"ಕತ್ತಲೆಯೇ ಕವಿದ ಈ ನಯನಗಳಿಗೆ
ನಿನ್ನ ಜಿಂಕೆ ಕಣ್ಣಿನ ಮುಗ್ಧ ಸ್ನಿಗ್ಧ ನೋಟ
ಸಿಕ್ಕಾಗಲೆ ಗೆಳತಿ ಬೆಳಕ ಕಂಡಂತೆನಿಸಿ
ಅಮಾವಾಸ್ಯೆಯಂತ ಮನಸಿನ ಅಂಗಳಕೆ
ಬೆಳದಿಂಗಳೇನೆ ಬಂದು ಸುರಿದಂತಾಗಿದ್ದು"
"ತೆರೆದಂಗಳದಿ ನೀ ನಿಂತು
ಚಂದ್ರನ ನೋಡಿ ಚುಕ್ಕಿ ಎಣಿಸಿ
ನಗುವಾಗ ಸಿಗುವ ಆ ಗುಳಿಕೆನ್ನೆ ಅಂದ
ಚಂದ್ರನೇ ಮೈ ಮರೆವ ನಯನಗಳ ಹೊಳಪ
ಕಂಡಾಗ ಅನಿಸದಿರುವುದೇ ಹೇಳು ಗೆಳತಿ
ಏನು ಕೊಟ್ಟರು ಸಿಗದ ಹರುಷ ಕೊಡುವ
ಆ ಚಂದ್ರ ಚುಕ್ಕಿಯಾದರು ನಾನಾಗಬಾರದಿತ್ತೆಂದು"
"ನಕ್ಕು ಬಿಡು ಒಮ್ಮೆ
ಮುತ್ತುದುರಿ ಹೋದಂತೆ
ಉದುರಿದ ಮುತ್ತು ಕಣ್ಣ ಕೋರೈಸುವಂತೆ
ಈ ಬಡಪಾಯಿ ನಯನಗಳಿಗೆ
ಅದೇ ಚಿನ್ನಾಭರಣಗಳ ಸಂತೆ
ಮರೆತುಬಿಡುವೆ ನನ್ನೆಲ್ಲ ಅಂತೆ ಕಂತೆ"
ಇಲ್ಲಿ ಬರೀ ಕಪಟತನವನ್ನೇ ನೋಡಿದೆ,
ಇನ್ನಿಲ್ಲಿ ಬರುವುದಿಲ್ಲ ಲೋಕದಲ್ಲಿನ
ಕುತಂತ್ರಿಗಳ ಸೇನೆಯೆಲ್ಲಾ ಒಂದೆಡೆ ಸೇರಿ
ಬೀಗುತಿದೆ ಸ್ವಾರ್ಥದ ಅಟ್ಟಹಾಸದಲ್ಲಿಂದು.
ಕಂಬನಿಯ ಅಭಿಷೇಕಗೈದರು ಕಲ್ಲಿನಂತಹ ಘೋರ ಮನುಷ್ಯರ ನೆರಳಿಗೂ ಅದು ತಾಗುತಿಲ್ಲ ಈ ನರಕದಲ್ಲಿ ನೀವೇ ನೆಲೆಯಾಗಿರಿ ನೊಂದ
ಮನಸುಗಳ ಶಾಪಗಳ ಮೂಟೆಯೊತ್ತು ನಿಮ್ಮ
ಹಾಸಿಗೆಗಳ ಮೇಲೆ ಸುರಿದುಕೊಳ್ಳಿ ಇನ್ನಿಂದ
ರಾಕ್ಷಸ ರಾಜ್ಯವೆಂದು ಈ ವಿಸ್ಮಯ ನಗರಿಯಲ್ಲಿ.
ಮುಳುಗುತಿರುವೆ ನಾನು
ದುಂಖದ ಕಡಲಿನಲಿ
ಕೂರಗುತಿರುವೆ ನಾನು
ಮೌನದ ಅರಮನೆ ಯಲ್ಲಿ
ಬಂದಿಯಾಗಿರುವೆ ನಾನು
ಎಲ್ಲವು ಇದ್ದರು ಏನು ಇಲ್ಲದ ಬದುಕು
ಬೇಡದ ಮನಸ್ಸು ನಿನೇಕೆ ಹೀಗೆ
ಹೂರಟು ಬಿಡು ನನ್ನ ಬಿಟ್ಟು...
ಬಂದಿಯಾಗಿಯೆ ಇದ್ದು ಬಿಡುವೆ
ಉಸಿರಿರುವ ವರೆಗು....
ಎಷ್ಟೆಷ್ಟೋ ಆಸೆಗಳು ಈಡೇರಿಸಿಕೊಳ್ಳಲು ದಾರಿಯಿಲ್ಲದೆ ಮುಗಿ ಬಿದ್ದಿವೆ ಇಷ್ಟಿಷ್ಟೇ ನಿನ್ನ
ಜೀವನ ಎಂದು ನಮ್ಮ ಕಣ್ಣಲ್ಲಿ ಕನಸುಗಳಾಗಿ.
ಬನದಲ್ಲಿನ ಬಾಗು ಚಂದಿರ ಹುಣ್ಣಿಮೆಯ ದಿನಕೆಂದು ಕಾದು ನೋಡಿ ಸೋತಂತೆ
ನಾವಿನ್ನೂ ಕಾಯುತ್ತೀವಿ ನಾಳೊಂದು ದಿನ
ಬರುವುದೆಂದು ನಮ್ಮ ಕಲ್ಪನೆಗಳ ಬುಟ್ಟಿ ನನಸಾಗಿ
ತುಂಬುವುದೆಂದು.
ತಂಗಾಳಿಯ ಬೆನ್ನೇರಿ ಇಬ್ಬನಿಯು ಮಳೆಯಾಗಳು
ಕಾದಂತೆ ನಾವು ಇಲ್ಲಿ ನೋವುಗಳ ಮರೆವಿಗಾಗಿ ನಲಿವುಗಳ ಬೆಳವಣಿಗೆಗಾಗಿ ಇಲ್ಲದ ಮಂದಹಾಸವನ್ನು ಮಂದಿ ಮುಂದೆಲ್ಲಾ ಎತ್ತಿಡಿದು
ತಿರುಗುತ್ತಿವಿ ಬಯಕೆಗಳ ಬಾಯಾರಿಕೆ ತೀರಿಸಿಕೊಳ್ಳುವುದಕ್ಕಾಗಿ.
ಪಟ್ಟ ಶ್ರಮ ಬೆಂಕಿಯಲ್ಲಿ ಬೂದಿಯಾಗದೆ ಚಿನ್ನದಂತೆ ಹೊಳಪು ಪಡೆದು ನಮ್ಮ ಕೈಯಲ್ಲಿನ
ಅದೃಷ್ಟ ರೇಖೆಯಾಗಳೆಂದು ಮುಖಾಮುಕಿ ಸಂದಿಸುತ್ತೀವಿ ಸವಿಮಾತುಗಳ ಪ್ರಹರಿಯನ್ನು
ಆಸೆಗಳ ಹಿಡಿರಿಕೆಗಾಗಿ.