Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಡಲಿನಾಳದ ಮುತ್ತು

ಕಡಲಿನಾಳದ ಮುತ್ತು
ಕೊರಳ ಸೇರುವ ಹಾಗೆ
ಮನಸಿನಾಳದ ಪ್ರೀತಿ
ನಿನ್ನ ಸೇರಲಿ ಬೇಗ!!

ತಾನೇ ತನ್ನನು ಮರೆತು
ಕೋಗಿಲೆಯು ಹಾಡುವಂತೆ
ನಾನು ನನ್ನನೇ ಮರೆತು
ನಿನ್ನ ಕಾಯುತ ನಿಂತೆ!!

ಹೂವು ಗಂಧವ ಬೀರಿ
ದುಂಬಿಯನು ಕರೆವಂತೆ
ಕರೆಯಲಾರೆಯಾ ನೀನು
ನನ್ನನು ಬಳಿ ಬರುವಂತೆ!!

ಇರುಳ ಆ ಬಾನಿನಲಿ
ಹೊಳೆವ ಚಂದ್ರನ ಕಾಂತಿ
ಇಳೆಯಲ್ಲಿ ನಾ‌ ಕಂಡ
ಬೆಳದಿಂಗಳೇ ನೀನಂತೆ!!

- ಪಿ.ಜಿ.ಜ್ಯೋತಿ

31 Jan 2019, 03:11 pm

ನನ್ನೊಲವೇ..

ಅಂದ ಚೆಂದದಲ್ಲಿ
ಮನಸೆಳೆಯುವೆ
ಬಣ್ಣದೋಕುಳಿಯಲ್ಲಿ
ಮಿಂದಿರುವೆ
ಭಾವಾಂತರಂಗಕೂ
ಲಗ್ಗೆ ಇಟ್ಟಿರುವೆ
ಸುಮ್ಮನಿರಲಿ ಹೇಗೆ ಹೇಳು ನನ್ನೊಲವೆ?
ನಲಿವೆ, ಬಣ್ಣಗಳ ಮಾತು ಉಲಿವೆ
ನನ್ನೊಲವೆ..!!

- preethi

30 Jan 2019, 09:30 pm

ಧ್ವನಿವರ್ಧಕ

ನನ್ನವನ ಮೇಲಿನ ಪ್ರೀತಿಯನ್ನ
ಘೋಷಿಸುವಾಗ
ಹಿಡಿದಿದ್ದ ಧ್ವನಿವರ್ಧಕಕ್ಕೂ
ಅವನ ಮೇಲೆ ಪ್ರೀತಿಯಾಯಿತಂತೆ

- preethi

30 Jan 2019, 09:23 pm

ಪ್ರೀತಿ ಒಂದು ಭ್ರಮೆ

ಪ್ರೀತಿಯು ಶಾಶ್ವತಾ ಅದಕ್ಕಎಂದು ಸಾವಿಲ್ಲ, ಪ್ರೀತಿಗೆ ಸೋಲಿಲ್ಲ ಈ ಗಾದೆ ಸುಳ್ಳಲ್ಲ.
ಈ ಮಾತ ನಂಬಿದರೆ ನಿಮಗಿಲ್ಲ ಕ್ಷಮೆ, ಕೇಳು ಓ ಪ್ರೀತಿಯೆ ನೀನ್ ಒಂದು ಭ್ರಮೆ.

ನಿನ್ನನ್ನು ಇಟ್ಟಿರುವೆ ಎದೆಗೂಡಿನಲ್ಲಿ, ನಿನ್ ಹೆಸರ ಬರೆದಿರುವೆ ನನ್ಉಸಿರಿನಲ್ಲಿ.
ಇವೆಲ್ಲಾ ಪ್ರೇಮಿಗಳ ಹುಚ್ಚು ಕಲ್ಪನೆ, ಕೇಳು ಓ ಪ್ರೀತಿಯೆ ನೀನಒಂದು ಭ್ರಮೆ.

ನೀ ನನ್ನ ಮಾಲಿಕ ನೀನ್ ನನ್ನ ದೇವತೆ, ಬದುಕಲು ಸಾವಲ್ಲು ನಾವಿನ್ನು ಜೊತೆ ಜೊತೆ.
ಮಾಡುವರು ಇಂತಹ ಸಾಕಷ್ಟು ಆಣೆ, ಕೇಳು ಓ ಪ್ರೀತಿಯೇ ನೀನೊಂದು ಭ್ರಮೆ.

ಓ ನನ್ನ ಬಾಂಧವರೇ ನಿಮಗೊಂದು ಕಿವಿಮಾತು, ಹೃದಯಕ್ಕೆ ಎಂದಿಗೂ ತರಬೇಡಿ ಆಪತ್ತು.
ಪ್ರೀತಿಯ ಆಯಸ್ಸು ಬಹಳಾನೇ ಕಡಿಮೆ, ಕೇಳು ಓ ಪ್ರೀತಿಯೇ ನೀನಒಂದು ಭ್ರಮೆ.

- gataksingh

29 Jan 2019, 10:19 pm

ಅಧೀನಳಾದೆ ನಾನು


ಆಯತಪ್ಪಿದ ಕನಸುಗಳೆಲ್ಲವು ನಿನ್ನ ಕಣ್ಸನ್ನೆಯ ಅಧೀನದಲ್ಲಿ ಮಾತಿಲ್ಲದೆ ಮೌನವಾಗಿ ಉಳಿದಿವೆ, ನಿನ್ನ ನೋಡುತ್ತಾ ಆ ನೋಟಕೆ ಶರಣಾಗಿ.

ನಿನ್ನ ನೆನಪಲಿ ನಿತ್ಯ
ಉರುಳುವ ಇರುಳ ಸನಿಹ ಬಯಸಿ,ಓಡುತ್ತಿದೆ ಹಗಲೊಂದು ಸಂಜೆಯೆಡೆಗೆ, ಸಾವಿರಾರು ಮಾತು ಉಳಿಸಿ ನಿನ್ನ ಬಳಿ ಹೇಳಲಿಚ್ಛಿಸಿ,
ಮತ್ತೆ ಸೂರ್ಯ ಬರುವ ಮುನ್ನ ಭುವಿಯ ಕಡೆಗೆ.

ಸ್ವಾಧೀನ ನಿನ್ನ ಉಸಿರು ನನ್ನ ಹೆಸರಿಗೆ, ಒಡೆದ ರಾತ್ರಿಯ ಚೂರುಗಳು ಮುಂಜಾವಿನಲಿ ಮುಸುಕಿ ಮಲಗಿದ ಇಬ್ಬನಿಯ ಒಡಲಿಗೆ.

ತನುವ ಮರೆಸುವ ನಿನ್ನ ನಗೆಯ ಸದ್ದು ಮಡಿದ ಕಣ್ಣ ಹನಿಗಳಿಗೂ ಮುದ್ದು, ಕಳೆದ ದಿನಗಳ ನೆನಪಿಗೆ ಮುಂಬರುವ ದಿನಗಳ ಆಸೆಗೆ ನವವಸಂತ ನೀನು.

ಮಗುವ ಮನಸವನ ತುಂಟ ಒಲವಿಗೆ ಅಧೀನಳಾದೆ ನಾನು.

- ಚುಕ್ಕಿ

29 Jan 2019, 04:49 pm

ಸ್ವಚ್ಛತೆಯೇ ಆರೋಗ್ಯ

ಮನೆಯ ಕಸವನು ಎಲ್ಲೆಂದರಲ್ಲಿ ಎಸೆಯವ್ನೆ ಗಮಾರ
ಗಲೀಜು ಆಗಿರುವ ಪರಿಸರವನ್ನು ಸ್ವಚ್ಛ ಮಾಡವ್ನೆ ಪೌರ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..||ಪ||

ಸುತ್ತಮುತ್ತಲಿನ ಕಸವನ್ನೆಲ್ಲ ಗುಡಿಸಬೇಕಣ್ಣ
ಬೀದಿಗೆ ಬರುವ ಕಸದಗಾಡಿಗೆ ಕಸವ ಹಾಕಣ್ಣ..
ಕಸ ಅನ್ನೋದು ನಮ್ಮಗಳಿಗೇನೆ ಹಾನಿ ನೋಡಣ್ಣ
ಗಾಂಧಿ ಕನಸು ನನಸು ಮಾಡೋದು ನೀನೆಕಣಣ್ಣ..
ನೀನಿದ್ದ ನಾಡಿಗೆ ಒಳ್ಳೇದು ಮಾಡಣ್ಣ
ಭೂತಾಯಿ ಒಡಲಿಗೆ ಕಸ ಎಂಬ ವಿಷ ಸುರಿಯಬೇಡಣ್ಣ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..

ಪ್ಲಾಸ್ಟಿಕ್ ಚೀಲ ಬಳಸೋದಿಲ್ಲ ಎಂದು ಹೇಳಣ್ಣ
ಪರಿಸರವನ್ನು ರಕ್ಷಿಸೋನು ದೇಶಕೆ ಬೇಕಣ್ಣ..
ಕ್ರಿಮಿಕೀಟ ಹರಡೋದಿಲ್ಲ ಸ್ವಚ್ಛತೆ ಮಾಡಣ್ಣ
ಹಣವೇ ಬಾಳಿಗೆ ಮುಖ್ಯವಲ್ಲ ಆರೋಗ್ಯ ಮೇಲಣ್ಣ..
ಮಾಲಿನ್ಯ ತಡೆಯೋಕೆ ಮುನ್ನುಗ್ಗಿ ಬಾರಣ್ಣ
ನಿನ್ನ ದೇಹ ಮಣ್ಣಾದ್ರೂ ನಿನ್ನ ಹೆಸರು ಮರೆಯೋಲ್ಲ..
ಜಗ ಸ್ವಚ್ಛವಾದರೆ ರೋಗ ಬರದೆಂಬ ಮಾತು ನಿಜವಣ್ಣ
ಈ ಸ್ವಚ್ಛತೆಯೇ ಆರೋಗ್ಯ ತಿಳಿಯೋ ಮಂಕು ತಿಮ್ಮಣ್ಣ..

- ಸುರೇಶ್ ಟಿ ವಿ

28 Jan 2019, 12:54 pm

ಕೆಸರಾದ ಕೆರೆಯಲ್ಲಿ

ಕೆಸರಾದ ಕೆರೆಯಲ್ಲಿ
ತಾವರೆಯು ಹಸನಾಯ್ತು!!
ಬರಡಾದ ಮರಕೀಗ
ಹೊಸ ಚಿಗುರು ಬಂದಾಯ್ತು!!

ಮೋಡ ಕರಗಿ ಮಳೆ ಸುರಿದು
ಭೂಮಿಯೆಲ್ಲ ತಂಪಾಯ್ತು!!
ಪ್ರಕೃತಿಗೆ ವಸಂತವು
ಎಲ್ಲವೂ ಶುಭವಾಯ್ತು!!

ನಿನ್ನೆ ಕಂಡ ಕನಸುಗಳು
ಇಂದು ತಾನೇ ನಿಜವಾಯ್ತು!!
ಕಹಿಯಾದ ನೆನಪುಗಳು
ಜೇನಿನಂತೆ ಸಿಹಿಯಾಯ್ತು!!

ನನ್ನೆದೆಯ ಚಿಪ್ಪಿನಲಿ
ನಿನ್ನ ನುಡಿ ಮುತ್ತಾಯ್ತು!!
ಮಿಡಿ ಮಿಡಿವ ಹೃದಯಕಿದೋ
ನೀ ದೊರೆತ ವರವಾಯ್ತು!!

ಆನಂದ ಸಂಭ್ರಮಕೆ
ನನ್ನ ಉಸಿರು ಸಾಕ್ಷಿಯಾಯ್ತು!!
ನೀ ಸನಿಹ ಬಂದ ಮೇಲೇ
ಬದುಕಿದು ಸುಂದರವಾಯ್ತು!!

- ಪಿ.ಜಿ.ಜ್ಯೋತಿ

28 Jan 2019, 09:23 am

ಭಾಷೆಯ ಬಂಧನದಲಿ ಪ್ರತಿಭೆ

ಬೆಳಗಲಿಳೆಯಲಿ
ಮನವ ತಣಿಸಲಿ
ಬಂದಿಸದಿರಿ ಅದನು
ಭಾಷೆಯ ಸಂಕೋಲೆಯಲಿ

ವಿಜ್ಞಾನಿಯಾಗಿ ವಿಹರಿಸಬಲ್ಲ
ಕವಿಯಾಗಿ ಕರಗಬಲ್ಲ
ಜಾತಿ-ಮತ ಧರ್ಮ ದ
ಎಲ್ಲೆ ಮೀರಿ ತಾ ತೇಲಬಲ್ಲ
ಭಾಷೆಯ ಬಂಧನ ಅವನಿಗೆ ಸಲ್ಲದಲ್ಲ

ಮುಗ್ದ ಮಗುವಿನ ಮನದಲ್ಲಿ
ಆಂಗ್ಲದ ಬೀಜ ಚೆಲ್ಲಿ
ನಿಯಮಗಳ ಬಂಧನದಲಿ
ಬೆಳೆಸದಿರಿ ಪ್ರತೀಷ್ಠೆಯ ಕಣದಲ್ಲಿ

ಮುಗ್ದತೆಯ ಕೊಂದು
ಕೃತಕತೆಯಲಿ ಸಾಗುತಿಹೆವಿಂದು
ಆಂಗ್ಲವೆ ಸರ್ವಸ್ವವೆಂದು
ಮಾತೃಭಾಷೆಯ ಜರಿದು

ಜಗದ ಮೂಲಗಳ
ಮೆಲ್ಲುತ ,ಅನುಭವಗಳ
ಸವಿಯ ಉಣಿಸುತ್ತ
ಮರೆಯಲಾಗದ ಕಗ್ಗವನಿತ್ತ
ಡಿವಿಜಿ ಕನ್ನಡಿಗರಲ್ಲವೆ

ಆಂಗ್ಲವ ಕಲಿತರು
ಕನ್ನಡದಲ್ಲೆ ಉಳಿದರು
ಜ್ಞಾನಪೀಠವ ಅಲಂಕರಿಸಿದ
ಕುವೆಂಪುರವರು ಕನ್ನಡಿಗರಲ್ಲವೆ

ಮಾಂಸದ ಮುದ್ದೆ ಮಗುವಾಗಲು
ಮಾತೆಯೆ ಮೂಲ
ವಿದ್ಯೆ ಮನನವಾಗಲು
ಮತೃಭಾಷೆಯೆ ಮೂಲ

ಬಲ್ಲವರು ನಾವೆಂಬ
ಭಾವನೆಯ ತೊರೆಯಿರಿ
ಅರಿಯುವುದು ಇದೆಯೆಂಬ
ನಿಜವ ತಿಳಿಯಿರಿ
ಅನ್ಯರ ಜರಿಯುವುದ ಬಿಟ್ಟು
ಬಾಳೋಣ ಮನದ ಕದವ ತೆರೆದಿಟ್ಟು

- seenu

27 Jan 2019, 11:01 pm

ಭಾರತದ ಸಂವಿಧಾನ

ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಅಂದೇ ಕೊಟ್ಟಿತು ಪ್ರಜೆಗೆ ಪ್ರಭುವಿನ ಸ್ಥಾನಮಾನ..
ಜಾರಿಗೆ ಬಂದಿತು ಭಾರತ ದೇಶದ ಸಂವಿಧಾನ
ಪ್ರಜೆಗೆ ನೀಡಿತು ದೇಶದ ಆಡಳಿತ ನಡೆಸುವ ಮಾರ್ಗದರ್ಶನ..
ನನಸಾಯಿತು ಸ್ವಾತಂತ್ರ್ಯ ಹೋರಾಟಗಾರರ ತತ್ವಚಿಂತನ
ಅದಕೆ ಸಲ್ಲಿಸು ನೀನು ಸಂವಿಧಾನಕೆ ನಿತ್ಯನಮನ..||ಪ||

ರಾಜೇಂದ್ರ ಅಂಬೇಡ್ಕರ ಗಣ್ಯರ ಅವಿರತ ಪ್ರಯತ್ನ
ನಮ್ಮ ಸಂವಿಧಾನ ರಚನೆಗೆ ಪ್ರಮುಖ ಕಾರಣ..
ಓದಿದರು ನೂರಾರು ದೇಶಗಳ ಸಂವಿಧಾನ
ದೇಶಕೆ ಅನುಕೂಲವಾಗುವ ಸಂವಿಧಾನ ರಚಿಸುವ ಕಾರಣ..

ನಮ್ಮದು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದ ಸಂವಿಧಾನ
ಇಲ್ಲಿ ಹಿಂದೂ ಮುಸ್ಲಿಂ ಎಲ್ಲರು ಸಮಾನ..
ಸಂಸದೀಯ ಸರ್ಕಾರ ಸಂವಿಧಾನದ ಪ್ರಮುಖ ಲಕ್ಷಣ
ಇಲ್ಲಿ ದೇಶದ ಮುಖ್ಯಸ್ಥನು ಆಯ್ಕೆಯಾಗಬೇಕು ಚುನಾವಣಾ ಮುಖೇನ..

ಕೇಂದ್ರ ರಾಜ್ಯಗಳಲಿ ಅಧಿಕಾರ ಹಂಚಿದ ನಮ್ಮ ಸಂವಿಧಾನ
ಇಲ್ಲಿ ನಡೆಯುವುದು ಬಹುಪಕ್ಷಗಳ ರಾಜಕಾರಣ..
ಮೂಲಭೂತ ಹಕ್ಕುಗಳ ನೀಡಿದ ನಮ್ಮ ಸಂವಿಧಾನ
ಇಲ್ಲಿ ದೇಶಕ್ಕಾಗಿ ದುಡಿವ ಕರ್ತವ್ಯ ಮಾಡು ಪ್ರತಿದಿನ..

- ಸುರೇಶ್ ಟಿ ವಿ

25 Jan 2019, 08:40 pm

ಅನುಮಾನ...

ಮರೆತ ನೆನಪುಗಳ
ಜೊತೆ ಜೊತೆಗೆ ಈ ಕ್ಷಣ
ಕ್ಷಣಗಳ ನೆನೆದು ಹೇಳುವ
ಮಾತುಗಳಾದವು ಕವನ

ಪ್ರೀತಿಗೆ ಎದುರಾಯಿತು
ಅನುಮಾನದ ಆಗಮನ
ದೂರವಾದವು ಇಬ್ಬರ ಮನ
ಮನಸ್ಸಿನ ಮಾತು ಕೇಳದೆ
ನುಡಿಯುವ ನಾಲಗೆಯ ನಡೆಗೆ

ಕೊಟ್ಟರು ಅರಿಯದೆ
ಮಾಡದ ತಪ್ಪಿಗೆ ಶಿಕ್ಷೆ
ಸಿಕ್ಕೀತೆ ನನಗೆ ಅನುಮಾನದ
ತಪ್ಪಿಗೆ ನೋವಿನ ಭಿಕ್ಷೆ....!?

ಗುಡುಗು ಸಿಡಿಲುಗಳಂತೆ ತುಂಬಿವೆ
ಸಂಶಯ ನಿನ್ನ ಮನದಾಳದಲೆಲ್ಲ,
ಮಿಂಚಂತೆ ಮರೆಯಾಗಿದೆ
ಪ್ರೀತಿ ನಿನ್ನ ಕಣ್ಣೋಟದಿಂದ….
ದೂರಕ್ಕೆ ಸರಿಸು ಸಂಶಯದ ಪರದೆಯ
ಮತ್ತೆ ದೊರಕದು ನಿನಗೆ ಕಳೆದ ಸಮಯ…

- Pb

25 Jan 2019, 11:46 am