕಾರ್ಯ
ನಿನ್ನ ಸವೆಸುವುದು ದರ್ಮವಲ್ಲವೇ...
ನೀ ಕಣ್ಣಾ ಹನಿ ಸೋಕಿಸಿದರೂ
ನನ್ನ ಅಂಗೈಯಲ್ಲಿ ಬಿಗಿಯಿಡಿವೆ ನಲ್ಲೆ .....

ನನ್ನ ಹೃದಯವೆ ನಿನ್ನ ತಲೆದಿಂಬು
ಗೆಳತಿ ...
ನನ್ನ ಮಡಿಲೆ ನಿನಗೆ ಹಾಸಿಗೆಯೆ
ಗೆಳತಿ .....
ನಾ ಮಡಿದರೂ ಬಿಡೆನೆ ನಿನ್ನ
ಅರಿವಿರದೆ ಒರಿಸಿದ ಅಂಗೈಯ ಗೆಳತಿ ....

ಲವ್ ಯು ಅಪ್ಪು ...

- Chinnu

13 Apr 2017, 08:34 pm

ಚಂದ್ರ

ಬಾನಲಿ ಚಂದಿರ ನಗುತಿರಲು, ತಂಪಾದ ಸಂಜೆ ವಿಸ್ತಾರವಾಗಿರಲು, ಎಲ್ಲೋ ಮೈ ಮನ ತುಬಿರಲು... ತಣ್ಣನೆ ತುಸು ಗಾಳಿಯ ಸ್ಪರ್ಶಕೆ ರೋಮಾಂಚನವಾಗಿರಲು!

- ನಮ್ರತ

13 Apr 2017, 04:13 pm

ಜೇವನವೆಂಬ ಜಗನ್ನಾಟಕದಲ್ಲಿ

ಜೀವನವೆಂಬ ಜಗನ್ನಾಟಕದಲ್ಲಿ ಆದೇ
ನಾ ನೊಂದು ಗೊಂಬೆಯೂ............

ಅಭಿಪ್ರಾಯಗಳನ್ನು ಹೇಳದೆ
ಮನೋಭಾವಗಳನ್ನು ತಿಳಿಸಲಾಗದೆ
ನನ್ನೊಳಗೆ ನಾ ನೊಂದೇನು.

ಮೊಗ್ಗಿಗಿಂತ ಮೃದುವಾದ ನನ್ನ
ಮನದಾಳದಲ್ಲಿ ಮಯವಾಗದ
ಗಾಯವೊಂದು ಆಗಿದೆ .

ಕ್ಷಣಮಾತ್ರ ಕಾಲದಲ್ಲಿ ಸಂತೋಷ
ಕ್ಷಣಗಳು ಮಂಜಿನಂತೆ ಮಾಯವಾಗುತ್ತಿವೆ.
ಅನುರಾಗದ ಎಸಲುಗಳು ಅತಿದೂರ ಸೆರೆಯುತ್ತಿವೆ .

- ಚುಕ್ಕಿ

13 Apr 2017, 01:36 pm