Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇಳೆಗೆ ತುಂತುರು ಮಳೆಯ ಸಿಂಚನ
ತನುವು ನೆನೆಯೇ ನವಿರಾದ ಕಂಪನ
ನಡುಗೋ ಅಧರಗಳ ನೋಡಿ ಮಳೆಹನಿಗೆ
ಬೇಕಿದೆ ಈಗಲೆ ಜೇನಸವಿಯ ಬಾಡಿಗೆ
ಅಪ್ಪಿ ಜೊತೆಯಾಗಿವೆ ಮೈಮರೆತು ಕೈಗಳು
ತಣ್ಣನೆ ಗಾಳಿಯು ತನುವ ಸೋಕಿ ಸಾಗಲು
ಜಾರಿದ ಮುಂಗರುಳದಂತು ಒಂದೇ ಯಾಚನೆ
ತುಟಿಯ ಅಂಚಲಿ ಕಿರುನಗೆಗಾಗಿ ನಿವೇದನೆ
ಮುನಿಸ ತೋರುತ ಕಾಡೋ ಮನಸು
ನಗುತಲೇ ಹಾಗೆ ರಮಿಸುತಿದೆ ಈಗ ತುಸು
ಏತಕಿ ಎಂದೂ ಇರದ ಸವಿ ಬದಲಾವಣೆ
ತಿಳಿಯಲು ಶುರುವಿಟ್ಟಿದೆ ತನ್ನೊಳಗೆ ವಿಚಾರಣೆ
ಮುದ್ದಿಸಿ ಕಾಡುವಂತ ಸುಂದರ ಯಾತನೆ
ಬಿಸಿಯುಸಿರು ತಣಿದಿದೆ ಹಾಗೆ ಸುಮ್ಮನೆ
ಎಂದೂ ಹೀಗೆ ಇರಲಿ ಈ ಎಲ್ಲ ಭಾವನೆ
ತನುವ ತಣಿಸಿ ಮನವ ಕುಣಿಸಲೆನ್ನುವ ಕಾಮನೆ
- ಶ್ರೀಕಾವ್ಯ
20 Apr 2018, 08:33 pm
"ಬೋಳಾದರೆ ಕಾಡು
ಹಾಳಾಗುವುದು ನಾಡು"
"ಬೆಳೆಸೋಣ ಪ್ರಕೃತಿ
ಉಳಿಸೋಣ ಸಂತತಿ"
"ನಿಸರ್ಗ ನಾಶ ಬಿಡು
ನಿತ್ಯ ಸಂತಸ ಪಡು"
"ಸಸಿ ಬೆಳೆಸಿ
ಬಿಸಿ ಇಳಿಸಿ
ಖುಷಿ ಹೆಚ್ಚಿಸಿ"
"ಬೆಳೆಸಿ ಗಿಡಮರ
ಗಳಸಿ ಸಡಗರ"
"ಹಾಕಿರಿ ಗಿಡಮರಗಳಿಗೆ ನೀರು
ಪಡೆಯಿರಿ ಉಪಯೋಗ ನೂರಾರು"
"ಮಾಲಿನ್ಯ ತಡೆ
ಆರೋಗ್ಯ ಪಡೆ"
"ಸ್ವಚ್ಛ ಗೊಳಿಸಿ ಈಗಲೇ
ದೂರ ಮಾಡಿ ಖಾಯಿಲೆ"
"ಬೆಳೆಸಿದರೆ ಮರ
ನೀಗುವುದು ಬರ"
"ಪ್ರಕೃತಿಯನ್ನು ಪ್ರೀತಿಸಿ
ದುರ್ಗತಿಯನ್ನು ತಪ್ಪಿಸಿ"
- ಸುರೇಶ್ ಟಿ ವಿ
20 Apr 2018, 02:58 pm
ಮನ್ಸಿನ ಮನೆ ತುಂಬಾ ನಿನ್ ನೆನಪುಗಳ ರಂಗೋಲಿ ಬಿಡಿಸಿ ಕುಂತೀನಿ
ಅದರ ಅಂದ ಕೆಡಿಸ್ಲಿಕ್ಕಾದ್ರು ಬರ್ತೀಯೇನೊ ಅಂತ ಕಾಯ್ಲಿಕತ್ತೀನಿ
ಬಂದೋಗೊಮ್ಮೆ ಉಸಿರು ಹೆಸರು ರಂಗೋಲಿಯೊಟ್ಟಿಗ ಮಣ್ಣ ಸೇರಲಿಕ್ಕಾದ್ರು
------------------------------------------------------------------------
ತಂಗಾಳಿಯಂಗ ಮನಸ ಸೇರಿದವ
ಬಿರುಗಾಳಿಯಂಗ ಬೀಸಿ ಹೊಂಟಿದ್ದಿ
ತಿಳಿ ನೀರ ಕೊಳದಂಗಿದ್ದ ಮನ್ಸು ರಾಡಿಯಾಗದ
ಊಳೆತ್ತಿ ನನಗ ಮರುಜೀವ ಕೊಟ್ಟು
ಮೀನಿನಂಗ ಭಾವನೆಗಳು ನಲಿಯಾಕ ನೀ ಬರಬೇಕದ
- ಶ್ರೀಕಾವ್ಯ
20 Apr 2018, 11:28 am
ಬುದ್ಧಿ ಮನಸುಗಳ ಕಲಹ
ನಿತ್ಯ ನೂರು ತರಹ
ಎದುರಾಗಿ ಕಾಡುವವು ಪುನಃ ಪುನಃ
ತುಟಿಗೆ ನಗುವ ಕಾಣದೆ ಶುರುವಾಗಿದೆ ವಿರಹ
ನೆಮ್ಮದಿಗೆಲ್ಲಿ ಜಾಗ ವಿರಹ ಕಳೆಯದ ವಿನಹ
- ಶ್ರೀಕಾವ್ಯ
20 Apr 2018, 11:26 am
ಕನಸಿನ ಮಳೆಯಲಿ
ತುಂತುರು ಹನಿಯಾಗಿ
ನಗು ಬೀರುವ ಮನದಲಿ
ಪ್ರೀತಿ ಅರಳಿಸು ಎದೆಯಲ್ಲಿ
ಕಟ್ಟಿದ ಕನಸೊಂದು
ಮನದಲಿ ನೆನಪಾಗಿ
ಬಯಸುತ್ತಿದೆ ನಿನ್ನ
ನಿಸರ್ಗದ ಮಡಿಲಿಲ್ಲಿ
ಜೀವನ ಜೋಕಾಲಿ ತುಗೋಣ ಬಾ
ಮಂಜು ಕವಿದ ಪ್ರೀತಿಗೆ
ಬೆಚ್ಚಗೆ ಕರಗಲು ನಿನ್ನ ಕಿರು ನಗೆ ಬೇಕು
ಬಾ ನನ್ನ ಸನಿಹಕೆ
ಸಮಯ ಸರಿಯುತ್ತಿದೆ ಮಿಂಚಾಗಿ
ಎಷ್ಟು ಕರೆದರೂ ಬಾರದ ನೆನಪಿನ ಕನಸ್ಸೊಂದು ತೂಗುತಿದೆ
ಪ್ರೀತಿಗೆ ಮನಸೋತ ಜೀವನದಲ್ಲಿ ಅನುರಾಗದ ಶೋಧನೆ
- ಎ ಜಿ ಶರಣ್
19 Apr 2018, 11:18 pm
ಮುಗುಳುನಗೆಯ ಮರ್ಮವ
ಅರಿಯದಾದೆನು
ಅವಕಾಶ ದೊರೆಯಿತೆಂಬ
ಹಿಗ್ಗಿನಲಿ ಮೈಮರೆತೆನು
ಸಂಭ್ರಮದಿ ನಾ ಹಣಿಯಾದೆನು
ಕೈಜಾರಿದಾಗ ನಾ ಮಂಕಾದೆನು
ಕಂಬನಿ ಕಣ್ಣ ತುಂಬಿತು
ಮನವು ಕಂಗೆಟ್ಟು ನಿಂತಿತು
ಉಸುರದಿರಿ ಬೇರಾರಿಗು
ಎಂದಿರಿ ನೀವಂದು
ನರಿತನವ ಅರಿಯದೆ
ಕಂಗೆಟ್ಟಿಹೆ ನಾ ನಿಂದು
ಬೇರೆಲ್ಲು ಹೋಗದಿರಿ
ನಮ್ಮಲೆ ದುಡಿಯಿರಿ
ದುಡಿಮೆಯು ಇಲ್ಲದೆ
ಸಮಯವು ಇಲ್ಲದೆ
ಜೀವನದ ಜೊತೆ ಆಟವಾಡಿದಿರೇಕೆ?
ಶಾರಧ
- ಶಕುಂತಲಾ
19 Apr 2018, 04:46 pm
ಹೆಣ್ಣ ಕೂಗು ಕೇಳಿ ಕಣ್ಣು ತೆರವರೆಲ್ಲಿ
ಯಾರು ಇರುವರಯ್ಯ ಈ ಸಮಾಜದಲ್ಲಿ
ಭಾರತೀಯ ಮಹಿಳೆಗಿಂದು ಸ್ಥಾನವೆಲ್ಲಿದೆ
ಬರಿಯ ಭೋಗ ವಸ್ತುವಾಗಿ ಅವಳ ಬದುಕು ಬಾಡಿದೆ,
ಬಡ ಕುಟುಂಬದಲ್ಲಿ ಬೆಳೆದ ಹೆಣ್ಣ ಬಾಳಿಗೆ
ಇಂದು ಬೆಳೆದಿದೆ ವರದಕ್ಷಿಣೆ ಕಾರ್ಮೋಡ ಕವಿದಿದೆ
ಬಳಿಪಶುವೀ ಮಹಿಳ ನೀಚ ಸಂಪ್ರದಾಯಕೆ
ಎಲ್ಲಿ ಭದ್ರ ಕೋಟೆ ಕಟ್ಟುವವರು ಈ ಸುನಾಮಿಗೆ.
- Hasan Muhaz
19 Apr 2018, 04:30 pm
ಸಾವಿರ ಸುಳಿಗಳ ಕಡಲಲಿ ಬೆರೆತರೂ
ಕರಗದೇ ಕೊರಗುವ ಕಣ್ಣೀರು
ತುಷಾರವ ಹೊದ್ದಿರುವ ತಂಗಾಳಿಗೆ ಸಿಕ್ಕರು
ತಂಪಾಗದೆ ಬಿಸುಪೇರುವ ನಿಟ್ಟುಸಿರು
ಅನಂತ ಪುಟಗಳು ಮುಗಿದರೂ
ಇನ್ನೂ ಮಿಗುವ ನೆನಪುಗಳು
ಜೀವಂತ ಇರಲು ಬಯಸಿದರೂ
ಕರುಣೆ ತೋರದ ಕನಸುಗಳು
ಸಾವಿರ ಸೂರ್ಯರು ಬಂದರೂ ಬತ್ತದ ನೋವಿರಲು
ನಿಲ್ಲದದೇಕೋ ತಿಳಿಯದು ಹೃದಯ
ಸಾವಿರ ನಿರೀಕ್ಷೆಗಳು ಸುಳ್ಳಾದರೂ ಸೋಲದ ಮನಸಿರಲು
ಚಲಿಸದದೇಕೋ ತಿಳಿಯದು ಸಮಯ
ಮನಸಿನೆಲ್ಲಾ ಮೂಲೆಯನು ದಹಿಸಿದ ಮೇಲೂ
ಆರದೇ ಇನ್ನೂ ಉರಿಯುತ್ತಿದೆ ವಿರಹ
ಭಾವನಾಂಭುದಿಯು ಬತ್ತಿ ಹೋದ ಮೇಲೂ
ಬರಿದಾಗದು ಈ ಕಣ್ಣೀರ ಬರಹ
- ಅಕವಿ
18 Apr 2018, 07:56 pm
ಸೋತಿರುವ ಈ
ಹೃದಯ ಮತ್ತೆ ಮತ್ತೆ
ಸೋಲುವುದೇನು
ನಂಗೆ ಹೊಸತೇನಲ್ಲ...
ಲದ್ದೆಯನ್ನು ನೋಡಿ
ಕೈ ಮುಗಿ ಎಂದರೂ
ಮುಗಿದು ಬಿಡುವಂತ
ಮೂರ್ಖ ನಾನು...
ಅದೆಂತಹ ಆಕರ್ಷಣೆ
ನನ್ನ ಸೆಳೆಯುವಂತಹ
ಮನ ಕಲಕುವಂತಹ
ನಿನ್ನಾಂತರ್ಯದ ಸೌಂದರ್ಯ...
ದಯಮಾಡಿ ಕೇಳುವೆನು
ಬರಲೇ ಬೇಡ ನೀನು
ನನ್ನೆದುರಿಗೆ ಎಂದೆಂದೂ
ಮತ್ತೆ ಸೋಲಲು ನಂಗಿಷ್ಟವಿಲ್ಲ
ಇಂತಿ ನಿಮ್ಮ ಸ್ನೇಹ ಸಿಂಚನ
ನಾಗರಾಜ ಬಿ {9743216235}
- ನಾಗರಾಜ ಬಾಕೆ೯ರ್
18 Apr 2018, 01:59 pm
ಆರದ ಜೀವಕ್ಕೆ
ನಾರದನ ಆಶೀರ್ವಾದ
ಮಾಯದ ಪ್ರೀತಿಗೆ
ನಿನ್ನದೇ ಜೀವನಾದ..
ಮಾಡದ ಫೋನಿಗೆ
ಆಡದ ಮಾತಿಗೆ
ನೂರು ನಗೆಯಲಿ
ಇತ್ತು ಸುಖ ಸಂತೋಷ..
ಹೇಳದೆ ಹೋದೆ
ಕಾರಣ ನೂರಾರು
ಆದರೂ ಕೇಳು ನೀ
ನನ್ನೀ ತಕರಾರು..
ಬಾಯಾರಿ ನಿಂತಿಹೆ
ನೀ ಬರಲೆಂದು ಕಾದಿಹೆ
ಈ ಬಡ ಜೀವದ ಬಾಗಿಲಿಗೆ
ಇಣಿಕ್ಕೊಮ್ಮೆ ನೋಡಿಬಿಡು..
- ನಾಗರಾಜ ಬಾಕೆ೯ರ್
18 Apr 2018, 01:03 pm