Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೋವಿನ ಅರ್ಥ ಬಲ್ಲವರು ಯಾರು?

ನೋವು..
ಅನುಭವಿಸುವುದಕ್ಕೋ?ಮರೆಯುವುದಕ್ಕೋ??
ಹೆದರಿಸುವುದಕ್ಕೋ?ಎದುರಿಸುವುದಕ್ಕೋ??
ಕಲಿಸುವುದಕ್ಕೋ? ಕೆರಳಿಸುವುದಕ್ಕೋ??
ನೋವುಂಡವನ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲೇ
ಅಡಗಿದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ.

ನೋವು ನೇರ,ಮನಸಿಗೆ ಗುರಿ ಇಟ್ಟ ಬಾಣ.
ಮನಸೊಳಗೆ ಮನೆ ಮಾಡಿ ಕುಳಿತುಕೊಳ್ಳುವ ಭ್ರೂಣ.
ಹೆರಿಗೆ ಯಾಗದೆ ಪ್ರತಿದಿನ ಹಿಂಡುವುದು ಪ್ರಾಣ.
ಕೊನೆಯಿಲ್ಲ ಇದಕೆ ಮುಗಿಯುವವರೆಗೆ ನಮ್ಮ ಜೀವನ ಯಾಣ.

- Manju

12 Jul 2026, 09:01 pm

ಯಾವ ಊರಿನ ಚಂದದ ಚಲುವೆ

ಯಾವ ಊರಿನ
ಚಂದದ ಚಲುವೆಯೋ
ಮಾತಾಡೋ
ಮುದ್ದು ಗಿಣಿಯೋ
ಎನೂ ಚಂದವೋ
ಎನೂ ಅಂದವೋ
ಕೆನ್ನೆಯೊಂದು
ಕೆಂಪು ಕಸ್ತೂರಿಯೋ
ಕಣ್ಣುಗಳೇಲ್ಲ
ಅರಳಿದ ಕೆಂದಾವರೇಯೋ
ಮನದ ಮಲ್ಲಿಗೆ
ಪರಿಮಳಿವಳು

ಹಲ್ಲುಗಳು ದಾಳಿಂಬೆ
ನೋಡಲು
ದಂತದಗೊಂಬೆ
ಮುತ್ತಿನರಾಶಿಯಲಿ
ಮುದ್ದಾದ ಗೊಂಬೆ
ಚಲುವಿಗೆ ಹೊಲಿಸಲಾಗದ ಗೊಂಬೆ
ಚಂದಕ್ಕೆ ಚಂದ ಚಲುವಾದ ಗೊಂಬೆ

ನಗುವಿನಲಿ ನರ್ತಿಸುವ ಚಲುವೆ
ಬೆಲೆ ಕಟ್ಟಲಾಗದ ಮಾಣಿಕ್ಯ ಚಲುವೆ
ನನ್ನಾಣೆ ನಿನ್ನ ನಂಬಿದೆ ನನ್ನೊಲವೇ
ಬಾಡಿಹೋಗದ ಚಂದುಳ್ಳ ಚಲುವೆ
ನಕ್ಷತ್ರದ ಗುಂಪಲ್ಲಿ ಮಿನುಗೋ ಹೊವೇ

✍️ವೀರೇಶ್ ವಿ ಖೈರವಾಡಗಿ


















- Veereshappa v khairawadagi

11 Jul 2026, 10:32 am

ಮಾಯದ ಲೋಕದೊಳಗೆ

ಲಾ ಲಾ.....ಹೊ ಹೊ....
ಚಲುವೆ ನೀ ಬಂದೆ
ಮಲ್ಲಿಗೆ ಪರಿಮಳ ಎಲ್ಲೆಲ್ಲೂ ಹರಡಿದೆ
ಸುಗಂಧ ಸುವಾಸನೆ ಎಲ್ಲೆಲ್ಲೂ ಬೀರಿದೆ
ಮಾಯದ ಲೋಕದೊಳಗೆ
ನೀ ಬಂದೆ ಹೃದಯದ ಅರಮನೆಗೆ
ನೀ ಬಂದೆ ಹೃದಯದ ಆರಮನೆಗೆ
ನಿನ್ನ ಮಾತು ಮುತ್ತು
ನಿನ್ನ ಮಾತು ಮುತ್ತು
ಮನಸು ನಿನ್ನ ಸಿಹಿ ಮುತ್ತು
ಮನಸು ನಿನ್ನ ಸಿಹಿ ...
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ, ಮುದ್ದು
ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ,
ಮುದ್ದು ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ನಿನ್ನಂದವ ನೋಡಿದೆ ವಯ್ಯಾರಿ
ನಿನ್ನಂದವ ನೋಡಿದೆ ವಯ್ಯಾರಿ
ಧರೆಗಿಳಿದೆ ಹುಣ್ಣಿಮೆ.... ನೀ

✍️ ವೀರೇಶ್ ವಿ ಖೈರವಾಡಗಿ

- Veereshappa v khairawadagi

10 Jul 2026, 06:33 pm

ನನ್ನೊಲವೇ ಅಂತರಂಗದ ಹೃದಯದವೇ

ನನ್ನೊಲವೇ ಅಂತರಗದ ಹೃದಯವೇ
ನಿನ್ನ ನೆನಪು ಆನಂದವೇ
ನಿನ್ನೊಂದಿಗೆ ಬೆರತ ಸಂಗೀತ ರಾಗವೇ
ಚಲುವೆ ನಿನ್ನ ಕಣ್ಣೋಟವೇ
ಬಾನಿಂದ ಚೆಲ್ಲಿದ ಬೆಳದಿಂಗಳ ಸುಮವೇ
ನೀಷ್ಟವೇ ಎಷ್ಟೊಂದು ಸುಂದರವೇ
ಸಂಭ್ರಮವೇ ಸಂತೋಷವೇ

ನಿನ್ನ ನೆನಪೊಂದು ಮದುರ ಕ್ಷಣ
ನಿನ್ನಿಂದ ಹುಕ್ಕಿತು ನವ ಯವ್ವನ
ಓ ಚಲುವೆ ನಾ ನಿನ್ನ ಜೀವನಾ
ಎಂದೆಂದಿಗೂ ನಾ ಮರೆಯದೆ ಪ್ರೇಮಿ ನಾ

ಎಲ್ಲಿಂದ ಎಳ್ಕೊಂಡು ಬಂದೆ ನನ್ನ ಮನಸು ಪ್ರತಿ ದಿನವು ಕಾಡುವ ನಿನ್ನ ಕನಸು
ನಾ ನಿನ್ನೊಂದಿಗೆ
ನೀ ನನ್ನೊಂದಿಗೆ
ಇರವೇ ಸಿರಿಸಂಪಿಗೆ ಇರುವೆ ಸಿರಿಸಂಪಿಗೆ

ನನ್ನ ಮನದ ಅಸೆ ಹೇಳುವೆ ಈಗ
ಚಲುವೆ ಚಂದದ ಮೊಗ್ಗು ಈಗ
ನನ್ನ ಅಂತರಂಗದ ವೀಣೆ ನುಡಿಸು ಬೇಗ
ಹಾಡುವೇನು ನಾನು ಸುಂದರ ರಾಗ

ನನ್ನೊಲವೇ ಅಂತರಗದ ಹೃದಯವೇ...

✍️ ವೀರೇಶ್ ವಿ ಖೈರವಾಡಗಿ

















- Veereshappa v khairawadagi

10 Jul 2026, 01:44 pm

ಮಳೆ ಹೂ ಮಳೆ.. ಓ ಹೂ.. ಮಳೆ


ಮಳೆ ಹೂ.. ಮಳೆ... ಓ...ಹೂ
ಮೋಡಗಳೇ ಹೊತ್ತು ತನ್ನಿ... ಮಳೆಯನು..
ಮಳೆಯನು
ಒಮ್ಮೆ ಬಂದು ಹೋಗು
ಒಮ್ಮೆ ಬಂದು ಹೋಗು..ಮಳೆಯೇ..
ತುಂತುರು.. ತುಂತುರು.. ಹನಿಯೇ
ಮಳೆ... ಮುತ್ತಿನ ಹನಿ...
ಈ ಭೂಮಿಯಸಿರಿ ಹಸಿರಾಗಿರಲಿ..
ಈ ಭೂಮಿಯಸಿರಿ ಸ್ವರ್ಗವಾಗಲಿ.
॥ ಪಲ್ಲವಿ ॥
ಬರಡುಭೂಮಿ ಮಳೆ ಬಂದು ವನವಾಗಲಿ..
ಪಶು, ಪ್ರಾಣಿಗಳಿಗೆ ಹಸಿರಾಗಿರಲಿ...
ಹಸಿವು ನಿಗಲಿ ಚೈತನ್ಯತುಂಬಲಿ..
ಹಕ್ಕಿ ಹಾರಾಡಿ ಚಿಲಿಪಿಲಿ ಕಲರವ
ಎಲ್ಲಲ್ಲೂ ಕೇಳಲಿ...
ಗಿಡ, ಮರ, ಹೂ ಬಳ್ಳಿಅಬ್ಬಿ ಹಸಿರು
ಉಲ್ಲಾಸಾಗಲಿ....॥1॥
ಕೆರೆ, ಕಟ್ಟೆ, ಹಳ್ಳ ಕೊಳ್ಳ,ತುಂಬಲಿ,
ನದಿಯಾಗಿ, ಹರಿಯಲಿ...
ಮಳೆ ಬಂದು ರೈತರಿಗೆ ಮನ
ಹಸಿರಾಗಲಿ, ಅವರ, ಉಸಿರಾಗಲಿ..
ಈ ಭೂಮಿ ತಾಯಿ ಮಡಿಲು..
ಮಕ್ಕಳು, ಮನ ಸುಂದರ ಗೊಳಿಸು.
ಮನ ತುಂಬಾ ಉಲ್ಲಾಸ, ಸಂತಸ,
ತುಂದು.ನಕ್ಕು ನಲಿಸು...॥ 2॥

✍️ ವೀರೇಶ್ ವಿ ಖೈರವಾಡಗಿ

- Veereshappa v khairawadagi

08 Jul 2026, 09:31 am

ಕನ್ನಡ ಪದವು ಕನ್ನಡ ನೆಲವು ಜಲವು

ಕನ್ನಡ ಪದವು ಕನ್ನಡ ನೆಲವು ಜಲವು
ಎಂದೆಂದಿಗೂ
. ನಮ್ಮಯ ಉಸಿರು
ನಮ್ಮಸುಂದರ ದೇವಾಲಯವು
ಬನಾನಿನಗಲಕ್ಕೂ
ಎತ್ತರಕ್ಕೂ ಕಾನನ ಮರವು ನಮ್ಮದೇ
ನಾಡಿನ ಸೌಂದರ್ಯ ಸಿಮೀಯೂ
ಕಡಲಿನ ತೀರವು ಕಂಪಿನ ತಾಣವು
ಕಡಲ ಒಡಲಲಿ ತೆಲಿದ ಬರುವ ತೆರೆವೂ
ದೂರದ ಪ್ರಯಾಣ ಚಂದದ ಆ ಕ್ಷಣ
. ನೆನಪಿನ ಮನ ಸುಂದರ ಜೀವನ
. ಎದೆಯಲ್ಲಿ ಚಿಮ್ಮಿದೆ
. ಹೃದಯದ ಹೊಮ್ಮಿದೆ
ನಮ್ಮ ಕನ್ನಡ ನಾಡಿನ ಹಿರಿಮೆ ಗರಿಮೆ
. ಜೋಗವು ಅಂದ
. ಜಲಪಾತವು ಚಂದ
. ಈ ನಾಡ ಗುಡಿಯಲಿ ಇಲ್ಲಿಯೇ
. ಸ್ವರ್ಗವೋ
ಈ ನಾಡ ನುಡಿಗಳ ನುಡಿಯುದೆ
. ಎಂದೆಂದಿಗೂ ಚಂದವೋ
. ಎಂದೆಂದಿಗೂ ಆನಂದವೋ
✍️ ವೀ.ವೀ.ಕುಂ








- Veereshappa v khairawadagi

06 Jul 2026, 05:05 am

ನನ್ನ ಪ್ರೇಮದ ಬಂಗಾರಿ

ನನ್ನ ಪ್ರೇಮದ ಬಂಗಾರಿ
ನಾ ತರುವೆ ಆನೆಯ ಅಂಬಾರಿ
ನೀ ಆನೆಯಮ್ಯಾಲೇರಿ
ಕುಳಿತಾಗ
ಶೃಂಗಾರದ ಐಸಿರಿ... ಶೃಂಗಾರದ ಐಸಿರಿ..
ಚಿನ್ನದ ಗೊಂಬೆ ನೀ.. ಬಣ್ಣದ ಗೊಂಬೆ ನೀ..
. ಕರೆದೋಯ್ಯುವೇ ನಿನ್ನ
ತೋರುವೆ ನಾರಿ ನಿನಗೆ
ತೋರುವೆ ಬಾದಾಮಿ ತಾಯಿಯ
ಬಾದಾಮಿ ಬನಶಂಕರಿ...

ಮಲ್ಲಿಗೆ ಸುಗಂಧ ಮಾಲೆ
ನಿನ್ನ ಮೂಡಿಯಲ್ಲಿ ಮೂಡಿಸುವೆ
. ನಿನ್ನಂದವೇ ನೋಡುವೆ
. ಮೈಸೂರು ಅರಮನೆಗೆ
. ಕರೆದೋಯ್ಯುವೇ ನಾರಿ...

. ಹೃದಯದ ಹುಮ್ಮಸಿನೊಂದಿಗೆ..
. ಅರಮನೆ ಚಂದನಾ ತೋರುವೆ
ಅಂದವಾ ನಿನಗೆ ತೋರುವೆ ಚಲುವೆ

. ಸಂಪಿಗೆ ಹೂ ಮುಡಿಗೆ ಮೂಡಿಸುವೆ
ಚಲುವಿನ ಸುಂದರಿ ಗೆಲುವಿನ ಸುಂದರಿ
. ಬೆಳ್ಳಿಬೆಳದಿಂಗಳ ತೆರಲಿ ಕೂರಿಸಿ
ನಿನ್ನಂದವ ನೋಡುವೆ ಮುದ್ದು ಚಲುವೆ

✍️ವೀರೇಶ್ ವಿ ಖೈರವಾಡಗಿ



- Veereshappa v khairawadagi

05 Jul 2026, 11:34 pm

ಹಸಿರ ಬಣ್ಣದ ಗಿಳಿಯೇ

ಹಸಿರ ಬಣ್ಣದ ಗಿಳಿಯೇ..
ಈ ಹಸಿರ ಇಳೆಲೆಯಲ್ಲಿಯೇ
ಕೆಂಪು ಮೂಗಿನ ಮುದ್ದಾದಸಿರಿಯೇ
ಕಿಲಾ ಕಿಲಾ ನಿನ್ನ ಪಿಸುಗುಡುವ ಧ್ವನಿಯೇ...

ಮರದಫೋಟೊರೇಯೊಳಗೊಂದು
ಬದುಕೊಂದು ಕಟ್ಟಿದೆ ಚಂದದೊಂದು
ಪುಟ್ಟ ಸಂಸಾರ ಮಾಡಿಕೊಂಡು
ಮಾವಿನ ಸೀಬೆ ತೋಟಕೆ ಹೋದೆ
ಜೊತೆಗೂಡಿ ಹಂಣ್ಣೊಂದನು ತರುವೆ...

ಮಕ್ಕಳ ನೋಟದಲಿ ಚಂದ ಗಿಳಿಯೇ
ಪ್ರಕೃತಿಯ ಪರಿಸರ ಸೌಂದರ್ಯದ ಸಿರಿಯೇ
ಚಂದಕ್ಕಿಂತ ಚಂದ ಅಂದದ ಸಿರಿಯೇ
ನಿನ್ನ ಸೌಂದರ್ಯಕೇ ಯಾರು ಸಾಟಿಯೇ

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

05 Jul 2026, 10:33 am

ದುಂಡಾದ ದೋಣಿ ಬಿಟ್ಟು...

ದುಂಡಾದ ದೋಣಿ ಬಿಟ್ಟು
ಅದರೊಳಗೆ ಜೀವಿಗಳಿಟ್ಟು
ಉಸಿರಾಡೋ ಗಾಳಿ ನೀರನಿಟ್ಟು
ನದಿ ಸಾಗರ ಸಮುದ್ರ ಗಳಿಟ್ಟು
ಅವುಗಳಿಗೆ ಅಸಿವನಿಟ್ಟು..
ಪಶು ಪಕ್ಷಿ ಪ್ರಾಣಿಗಳನಿಟ್ಟು
ಶಿವನ ಅಂಕುಶದೊಳ್
ಆಟವಾಡುತಾನೋ ಶಿವನು....

ಹೂ ಹಣ್ಣು ಮಾಡಿಬಿಟ್ಟೆ ಸಿಹಿಕಹಿ ತುಂಬಿದೆ
ದೊಡ್ಡ ಕಾನನ ದೊಡ್ಡ ಪ್ರಾಣಿಗಳ ತುಂಬಿದೆ
ಮನದೊಳಗೆ ಅಸೆಯ ಹುಚ್ಚು ತುಂಬಿದೆ
ಬೆಳ್ಳಿ ಬಂಗಾರ ಮಾಡಿಬಿಟ್ಟೆ ಅಸೆ ತುಂಬಿದೆ
ಇವೆಲ್ಲವನ್ನೂ ಮೇಲೆ ನೋಡುತ..ಶಿವನು
ಚಂದದೊಂದು ಆಟವಾಡುತಾನೋ

ಮಾನವನ ಸೃಷ್ಟಿ ಮಾಡಿದ ಮಹಾದೇವ
ಮಾನವನಿಗೆ ಬುದ್ದಿ ಬಲವ ನೀಡಿ ದೇವ
ಸಾವು ನೋವು ಚಿಂತೆ ಸೃಷ್ಟಿದೆ ದೇವ
ಬೆಟ್ಟಕೆ ಹೋಗಿ ತಂದ ಕಲ್ಲಿge ಪ್ರಾರ್ಥನೆ
ದೋಪ ನೈವೇದ್ಯ ಪೂಜೆಯ ಪ್ರಾರ್ಥನೆ
ಹಣವೆಂಬ ಮಾಯಯ ಮಾಡಿದೆ ದೇವ
ವ್ಯಾಪಾರ ಅಸೆ ದುರಾಸೆ ಹಚ್ಚಿದೆ ದೇವ
ಇದೇಲ್ಲವನ್ನು ಮೇಲೆ ನಿಂತು ನೋಡುವ
ಚಂದದೊಂದು ಶಿವ ಆಟವಾಡುತಾನೋ.....

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ



- Veereshappa v khairawadagi

01 Jul 2026, 09:55 pm

ನೀಲಿ ಆಕಾಶದೊಳಗೆ ಬರುವ ಚಂದಿರ

ನೀಲಿ ಆಕಾಶದೊಳಗೆ. ಬರುವ ಚಂದಿರ
ಅವನೇ ಸುಂದರ..
ಕಪ್ಪುನೆ ಮೋಡದೊಳಗೆ ಬರುವ ಚಂದಿರ
ಅವನೇ ಸುಂದರ
ಬೆಳ್ಳಿ ಬೆಳದಿಂಗಳಲಿ ತೆಲಿ ಬರುವ ಚಂದಿರ
ಅವನೇ ಸುಂದರ

ಮಿನುಗುವ ಮಿನುಗುವ ತಾರೆಗಳ ನಡುವೆ
ಬರುವ ಚಂದಿರ ಅವನೇ ಸುಂದರ

ಸುಂದರ ಕಾಡಿನ ಬೆಟ್ಟಗಳ ನಡುವೆ
ಬರುವ ಚಂದಿರ ಅವನೇ ಸುಂದರ

ನಕ್ಷತ್ರ ನಡುವೆ ನಗುವ ಮಗುವಿನಂತೆ
ಚಂದಿರ ಎಲ್ಲೆಲ್ಲೂ ಕಾಣುವ ಸುಂದರ
ಹಸಿರ ತುಂಬಿದ ಈ ಭೂಮಿ ಅಂದ
ಸಾಗರ ಸಮುದ್ರ ಈ ಅಲೆಯು ಚಂದ
ಚಂದ್ರನ ಹುಣ್ಣಿಮೆಯಲಿ ಪ್ರಕೃತಿಯೇ
ಅಂದದ ವಯ್ಯಾರ ಚಂದದ ವಯ್ಯಾರ


✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ




- Veereshappa v khairawadagi

01 Jul 2026, 12:43 pm