ಕೊಲ್ಲಬೇಡ ಚೆಲುವೆ ಎನ್ನನೀ ಆ ನಿನ್ನ ಓರೆ ಕಣ್ಣಿನ ಬಾಣದಲಿ
ಮನ ಸೋತೆ ಆ ನಿನ್ನ ನೋಟಕೆ
ಸೆಳೆವುದು ಎನ್ನನು ನಿನ್ನ ಸನಿಹಕೆ
ನಿನ್ನ ಮೊಗದ ಸೊಬಗನ್ನು ಎನಿತು ಬಣ್ಣಿಸಲಿ
ನೂರಮಡಿ ಮಾಡಿಹುದು ನಿನ್ನ ಸೊಬಗ ಆ ನಿನ್ನ ಓರೆ ಕಣ್ಣು
ಓ ನನ್ನ ಚೆಲುವೆ ಓ ನನ್ನ ಒಲವೆ
ನಿನ್ನ ಆ ಮೋಹಕ ಕಣ್ಣಗಳಲಿ ಕಣ್ಣಿಟ್ಟು ನೋಡಲು
ಕಂಡೆನು ನಾ ನನ್ನನಲ್ಲಿ ಬಿಂಬ ಪ್ರತಿಬಿಂಬ
ಮುಳುಗಿದೆನು ಆ ಸಾಗರದಾಳದಲಿ ಕಂಡೆ ನಾ ಮುತ್ತುಗಳು
ಪೋಣಿಸಿದೆವನು ನಿನಗಾಗಿ ಮುತ್ತಿನಾರವನು
ನೀ ತೋರಿದಾ ಒಲುಮೆ ಹೇಗೆ ಮರೆಯಲಿ ಚೆಲುವೆ
ಎಂದೆಂದಿಗೂ ಋಣಿಯು ನಾ ನಿನಗೆ ಓ ನನ್ನ ಒಲವೆ
( ಸ್ನೇಹ )
ಮಾತು ಕೊಡುವವರು ಹ್ರುದಯವಂತರು.
ಕೊಟ್ಟ ಮಾತು ಉಳಿಸಿ ಕೊಳ್ಳುವವರು
ನಿಷ್ಠಾವಂತರು.
ಮಾತುಕೊಡುವ ದೇಹವನ್ನು ಸ್ರುಷ್ಟಿಸುವವರು. ಬಗವಂತರು.ತಂದೆ . ತಾಯಿ.
ಮಾತಿನ ಜೊತೆ ವಿಶ್ವಾಸ ತುಂಬಿ.
ಕೈ ಹಿಡಿದು ನಡೆಸುವವರು .
ನಿಜವಾದ ಸ್ನೇಹಿತರು.
ಸ್ನೇಹದ ಮೇಲಿನ ಸಂಶಯಕ್ಕೆ ಸ್ತಳವಿಲ್ಲ .ಪ್ರೀತಿ ವಿಶ್ವಾಸಕ್ಕೆ ಬೆಲೆ ನಮ್ಮಲ್ಲೆಲ್ಲ .
ನಮ್ಮೆಲ್ಲರ ಸ್ನೇಹಕ್ಕೆ ಕೊನೆ ಎಂಬುದೇ ಇಲ್ಲವೇ ಇಲ್ಲ .
ಸಿರಿವಂತರ ಹೆಗಲ ಮೇಲೆ ಏರಿ ಕುಂತ ಸಿರಿತನ,
ಬಡವರನು ಅವರ ಕಾಲ ಕೆಳಗೆ ದೂಳಿನಂತೆ ಮಾಡಿತಲ್ಲಾ?
ದಿನಗೂಲಿ ಮಾಡುವಂತ ಬಡಜನರಿಗೆ ದುಡ್ಡಿನ ಬಲೆ ಎಸೆದು ಜೀತದಾಳುಗಳಾಗಿ ಮಾಡುವರಲ್ಲ ಮರಣದ ವರೆಗೂ.
ಕೊರಳಿಗೊಂದು ಸರಪಳಿ ಇಲ್ಲ ಆದರೂ ನೋಡುವರು ಯಜಮಾನರು ಕುನ್ನಿಗಳಂತೆ ನಮ್ಮನ್ನೆಲ್ಲಾ,
ಯಾವ ಸಂವಿಧಾನದಲ್ಲಿ ರಚಿತವಾಗಿದೆ ಈ ನೀತಿ ದುಡ್ಡಿರುವವರು ಮಾತ್ರ ದೊಡ್ಡವರೆಂದು ಮಿಕ್ಕಿದವರು ಅವರ ಕೆಲಸದವರೆಂದು?
ಯಾಕೆ ಹಾಗೆ ತಟ್ಟನೆ ತಿರುಗಿ
ನಿಂತೆ ಹೇಳೇ ಚೆಲುವೆ ?
ಕನ್ನಡಿ ನಿನಗೇನಾದರೂ ಸೋತು
ಕಣ್ಣು ಹೊಡೆಯಿತೆ ?
ನಿನ್ನ ಸುಂದರ ಮೊಗದ ಹಿಂದೆ
ಅಡಗಿರುವ ನೋವು
ಅಚಾನಕವಾಗಿ ನಿನಗೆ ಕಂಡು ಬಿಟ್ಟಿತೇ ?
ಎಲ್ಲೋ ದೂರದಲ್ಲಿ ಒಂದು ಮಗುವು
ಅಮ್ಮಾ ಎಂದ ಹಾಗೆ ದ್ವನಿಯು ಕೇಳಿತೆ ?
ಎಲ್ಲಾ ಭಾವುಕ ಸರಕುಗಳ
ಬದಿಗಿರಿಸಿ ಕೊಂಚ ನಗು ಚೆಲ್ಲು ಸುಂದರಿಯೇ,
ನಿನ್ನ ಚಂದ್ರ ವದನದಲ್ಲಿ ಅರಳಿರುವ
ಪ್ರೇಮ ಪುಷ್ಪದ ಗಂಧವನು ನೀನರಿಯೇ.
ಬಿಡು ಉಪಯೋಗವಿಲ್ಲದ ಬಿಗುಮಾನ
ಕೊಡು ಸ್ವಾರ್ಥವಿಲ್ಲದ ನಗುವ ಸಮ್ಮಾನ
ಪಡು ನಿನ್ನಷ್ಟಕ್ಕೆ ನೀನೇ ಹೇಳಿಕೊಂಡು ಸಮಾಧಾನ
ಯಾರಿಗಿಲ್ಲ ಇಲ್ಲಿ ನಿನ್ನ ಕಶ್ಟ ಕೇಳುವ ವ್ಯವಧಾನ.
ಕಾರಣವೇ ಬೇಕಿಲ್ಲ ಜಗಳಕ್ಕೆ ಈ ಜನಕ್ಕೆ
ಜರುಗಿದ್ದು ಒಂದಾದರೆ ಆಡುವುದು ಇನ್ನೊಂದು
ಮಾತು, ಹೇಳುವುದು ಬೇರೊಂದು ಕಥನ.
ಮಾತೊಂದೆ ಇವರ ಅಸ್ತ್ರ,
ನರವಿಲ್ಲದ ನಾಲಿಗೆಗೆ ಅಡ್ಡಿ ಏನು ಈ ಮನುಜರಿಗೆ,
ಪ್ರತಿಯೊಂದು ನಲಿವನ್ನು ನೂಕಿ ಹಾಕಿ ಪಾತಾಳಕ್ಕೆ
ಮಾತಲ್ಲಿ ಕೊಂಡು ತರುವರು ತಪ್ಪಿತಸ್ಥ ಭಾವನೆ
ಮನಕ್ಕೆ.
ಪಾಪ ಎಂಬುದು ಕೂಡಿಟ್ಟ ಬುತ್ತಿಯಂತೆ ಒಬ್ಬರ ಕಣ್ಣೀರು ನುಂಗಿ ಈ ಕ್ಷಣದ ನಗುವು ಪಡೆದರೆ
ನೋವು ಮರಳಿ ಬರುವುದು ನಿಮ್ಮೆಡೆಗೆ ಬಿಡದ
ಬೇತಾಳನಂತೆ ಬೆನ್ನೇರಿ.
ಎಲ್ಲರಲ್ಲೂ ಮೆಚ್ಚುಗೆ ಪಡೆಯುವ ಹುಚ್ಚು
ಏತಕೆ ಈ ಮನಸ್ಸಿಲ್ಲದ ಸ್ವಾರ್ಥಪರರಿಗೆ,
ನೋವು ಕೊಟ್ಟ ನಡೆತೆಯೇ ಸರಿಯೆಂದು
ಸಮರ್ಥಿಸಿಕೊಳ್ಳುವವರು ನೋಡಿದವರ
ಮುಂದೆಯೇ.
ಜಗಳ ಮಾಡದಿದ್ದರೆ ನೋವು ಕೊಡದಿದ್ದರೆ
ಊಟ ಸೇರದೇನೋ!
ಕಣ್ಣೀರ ಕಾಣದಿದ್ದರೆ ಕುಡಿದ ನೀರು ಗಂಟಲು
ಇಳಿಯದೇನೋ!
ಒಂದು ತಿಳಿಯದು ನನಗೆ ಇಂದು ಈ ಜೀವವಿಲ್ಲದ
ಜಗಳದಿಂದ ಜೀವಿ ಹಿಂಡುವುದೇಕೆಂದು?