Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬರಹದಉಪಯೋಗ

ಬರಹ ಬಾಳಿನ ಚಿಲುಮೆ.!!
ಮನಸಿರಬೇಕು ಅದರ ಒಲುಮೆ
ತನ್ನವರಿಗೆ ತನ್ನ ತಿಳಿಸಿಕೊಡುವುದು

ಬರಹ ಓದುಗರಿಗೆ ಮಾರ್ಗದರ್ಶನ
ನೊಂದವರಿಗೆ ಆಪ್ತ ದನಿಯ ಸ್ವಾಂತ್ವನ
ಸೋತವರಿಗೆ ಕೊಡುವ ಸ್ಪೂರ್ತಿ

ಬರಹ ಬವಣೆಯ ಅಲಿಸುವ ಮಾಯೆ
ದುಃಖವ ತಡೆಹಿಡಿವ ಛಾಯೆ
ಸರಳತೆಯ ಸಜ್ಜನರ ಸಚ್ಚರಿತ ಹಾದಿ

ಬರಹ ಕವಿ ಭಾವಗಳ ಗುಚ್ಚಾನಿಧಿ
ಬಳಕೆದಾರಾರ ಸ್ವಚ್ಚಂದಾವಧಿ
ಒಟ್ಟಿನಲಿ ಬರಹಗಳೆ ಕವಿಗಳ ಆಸರೆ.!!

ಬರಹ ಕಾವ್ಯ,ಕಾದಂಬರಿ ಕಥನವಾಗಿ
ಮುದಿ ಮನಕೆ ತಗಲುವಂತೆ ಮುಟ್ಟಿಸಿ
ಜ್ಞಾನ ಕೊಡುವ ಪರಮಗುರು..!!

ಬರಹ ಸೌಹಾರ್ದತೆಯ ನಿಲಂಬನ
ಐಕ್ಯತೆಗೆ ಸಮರ ಸಾರುವ ಮಹಾ ತ್ಯಾಗಿ
ಸಾಮರಸ್ಯ ನೆಲೆಸಲೆತ್ನಿಸುವ ಯೋಧ

ಬರಹ ಸರ್ವರಿಗು ಒತ್ತು ನೀಡಿ
ಬಾನೆತ್ತರೆಕೆ ಹಾರಿಸಿಬಿಡುವುದು
ಎಲ್ಲಾದಕ್ಕು ಬರಹವೇ ಅತ್ಯಮೂಲ್ಯ ಶಸ್ತ್ರ

- ನಾಗರಾಜ್

03 Dec 2017, 06:47 pm

ಹಳೆ ಚಾಪಿ ರಗ್ಗು......

ಈ ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ
ಮೊಲಗನು ಅಂದರ
ತಗಣಿ ಕಡಿತೆವು
ಹುಡುಗಿ ನೊಡೊಣ ಅಂದರ
ಅವರವ್ವ ಇರರ್ತಾಳ
ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ

- ಕೌರವ

03 Dec 2017, 04:11 pm

ಮನ್ನಿಸು ಗೆಳತಿ

ಸುಂದರ ಬೆಳದಿಂಗಳು ನಿನಗಾಗಿ ಕಾದು ಕುಳಿತಿದೆ
ಸದ್ದು ಮಾಡದೆ ಬಂದುಬಿಡು ಸುಮ್ಮನೆ
ಹೃದಯವು ನಿನ್ನೆಸರನೆ ಜಪಿಸುತ್ತಿದೆ
ಸತಾಯಿಸಬೇಡ ಬಳಿಗೆ ಬರದೆ!

ಆ ಕುಡಿನೋಟದಲಿ ನನ್ನನೆ ಸೆಳೆದೆ
ಸಂತಸದಲಿ ಹೃದಯದ ಬಾಗಿಲ ತೆರೆದೆ
ಮೌನದಲಿ ಪ್ರೀತಿಯ ಮಳೆ ಸುರಿಸಿದೆ
ಸದ್ದಿಲ್ಲದೆ ಮಾಯವಾಗಿ ಹೋದೆ!

ನನ್ನೆಲ್ಲ ಕನಸುಗಳಿಗೆ ಸ್ಫೂರ್ತಿಯು ನೀನಾಗಿದ್ದೆ
ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ
ಕಾರಣ ಹೇಳದೆ ಯಾಕಿಂದು ದೂರಾದೆ
ನಿನ್ನ ನೆನಪಲ್ಲಿ ಕಾಯುತ್ತಿದೆ ಹೃದಯದರಮನೆ!

ನಿನ್ನ ಕಿರುಬೆರಳಿನೊಂದಿಗೆ ನರ್ತನ ಮಾಡುತ್ತ
ಹೆಜ್ಜೆಯೊಂದಿಗೆ ಕನಸ ಹೆಣೆಯುತ್ತ
ಬಹುದೂರ ಸಾಗಬೇಕಿದೆ ಗೆಳತಿ
ಎಲ್ಲಿದ್ದರೂ ಮನ್ನಿಸಿ ಬಳಿಬಂದು ಬಿಡು ಬೇಗನೇ!

ಪ್ರಿಯಾಂಕ✍

- ಪ್ರಿಯಾಂಕ

03 Dec 2017, 11:39 am

ಒಪ್ಪಿಕೊ ನನ್ನ ನಿನ್ನಿನಿಯನೆಂದು

ಉಂಗುರುಳು ಚಂದಿರನ ನಿಂಗೆ
ಉಡುಗೊರೆಯಾಗಿ ತಂದುಕೊಡುವೆ
ಸೂರ್ಯನ ಶಾಖ ತಾಕದಂತೆ
ನೆರಳಾಗಿ ನಿನ್ನ ನಾ ಕಾಯುವೆ....

ಪೊರ್ಣಮಿಯ ಚಂದಿರನ ಹೊಂಬೆಳಕ..ಓ
ಅಂಗೈಯಲ್ಲಿ ಹಿಡಿದು ನಿನ್ನತ್ತಿರತರುವೆ
ಹಿಮಾಲಯದ ತಂಪು ತಂಗಾಳಿಯ
ನಿನ್ನೆಡೆಗೆ ಕರೆತರುವೆ.........

ನನ್ನೆದೆಯ ಅಂಬಾರಿಯಲ್ಲಿ.......
ನಿನ್ನ ಕೂರಿಸಿ ನಾ ಮೆರೆಸುವೆ
ನಿನಗಾಗಿ ತಪಸ್ಸುಗೈದು ನೀ....
ಕೇಳಿದ ವರವ ನಾ.... ಪಡೆವೆ

ಕಡಲಿನ ಆಳದಲ್ಲಿ ಮುಳುಗಿ
ನಿನಗೋಸ್ಕರ ಮುತ್ತನ್ನ ಹೆಕ್ಕಿ ತರುವೆ
ನನ್ನ ಹೃದಯದಲ್ಲಿ ಗುಡಿ ಕಟ್ಟಿ
ನಿನ್ನ ಪ್ರತಿಷ್ಠಾಪಿಸಿ ಪೂಜಿಸುವೆ
....... ಗೆಳತಿ

ಒಪ್ಪಿಕೊ ನನ್ನ ನಿನ್ನ ಇನಿಯನೆಂದು.....


...ಮಂಜು

- ಮಂಜು

03 Dec 2017, 08:10 am

ಆದರ್ಶದ ಕಟ್ಟೆ

ಹೌದು
ನೀನು ಇದ್ದಿದ್ದೇ ಆಗಿದ್ದರೆ
ನಾನು ಹೀಗಾಗುತ್ತಿರಲಿಲ್ಲ
ನಿನ್ನ ಇರುವಿಕೆ ಅನುಮಾನಗೊಂಡದ್ದು
ನಾನು ನನ್ನಂತೆ ಜೀವಿಸಲಾರದ್ದಕ್ಕೆ
ಬಾಳು ಶುಷ್ಕವೆನಿಸಿ
ಸಾವಿನ ಮನೆ
ಕದ ಮುರಿಯಲೆತ್ನಿಸಿದ್ದು
ನಿನ್ನಲ್ಲಿಯ ನಂಬುಗೆ
ಮರಗಟ್ಟಿದಕ್ಕೆ
ಕಳ್ಳ ಸುಳ್ಳರ ಮನೆ
ಕದ ಕಾಯುವ ನೀನು
ದೀನರೆಡೆ ಕಿಂಚಿತ್
ಕರುಣೆ ಹರಿಸಬೇಕಿತ್ತು
ಇದಕ್ಕೆಲ್ಲ ನಿನ್ನ ಸಮಜಾಯಿಷಿ
ಕರ್ಮ ಸಿದ್ದಾಂತ
ಒಪ್ಪುವುದಿಲ್ಲ ಬಿಡು
ಹಸಿದು ಕಂಗೆಟ್ಟಾಗ
ಮೀರಲೇ ಬೇಕಾಗುತ್ತದೆ
ಆದರ್ಶದ ಕಟ್ಟೆ

- ಯು.ರಾಮು ಸಿರಿಗೆರೆ

02 Dec 2017, 08:40 pm

ಅಲೆಮಾರಿ

ಊರಿಂದ ಊರಿಗೆ ಅಲೆಯುವ ಅಲೆಮಾರಿ
ಯಾವ ಭರವಸೆಯ ನಂಬಿ ನಿನ್ನ ತಯಾರಿ
ಏನ ಕಾತರಿಸಿ ಹೋರಟಿದೆ,ನಿನ್ನ ಸವಾರಿ,
ಯಾವ ಕನಸಿನ ಬೇನ್ನೇರಿ....

ಎಷ್ಟೋ ಜನಗಳ ನೋಡಿರುವೆ.
ಎಷ್ಟೋಂದು ಅನುಭವ ಪಡೆದಿರುವೆ,
ವ್ಯಥೆಗಳ ಕಥೆಯ ಕೇಳಿರುವೆ,
ಜೀವನ ಸತ್ಯವ ಅರಿತಿರುವೆ....

ಯಾರನು ನಂಬದೆ,
ಯಾರನು ಸೇರದೆ,
ಏನನು ಬಯಸದೆ,
ನೀ ಚಿಂತೆಯ ಮಾಡದೆ....
ಚಿತೆಯೆರುವೆ ....ಯಾರ ಮನಸ್ಸನು ನೋಯಿಸದೆ,
ಯಾರಿಗೂ ತಲೆಯ ಬಾಗಿಸದೆ...

- Bhagya Girish

02 Dec 2017, 07:14 pm

ಹರಡು ಆಸೆಗಳು

ಬರಡು ಬದುಕಿನ ಹರಡು ಆಸೆಗಳು ಕೆಣಕಿ ಕಿತ್ತೆಸೆದರೂ ಮಿಕ್ಕಿ ಕಂಬನಿಯಲ್ಲಿ ಮಿಂದು ಮರೆಯಾಗುತ್ತವೆ.

ಹಸಿದ ಹೊಟ್ಟೆಗೆ ಹುಸಿಯ ಮಾತುಗಳು ಹಣ್ಣು ಹಂಪಲುಗಳು ಎತ್ತಲಿಂದಲೋ ತಂದು ಕೊಟ್ಟವು ಸವಿದಂತ ಕಾಲ್ಪನಿಕ ಊಹೆಗಳು.

ಕೆಟ್ಟ ಕೋಪದ ಬಟ್ಟೆ ತೊಡಿಸಿ ನೋವ ನಿನ್ನ ನೇತ್ರದ ವರೆಗೆ ಬಾರದಂತೆ ಮರೆಮಾಚುತಿಹೆನು,
ಚಂಡಮಾರುತ ಚೆಂಡಾಡುತಿರುವುದು ಇಂದು ಮನಸ ಮೂಲೆಯ ಕನಸ ಅಂಗಡಿಯಲ್ಲಿ.

- ಚುಕ್ಕಿ

02 Dec 2017, 06:34 pm

ಅಮ್ಮಾ....

ಓ ಮಮಕಾರದ ಅಕ್ಷಯ ನಿಧಿಯೇ
ನಿನಗೆ ಕೋಟಿ ವಂದನೆ...
ಓ ಸ್ನೇಹದ ಮೂರ್ತ ರೂಪವೇ
ನಿನಗೆ ಕೋಟಿ ವಂದನೆ...

ನಡು ರಾತ್ರಿಯಲಿ ನನ್ನ ಆಳುವಿಗೆ
ಎದೆ ಹಾಲಿನ ಸ್ವಾಂತನ ನೀಡಿ...
ನನ್ನ ಹಟಕ್ಕೇಲ್ಲ ತಲೆಬಾಗಿ ನಿಂತು...
ಅತ್ತಾಗ ಕಣ್ಣೊರಿಸಿ, ನಕ್ಕಾಗ ಕಣ್ಣರಳಿಸಿ...
ಪ್ರೀತಿಯ ಮಳೆ ಸುರಿಸಿ,ಗೆಲುವಿನ ದಾರಿ ತೋರಿಸಿ
ಬೆಳೆಸಿದಳು ನನ್ನ ತಾಯಿ.
ಓ ಜನನೀ... ನಿನಗೆ ಕೋಟಿ ವಂದನೆ...!

ತೆವಲಿ ಬರಲಿ ಕೈ ನೀಡಿದಳು...
ತೊದಲು ನುಡಿಯಲು ತಿದ್ದಿ ಹೇಳಿದಳು...
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
ಹಸಿವು ನೀಗಿಸಿದಳು...
ತನ್ನ ಬಸಿರೊಳಗೂ ನನಗೆ ಉಸಿರಾದಳು...
ಓ ದಿವ್ಯ ಚೇತನವೇ... ನಿನಗೆ ಕೋಟಿ ವಂದನೆ...!

ಪದಗಳು ಸಾಕಾಗದು ನಿನ್ನ ಬಣ್ಣಿಸಲು...
ಈ ಜನ್ಮವು ಸಾಕಾಗದು ನಿನ್ನ ಋಣವ ತೀರಿಸಲು.
ಅಮ್ಮಾ... ನಿನಗೆ ಕೋಟಿ ಕೋಟಿ ವಂದನೆ.

- ಮೌನೇಶ..ಪಿ

02 Dec 2017, 02:09 pm

ಗೋಸುಂಬೆಗಳು

ಗೋಸುಂಬೆಯ ತೆವಳು ನಿಂತಿಲ್ಲ
ಅದರ ಹೆಸರ ಕೊನೆಗೆ ಕ್ಷಣ ಕ್ಷಣಕ್ಕೂ ಕಣ ಕಣವು
ತನ್ನಲ್ಲೇ ತಾನು ಬದಲಿಸಿ ಹೆಜ್ಜೆ ಇಟ್ಟ ಜಾಗದಲ್ಲೇ
ಹೊಚ್ಚ ಹೊಸ ರೂಪ ಧರಿಸಿ ಮುಂದೆ ಸಾಗುವುದು
ಬಹುರೂಪಿಣಿ ಈ ಊಸರವಳ್ಳಿ.

ಹೊತ್ತಿಗೆ ತಕ್ಕಂತೆ ಗತ್ತು ಬದಲಿಸಿ
ಮಾತನಾಡುವವರನ್ನ ನೋಡಿ ನಾಚಿದೆ
ತಾನಿಂದು ಊಸರವಳ್ಳಿ,
ತನ್ನ ಮೈ ಬಣ್ಣಗಳಿಗಿಂತ ಹೆಚ್ಚು ವರ್ಣಗಳು
ಈ ಕುಲಗೇಡಿಗಳ ಕಲುಷಿತ ಮನಗಳಲ್ಲಿ
ಮುಸುಕು ಹಾಕಿ ಕುಂತಿವೆಯೆಂದು!

ಹಲ್ಲಿಯಾದರೂನು ಕೊಳ್ಳೆ ಹೊಡೆಯುವುದಂತೂ ಕಲಿತಿಲ್ಲ,
ಕ್ಷಣಕ್ಕೊಂದು ಅಂಗಿಯಂತೆ ಬದಲಿಸುವ
ಮಂದಿಯ ಗತಿಗೆಟ್ಟ ಮತಿಗಳಿಗೆ
ಮಾತೊಂದು ಬೇಕೇನು ?
ನಟನೆ ನಿಲ್ಲಿಸೆಂದು ಹೇಳಲಿಂದು!

ಪರಿಸರ ಸ್ನೇಹಿ ಈ ವಿವಿಧ ರೂಪಧಾರಿ
ಕ್ರಿಮಿ ಕೀಟಗಳನು ಉಂಡು ಜೀವಿಸುವುದು,
ಘೋರ ಕಟುಕರು ದುರ್ಜನರು
ತನ್ನೆದುರು ಬದುಕುವ ಮನುಜನ
ಭಾವನೆಗಳ ಸಿಹಿಯನು ಉಂಡು
ಕಠೋರ ವಿಷವನು
ಕಾಣಿಕೆಯಾಗಿ ಕೊಟ್ಟು ಹೋಗುವರು!

ಕುಂತ ಜಾಗದಲ್ಲೇ ಕತ್ತು ತಿರುಗಿಸದೆ
ಪರಿಸರ ಪರಿವೇಕ್ಷಣೆ ನಡೆಸುವುದು ಈ ಸರಿಸೃಪ,
ನೆತ್ತಿ ಹೆತ್ತಿ, ನಾಜೂಕು ಮಾತಾಡಿ
ಕಣ್ಣಲ್ಲಿ ಮಣ್ಣೆಸೆದು ಬೆಕ್ಕಿನಂತೆ ಜಾರುವುದು
ನಕಲಿ ನರರ ಕೈಚಳಕದ ಉಜ್ಜುಗದ ತದ್ರೂಪ ಮೂರು ಬಿಟ್ಟ ಅಪರೂಪ ಮಹಾನುಭಾವರ ಕೀರ್ತಿ ಕಾಣಿರಪ್ಪ!

- ಚುಕ್ಕಿ

02 Dec 2017, 12:47 pm

ಸ್ವಾವಲಂಬಿ

ಕಾಲುವೆಗಳ ಪಥದಲಿ ಹೊರಟುನಿಂತೆ
ಕೌಮುದಿಯ ಜೋಡಿಗೂಡಿ,
ಸಾಗಿ ಸಾಗುತ್ತ ಶಾಂತಿ ಎನ್ನ ಚಿತ್ತ
ಮಬ್ಬು ತೆರೆಯಸರಿಸಿ ಆಶಾವಾದದತ್ತ,
ಹಾಲುಹಕ್ಕಿ, ತೊಯ್ದ ಪಿಕ್ಕಿ,
ಕಾಗೆ, ಗೂಗೆ ಅಲ್ಲೊಂದು ಮುದಿ ಗರುಡ,
ಎನ್ನಮೇಲೆ ಹಾರಾಡಿ ಛಾಯೆ ಬೀರ್ಯಾವೆ,
ನನ್ನ ಪಯಣ ಹಾದಿ ಹಿಡಿದ್ಯಾವೆ...!!!

ನಾನು ಯಾರು ?
ನಾನು ಯಾರು ?
ಬೇಡ ಪರಿಚಯ
ಸಲ್ಲಬೇಕಿಲ್ಲ ಪ್ರಚಾರ
ನಾನು ಮೌನಿ...

ಎಡಕ್ಕೊಂದು ಕಾಲುವೆಯ ಕವಲು
ಮುಂದಿನ್ನೊಂದು ಸಣ್ಣ ಎಡೆ,
ಸಾಗಿದೊಡೆ ಅಲ್ಲೊಂದು ಬಯಲು,
ಒಂದಷ್ಟು ಹೂತಿಟ್ಟ ಬೀಜ,
ನನ್ನ ನಿರೀಕ್ಷಿಣೆಯಲ್ಲಿ ಕಾದು ಕಂಗೆಟ್ಟು
ಕೊನೆಗೂ ನನ್ನ ಹೀರಿ ಮೊಳೆತು,
ದವಸದ ಕಣಜತುಂಬಿರಲ್ಕೆ,
ಇನ್ನೇನು ಬೇಕೆನಗೆ,
ನನ್ನಷ್ಟಕ್ಕೆ ಬಿಟ್ಟುಬಿಡಿನನ್ನ,
ಬೇಡ ನಿಮ್ಮ ಬಿರುದು,
ಬೇಡ ನಿಮ್ಮ ಗರಿಮೆ,
ಸ್ಥಾವರನಾನಲ್ಲ ಸ್ಥಾನಗಳ ಎಣಿಕೆಗಳಿಲ್ಲ
ಜಾರಿ ಹಾದು ನೀರವ ಮೌನದಲಿ ಸಾಗಿ,
ಕೆರೆಗೋ ಸಾಗರಕ್ಕೋ,
ಸೇರುವ ಚುಕ್ಕಾಣಿಯ ಹಿಡಿದಿರುವೆ
ನನ್ನೊಬ್ಬನನ್ನೇ ಬಿಟ್ಟುಬಿಡಿ
ಮಗ್ನನಾಗಿರುವೆ......

ಕನ್ನಡದ ಭಕ್ತ

- ಕನ್ನಡದ ಭಕ್ತ

02 Dec 2017, 11:45 am