Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಳ್ಗಿಚ್ಚು ನಂದಿಸಿ ಜೀವಜಂತುಗಳ ಉಳಿಸಿ

ಬಾನಾಡಿಗಳು ನಾಡಿಗೆ ಬರಲು
ಬಿಡನು ಸುಮ್ಮನೆ ಬಾಳಲು...
ಜೀವಜಂತುಗಳು ಆಡವಿಯ ಮಡಿಲಲ್ಲಿರಲು
ಬಿಟ್ಟನು ಧಗಧಗನೇ ಹೊತ್ತಿ ಉರಿಯಲು..
ರೋಧಿಸಲು ಉಸಿರಿಲ್ಲ
ರಕ್ಷಿಸಲು ಯಾರಿಲ್ಲ....

ತನ್ನ ಬೆಳೆ ಬೇಯಿಸಿ ಕೊಳ್ಳಲು
ಬನವ ಮಾಡಿಕೊಂಡ ಉರುವಲು...
ತನ್ನ ದುರಾಸೆಯ ಕೋಟೆ ಕಟ್ಟಲು
ವನವ ಮಾಡಿದ ಬಟಾಬಯಲು..
ಇವನ ಆಸೆಗೆ ಕೊನೆಯಿಲ್ಲ
ಪರಿಸರ ರಕ್ಷಣೆ ಬೇಕಿಲ್ಲ....

ಗಂಟೆಗಟ್ಟಲೇ ಭಾಷಣ ಬಿಗಿದರೆ
ನಿಸರ್ಗ ಬೆಳೆವುದೇ?
ಮಾತಿನಲ್ಲಷ್ಟೇ ಕಾಳಜಿ ಮೆರೆದರೆ
ಪ್ರಕೃತಿ ಉಳಿವುದೇ?
ದಯೆಯಿರಲಿ ಎಂದು ಘೋಷಣೆ ಕೂಗಿದರೆ
ವನ್ಯಮೃಗಗಳು ಬದುಕುತ್ತವೆಯೇ?
ಇವನ ಹೊಟ್ಟೆಕಿಚ್ಚು ಸಾಯಲಿಲ್ಲ
ಕಾಳ್ಗಿಚ್ಚು ಆರಲಿಲ್ಲ...

ಕಾಡು ಹೊತ್ತಿ ಉರಿದರೆ
ನಾಡು ಸುಡುಗಾಡು...
ಕಾನನ ಬರಿದಾದರೆ
ಜೀವನ ನಶ್ವರ....
ಸಸ್ಯಸಂಕುಲ ಸೆಲೆ ರಕ್ಷಿಸಿದರೆ
ಜೀವಸಂಕುಲಕ್ಕೆ ನೆಲೆ...
ಪರಿಸರ ಬೆಳೆಸಿದರೆ
ಸಂಸಾರ ಬಂಗಾರ....

- ಸುರೇಶ್ ಟಿ ವಿ

27 Feb 2019, 09:34 am

ವೋಟು ವೋಟು ಹಾಕಣ್ಣ

ವೋಟು ವೋಟು ಹಾಕಣ್ಣ
ಅದುವೇ ನಿನ್ನ ಹಕ್ಕು ತಿಳಿಯಣ್ಣ..
ವೋಟು ವೋಟು ಹಾಕಣ್ಣ
ಸರ್ಕಾರ ಆರಿಸುವ ಹಕ್ಕು ನಿನ್ನದಣ್ಣ..
ಇಲ್ಲಿ ಪ್ರಜೆಯೇ ಪ್ರಭು ಎಂಬ ನಿಜವನ್ನಾ
ಮತದಾನ ಮಾಡುವ ಮೂಲಕ ತೋರಿಸಣ್ಣ..
ನಿನ್ನ ಬೆರಳಲ್ಲಿ ಬೆಳಗಿಸು ಇಂದು ಶಾಹಿ ಗುರುತನ್ನಾ
ಉತ್ತಮ ಭವಿಷ್ಯದಲಿ ಬಾಳಲಿ ಎಂದೆಂದೂ ಈ ದೇಶ ಈ ಜನ||

ನೋಟು ಗಿಫ್ಟು ಎಂಬ ಆಮಿಷಕೆ ನೀ ಒಳಗಾಗಬೇಡ
ನಾಡಿನ ಏಳಿಗೆ ನಿನ್ನ ಕರ್ತವ್ಯ ಎಂಬುದ ಮರೆಯಬೇಡ..
ಧರ್ಮ ಜಾತಿ ಅಂತ ನೀನು ನೋಡಬೇಡ
ದೇಶದ ಪ್ರಗತಿಗೆ ದುಡಿವ ಶಕ್ತಿಯ ಮರೆಯಬೇಡ..
ಮತದಾರನೇ ಮಾಡು ದೃಢನಿಶ್ಚಯ
ನೀನಾಗಬೇಕು ರಾಷ್ಟ್ರಕೆ ಭದ್ರ ಅಡಿಪಾಯ
ಜಾರಿ ಮಾಡು ನಮ್ಮ ಸಂವಿಧಾನದ ಆಶಯ..

ಭ್ರಷ್ಟಚಾರ ಮುಕ್ತ ಸರ್ಕಾರ ನಮಗೆ ಬೇಕಣ್ಣ
ಜನಸೇವೆ ಮಾಡಲು ಸ್ಪಷ್ಟ ಬಹುಮತ ನೀಡಣ್ಣ
ಜನಹಿತ ಕಾಯುವ ನಾಯಕ ಆರಿಸಿ ಬರಬೇಕಣ್ಣ..
ಪ್ರಜಾತಂತ್ರದ ಯಶಸ್ಸು ವೋಟು ಹಾಕುವ ಪ್ರಜೆಯಿಂದ ನೋಡಣ್ಣ
ಮತದಾರನೇ ನೀನು ಜಾಗೃತನಾಗು
ದೇಶದ ಒಳಿತಿಗೆ ಮುಂದಾಗು
ಬಲಿಷ್ಟ ರಾಷ್ಟ್ರವ ಕಟ್ಟುವವನಾಗು..

- ಸುರೇಶ್ ಟಿ ವಿ

25 Feb 2019, 02:39 pm

ಮೌನರಾಗ

ನನ್ನ ಬಾಳ ಪಯಣಕೆ ನಿನ್ನ ದಾರಿ
ಕಾಯುತಿರುವೆ ನಾ...‌‌
ನೀ ಬರುವೆ ಎಂಬ ಆತ್ಮವಿಶ್ವಾಸದಿಂದ

ನನ್ನ ಕಾಯುವಿಕೆ ನೋಡಿ ಜಾತಕ ಪಕ್ಷಿ ನಗುತಿಹುದು
ನನ್ನ ಕಾಯುವಿಕೆಗೆ ಬೆಲೆಯಿಲ್ಲವೆಂದು
ನನ್ನವರೆ ನನಗೆ ಹಿಯಾಳಿಸುತಿಹರು
ನಿನಗೆ ಸ್ವಾಗತಿಸಲು ನೀ ಬರುವ ದಾರಿಯಲ್ಲಿ
ನನ್ನ ಸಿಹಿಗನಸಿನ ಗುಲಾಬಿ ಬೆಳೆದಿರುವೆ
ಆ ದಾರಿ ಈಗ ನನ್ನ ಬರಡಾಗ ಹೃದಯದಂತಾಗಿದೆ

ಈ ಬರಡಾದ ಹೃದಯಕ್ಕೆ ನಿನ್ನ ಪ್ರೀತಿಯೆಂಬ
ಎರಡನಿ ನೀರನೆರೆದು ಬಿಡು ಗೆಳತಿ
ಒಂದು ಜೀವ ಉಳಿಸಿದ ಪುಣ್ಯ ನಿನಗೆ ತಟ್ಟುವುದು
ಯಾರನ್ನೊ ಕಟ್ಟಿಕೊಂಡು ಅವನ ಗುಲಾಮಳಾಗಿ
ಬಾಳುವ ಬದಲು, ನನ್ನನ್ನೊಮ್ಮೆ ರಾಜನಾಗಿ ಕಾಣು
ಆಗ ನೀನೆ ರಾಣಿಯಾಗಿ ಮೆರೆಯುವೆ.....
##ಮೌನಿ##

- RajaneeshNandikolmath

25 Feb 2019, 01:41 am

ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ

ಯಾವ್ದುಕ್ಕೂ ತಲೆಕೆಡುಸ್ಕೋ ಬ್ಯಾಡ
ಏನ್ ಆಗುತ್ತೋ ಆಗ್ಲಿ ಬಿಡೋ..
ಇಡಿ ಲೋಕನೇ ತಲೆಕೆಳಗಾಗ್ಲಿ
ಇಷ್ಟ ಬಂದಂಗ್ ಇದ್ಬಿಡೋ..
ನಾವ್ ಇದ್ರೆನೇ ಜಗತ್ತು
ಹೊದ್ರೆ ಏನ್ ಬಂತು..
ನಮ್ಗೆ ನಾವೇ ಹೀರೋ ಅನ್ಕೊಬೇಕು
ನಮ್ಮ್ ಜೀವ್ನನಾ ನಾವೇ ಸೂಪರ್ ಮಾಡ್ಕೋಬೇಕು..
ಮನ್ಸಲ್ಲ್ ಪ್ರೀತಿ ಇರ್ಲಿ
ಮುಖ್ದಲ್ಲ್ ನಗು ಇರ್ಲಿ|| ಪ||

ಜೀವ್ನ ಒಂದು ಗಿರ್ಗಿಟ್ಲೆ
ಅವ್ನು ನಿಲ್ಸೋವರೆಗೂ ತಿರುಗ್ಲೇಬೇಕು
ಅವ್ನಿಗೆ ಇಷ್ಟಬಂದಂಗೆ ತಿರ್ಗ್ಸೋದು ಅವ್ನ್ ಕೆಲ್ಸ
ಹೆಂಗೆ ಬರುತ್ತೋ ಹಂಗೆ ಬದುಕೋದು ನಮ್ಮ್ ಸಂತೋಷ.....
ಹುಟ್ದಾಗ ಯಾರೇನು ಕಟ್ಕಂಡ್ ಬರಲ್ಲ
ಸತ್ತಾಗ ಯಾರನ್ನು ಮನೇಲಿ ಇಟ್ಕನಲ್ಲ..
ಹೊಟ್ಟೆ ಕಿಚ್ಚು ನಿನ್ನನ್ನು ಸ್ಮಶಾನಕ್ಕೆ ಸಾಗ್ಸುತ್ತೆ
ಪ್ರೀತಿ ಹಂಚು ನಿನ್ನನ್ನು ಜಮಾನ ನೆನೆಯುತ್ತೆ..

ಈ ಜೀವ್ನನೇ ಹಂಗೆ ನೂರೆಂಟು ರಿವರ್ಸ್ಗೇರು
ಅವ್ನು ಹೇಳ್ದಂಗೆ ಓಡುಸ್ಬೇಕು ನಮ್ಮ ತೇರು..
ಇಟ್ಟವ್ನೇ ಹಳ್ಳ ಗುಂಡಿ ನಮ್ಮ್ಗಳ ಬುದ್ಧಿ ಕಲಿಸೋಕೆ
ಹೋಗುವಾಗ ಅಕ್ಕಪಕ್ಕ ಅಕ್ಕರೆ ನೀಡೋ ಕಾಣಿಕೆ
ನಿಲ್ಲಿಸುವಾಗ ನಿನ್ಗೂ ಬರ್ಲಿ ಸ್ವಲ್ಪ ಪುಣ್ಯ ಲೆಕ್ಕಕ್ಕೆ
ಸುಳ್ಳು ಮೋಸ ಸುಳಿಯದಿರಲಿ ನಿನ್ನ ಪಯಣದಲಿ
ಸ್ನೇಹ ಎಂಬ ನಿಲ್ದಾಣ ಕಟ್ಟು ನಿನ್ನ ದಾರಿಯಲ್ಲಿ

- ಸುರೇಶ್ ಟಿ ವಿ

23 Feb 2019, 03:53 pm

ಹತ್ತರ ಪ್ರೀತಿಯ ಮಕ್ಕಳೇ

ಹತ್ತರ ಪ್ರೀತಿಯ ಮಕ್ಕಳೇ
ಹತ್ತಿರ ಬಂತು ಪರೀಕ್ಷೆ
ದೂರ ತಳ್ಳಿಬಿಡಿ ಹೆದರಿಕೆ
ಧೈರ್ಯ ತುಂಬಿಕೊಳ್ಳಿ ಹೃದಯಕೆ..
ಹತ್ತರ ಪ್ರೀತಿಯ ಮಕ್ಕಳೇ
ಪರೀಕ್ಷೆ ಒಂದು ಹಬ್ಬದಂತೆ
ಓದುಬರಹವೇ ಪೂಜಿಸುವ ದೇವರುಗಳು
ವಿಷಯಗಳೇ ಹಬ್ಬದ ಸಾಮಾನುಗಳು
ಪ್ರಶ್ನೋತ್ತರಗಳೇ ಹಬ್ಬದ ಅಡುಗೆಗಳು
ಸಂಭ್ರಮದಿಂದ ಸಿದ್ಧಗೊಳ್ಳಿ ನೀವುಗಳು..

ಅನ್ನಬೇಡಿ ಗಣಿತ ಕಷ್ಟ ಅಂತ
ಏಕೆಂದರೆ ಸೊನ್ನೆ ಕಂಡುಹಿಡಿದಿದ್ದೇ ಭಾರತ..
ಹೋಗದಿರಲಿ ಸುತ್ತಮುತ್ತ
ಲೆಕ್ಕ ಮಾಡುವಾಗ ನಿಮ್ಮ ಚಿತ್ತ..
ಆಗ ನೋಡಿ ಗಣಿತ
ಎಲ್ಲಕ್ಕಿಂತ ಸುಲಲಿತ..

ಅಯ್ಯೋ ವಿಜ್ಞಾನ
ಪ್ರಶ್ನೆಗಳು ವಿಭಿನ್ನ
ತಿನ್ನುತ್ತವೆ ತಲೆಯನ್ನ
ಅನ್ನಬೇಡಿ ಮಕ್ಕಳೇ..
ಪುಟಪುಟ ತುಂಬಿಸಿ ಚಿತ್ರಗಳನ್ನ
ಪ್ರಯೋಗ ಮಾಡಿ ದಿನ ದಿನ
ಚರ್ಚೆ ಮಾಡಿ ಅನುಕ್ಷಣ
ಆಗ ನೋಡಿ ವಿಜ್ಞಾನ
ನಿಮ್ಮ ಮನದೊಳಗೆ ಸಂಪೂರ್ಣ ಜೀರ್ಣ....

ಎಲ್ಲರು ಹೇಳುವಂತೆ ಸಮಾಜ
ಅತಿ ಸರಳ ಸುಲಭ ನಿಜ
ಹಾಗಂತ ಸಮಾಜಕ್ಕೆ ಹಾಕಿದರೆ ರಜಾ
ನಿಮಗೆ ಸಿಗೋದಿಲ್ಲ ಡಿಸ್ಟಿಂಕ್ಷನ್ನಿನ ಮಜಾ....

ಪದ್ಯಗದ್ಯ ವ್ಯಾಕರಣ ಪತ್ರಲೇಖನ ಒಳಗೊಂಡ
ಭಾಷೆಗಳಾದ ಹಿಂದಿ ಇಂಗ್ಲೀಷ್ ಕನ್ನಡ
ಕಲಿತರೆ ಸುಲಭವಾಗಿ ಅಂಕಗಳು ನಿಮ್ಮ ಸಂಗಡ...

ಎಷ್ಟು ಓದುತ್ತೀರೋ
ಅಷ್ಟು ಓಳ್ಳೇಯದು
ಎಷ್ಟು ಬರೆಯುತ್ತೀರೋ
ಅಷ್ಟು ಮರೆಯದು....
ಎಷ್ಟು ಲೆಕ್ಕ ಬಿಡಿಸುತ್ತೀರೋ
ಅಷ್ಟು ಪಕ್ಕ ಆಗುತ್ತೀರಾ
ಎಷ್ಟು ಚೊಕ್ಕ ಚಿತ್ರ ರಚಿಸುತ್ತೀರೋ
ಅಷ್ಟು ಅಂಕ ಪೂರ ಗಳಿಸುತ್ತೀರಾ...

ಹೇಳಿದ್ದನ್ನು ಮನೆಯಲಿ ಚೆನ್ನಾಗಿ
ಕಲಿತುಕೊಂಡು ಬನ್ನಿ
ಕಲಿತಿದ್ದನ್ನು ಶಾಲೆಯಲಿ ತುರ್ತಾಗಿ
ಬರೆದುಕೊಂಡು ತನ್ನಿ...

ಪರೀಕ್ಷಾ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ
ಪೌಷ್ಟಿಕ ಆಹಾರ ಸೇವಿಸಿ
ನಿರೀಕ್ಷಾ ಅಂಕ ಗಳಿಸುವುದಕ್ಕೆ ಶಿಕ್ಷಕರು
ಹೇಳಿದ ವೇಳಾಪಟ್ಟಿ ಅನುಸರಿಸಿ.....

ಪರೀಕ್ಷೆ ಮುಗಿಯುವತನಕ
ಟಿವಿ ಮೊಬೈಲ್ ನೋಡಬೇಡಿ..
ಪ್ರಶ್ನೋತ್ತರ ಕಲಿಯುವತನಕ
ಪೆನ್ನು ಪುಸ್ತಕ ಬಿಡಬೇಡಿ...
ನಿತ್ಯ ಆಟದ ಅಂಕಣಕ್ಕೆ ಭೇಟಿಕೊಡಬೇಡಿ
ಆಗ ಓಳ್ಳೇಯ ಅಂಕಪಟ್ಟಿ ನಿಮ್ಮದು ನೋಡಿ..

ಇಷ್ಟದ ಪ್ರಶ್ನೆಗಳಿಗೆ ಮೊದಲು ಆದ್ಯತೆ ನೀಡಿ
ಕಷ್ಟದ ಉತ್ತರಗಳಿಗೆ ಆಮೇಲೂ ಚಿಂತೆ ಮಾಡಿ...
ಎಲ್ಲ ಪ್ರಶ್ನೆಗಳನ್ನು ಅಟೆಂಡ್ ಮಾಡುವುದನ್ನು ಮರೆಯದಿರಿ
ನಿಮ್ಮ ಅಕ್ಷರಗಳನ್ನು ದುಂಡಾಗ್ ಬರೆಯುವುದನ್ನು
ತಪ್ಪದಿರಿ

ಹತ್ತರ ಪ್ರೀತಿಯ ಮಕ್ಕಳೇ
ಸದುಪಯೋಗಪಡಿಸಿಕೊಳ್ಳಿ ಇರುವ ವೇಳೆ
ಆಗ ನಿಮ್ಮದು ನೋಡಿ ಸುಂದರವಾದ ನಾಳೆ...
ಹತ್ತರ ಪ್ರೀತಿಯ ಮಕ್ಕಳೇ
ಎತ್ತರವಾಗಿ ಯೋಚಿಸಿರಿ
ಹೆಮ್ಮರದಂತೆ ಬಾಳಿರಿ.........

- ಸುರೇಶ್ ಟಿ ವಿ

21 Feb 2019, 11:17 am

ಯೋಧ ನಿನಗೆ ನಮನ

"ಜೈ ಜವಾನ್"
ದೇಶಕ್ಕಾಗಿ ದುಡಿವ ಯೋಧ ನಿನಗೆ
ಕೋಟಿ ಕೋಟಿ ವಂದನೆ.
ಭಾರತಾಂಬೆಯ ಉಳಿವಿಗಾಗಿ ಪ್ರಾಣತ್ಯಾಗ ಮಾಡಲೊರಟು ಕೆಚ್ಚೆದೆಯಿಂದ ಹೋರಾಡುವ
ಯೋಧ ನಿನಗೆ ವಂದನೆ
"ಕೋಟಿ ಕೋಟಿ ವಂದನೆ"

ಹೆತ್ತು ಹೊತ್ತು ಬೆಳೆಸಿದವರ ಬಿಟ್ಟು
ಒಡ ಹುಟ್ಟಿದವರಿಗೆ ಎಲ್ಲಾ ಕೊಟ್ಟು
ಹೆಂಡತಿಗೆ ಸ್ವಲ್ಪ ಪ್ರೀತಿ ಕೊಟ್ಟು
ಅಸುಗೂಸನ್ನ ಮಡದಿಯ ಮಡಿಲಿಗೆ ಇಟ್ಟು ದೇಶದ ಉಳಿವಿಗೆ ಪಣವ ತೊಟ್ಟು
ಪ್ರಾಣದ ಹಂಗನ್ನು ಬಿಟ್ಟು ಹೋರಾಡುವ ಯೋಧ ನಿನಗೆ ಕೋಟಿ ಕೋಟಿ ವಂದನೆ.

ಹೆತ್ತವ್ವನ ಕೈ ತುತ್ತ ಬಿಟ್ಟು, ಮಡದಿಯ ಪ್ರೀತಿ ಮಮತೆಯ ಊಟ ಬಿಟ್ಟು ರಾತ್ರಿ ಹಗಲೆನ್ನದೆ ನಿದ್ರೆ ಬಿಟ್ಟು ಶ್ರಮ ಪಟ್ಟು ಭಾರತಾಂಬೆಯ ಕೊಟ್ಯಾಂತರ ಮಕ್ಕಳಿಗೆ ರಕ್ಷಣೆ ಕೊಡುವ ಯೋಧ ನಿನಗೆ
"ಕೋಟಿ ಕೋಟಿ ವಂದನೆ"

✍ರಾಜ್

- ರಾಜ್

19 Feb 2019, 08:35 am

ಶ್ರಾವಣ ಶ್ರಂಗಾರ

ತೋಟದಂಚಿನ ಪಾಗಾರಕ್ಕೂ
ಸೀರೆಯ ಸೊಬಗಿನ
ವ್ಯಯಾರದ ಕಳೆ!

ಹಾಸುಗಲ್ಲಾಗಿ ಹರಿದಿದೆ
ಜಲಪಾತದ ತೆರದಲಿ
ನೀಲ್ಗಂದು ಪಾಚಿಯ ಹೊಳೆ!

ಹಿತ್ತಲ ಬುಡದಿ ಹೊಸ ಚಿಗುರು
ಸಾಲಂಕೃತ ಹಡೆಯುವ ಹಬ್ಬಕೆ
ಹದ ಹುಯಿಲೆಬ್ಬಿಸಿದೆ ಬೆಳೆ!


ಮದನ ಮಾನಿನಿ ಮುಡಿಪ
ಮಿರುಗುವ ಕಾಮನ ಬಣ್ಣದ
ಕುಮುದಿನಿ ಮೇಲಬ್ಬರದ ಮಳೆ!

ಎನ್.ಆರ್.ಗಜು, ಕುಮಟಾ

- NRGaju

18 Feb 2019, 02:03 pm

ಸೈನಿಕ

ಭರತಖಂಡದ ಶಿಖರ
ನಮ್ಮೀ ಕಾಶ್ಮೀರ
ಒಡಹುಟ್ಟಿದವರ ಈ ಕದನ
ನಮ್ಮೀ ಸೈನಿಕರ ದಹನ

ಎಲ್ಲೋ ಹುಟ್ಟಿವ ಯುವಕ
ಎಲ್ಲೆ ಸೇರಿ ಆಗುವ ಸೈನಿಕ
ಮಾತೆಯ ಕಾಯುವುದೇ ಕಾಯಕ
ಇವನೇ ನಮ್ಮೆಲ್ಲರ ರಕ್ಷಕ

ಹಡೆದವರಿಗೆ ದೂರವಾಗಿ
ಮಡದಿ- ಮಕ್ಕಳಿಗೆ ಮರೆಯಾಗಿ
ಭಾರತಾಂಬೆಯ ಚಿರ ಶಾಂತಿಗಾಗಿ
ಸ್ಥಿರ ನಿದ್ರೆಗೆ ಜಾರಿದ ತ್ಯಾಗಿ

ತನ್ನ ನೆತ್ತರದಿ ಭಾರತಾಂಬೆಗೆ
ತಿಲಕವನಿಟ್ಟು
ತನ್ನವಳ ಹಣೆಯ ಬರಡಾಗಿಸಿದ
ತನ್ನ ಪ್ರಾಣವ ಕೊಟ್ಟು

ದೇಶ ಲೂಟಿ ಮಾಡುವವರ ಪರ
ಸದಾ ನಮ್ಮನ್ನಾಳುವವರ ನಿಲುವು
ದೇಶ ಕಾಯುವ ಯೋಧರ ಪರ-
ಯೋಜನೆಗಳಿಗಿಲ್ಲ ಇವರ ಒಲವು

ವೈಜ್ಞಾನಿಕ ಸಾಧನೆಲಿ
ಜಗ ಮುಟ್ಟಿದೆ ಮಂಗಳ ಲೋಕ
ಸಂಶೋಧಕರ ಗಮನದಲ್ಲಿರಲಿ
ಎಲ್ಲೆ ಕಾಯುವ ನಮ್ಮೀ ಸೈನಿಕ



ಶಾರದ

- ಶಕುಂತಲಾ

18 Feb 2019, 09:42 am

"ಮೀನು"

ನೀರಲ್ಲಿ ಈಜುತ್ತಿರುವ ಮೀನು ನೀನು
ನಿನ್ನ ಹೃದಯಕ್ಕೆ ಗಾಳ ಹಾಕುವನು ನಾನು
ನೀ ನನಗೆ ಸೀಗದೆ ಹೋದರೂನು 
ನನ್ನ ಪ್ರಯತ್ನ ಮಾಡುತ್ತ ಕಾಯುವೆನು

- Harshac

18 Feb 2019, 07:17 am

"ಅನುಮಾನ"

     
ಅವಳ ಮೇಲೆ ಬರೆದರು ಕವನ
ಕೊಡಲಿಲ್ಲ ನನ್ನ ಮೇಲೆ ಗಮನ
ಕಟ್ಟಿಸೋಣ ಅಂತಿದ್ದೆ ಅವಳ ಹೆಸರಲೀ  ಉದ್ಯನವನ
ನನಾಗ್ಯಕೋ ಅವಳು ನನ್ನ ಒಪ್ಪುವುದೇ ಅನುಮಾನ
ಯಾವುದಕ್ಕು ನೋಡಿ ಕೊಳ್ತೀನಿ ಬೇರೆ ಹುಡುಗೀನ

- Harshac

18 Feb 2019, 07:16 am