Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಳಿತಾಳೆ ಚಂದದ ಚಲುವೆ

ಹೊಳಿತಾಳೆ...ಚಂದದ ಚಲುವೆ
ಹೊಂನ್ನಿನಂಗೆ..
ಮಿಂಚುತಾಳೆ.. ಚಂದದ ಚಲುವೆ
ಬೆಳ್ಳಿ ಚುಕ್ಕಿಯಂಗೆ
ಕುಣೀತಾಳೆ ಅಂದದ ಚಲುವೆ
ನವಿಲಿನ ನೃತ್ಯಾoಗಾನೇ..
ತಂಪಾದ ಗಾಳಿಯಲಿ ತೇಲಿಬಂತು
ಶ್ರೀಗಂಧದ ಸುವಾಸನೆ.... ll ಪಲ್ಲವಿ ll

ಹತ್ತಾರು ಊರು ಸುತ್ತಾಡಿ ಸುತ್ತಾಡಿ
ಸೋತೆನು ನಾನು
ಮನಬಯಸಿ ಸೈ ಎನಿಸಿದೆ ರತಿಯು
ನೀ ಸತಿ ನೀನು
ಬಾಯಾರಿಕೆಯಾಗಿ ಬಾವಿಗೆ ಹೋದೆ
ನಾ ನೀರಾಗಿ ಸಿಕ್ಕಿದೆ ನೀಲಾoಬಾರಿ ನೀ ll 1ll

ಮಲ್ಲಿಗೆ ತೋಟದಲಿ ಅರಳಿದ ಮಲ್ಲಿಗೆ
ಗಮ್ ಘಮಿಸುವ ಪರಿಮಳ.. ನೀ
ಯಾವ ಲೋಕದೊಳಗೆ ಅಡಿಗಿದೆ..
ನನಗಾಗಿ ಸ್ವರ್ಗ ಲೋಕದ ಸುಂದರಿ
ಸ್ವಪ್ನ ಲೋಕದ ಸುರ ಸುಂದರಿ ನೀ ll 2ll

✍️ವೀರೇಶ್ ವಿ ಖೈರವಾಡಗಿ





- Veereshappa v khairawadagi

13 Jun 2026, 04:11 pm

"ನನ್ನ ಏನುತಿದೆ ಸವಿಗನ್ನಡ ಸಿಹಿಗನ್ನಡ "

ನನ್ನ ಮನ... ಏನುತಿದೆ.. ಸವಿ ಕನ್ನಡ.. ಸಿಹಿಗನ್ನಡ.....

ಈ ಕನ್ನಡ..ಈ ನಾಡ ಕನ್ನಡ..
ಸವಿ ನುಡಿ ಭಾಷೆ ನಮ್ಮ ಕನ್ನಡ
ಮೃದು ಭಾಷೆ, ಸುಮದುರ.ಭಾಷೆ
ತನು ತುಂಬಿದೆ, ಮನ ತುಂಬಿದೆ...
ಬೆಳ್ಳಿ ಚುಕ್ಕಿಯಂಗೆ ಹೊಳೆಯುವ ಭಾಷೆ..ಸುಂದರ ಸುವರ್ಣ ಭಾಷೆ...
ಕನ್ನಡ... ಕನ್ನಡ ... ಕನ್ನಡ... ಕನ್ನಡ.. ll ಪಲ್ಲವಿ ll
ಕನ್ನಡ ಮಕ್ಕಳು ದೇಹ ಗುಡಿಯಲ್ಲಿ.. ಹೊಳಪು, ಬಳಪದಲ್ಲಿ ರಾ ರಾಜಿಸಲಿ ಕನ್ನಡ...
ಪೂರ್ವದಲ್ಲಿ ಹೊಂಗಿರಣ ರವಿಯಂತೆ ಹೋಳಿಯಲಿ... ಹೊನ್ನುಡಿ..ಕನ್ನಡ... ಕನ್ನಡ
ಕನ್ನಡ.. ಕನ್ನಡ... ಕನ್ನಡ...llಪಲ್ಲವಿ ll

ಭಾರತ ಇತಿಹಾಸದಲಿ..
ಮೆರೆಯಲಿ...ಕನ್ನಡ... ಕನ್ನಡ
ಕೋಗಿಲೆ ದನಿಯಲಿ.. ತೆಲಿ ಬರಲಿ ಕನ್ನಡ... ಕನ್ನಡ.. ಕನ್ನಡ..
ನಮ್ಮ ಕವಿ ನುಡಿ.. ಕನ್ನಡ...
ಜೇನುನುಡಿನುಡಿ ಗನ್ನಡ...
ಹೂ ದುಂಬಿಯಲಿ.. ಹರಿದು.. ಬರಲಿ ಕನ್ನಡ.. ಕನ್ನಡ...ll2ll

ತುಂಗೆ, ಭದ್ರೆ, ಕಾವೇರಿ, ಶರಾವತಿ,
ಝಳು...ಝಳು ನದಿಯಲಿ..
ನಾದದಲಿ.. ಹರಿಯಲಿ.. ಕನ್ನಡ...
ಗುಲಾಬಿ, ಹೂ, ಮಲ್ಲಿಗೆ, ಹೂ, ಸೇವಂತಿಗೆ.. ಕನಕಾಂಬರಿ.. ಹೂ..
ಘಮ.. ಘಮ.. ಘಮಿಸಲಿ.. ಪರಿಮಳ.. ಬಿರಲಿ..ಕನ್ನಡ.. ಕನ್ನಡ.. ಕನ್ನಡ..ಕನ್ನಡ...ಎಂದೆಂದಿಗೂ..
ನಮ್ಮ... ಸಿರಿನುಡಿ.. ಭಾಷೆ...
ಕನ್ನಡ.. ಕನ್ನಡ...ಮಗುವಿನ.
ನಗುವಲಿ ತೆಲಿ ಬರಲಿ ಕನ್ನಡ...
ಕನ್ನಡ... ಕನ್ನಡ.. ಕನ್ನಡ.. ll2ll

✍️ವೀರೇಶ್ ವಿ ಖೈರವಾಡಗಿ.

- Veereshappa v khairawadagi

11 Jun 2026, 11:19 am

llಬಾನಲಿ ಕಪ್ಪು ಮೋಡ ll


ಬಾನಿನಲಿ ಕಪ್ಪು ಮೋಡ ಮಳೆ ತಂತುರು ನೋಡ
ಬುವಿಯೋಡಲ ತಂಪು ಎರಚಿ ಹೋಯ್ತು ನೋಡ
ಗರೀಬಿಚ್ಚಿ ಆಕಾಶ್ಕಡೆಗೊಮ್ಮೆ ಹಕ್ಕಿಗಳ ನೋಡ ll ಪಲ್ಲವಿ ll
ತಂಪಾದ ಗಾಳಿ ಬಿಸಿ ಬಿಸಿ
ಹಸಿರ ಸೌಂದರ್ಯ ರಾಶಿ
ಹಕ್ಕಿಗಳ ಚಿಲಿಪಿಲಿ.. ವನ್ಯ ಮೃಗ ಹರ್ಷೋಗ್ದಾರ
ಈ ಅಂದದ ಕಾಡು ನೋಡುತ..
ತುಂಬಿದೆ ಪ್ರೀತಿ ನನ್ನಲಿ ನನ್ನ ಹೃದಯದಲಿ.
ll 1ll
ಕಾಡು ಅಳೆಯುತ ಹಕ್ಕಿ ಸಂoಭ್ರಮ ನೋಡಿದೇ
ನವಿಲು ನರ್ತನೇ ಗಿಳಿಗಳ ಪಿಸುಮಾತು ಕೇಳಿದೆ
ಮನ ಉಲ್ಲಾಸ ಕುಪ್ಪಲಿಸಿ ಕುಣಿದಿದೆ ಕೂಗಿದೆ
ನದಿಯ ನಾದ ಕಲರವ ಕೇಳಿದೆ ಹಾಡಿದೆ...
ಖುಷಿಯಾಗಿ ಮನ ತೆಲಾಡಿ ತೆಲಾಡಿ ಹೋಗಿದೆ ll

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

09 Jun 2026, 11:57 am

ಚಂದನವನ ಚಂದದ ಚಿಟ್ಟೆ

"ಚಂದನವನದ ಚಂದದ ಚಿಟ್ಟೆ"
ಚಂದದ ನವನ ಚಂದದ ಚಿಟ್ಟೆ
ಕೆನ್ನೆಗೆ ಬಂದು ಬಂದು
ಮುತ್ತನು ಕೊಟ್ಟೆ ಮುತ್ತನು ಕೊಟ್ಟೆ
ಓ ಬಂಗಾರದ ಬಣ್ಣದ ಚಿಟ್ಟೆ
ಓ ಬಂಗಾರದ ಬಣ್ಣದ ಚಿಟ್ಟೆ.. llಪಲ್ಲವಿ ll
ಹಾರುತ ಹರುಷದಿ
ಹಾರುತ ಹರುಷದಿ
ಬಣ್ಣ ಬಣ್ಣದ ರೆಕ್ಕೆಯ
ಬಡಿಯುತ ನಲಿಯುತ
ನೀ ಎಲ್ಲಿಗೆ ಹೊರಟೆ
ನೀ ಎಲ್ಲಿಗೆ ಹೊರಟೆ
llಚಂದದವನದ ಚಂದದ ಚಿಟ್ಟೆll
ಹೂ ಬನಸಿರಿಗೆ ಬಂದೆ
ಚಂದನ ವನಸಿರಿಗೆ
ಹೂವಿನ ಮಕರಂದ
ಸವಿಯಲು ಬಂದೆ
ಚಂದನವನ ಚಂದದ ಚಿಟ್ಟೆ
ಚಿಟ್ಟೆ ನಿನ್ನಂದಕೆ ಅಂದಕೆ
ಚಿಟ್ಟೆ ನಿನ್ನಂದಕೆ ಅಂದಕೆ
ಮುದ್ದುಮಾಡಲೇ ಮುತ್ತುನೀಡಲೇ
ಮುದ್ದು ಮಾಡಲೇ ಮುತ್ತು ನೀಡಲೇ
ಬಂಗಾರದ ಬಣ್ಣದ ಸುಂದರ ಚಿಟ್ಟೆ..
ಚಂದನವನದ ಚಂದದ ಚಿಟ್ಟೆ..

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

05 Jun 2026, 12:26 pm

"ಮಹಾ ಮೌನಿ"

"ನಾ ಮಹಾ ಮೌನಿಯೇ ಆಗಿರಬಹುದು.
ನನ್ನೊಳಗೂ ಸಾಕಷ್ಟು.. ಚೇಷ್ಟೆ, ತುಂಟತನ,
ಸಂತೋಷ, ದುಃಖ ಎಲ್ಲಾವು ಇದೆ.
ಆದರೆ ಅದನ್ನೆಲ್ಲಾ ಕೇವಲ ಅವಳಿಗಾಗಿ ಮಾತ್ರ
ಸೀಮಿತವಾಗಿಟ್ಟಿದೆ.ಅವಳಿಗದು ಅರ್ಥನೆ ಆಗದಾಯಿತು.. ಕೊನೆಗೂ ನಾ ಮಹಾ ಮೌನಿ ಯಾಗೆ ಉಳಿದು ಬಿಟ್ಟೆ"..

- ಎ.ಆರ್.ರಾಹುಲ್.

- ?.?.?????.

04 Jun 2026, 05:30 pm

"ಮಾತಾಡಿದರೆ ಮಾತಾಡಬೇಕು ಕನ್ನಡ ಕನ್ನಡ "

ಮಾತಾಡಿದರೆ ಮಾತಾಡಬೇಕು ಕನ್ನಡ ಕನ್ನಡ
ನಾಡ ಗುಡಿಯಲಿ ತುಂಬಿದೆ ತುಳುಕಿದೆ ಕನ್ನಡ
ಕರುನಾಡಲಿ ಕರುಣೆ ಕಡಲು ಇದೆ ಕನ್ನಡ
ತುಂಗೆ, ಕಾವೇರಿ,ತಾಯಿ ನಲಿದ ಕನ್ನಡ
ಮಾಮರದ ಕೋಗಿಲೆ ಹಾಡಿನ ನುಡಿ ಕನ್ನಡ..ll ಪಲ್ಲವಿ ll

ಕೆಚ್ಚೆದೆಯ ವೀರರು ನುಡಿಗಳು ಕನ್ನಡ ಕನ್ನಡ
ಗಿಳಿಗಳು ಮಾತಲಿ ಅಡಗಿದೆ ಕನ್ನಡ... ಕನ್ನಡ
ನುಗುವ ಮಗುವಿನಲಿ ತುಂಬಿದೆ ಕನ್ನಡ ಕನ್ನಡ
ಕಾಡಿನ ವನ್ಯ ಪ್ರಾಣಿ ಕೂಗಿನಲಿ ಕನ್ನಡ ಕನ್ನಡ ll 1 ll

ಮಂಗಳೂರು ಕಡಲಲ್ಲಿ ಸೊಗಸಾಗಿದೆ ಕನ್ನಡ
ಉತ್ತರ ಕರ್ನಾಟಕ ಉಸಿರು ಉಸಿರಲಿ ಕನ್ನಡ
ದಕ್ಷಿಣ ಕನ್ನಡ ಹಾಲು ಜೇನಿನ ಕನ್ನಡ..ಕನ್ನಡ
ಕೋಲಾರದ ಮಣ್ಣಲಿ ಬಂಗಾರ ಕನ್ನಡ ಕನ್ನಡ ll 2ll

ಎಲ್ಲರಿಗೂ ಈ ಭಾಷೆ ಅಂದನೋ..ಕನ್ನಡ
ಎಲ್ಲರೂ ಕನ್ನಡ ಚಂದನೋ... ಕನ್ನಡ
ನಮ್ಮ ನಾಡ ಗುಡಿಯೇ ಸ್ವರ್ಗನೋ
ನಮ್ಮ ನಾಡ ಹಬ್ಬನೋ ಅಂದವೋ

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

03 Jun 2026, 02:55 am

"ವೃಕ್ಷ ವನ ಮಾತೆ ತಿಮ್ಮಕ್ಕ "



*ಕವನ-11: ವೃಕ್ಷ ವನ ಮಾತೆ ತಿಮ್ಮಕ್ಕ...*
*ಕವಿ - ವೀರೇಶ್ ವಿ ಖೈರವಾಡಗಿ*
ವೃಕ್ಷ ವನ ಮಾತೆ ತಿಮ್ಮಕ್ಕ...

ಬಿಸಿಲು ಬೇಗೆ ತಣಿಸಲು ಸಾಲು ಮರವ ನೆಟ್ಟಳು
ಮಹಾ ಪುಣ್ಯಾಪಡೆದಳು ಮಹಾ ಮಾತೆಯಾದಳು
ಮರದಲಿ ತಾಯಿಪ್ರೀತಿ ತೋರಿ ಬೆಳೆಸಿದಳು
ಕರುನಾಡ ಕನ್ನಡದ ಮಣ್ಣಿನ ಕೀರ್ತಿ ಹಬ್ಬಿಸಿದಳು || ಪಲ್ಲವಿ ||

ಮರವ ನೋಡಿ ಮಮತೆಯಿಂದ ಹಿಗ್ಗಿದಳು
ಮಾನವ ಕುಲಕೆ ಮಹಾನ್ಯದ ತಾಯಿ ದೇವತೆ
ಬಿಸುಲು ಏನೇ ಇರಲಿ ತಿರು ತಿರುಗಿ ತಂದು
ನಿರುಣಿಸಿದಳು ಗಿಡವ ಹೆಮ್ಮರವ ಮಾಡಿ
ಸಂತೋಷ ಸಂಭ್ರಮ ಸಂತಸ ಕಂಡಳು ||1||

ಸಾಲು ಸಾಲಾಗಿ ಮೆರವಣಿಗೆ ಸನ್ಮಾನ ಕಂಡಳು
ಮರವೇ ಮನೆ ಪ್ರಕೃತಿಯೇ ಸಿರಿ ಸಂಪತ್ತು
ಮಾನವ ಕುಲಕೋಟಿ ಮಹಾ ಮಾತೆ...
ಮರವ ಅಪ್ಪಿಕೊಂಡು ಮುದ್ದಾಡಿದಳು
ಎಲ್ಲರ ಅಕ್ಕರೆಯ ಅಕ್ಕ ಸಕ್ಕರೆ ತಿಮ್ಮಕ್ಕ ತಿಮ್ಮಕ್ಕ..|| 2||

✍️ವೀರೇಶ್ ವಿ ಖೈರವಾಡಗಿ

- Veereshappa v khairawadagi

31 May 2026, 03:47 pm

ಹಾಗೆ ಸುಮ್ಮನೆ

ತಾನು ಒಳ್ಳೆಯವರಂತೆ ತೋರಲು ಮತ್ತೊಬ್ಬರ ಬೆನ್ನ ಹಿಂದೆ ಅವರ ತೇಜೋವಧೆ ಮಾಡುವುದು ಸರಿಯಲ್ಲ..
ಮುಂದೆ ಸಕ್ಕರೆಯಂತೆ ಸಿಹಿಮಾತು ಬೆನ್ನ ಹಿಂದೆ ಹರಿತವಾದ ಕತ್ತಿ ಮಸೆಯುವುದು..!!
ತಮಗೆ ಸಹಾಯ ಮಾಡಿದಾಗ ಮಾತ್ರ ಅವರು ಒಳ್ಳೆಯವರು ,ಇಲ್ಲವಾದಲ್ಲಿ ಅವರು ನಮ್ಮ ಶತ್ರುಗಳು...!!
ತಮ್ಮ ಒಳ್ಳೆಯತನವನ್ನು ಬೇರೆಯವರ ಮುಂದೆ ಪ್ರದರ್ಶಿಸುವ ಅವಶ್ಯಕತೆಯಿಲ್ಲ..
ಒಳ್ಳೆಯತನ ಯಾವತ್ತಿಗೂ ಬೂದಿ ಮುಚ್ಚಿದ ಕೆಂಡದಂತೆ ಒಂದು ದಿನ ಬೆಂಕಿಯಂತೆ ಎಲ್ಲವನ್ನೂ ಸುಟ್ಟು ಬೂದಿ ಮಾಡುತ್ತದೆ ನೆನಪಿರಲಿ...!!
ಬೇರೆಯವರನ್ನು ಮೆಚ್ಚಿಸುವ ಸಲುವಾಗಿ, ತಮ್ಮವರನ್ನು ಕೀಳಾಗಿ ಕಾಣಬೇಡಿ..!!
ನಿಮ್ಮನ್ನು ನಂಬಿ ಬಂದವರನ್ನು ಯಾವತ್ತೂ ದೂರ ಮಾಡಬೇಡಿ...
ಕ್ಷಣಿಕ ಸಂತೋಷಕ್ಕಾಗಿ ತಮ್ಮವರ ಭಾವನೆಗಳ ಜೊತೆ ಆಟವಾಡಬೇಡಿ...
ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ, ಅವರ ಭಾವನೆಗಳಿಗೆ ಗೌರವ ನೀಡುವುದನ್ನು ಕಲಿಯಿರಿ..
ನೀವೂ ಮುಂದೆ ಸಾಗಿ ಹಾಗೂ ನಿಮ್ಮ ಜೊತೆಗಾರರಿಗೂ ಮುಂದೆ ಹೋಗಲು ದಾರಿ ಮಾಡಿಕೊಡಿ...
ಸ್ವಾರ್ಥದಿಂದ ಏನನ್ನು ಪಡೆಯಲು ಸಾಧ್ಯವಿಲ್ಲ ಅದರ ಬದಲು ನಿಸ್ವಾರ್ಥಗಳಾಗಿ ಮುಂದೆ ಸಾಗಿ ,ಜಯ ಖಂಡಿತವಾಗಿ ಸಿಕ್ಕೇ ಸಿಗುತ್ತದೆ...!!

ಇದು ನಿನ್ನ ಜೀವನ So ನಿನಗಾಗಿ ನೀನು ಬದುಕಿ‌ದರೆ ಸಾಕು , ಅದನ್ನು ಬಿಟ್ಟು ನಿನ್ನ So Called Friends ತರಹ ನಟಿಸುವವರನ್ನು ಮೆಚ್ಚಿಸುವ ಅವಶ್ಯಕತೆ ಇಲ್ಲ... ಹಾಗೂ ನಿನ್ನ ಅವಶ್ಯಕತೆ ಇಲ್ಲದ ಕಡೆ ತಲೆಯನ್ನು ಬಾಗಿಸುವ ಅಗತ್ಯನೂ‌‌ ಇಲ್ಲ...!!!

- ನಮಿತ ಗಟ್ಟಿ

30 May 2026, 06:40 pm

ನನ್ನವರು ಇವರು ನನ್ನವರು

ನನ್ನವರು ಎನ್ನುವರೆಲ್ಲ ನನ್ನವರಲ್ಲ...
ಸಮಯ ಎದುರಾದಾಗ ಕಂಡು
ಕಾಣದಂತೆ ದಾರಿಯಲ್ಲಿ ಹುಡುಕಿ ಹೋದರಲ್ಲ
ಮತ್ತೆ ಕಣ್ಣೆದುರು ಸಿಕ್ಕಾಗ ನೀವು ಆದಿನ
ಕಂಡಾಗ ನೀವು ಕಂಡ್ರಿ ಎಂದಾಗ..
"busy " ಎಂದೂ ನುಡಿದರಲ್ಲ..
ಮಾತು ಸ್ವಲ್ಪ ಮೌನವಾಗಿ ದೂರ
ಸರಿವರಲ್ಲ ಸರಿವರಲ್ಲ....

llನನ್ನವರು ಏನುವರೆಲ್ಲ ನನ್ನವರೆಲ್ಲ ll

ಹಣದ ಸಂಪತ್ತು, ಇದ್ದಾಗ ಇರುವೆ
ಸಾಲುಗಟ್ಟಿದಂತೆ ನಿಲ್ಲುವರಲ್ಲ....
ಮಾತು ಮಾತಿನಲಿ ನಮ್ಮವ.. ಎನುವರಲ್ಲ
ಪುರಾತನ ಸಂಬಂದ ಹುಡ್ಕಿ ನಮ್ಮವ..
ಎಂದೂ ಬಂದು ಹೋಗುವರಲ್ಲ
ಇದೆ ಈ ಜಗದ ನಿಯಮ..ಈ ಜನರ ನಿಯಮ

✍️ವೀರೇಶ್ ವಿ ಖೈರವಾಡಗಿ


p

- Veereshappa v khairawadagi

30 May 2026, 11:44 am

"ಮಳೆ ಬಿಲ್ಲು ಚಲುವಿನ ಮಳೆಬಿಲ್ಲು "

ನೀವು ಹುಡುಕುತ್ತಿರುವ ವೀರೇಶಪ್ಪ ವಿ ಖೈರವಾಡಗಿ ಅವರ ಕನ್ನಡ ಕವಿತೆಗಳು/ಗೀತೆಗಳ ಲಿರಿಕ್ಸ್ ಇಲ್ಲಿವೆ:? ವೀರೇಶಪ್ಪ ವಿ ಖೈರವಾಡಗಿ - ಕವಿತೆಗಳು/ಗೀತೆಗಳು1️⃣ ಮಳೆಬಿಲ್ಲೆ ?(ಪಲ್ಲವಿ)
ಮಳೆಬಿಲ್ಲೆ ಚಲುವಿನ ಮಳೆಬಿಲ್ಲೆ
ಮಳೆಬಿಲ್ಲೆ ಮೋಡಗಳ ನಡುವಲ್ಲೇ
ತುಂತುರು ಮಳೆಹನಿ ಸರಮಾಲೆ
ಎಳು ಬಣ್ಣದ ಕಾಣಲು ಸುಂದರ ..|| ಪಲ್ಲವಿ ||(ಚರಣೆ-1)
ಬಾನು ಭೂಮಿ ಸೌಂದರ್ಯ ಈ ವಿಸ್ಮಯ
ಕಡಲು ನದಿಗಳ ಸಂಗಮ ಈ ಸಂಭ್ರಮ
ನೋಡು ಕಾನನ ಪ್ರಕೃತಿ ಹಾಡುವ ಸರಿಗಮ
ಹಕ್ಕಿ ಹಾರಿ ಗೂಡು ಕಟ್ಟುವ ಸಿಹಿ ಸಂಗಮ || 1 ||(ಚರಣೆ-2)
ಹೂ ಬಳ್ಳಿ ಚಂದ ಹಕ್ಕಿಗಳ ಇಂಚರ ಚಂದ
ವನಗಳ ವಯ್ಯಾರ ಹಣ್ಣುಗಳು ಸುವಾಸನೆ
ಸುಮಧುರ ಸುಮದುರ ಸುಂದರ ಹಂದರ
ಎಲ್ಲೆಲ್ಲೂ ವನ್ಯಮೃಗ ಸೌಂದರ್ಯವೇ ಚಂದ || 2 ||✍️ ಕವಿ: ವೀರೇಶಪ್ಪ ವಿ ಖೈರವಾಡಗಿ
? ಸ್ಥಳ: ಬೆಂಗಳೂರು, ಕರ್ನಾಟಕ
?

- Veereshappa v khairawadagi

30 May 2026, 10:23 am