Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸುಮ್ಮನಿದ್ದು ಬಿಡಿ..

ಸುಮ್ಮನಿದ್ದು ಬಿಡಿ

ಮನಬಿಚ್ಚಿ ಮಾತಾಡಿ
ಹೃದಯದಿಂದ ನಗಾಡಿ
ಮನದೊಳಗೇ ಅಳುತ್ತಿರಿ
ನಗೆಹೂ ಬಾಡದಿರಲಿ
ಕಾಯಲು ದೇವನಿಹನು
ಚಿಂತೆ ಅವನಿಗೆ ಬಿಟ್ಟುಬಿಡಿ
ಕಾಯುತ್ತಾ ಸುಮ್ಮನಿದ್ದುಬಿಡಿ.
@ಪ್ರೇಮ್@
25.11.2019

- PremUdayKumar

25 Nov 2019, 06:30 pm

ಪ್ರೀತಿ

ಕಾರಣವಿಲ್ಲದೆ
ಹುಟ್ಟುವುದು ಪ್ರೀತಿ
ಪ್ರೇಮಿಗಳನ್ನು ಉತ್ತೇಜಿಸಿ
ಮನದ ಹಣತಿಯನ್ನ ಅನುಸರಿಸಿ
ಅರಿಯದೆ ಪರಿಸರದ ಸ್ಥಿತಿಗತಿ
ನೂರಾರು ಕನಸುಗಳು ಚಿಗುರೊಡೆದು
ಗರಿಗೆದರಿ ಹವಣಿಸಿ
ಮನದ ತೊಳಲಾಟದ ಭಾವವ
ತೋರ್ಪಡಿಸಿ
ಪ್ರೀತಿಯ ಅಪೇಕ್ಷಿಸಿ

- HarishKumarm

24 Nov 2019, 10:59 pm

ಅವನೆಂಬ ನೆನಪು

ಬೀಸಿ ಬರುವ ಗಾಳಿ
ಮೆಲ್ಲಗೆ ಕಿವಿಯಲ್ಲಿ
ಸರಿಗಮವಾಗಿ ಧ್ವನಿಸಲು
ಅವನೆಂಬ ನೆನಪಿನ ಬುತ್ತಿ
ತಾನಾಗೆ ತೆರೆದುಕೊಂಡಿದೆ.

ರಾತ್ರಿಯ ನೀರವ ಮೌನ,
ಮುರಿದ ಕೊಂಬೆಯ ಶಬ್ದ,
ಕಣ್ಣಿನಿಂದ ಜಾರಿದ ಹನಿ,
ಅರಿವಿಗೆ ಬಾರದೆ ಮನ
ಅದೆನನ್ನೊ ತಡಕಾಡುತ್ತಿದೆ.

ತಿಳಿ ಸಂಜೆ ಬೀಸುವ
ತಂಪಾದ ಗಾಳಿಗೂ
ನಡುರಾತ್ರಿ ಕಾಡುವ
ಮುಗಿಯದ ಕನಸಿಗೂ
ಅವಿನಾಭಾವ ಸಂಬಂಧ..

- ಅಕ್ಷತ

24 Nov 2019, 04:24 pm

ನನ್ನ ಬಯಕೆ. (ನನ್ನ ಆಸೆ )

ಬಡತನದ ಬವಣೆಯಲ್ಲಿ ಬೆಂದು
ಹಾಕಿದೆ ನನ್ನ ಎಲ್ಲಾ ಆಸೆಗಳನ್ನು
ಮನಸಲ್ಲೇ ಕೊಂದು,
ಸಿಗಲಿ ನನ್ನ ಪ್ರತಿಭೆ ಗುರಿತಿಸುವಂತಹ ಒಂದು ಉತ್ತಮ ವೇದಿಕೆ,
ದೇವರಲ್ಲಿ ನನ್ನದೊಂದೇ ಒಂದು ಕೋರಿಕೆ,
ಕವಿಯಾಗ ಬೇಕೆಂಬುದೆ ನನ್ನ ಬಯಕೆ.
:-ವೀಣಾ ಲಿಂಗಣ್ಣ
( ರಾಯಚೂರು )

- Veena

23 Nov 2019, 07:42 am

ಹೆಣ್ಣು ಮನದ ಕಣ್ಣು

ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ

ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ
ಹೆಣ್ಣಿಲ್ಲದಿದ್ದರೆ ಬಾಳು ಬರಡು ಕಣಯ್ಯ

ಒಂದು ಗಂಡಿನ ಏಳಿಗೆಯ ಹಿಂದೆ
ಒಂದು ಹೆಣ್ಣಿರುವಳೆಂಬುದು ನಿಜವಯ್ಯ

ಸತ್ಯ-ನೀತಿಯ ಬಿಡದೆ ಬಾಳಿರಯ್ಯ
ಅನ್ನ-ನೀರಿಗಾಗಿ ದಿನಾ ದುಡಿಯಿರಯ್ಯ

ನಾನು-ನನ್ನದು ಎಂಬುದ ಮರೆಯಿರಯ್ಯ
ನಾವು-ನಮ್ಮದು ಎಂದು ಬಾಳಿರಯ್ಯ

- null

23 Nov 2019, 06:37 am

ಕನಸಿನೊಳಗಿನ ಮಾಯೇ

ಮಾಯಾ ನಗರಿಯ ಮಾಯದ
ಬಲೆಗೆ ಜೆಡರ ಹುಳುವಿನಂತೆ
ಸೊತು ಬಿದ್ದೆ ಆದರೆ ಆ ಮಾಯಾ
ಬಲೆಯ ಸಂಚ್ಚು ತಿಳಿಯದಾದೆ.....

ಪಾಪಿ ಹೃದಯ ಬಲೆಯಲ್ಲಿಯೆ ಸಿಕ್ಕಿ
ಯೋಚಿಸತೊಡಗಿತ್ತು ಕ್ಷಣಕಾಲದಲ್ಲೇ
ಗೋರವಾಯಿತು ಇದು ಮಾಯಾದ
ಹೇಸರಿನ ಪ್ರೇಮದ ಬಲೆಯಾಗಿತ್ತು....

ಆ ಮಾಯಾನಗರಿಯ ರಾಣಿಯ ಜೊತೆ
ಮಾತನಾಡ ತೊಡಗಿದೆ ಹಾಗೆಯೆ ಏಕಾಂತ
ದಲ್ಲಿರುವಾಗ ನಾಮ್ಮಿಬ್ಬರ ಮಾತಿನ ನಡುವೆ
ಸಾಕೇದ್ದೇಳು ಸೊಮಾರಿನನ್ ಮಗನೆ ಆನ್ನೊ
ಸುಪ್ರಭಾತ ಕೇಳತೋಡಗಿತು...

ಈ ಸೂಂದರವಾದ ಸಮಯದಲ್ಲಿ
ಯಾರದು ಈ ಸುಪ್ರಭಾತ ಏಂದು ಕಣ್ತೆರೆದು
ನೋಡಿದರೆ ಭಾಸ್ಕರನ ಹಾಗೆ ಕೆಂಪೆರುತ್ತ
ಕೈಯಲ್ಲಿ ಪೋರಕೆಏಂಬ ಆಯುಧ ಹಿಡಿದಿತ್ತು
ಆ ಕ್ಷಣವೆ ಕಕ್ಕಬಿಕ್ಕಿಯಾಗಿ ಪಲಾಯನ ಮಾಡಿದೆ.......ವಿನೋದ್ ರಾಥೋಡ್

- Vinod Naik Vinod Naik

22 Nov 2019, 11:28 pm

ನಿದಿರೆ...

ಹಾಳೂರ ಸಂತೆಯಲ್ಲಿ
ಜಿಟಿ-ಜಿಟಿ ಸುರಿವ ಮಳೆಯಲ್ಲಿ
ಜನಜಂಗುಳಿಯ ನಡುವೆ
ಭಿಕ್ಷುಕನದ್ದು ಕುಂಭಕರ್ಣ ನಿದಿರೆ...

ಐಶಾರಾಮಿ ಮನೆಯಲ್ಲಿ
ಆಳು-ಕಾಳುಗಳ ಸೇವೆಯಲ್ಲಿ
ಶ್ರೀಮಂತಿಕೆಯ ನಡುವೆ
ಅವನಿಗೆ ಬರುತ್ತಿಲ್ಲ ನಿದಿರೆ..

ಎಷ್ಟಿದ್ದರೇನು? ಏನಿಲ್ಲದಿದ್ದರೇನು?
ಮನಸ್ಸಿಗೆ ನೆಮ್ಮದಿ ಇಲ್ಲದಲ್ಲಿ
ಹೇಗಾದರೂ ಬಂದೀತು
ನೆಮ್ಮದಿಯ ನಿದಿರೆ..!?

- ಅಕ್ಷತ

22 Nov 2019, 10:55 pm

ಇದೆ.ಇಲ್ಲ.ಇದೆಇಲ್ಲಎರಡೂ ಇದೆ.ಇದೆಇಲ್ಲಎರಡೂ ಇಲ್ಲ.

ಯಾರೋ ಅನ್ನಿಸಿದ್ದು ಇವ್ನೆ ಅಂತ.
ನೀನು?
ನಾನು ಅನ್ಕೊಂಡಿದ್ದು ಇವ್ನೆ ಅಂತ.
ಇವಾಗ ಏನ್
ಅನ್ಕೊಂಡಿದೀಯೋ?
ಇವ್ನೆ. ಇವ್ನಲ್ಲ.ಇವ್ನೆ ಇವ್ನಲ್ಲ ಎರಡೂ ಇವ್ನೆ. ಇವ್ನೆ, ಇವ್ನಲ್ಲ ಎರಡೂ ಇವ್ನಲ್ಲ. .
ಮುಂದೆ ಏನ್ ಅನ್ಕೋತಿಯೋ?
ನಿಂಗೇಕೆ? ನಂಗೇಕೆ?.............

ನಮ್ಮೂರಿನ ಗುಡಿಯಲ್ಲಿರೋ ಅವ್ನು
ಯಾಕೋ ದೇವ್ರು ಅನ್ನುಸ್ತಿಲ್ಲ ನನ್ಗೆ.
ಇನ್ಯಾರು ಅನ್ಸ್ತಾವ್ರೆ?
ಕಾಗದದ ಮೇಲೆ ನಾನು ಬಿಡಿಸಿದ ಇವ್ನು
ನನ್ಗೆ ದೇವ್ರು ಅನ್ನಿಸ್ತಿದೆ.
ಏನಿವಾಗ?
ಮುಟ್ಟಲಿಲ್ಲ ಮುದ್ದಾಡಲಿಲ್ಲ ಒಂದಿನನೂ ಅವ್ನನ್ನು.
ಮುಟ್ಬೇಕಿತ್ತು, ಮುದ್ದಿಸಬೇಕ್ಕಿತ್ತು?
ಹೆದ್ರುಸ್ತಿದ್ನಲ್ಲಪ್ಪ ಬೆಂಕಿ ಹಿಡ್ಕೊಂಡು
ಯಾರು?
ಅಂಗಿಬಿಚ್ಕೊಂಡು, ದಾರಾಸುತ್ಕೊಂಡು
ನಿಂತಿದ್ನಲ್ಲ ಅವನು ನಮ್ಮಿಬ್ಬರ ಮಧ್ಯೆ..
ಹೌದಲ್ವಾ !ಮತ್ತೆ ಇವನು?
ಮುಟ್ಟುತಿನಿ, ಮುದ್ದಾಡ್ತಿನಿ
ನಾನು?
ನನ್ನ ಕೇಳೋ ಅವಶ್ಯಕತೆನೇ ಇಲ್ಲಾ.
ಯಾರ್ಬೇಕಾದ್ರು ,ಯಾವಾಗಬೇಕಾದ್ರು
ಆಮೇಲೆ?
ಬೆಂಕಿ ಹಿಡ್ಕೊಂಡಿರೋ ಧ್ವನಿ ಇಲ್ಲ
ನಮ್ಮಿಬ್ಬರ ಮಧ್ಯೆ.
ಮತ್ತೇನಿದೆ?
ಗಾಳಿ ಇದೆ...
ಏನು?
ಗಾಳಿ ಇದೆ. ಗಾಳಿ ಇಲ್ಲ. ಗಾಳಿ ಇದೆ ಇಲ್ಲ ಎರಡೂ ಇದೆ ಗಾಳಿ ಇದೆ ಇಲ್ಲ ಎರಡೂ ಇಲ್ಲ........

-ಪ್ರವೀಣಾ ಸಿಂಗೋನಹಳ್ಳಿ.

- praveens singonahalli

22 Nov 2019, 10:22 pm

- ಕೊಡವಿಕೊಂಡು ಎದ್ದೇಳು...

ಕೊಡವಿಕೊಂಡು ಎದ್ದೇಳು... (ಪಲ್ಲವಿ)
ಈ ಬದುಕು ನಿನ್ನದು
ಸಾವಿರಾರು ಜನ್ರಿದೃನೂ ಒಂಟಿಯಾಗೇ ಸಾಯೋದೂ..

ಭೂಮಿ ಮ್ಯಾಗೇ ಇರೋವಷ್ಟು ದಿನಳು
ಉಸಿರಾಡಬೇಕು ಎಲ್ರೂನೂ
ಹೊಟ್ಟೆಗಾಗೀ ಕೆಟ್ಟದ್ ಮಾಡ್ಬೇಡ
ಮಡಿಕ್ಕೆಂಡಿರೂ ದೇವ್ರು ದೊಡ್ಡೋನು ಅನ್ಕಂಡು

ಲೆಕ್ಕಾಚಾರದ ದಿನ್ಗಳಿವು ಕಾಯೋಂಗಿಲ್ಲ
ಯಾರಿಗೂನೂ..
ಕುಂತ್ರೆ ಕುಡುಕೆ ಹೊನ್ನು ಸಾಲಂಗಿಲ್ಲ ಅಂದಾವ್ರೇ ಹಿರೀಕರು..

ಆಡೋ ಪದ ಚೆಂದಿದ್ರೆ. ಊರ ಜನ್ಗಳೆಲ್ಲಾ ಅಣ್ ತಮ್ಮಂದಿರು..
ತಂಗ್ಳನ್ನ ತಿಂದೃನೂ ಬದುಕ್ಬಿಡು ನೆಮ್ದೀ ಪಡ್ಕಂಡು...
ಕೊಡವಿಕೊಂಡು ಎದ್ದೇಳು ಈ ಬದುಕು ನಿನ್ನದು

ಪವನ ಕುಮಾರ ಕೆ ವಿ
ಬಳ್ಳಾರಿ 9900515957

- PavanKumarKV

18 Nov 2019, 04:52 pm

ನನ್ನ ಗೆಳೆಯ.....

ಓ ನನ್ನ ಗೆಳೆಯ
ನೀನೇ ನನ್ನ ಇನಿಯಾ
ಆಗು ಬಾ ನನ್ನ ತಾಯಿಗೆ ಅಳಿಯ
ಆದರೆ ಸುರಿಸುವೆ ಮುಂಗಾರು ಮಳೆಯ
ಇಲ್ಲದಿದ್ದಾರೆ ಹರಿಸುವೇ ಕಣ್ಣೀರ ಹೊಳೆಯ.
:-ವೀಣಾ ಲಿಂಗಣ್ಣ
( ರಾಯಚೂರು )

- Veena

17 Nov 2019, 02:53 pm