ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ಓ ವೀರ ಯೋಧನೇ
ಓ ಶೂರ ಯೋಧನೇ
ನಿನಗೆ ಕೋಟಿ ವಂದನೆ..
ನಿನ್ನ ತ್ಯಾಗ ಬಲಿದಾನ
ಮರೆಯದು ಎಂದು ಹಿಂದೂಸ್ಥಾನ..
ನಿನ್ನ ಕೆಚ್ಚೆದೆಯ ದೇಶಾಭಿಮಾನ
ಭಾರತೀಯರಿಗೆ ಎಂದೆಂದು ಸುಖಜೀವನ..||ಪ||
ನಿನ್ನವರನ್ನು ಬಿಟ್ಟು ಹೊರಟೆ ಗಡಿಯತ್ತ
ಜೈಹಿಂದ್ ಎಂಬುದೊಂದೇ ನಿನ್ನ ಎದೆಬಡಿತ..
ಕಟ್ಟಿ ಎಸೆದೆ ನಿನ್ನ ಭವ್ಯ ಭವಿಷ್ಯವನ್ನಾ
ಮೇರಾ ಭಾರತ್ ಮಹಾನ್ ಅಂದೆ ಕ್ಷಣ ಕ್ಷಣ..
ಘೋರ ಕದನಕೆ ನೀನು ಸದಾ ಸನ್ನದ್ಧ
ಹೆಮ್ಮೆಯಿಂದ ಬೀಗುವೆ ವೀರಮರಣದಿಂದ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ..
ದ್ರೋಹಿಗಳ ದಂಡು ಧ್ವಂಸ ಮಾಡುವ ಗಂಡು..
ಬಾಂಬ್ ಸಿಡಿಯಲಿ ಗುಂಡಿಗೆ ಹಾರಲಿ
ರಣರಂಗದಲಿ ನೀನು ಉಕ್ಕಿನ ಮನುಷ..
ನೆತ್ತರು ಸುರಿಯಲಿ ಉಸಿರು ಹೋಗಲಿ
ಮಾಡೆ ತೀರುವೆ ಉಗ್ರರನ್ನು ಸರ್ವನಾಶ..
ತ್ರಿವರ್ಣಧ್ವಜ ಹಾರಿದಾಗಲೇ ನಿನಗೆ ಹರುಷ..
ನಿನ್ನ ಉಸಿರು ಭಾರತ
ನಿನ್ನ ಹೆಸರು ಶಾಶ್ವತ...
ಓ ನನ್ನ ವೀರ ಯೋಧ ಮತ್ತೆ ಹುಟ್ಟಿ ಬಾರೋ
ನೀನೆ ಈ ದೇಶದ ನಿಜವಾದ ಹೀರೋ...
ನೀನೀದ್ದರೇನೆ ದೇಶದ ಜನತೆ ಕ್ಷೇಮಕುಶಲಂ
ನಿನ್ನ ತ್ಯಾಗ ಬಲಿದಾನಕೆ ಕೋಟಿ ಕೋಟಿ ಸಲಾಂ|ಪ|
ಬಿಟ್ಟು ಬಂದೆ ನಿನ್ನ ಕುಟುಂಬ
ಬೆಳೆಸಿಕೊಂಡೆ ದೇಶಭಕ್ತಿ ನರನಾಡಿಯ ತುಂಬ..
ಉಗ್ರರ ಸಂಹಾರ ನಿನಗೊಂದು ಸಮಾರಂಭ
ವೀರಮರಣ ಹೊಂದುವುದು ನಿನಗೆ ಮಹಾನ್ ಹಬ್ಬ..
ತಾಯ್ನಾಡಿಗಾಗಿ ಒತ್ತೆ ಇಟ್ಟೆ ಹಣೆಬರಹ
ಸಹಿಸೋದಿಲ್ಲ ನೀನು ದೇಶದ್ರೋಹ..
ಉಕ್ಕಿನ ಕವಚ ನಿನ್ನ ದೇಹ
ಮಳೆ ಬಿಸಿಲು ಚಳಿಯಲ್ಲೂ ಸೋಲದ ಉತ್ಸಾಹ..
ಘರ್ಜಿಸುವೆ ಮುನ್ನುಗ್ಗುವೆ ಸಿಂಹದ ತರಹ..
ನಿನ್ನ ಆರ್ಭಟಕೆ ನುಚ್ಚುನೂರು ಉಗ್ರರು
ಹೋರಾಡುವೆ ನೆತ್ತರು ಸುರಿದರೂ ದೇಹ ಛಿದ್ರ ಛಿದ್ರವಾದರೂ
ವಿಜಯ ಪತಾಕೆ ಹಾರಿಸಿ ಹೆಮ್ಮೆಯಿಂದ ನಿಲ್ಲಿಸುವೆ ನಿನ್ನ ಉಸಿರು..
ನಮ್ಮೆದೆಯಲ್ಲಿ ಎಂದೆಂದು ಅಮರ ನಿನ್ನ ಹೆಸರು..
ಮತ್ತೆ ಹುಟ್ಟಿ ಬನ್ನಿ ಓ ನನ್ನ ವೀರ ಯೋಧರೇ
ನಿಮ್ಮ ತ್ಯಾಗ ಬಲಿದಾನಕೆ ಕೋಟಿ ವಂದನೆ..
ಭರತಮಾತೆಯ ರಕ್ಷಣೆಗೆ ನೀವು ಇದ್ದರೆ
ಮಾತೆಯ ಮಕ್ಕಳಿಗೆ ಆಗ ನೆಮ್ಮದಿಯ ನಿದಿರೆ.|ಪ|
ನಾನು ನನ್ನದು ಎಂಬ ಆಸೆ ಸುಟ್ಟು ಹಾಕಿದೆ
ನನ್ನ ದೇಶ ನನ್ನ ಜನ ಎಂದು ಇಷ್ಟಪಟ್ಟು ಹೋರಾಡಿದೆ..
ದೇಶದ್ರೋಹಿಗಳ ಹುಟ್ಟಡಗಿಸಲು ದೇಹ ಚೂರಾದರೂ ಮುನ್ನುಗ್ಗಿದೆ
ರಾಷ್ಟ್ರಧ್ವಜವ ನೆಟ್ಟು ಜೈಹಿಂದ್ ಎನ್ನುತ ಮೆರೆದಾಡಿದೆ..
ಅನುಕ್ಷಣ ಹರುಷದಿಂದ ದೇಶ ಕಾಯುವೆ
ನರನಾಡಿಯಲ್ಲಿ ದೇಶಪ್ರೇಮ ಉಕ್ಕಿ ಹರಿಸುವೆ..
ಉಗ್ರಗಾಮಿ ಗಡಿ ದಾಟಿದರೆ ಸಮರ ಸಾರುವೆ..
ಮಾತೃಭೂಮಿಗಾಗಿ ಹೋರಾಡಿ ವೀರ ಮರಣ ಹೊಂದುವೆ..
ಭಾರತೀಯರ ಎದೆಯಲ್ಲಿ ಎಂದೆಂದು ಅಮರನಾಗುವೆ ಅಮರನಾಗುವೆ...
ಎದೆಗೆ ಎದೆಯೊಡ್ಡಿ
ವೈರಿಯ ರಕ್ತವ ಕುಡಿದ,
ಭಾರತಾಂಬೆಯ ಹೆಮ್ಮೆಯ
ಪುತ್ರರು ನಮ್ಮ ಸೈನಿಕರು.
ಕಾಶ್ಮೀರದ ಕಾದಾಟದಲ್ಲಿ
ಪ್ರಾಣ ಬಿಟ್ಟರು ನೆಲ ಬಿಡೇವು.
ಗುಂಡಿಗೆಯ ಗೂಡಿನಲ್ಲಿ
ಭಾರತಮಾತೆಯ ಸ್ಮರಿಸುವರು.
ಲೆಕ್ಕಕ್ಕೆ ಲೆಕ್ಕ ಚುಕ್ತಾ ಮಾಡಿ
ವೈರಿಯ ರುಂಡ ಚಂಡಾಡಿ,
ಉತ್ತರಕ್ಕೆ ಉತ್ತರವನಿಟ್ಟು
ಆರ್ಭಟಿಸುವ ನಮ್ಮ ಯೋಧರು.
ಪ್ರೀತಿಯಿಂದ ಬಂದರೆ
ಪ್ರಾಣ ಕೊಡುವರು.
ಬಂದು ನಕರಾ ಮಾಡಿದರೆ
ನಿಂಪ್ರಾಣನ ತುತ್ತಾಗಿ ಉಣ್ಣುವರು.
ಎರೆಡು ಕೆನ್ನಗೆ ಹೊಡಿಸಿಕೊಳ್ಳಲು
ಇದು ಗಾಂಧಿ ಕಾಲವೇನಲ್ಲ.
ಪ್ರಾಣಕ್ಕೆ ಲೆಕ್ಕ ಪ್ರಾಣವೇ ಬೇಕೆನ್ನುವ
ಕ್ರಾಂತಿಕಾರಿ ಪಡೆಯಂತೆ ನಮ್ಮ ಸೈನಿಕರು.
ಎಷ್ಟೋಂದು ಬ್ಯೂಟಿಫುಲ್ ನನ್ನ ಬುಲ್ ಬುಲ್
ನಿನ್ನ ಮುಂದೆ ಎಲ್ಲಾ ಹುಡುಗಿರೂ ನಿಲ್..
ನೀನು ನಕ್ಕರೆ ಮೂಡುತ್ತೆ ಕೆನ್ನೆಲಿ ಬೆಳದಿಂಗಳಂಥ ಡಿಂಪಲ್
ನಿನ್ನ ಅಕ್ಕರೆ ತರುತ್ತೆ ನನ್ನ ಬದುಕಲ್ಲಿ ಪವರ್ ಫುಲ್..
ನೀನು ನನಗಾಗಿ ಧರೆಗಿಳಿದ ಲವ್ಲೀ ಲವ್ಲೀ ಏಂಜಲ್
ನೀನಿದ್ರೆ ಯಾವಾಗ್ಲೂ ಈ ಲೈಫು ವಂಡರ್ಫುಲ್.|ಪ|
ನೀನೊಂದು ಸ್ನೇಹದ ಕಡಲು
ತುಂಬಿದೆ ಈ ಹೃದಯದಲ್ಲಿ ಒಲುಮೆಯ ಅಮಲು..
ನೀನೇ ನನ್ನ ಬಾಳಿಗೆ ಎಲ್ಲದಕ್ಕೂ ಮೊದಲು
ನಿನ್ನ ಬಿಟ್ಟು ಬೇರೆ ಇಲ್ಲ ನನಗೆ ಬಾಳಲು..
ಎಂದೆಂದೂ ನೀನು ಜೊತೆಯಾಗಿ ಇರಲು
ಎದುರಾರೇನು ಎಂಥ ಸವಾಲು..
ಈ ಬಾಳಿಗೆ ನೀನಾದೆ ಸುಂದರ ಪ್ರೇಮ ಕವನ
ನಿನಗಾಗಿ ಬರೆಯುವೆನು ಪುಟಪುಟದಲಿ ನಗುವನ್ನ..
ಜೋಡಿಹಕ್ಕಿಯಾಗಿ ನಾವು ಒಲವಿನ ಲೋಕಕೆ ಹಾರೋಣ
ಅಲ್ಲಿ ನಾನೇ ರಾಜ ನೀನೇ ರಾಣಿ ಆಗೋಣ..
ನೀನಿದ್ದರೆ ಅನುದಿನ ಅನುಕ್ಷಣ ಈ ಜೀವನ
ಮಧುರ ಮಧುರ ಮಂಜುಳಾ ಗಾನ..