ಓ ಹೂವೇ ... ಓ ಹೂವೇ...!
ನೀನಗೆ ಯಾರು ಸರಿಸಾಟಿ ಇಲ್ಲವೆ.
ಜೇನೆಂಬ ಗೂಡಿಗೆ ಸಿಹಿ ಊಟ ಹಾಕುವೆ.
ದೇವರ ಶಿಲೆಗೆ ಹಾರವು ಹಾಗುವೆ.
ಹೂವಿನ ರಸಿಕರಿಗೆ ಸಂತೋಷ ನೀಡುವೆ.
ಜಾತಿ ಭೇದ ಬಾವಗಳಿಗೆ ಸಮಾನತೆಯ ಕೊಡುವೆ.
ಓ ಹೂವೇ... ನೀ ಇಲ್ಲದೆ ಪ್ರಕೃತಿಗೆ ಸೊಬಗು ಇಲ್ಲ.
ಓಹೂವೆ ನೀನಗೆ ಕೊನೆ ಇಲ್ಲ.
ಮಂಜುಳ ಮಂಜುಳ ಮಂಜುಳ
ನೀನೆ ನನ್ನ ಬಾಳಿನ ಜೀವಾಳ..
ಮಂಜುಳ ಮಂಜುಳ ಮಂಜುಳ
ನೀನೆ ನನ್ನ ಹರುಷದ ಸಪ್ಪಳ..
ನಿನ್ನ ಪ್ರೀತಿ ಇದ್ದರೆ ನನಗೆ ಇನ್ಯಾಕೆ ಸುತ್ತಲಿ ಆ ಧರ್ಮ ಸ್ಥಳ..
ನಿನ್ನ ನಗು ಬಂದರೆ ಜೊತೆಗೆ ನಾ ಗೆಲ್ಲಬಲ್ಲೆ ಈ ಭೂಗೋಳ.. " ಪ "
ನಿನ್ನ ಕೋಪ ಒಂದು ತಿಳಿ ಮುಂಜಾನೆಯ ಕಾವಳ
ನನ್ನ ಪ್ರೇಮ ಎಂದೂ ನೀಲಿ ಆಗಸದಷ್ಟೂ ನಿಚ್ಚಳ..
ನಿನ್ನ ಗುಳಿ ಕೆನ್ನೆಯ ತಿಳಿ ನಗುವ ನೋಡೋ ಹಂಬಲ
ಒಲವಿನ ಬಣ್ಣದಿಂದ ಮಿನುಗಿದೆ ನನ್ನ ಎದೆಯಂಗಳ..
ಹೂವಂಥ ನಿನ್ನನು ಮುದ್ದುಮಾಡಲು ನಾ ಆಗಲೇನು ಜೇನುಳ
ನಿನ್ನ ಕಣ್ಣು ನೋಡುವಲ್ಲಿ ಸುರಿಯಲೇನು ತಾವರೆಯ ಕೊಳ
ನಿನ್ನ ಹೆಜ್ಜೆ ಹಾದಿಯಲ್ಲಿ ಹಾಸಲೇನು ಕಡಲಾಳದ ಹವಳ
ನಗುತಲಿರು ಎಂದು ಫಳ ಫಳ
ಯು ಆರ್ ಮೈ ಲವ್ಲೀ ವೈಫ್..
ಯು ಆರ್ ಮೈ ಹ್ಯಾಪಿ ಲೈಫ್.. "
ನೀ ನನ್ನ ಗೂಬೆ ಎಂದು ಬೈದರೂ ಚೆಂದ
ಗೊಂಬೆ ಅಂತ ಹೊಗಳುವೆ ನಿನ್ನ ಅಂದ..
ನೀ ನನ್ನ ಕತ್ತೆ ಎಂದು ಕೂಗಿದರೂ ಚೆಂದ
ನಾ ಕವಿತೆ ಬರೆದು ಹಾಡುವೆ ನಿನ್ನ ಅಂದ..
ಎಲ್ಲೇ ಹೋದರೂ ಭೂಮಿಯಂತೆ ನಿನ್ನ ತಿರುಗುತಲಿರುವೆ
ಎಂದೂ ಹೀಗೆ ನಿನ್ನ ಹೂವಿನಂತೆ ನಗಿಸುತಲಿರುವೆ..
ನಿನ್ನ ಪ್ರೀತಿ ಸ್ನೇಹ ನನಗೆ ಒಡವೆ
ಈ ಉಸಿರನು ನಿನ್ನ ಹರುಷಕೆ ಮುಡಿಪಾಗಿಡುವೆ..
ಯು ಆರ್ ಮೈ ಎವರ್ ಗ್ರೀನ್ ಬ್ಯೂಟಿ
ಐ ಡೊಂಟ್ ವಾಂಟ್ ಎನಿ ಕಲರ್ ಬ್ಯೂಟಿ "
ಕಾಲ್ನಡಿಗೆಯಲ್ಲಿ ಸಾಗುವೆ
ಕಂಡವರಲ್ಲಿ ಬೇಡುವೆ
ದುಡಿಯುವ ವಯಸು ನನಗಿಲ್ಲ
ಸಾಯಲೆನಗೆ ಧೈರ್ಯವಿಲ್ಲ
ಬೇಡುವವರ ಬಿಟ್ಟು ಬೇಡದವರಿಗೆ
ಕೊಟ್ಟು ನನ್ನ ಮಾತ್ರ ಮರತೆಯೇ ಭಿಕ್ಷುಕನು
ನೀನು ದೇವರೇ!!
ನೂರು ವರ್ಣ ನೋಡಲಿಟ್ಟೆ
ನನ್ನ ರೂಪವೂ ಕಾಣದಂತೆ
ಕುರುಡುತನವ ಕಣ್ಣಿಗಿಟ್ಟೆ,
ಒಂದೊತ್ತು ಅನ್ನದ ತುತ್ತು ಸಿಗದೆ ಬಿಕ್ಕಿ ಅತ್ತೆ, ಹೆಚ್ಚಾದ ಅನ್ನವ ಚೆಲ್ಲಿ ಹೋಗುವ ದೊಡ್ಡವರ ದರ್ಬಾರು ನೋಡಿ ಅತ್ತೆ,
ನೀ ಕೊಟ್ಟ ಸಿರಿಯ ಕುಂತಲ್ಲೇ ಕಾಣಿಕೆಯಂತೆ ಪುಕಸಟ್ಟೆ ಪಡೆಯುವೆ ಭಿಕ್ಷುಕನು ನೀನು ದೇವರೇ!!
ಉಸಿರಾಡುವ ಪ್ರತಿಯೊಂದು ಜೀವಿಯೂ ಅಗಳು ಅನ್ನಕ್ಕಾಗಿ ಹಗಲಿರುಳು ದುಡಿವುದು,
ಬೆವರ ಹನಿಗೆ ನಿನ್ನ ರೂಪವಿಟ್ಟು ದೇವರ ಕೊಟ್ಟೆ ಪ್ರಸಾದವೆಂದು ತಿನ್ನುವುದು!!
ನೀನು ಮಾತ್ರ ಅಲುಗಾಡದೆ ನಮ್ಮ ಬೆವರ ಪಾಲು ಪಡೆಯುವೆ, ನಿಜಾವಾದ ಭಿಕ್ಷುಕನು ನಾನಲ್ಲ ಹೆಸರಿಲ್ಲದ ಭಿಕ್ಷುಕನು ನೀನು ದೇವರೇ!!
ಉಸಿರನಿತ್ತು ಹಾಲುಣಿಸಿ ಸಲುಹಿ
ಬೆಳೆಸಿದ ತಾಯಿಯ ದಯೆ ಇಲ್ಲದೆ
ನಡು ಬೀದಿಗೆ ಬಿಸಾಡಿ ಹೋದರು,
ತುತ್ತು ಕೊಟ್ಟ ಕೈಯಿಗೆ ದಾಸ್ಯದಿ ದನಿಕರ
ಕಾಲು ಹಿಡಿಸಿ ಮಕ್ಕಳು!!
ಖಚಿತವಾಯಿತು ತಂಗಳನ್ನ ಮನವ ಕಾಡಿತು
ಮುಂದಿನ ಜೀವನ, ತಂದು ಕೊಟ್ಟವರು ಯಾರು
ಈ ಪರಿಸ್ಥಿತಿಯನ್ನ ಸಾವಿರಾರು ಕನಸ ಹೊತ್ತು
ತಾ ಹಡೆದ ಮಕ್ಕಳೇನಾ!!
ಆಸ್ತಿಯನು ಹಂಚಿಕೊಂಡ ಮಕ್ಕಳು
ರಕ್ತ ಕಣಗಳ ಎಣಿಕೆ ಇಲ್ಲದೆ ಧಾರೆ ಎರೆದು
ರೂಪ ಕೊಟ್ಟ ತಪ್ಪಿಗೆ ತಕ್ಕ ಪಾಠ ಕಲಿಸಿದರು,
ಮೈ ಮೇಲಿನ ಆಭರಣಗಳನ್ನು ಕಳಚಿ ಶಾಶ್ವತವಾಗಿ
ತನ್ನವರಿದ್ದರೂ ಅನಾಥೇ ಎಂಬ ಬಿರುದನು ತೊಡಿಸಿ!!
ಬೀದಿಗಳ್ಳರೆಲ್ಲಿ ಇರುವರು ಮನೆಯ ಮಂದಿಯೇ
ಧನ- ಮಾನ ,ಪ್ರಾಣಗಳನ್ನು ಸೊಕ್ಕಿನಿಂದ ಕುಕ್ಕಿ
ತಿನ್ನುವ ಕಾಲದಲ್ಲಿ!!