Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓರೆ ಕಣ್ಣಿನ ಬೆಡಗಿ

ಕೊಲ್ಲಬೇಡ ಚೆಲುವೆ ಎನ್ನನೀ ಆ ನಿನ್ನ ಓರೆ ಕಣ್ಣಿನ ಬಾಣದಲಿ
ಮನ ಸೋತೆ ಆ ನಿನ್ನ ನೋಟಕೆ
ಸೆಳೆವುದು ಎನ್ನನು ನಿನ್ನ ಸನಿಹಕೆ
ನಿನ್ನ ಮೊಗದ ಸೊಬಗನ್ನು ಎನಿತು ಬಣ್ಣಿಸಲಿ
ನೂರಮಡಿ ಮಾಡಿಹುದು ನಿನ್ನ ಸೊಬಗ ಆ ನಿನ್ನ ಓರೆ ಕಣ್ಣು

- ರಘು

23 Dec 2017, 06:11 pm

ಕನ್ನಡ

ಕಣಕಣದಲ್ಲೂ ಕನ್ನಡ ಪಸರಿಸಲಿ
ಪ್ರತಿಮನುಜನು ಕನ್ನಡ ಅನುಸರಿಸಲಿ
ಪ್ರತಿಯುಸಿರಲಿ ಕನ್ನಡ ಸಂಚರಿಸಲಿ
ಈ ಕನ್ನಡದಿಂದ ಭೇದಭಾವ ಮರೆಯಲಿ

ಕನ್ನಡಕ್ಕೆ ಕನ್ನಡವೇ ಸಾಟಿ
ಹೇಗಿದ್ದರೂ ಸರಿ ನಿನ್ನ ಧಾಟಿ
ಕನ್ನಡಿಗರು ಕೋಟಿ ಕೋಟಿ
ಎಲ್ಲ ಭಾಷೆಗಳಿಗಿಂತ ಕನ್ನಡವೇ ಗಟ್ಟಿ

ಕನ್ನಡಿಗ ಶಿವಾ... ಧನ್ಯವಾದಗಳು

- ಸಕ್ಕತ್ ಲಾಜಿಕ್ ಶಿವಾ

23 Dec 2017, 05:34 pm

ಓ ನನ್ನ ಒಲವೆ

ಓ ನನ್ನ ಚೆಲುವೆ ಓ ನನ್ನ ಒಲವೆ
ನಿನ್ನ ಆ ಮೋಹಕ ಕಣ್ಣಗಳಲಿ ಕಣ್ಣಿಟ್ಟು ನೋಡಲು
ಕಂಡೆನು ನಾ ನನ್ನನಲ್ಲಿ ಬಿಂಬ ಪ್ರತಿಬಿಂಬ
ಮುಳುಗಿದೆನು ಆ ಸಾಗರದಾಳದಲಿ ಕಂಡೆ ನಾ ಮುತ್ತುಗಳು
ಪೋಣಿಸಿದೆವನು ನಿನಗಾಗಿ ಮುತ್ತಿನಾರವನು
ನೀ ತೋರಿದಾ ಒಲುಮೆ ಹೇಗೆ ಮರೆಯಲಿ ಚೆಲುವೆ
ಎಂದೆಂದಿಗೂ ಋಣಿಯು ನಾ ನಿನಗೆ ಓ ನನ್ನ ಒಲವೆ

- ರಘು

23 Dec 2017, 01:12 pm

ಸ್ನೇಹ

( ಸ್ನೇಹ )
ಮಾತು ಕೊಡುವವರು ಹ್ರುದಯವಂತರು.
ಕೊಟ್ಟ ಮಾತು ಉಳಿಸಿ ಕೊಳ್ಳುವವರು
ನಿಷ್ಠಾವಂತರು.
ಮಾತುಕೊಡುವ ದೇಹವನ್ನು ಸ್ರುಷ್ಟಿಸುವವರು. ಬಗವಂತರು.ತಂದೆ . ತಾಯಿ.
ಮಾತಿನ ಜೊತೆ ವಿಶ್ವಾಸ ತುಂಬಿ.
ಕೈ ಹಿಡಿದು ನಡೆಸುವವರು .
ನಿಜವಾದ ಸ್ನೇಹಿತರು.
ಸ್ನೇಹದ ಮೇಲಿನ ಸಂಶಯಕ್ಕೆ ಸ್ತಳವಿಲ್ಲ .ಪ್ರೀತಿ‌ ವಿಶ್ವಾಸಕ್ಕೆ ಬೆಲೆ ನಮ್ಮಲ್ಲೆಲ್ಲ .
ನಮ್ಮೆಲ್ಲರ ಸ್ನೇಹಕ್ಕೆ‌ ಕೊನೆ ಎಂಬುದೇ ಇಲ್ಲವೇ ಇಲ್ಲ .

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

23 Dec 2017, 01:06 pm

ಜೀತದಾಳು

ಸಿರಿವಂತರ ಹೆಗಲ ಮೇಲೆ ಏರಿ ಕುಂತ ಸಿರಿತನ,
ಬಡವರನು ಅವರ ಕಾಲ ಕೆಳಗೆ ದೂಳಿನಂತೆ ಮಾಡಿತಲ್ಲಾ?

ದಿನಗೂಲಿ ಮಾಡುವಂತ ಬಡಜನರಿಗೆ ದುಡ್ಡಿನ ಬಲೆ ಎಸೆದು ಜೀತದಾಳುಗಳಾಗಿ ಮಾಡುವರಲ್ಲ ಮರಣದ ವರೆಗೂ.

ಕೊರಳಿಗೊಂದು ಸರಪಳಿ ಇಲ್ಲ ಆದರೂ ನೋಡುವರು ಯಜಮಾನರು ಕುನ್ನಿಗಳಂತೆ ನಮ್ಮನ್ನೆಲ್ಲಾ,
ಯಾವ ಸಂವಿಧಾನದಲ್ಲಿ ರಚಿತವಾಗಿದೆ ಈ ನೀತಿ ದುಡ್ಡಿರುವವರು ಮಾತ್ರ ದೊಡ್ಡವರೆಂದು ಮಿಕ್ಕಿದವರು ಅವರ ಕೆಲಸದವರೆಂದು?

ಹೊಟ್ಟೆ ಪಾಡಿಗಾಗಿ ಬೆಟ್ಟವನ್ನಾದರು ಕೊರೆದು ಉರುಳಿಸುವ ಕೆಲಸ ಕೈಗೆತ್ತಿಕೊಳ್ಳುವರು ಬಡವರು,
ಒಪ್ಪೋತ್ತು ಊಟವಿಡದೆ ದುಡಿಸಿಕೊಳ್ಳುವರು ದಯನೀಯ ದುರುಳರು.

ಜೀತ ನೀಡುವುದರ ಬದಲಾಗಿ
ಕೊಟ್ಟ ಸಾಲಕ್ಕೆ ಬಡ್ಡಿಯೆಂದು ಹಿಡಿಯಷ್ಟು ಧಾನ್ಯಗಳನು ಕೈಯಲಿಟ್ಟು, ಕೈ ತೊಳೆದು ಕೊಳ್ಳುವರು ಕೊಟ್ಟೆವೆಂದು ಸಂಬಳವನ್ನು.

- ಚುಕ್ಕಿ

23 Dec 2017, 12:29 pm

ಪ್ರೀತಿ ಬಿಟ್ಟವಾ......

ಬರಿದಾದ ಹೃದಯದಲ್ಲಿ ಪ್ರೀತಿಯ ಸಸಿ ನೆಟ್ಟಿದವ ನೀ...

ಪ್ರೀತಿಯ ಬಳ್ಳಿ ಹೂ ಬಿಡುವ ಮುನ್ನ ನೀನೇಕೋ ಚಿವಿಟಿದೆ ಇಂದು....

ಕಾಯುತಿರುವೆ ಮತ್ತೆ ಆ ಬಳ್ಳಿಯ ಹೂ ಬರಬಹುದೇನೋ ,ಆ ಹೂ ಅನ್ನು ಜೋಪಾನ ಮಾಡಲು.

ನೀನೇ ರೂಪಿಸಿದ ಚಿತ್ತಾರ ಈ ಹೃದಯಕ್ಕೆ,ಇಂದು ನೀನೇ ಬಾರದಾಗಿರುವಾಗ ಈ ಹೃದಯ ಉಳಿಯುವುದೇ ಗೆಳೆಯ

ನೀ ನನ್ನ ಬಿಟ್ಟು ಹೋಗುವ ಕಲ್ಪನೆ ಕೂಡ ಊಹಿಸಲು ಅಸಾಧ್ಯ ಕಣೋ ಗೆಳೆಯ

- Acchu love

23 Dec 2017, 09:58 am

ನೀಲಿ ಉಡುಗೆಯ ವಯ್ಯಾರಿ

ನೀಲಿ ಉಡುಗೆಯನು ತೊಟ್ಟು
ನಡೆದಿಹಳೋ ಹುಡುಗಿ
ಒಂದೊಂದೇ ಲಗು ಹೆಜ್ಜೆಗಳನು ಇಟ್ಟು,
ಒನಪು ವಯ್ಯಾರದ ನಡಿಗೆ

ಹೆರಳು ಹರಡಿದೆ ಕೆರಳಿ
ಹುರಿ ಮಯ್ಯ ಬೆನ್ನ ತುಂಬಾ
ಜಿಪುಣ ಗ್ರೇಸರ ಶಿಲ್ಪಿಯೊಬ್ಬ
ಕಡೆದನೇನೋ ಸಣ್ಣ ಸೊಂಟ
ತಪ್ಪನರಿತು ತಿದ್ದಿಕೊಂಡ
ಕಟಿಯ ಕೆಳಗೆ ಹಿಂಭಾರ ತಂದ.

ಹರೆಯ ಸೊಕ್ಕಿ, ಪ್ರಣಯ ಉಕ್ಕಿ
ತೃಪ್ತಗೊಂಡ ಸಿಂಹಿಣಿಯೊಂದು
ಆಗಷ್ಟೇ ಉಂಡು, ತುಸು ಗರ್ವವನು ಕೊಂಡು
ನಡೆದಂತೆ ಕಾಣುತಿಹುದು
ನಲ್ಮೆಯರಸಿಯ ನಡಿಗೆಯಿಂದು.

ಏನೋ ಯೋಚನೆ,
ಎತ್ತಲೋ ಸೂಚನೆ
ಏನೇನು ಅರಸಿಹುದೋ ಈ ಚೆಲುವಿಯ ಚಿತ್ತ.
ಹಿಂದೆಯೇ ಇರುವೆನು,
ಜೊತೆಯಲೇ ಬರುವೆನು
ನನ್ನರಸಿ ನಡೆದು ಕರೆದುಕೊಂಡು ಹೋದತ್ತ !

- ಶ್ರೀಗೋ.

23 Dec 2017, 07:28 am

ಕನ್ನಡಿ ಎದುರಿನ ಹುಡುಗಿ

ಯಾಕೆ ಹಾಗೆ ತಟ್ಟನೆ ತಿರುಗಿ
ನಿಂತೆ ಹೇಳೇ ಚೆಲುವೆ ?
ಕನ್ನಡಿ ನಿನಗೇನಾದರೂ ಸೋತು
ಕಣ್ಣು ಹೊಡೆಯಿತೆ ?
ನಿನ್ನ ಸುಂದರ ಮೊಗದ ಹಿಂದೆ
ಅಡಗಿರುವ ನೋವು
ಅಚಾನಕವಾಗಿ ನಿನಗೆ ಕಂಡು ಬಿಟ್ಟಿತೇ ?
ಎಲ್ಲೋ ದೂರದಲ್ಲಿ ಒಂದು ಮಗುವು
ಅಮ್ಮಾ ಎಂದ ಹಾಗೆ ದ್ವನಿಯು ಕೇಳಿತೆ ?

ಎಲ್ಲಾ ಭಾವುಕ ಸರಕುಗಳ
ಬದಿಗಿರಿಸಿ ಕೊಂಚ ನಗು ಚೆಲ್ಲು ಸುಂದರಿಯೇ,
ನಿನ್ನ ಚಂದ್ರ ವದನದಲ್ಲಿ ಅರಳಿರುವ
ಪ್ರೇಮ ಪುಷ್ಪದ ಗಂಧವನು ನೀನರಿಯೇ.

ಬಿಡು ಉಪಯೋಗವಿಲ್ಲದ ಬಿಗುಮಾನ
ಕೊಡು ಸ್ವಾರ್ಥವಿಲ್ಲದ ನಗುವ ಸಮ್ಮಾನ
ಪಡು ನಿನ್ನಷ್ಟಕ್ಕೆ ನೀನೇ ಹೇಳಿಕೊಂಡು ಸಮಾಧಾನ
ಯಾರಿಗಿಲ್ಲ ಇಲ್ಲಿ ನಿನ್ನ ಕಶ್ಟ ಕೇಳುವ ವ್ಯವಧಾನ.

- ಶ್ರೀಗೋ.

23 Dec 2017, 07:12 am

ಜಗಳ

ಕಾರಣವೇ ಬೇಕಿಲ್ಲ ಜಗಳಕ್ಕೆ ಈ ಜನಕ್ಕೆ
ಜರುಗಿದ್ದು ಒಂದಾದರೆ ಆಡುವುದು ಇನ್ನೊಂದು
ಮಾತು, ಹೇಳುವುದು ಬೇರೊಂದು ಕಥನ.

ಮಾತೊಂದೆ ಇವರ ಅಸ್ತ್ರ,
ನರವಿಲ್ಲದ ನಾಲಿಗೆಗೆ ಅಡ್ಡಿ ಏನು ಈ ಮನುಜರಿಗೆ,
ಪ್ರತಿಯೊಂದು ನಲಿವನ್ನು ನೂಕಿ ಹಾಕಿ ಪಾತಾಳಕ್ಕೆ
ಮಾತಲ್ಲಿ ಕೊಂಡು ತರುವರು ತಪ್ಪಿತಸ್ಥ ಭಾವನೆ
ಮನಕ್ಕೆ.

ಪಾಪ ಎಂಬುದು ಕೂಡಿಟ್ಟ ಬುತ್ತಿಯಂತೆ ಒಬ್ಬರ ಕಣ್ಣೀರು ನುಂಗಿ ಈ ಕ್ಷಣದ ನಗುವು ಪಡೆದರೆ
ನೋವು ಮರಳಿ ಬರುವುದು ನಿಮ್ಮೆಡೆಗೆ ಬಿಡದ
ಬೇತಾಳನಂತೆ ಬೆನ್ನೇರಿ.

ಎಲ್ಲರಲ್ಲೂ ಮೆಚ್ಚುಗೆ ಪಡೆಯುವ ಹುಚ್ಚು
ಏತಕೆ ಈ ಮನಸ್ಸಿಲ್ಲದ ಸ್ವಾರ್ಥಪರರಿಗೆ,
ನೋವು ಕೊಟ್ಟ ನಡೆತೆಯೇ ಸರಿಯೆಂದು
ಸಮರ್ಥಿಸಿಕೊಳ್ಳುವವರು ನೋಡಿದವರ
ಮುಂದೆಯೇ.

ಜಗಳ ಮಾಡದಿದ್ದರೆ ನೋವು ಕೊಡದಿದ್ದರೆ
ಊಟ ಸೇರದೇನೋ!
ಕಣ್ಣೀರ ಕಾಣದಿದ್ದರೆ ಕುಡಿದ ನೀರು ಗಂಟಲು
ಇಳಿಯದೇನೋ!
ಒಂದು ತಿಳಿಯದು ನನಗೆ ಇಂದು ಈ ಜೀವವಿಲ್ಲದ
ಜಗಳದಿಂದ ಜೀವಿ ಹಿಂಡುವುದೇಕೆಂದು?

- ಚುಕ್ಕಿ

22 Dec 2017, 11:35 pm

ಅಂಬರದ ಕಣ್ಣವಳು

ಅಂಬರದ ಕಣ್ಣವಳು ಕಾಡಿಗೆ
ಇಲ್ಲದೇನೆ ಮಿಂಚನ್ನು ಚೆಲ್ಲಿದವಳು,
ಬೆಳದಿಂಗಳ ಕರಿಮೋಡ ಸರಿಸಿ ಶಶಿಯಂತೆ ಕಂಡವಳು.

ಕಣ್ಣಲ್ಲೇ ನಕ್ಕು ಕ್ಷಣಬಿಡದೆ ಕಾಡುವವಳು,
ಕೆಂದಾವರೆ ತುಟಿಯವಳು,
ಉಸಿರ ಬಿಸಿಗೆ ಮುನಿದು ಮಲಗುವವಳು,
ಲಾಂಛನವಿಲ್ಲದ ಲಕುಮಿ ಅವಳು.

ಎದೆಯಲ್ಲಿನ ಪ್ರೀತಿಯ ಮೀಟಿ
ಕನಸುಗಳ ಕಪಾಟಿಯಲ್ಲಿ ಕಳೆಯಲಾಗದ ನೆನಪುಗಳನು ತುಂಬಿ ಮುಸಿ ಮುಸಿ ನಗುವವಳು,
ಕಣ್ಣ ಅಂಚಲ್ಲಿ ಕಿಂಚಿತ್ತು ಭಾವನೆಗಳ ಬಂಡಿ ಇಟ್ಟಿರುವಳು ಮಾತಲ್ಲಿ ಹೇಳದ ಮೌನವನ್ನು ಕುಡಿನೋಟದಲ್ಲೇ ತಿಳಿಸುವಳು.

ನನ್ನ ನಗುವಿನ ಹೊಳಪು ತುಂಬಿ ಬಿಗುತಿಹಳು ರೆಪ್ಪೆಯ ಅತ್ತಿತ್ತಾ ಆಡಿಸುತ್ತಾ ನನ್ನ ಉಸಿರಿನ ಸದ್ದು ಎಣಿಸುತ್ತಾ.........

- ಚುಕ್ಕಿ

22 Dec 2017, 09:56 pm