Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಗು

ಅನುದಿನವು ಕಾರ್ಯಗಳಿಗೆ ಅಲೆದಾಟ
ಜೀವನ ಬೇಸರದಿ ಈ ಜಂಜಾಟ
ಆಪ್ತರ ಮನ ಮನಸೊಳಗೆ ಬರೀ ಹೊಡೆದಾಟ
ಈ‌ ಮುಖದಲಿ‌ ಸದಾ ನಗುವಿಗಾಗಿ ಹುಡುಕಾಟ..
ಮುಗ್ಧ ಮನಸು

- mahesh

11 Oct 2017, 05:29 pm

*ನನ್ನೊಲವು ನಿನಗಾಗಿ*

ಒಲವಿನಿಂದ ಬರೆದ ಕವಿತೆ
ಸಾಗರದ ಅಲೆಗಳಲ್ಲಿ ಸಿಲುಕಿರಲು
ಹೃದಯಗೀತೆ ಹಾಡಬೇಕಿದೆ
ಮನದಲ್ಲಿ ನೀ ತುಂಬಿರಲು!

ಕನಸು ಕಾಣುವ ಕಣ್ಣಿಗೆ
ಕಣ್ತುಂಬಿಕೊಳ್ಳಬೇಕಂತೆ ನಿನ್ನ ಚೆಲುವು
ಕಾದು ಕುಳಿತಿರುವ ಹೃದಯಕೆ
ಹೊತ್ತು ತರುವೆಯಾ ಪ್ರೀತಿಯ ಒಲವು!

ನನ್ನ ಉಸಿರಿನ ಕಣಕಣದಲ್ಲಿ
ಸೂಚನೆ ಇಲ್ಲದ ನಿನ್ನದೇ ಯೋಚನೆ
ನಿನ್ನ ನೆನಪಿನ ಜೊತೆಯಲ್ಲಿ
ಕಾಯುತ್ತಿದೆ ನನ್ನೀ ಹೃದಯದರಮನೆ!

ನಿನ್ನೊಲುಮೆಯ ಒಂದು ನೋಟಕಾಗಿ
ಈ ಜೀವ ಮಿಡಿಯುತಿದೆ ಇಂದು
ಕೊನೆಯುಸಿರುವ ನಿಲ್ಲುವ ಮೊದಲೇ
ಒಂದು ಬಾರಿ ಬರಬಾರದೇ ನೀನಿಂದು!

ಪ್ರಿಯಾಂಕ✍

- ಪ್ರಿಯಾಂಕ

11 Oct 2017, 02:40 pm

ಕಾಲೇಜಿನ ಮೋಜು

ಯಾರೋ ಹೇಳಿದಯೂ ಕಾಲೇಜಿನಲ್ಲಿ ಮೋಜು !!
ಅಂದೆ ಸೇರಿದೆ ನಾ ಕಾಲೇಜು
ಕಾಲೇಜಿನಲ್ಲಿ ಇಂಗ್ಲಿಷೆ ಸ್ಪೀಚು!!
ಹುಡುಗಿಯರ ಹಿಂದ್ದೆಯೇ ನನ್ನ ಬೆಂಚು
ಹುಡುಗಿಯ ಕಾಲಿಗೆ ತಗುಳುತ್ತಿತ್ತು ನನ್ನ ಕಾಲ ಅಂಚ್ಚು!!
ಅಂದೆ ಆಯಿತು ನನ್ನ ಮೈ ಬ್ಯಾಂಡೇಜು
ಮರುದಿನವೇ ನಮ್ ಅಪ್ಪ ಬಿಡಿಸಿದರು ಕಾಲೇಜು !!
ಅಂದೆ ಆಯಿತು ನನ್ನ ಮ್ಯಾರೇಜು

ರಾಜೇಶ್

- Rajesh

10 Oct 2017, 09:15 pm

ಮದರಂಗಿ ಕೈಯವಳು !

ಅಂದದ ಚೆಂದದ ಬಾಲೆಯೇ
ಯಾರು ಬರೆದರು ಹೇಳೇ ಚಿತ್ತಾರವ ||
ಆನೆಯ ದಂತದೊಲು ನುಣುಪಾಗಿ ಹೊಳೆದಂತ||
ಅಂಗೈಗೆ ಬಂದೈತೆ ರಂಗಿ,
ಯಾರು ಬರೆದರು ಹೇಳೇ ಮದರಂಗಿ ||

ಹೂವಿನ ಎಸಳಂತ ಕೈಯಿ.
ಹೊನ್ನ ಕಳಶದಂತಹಾ ನಿನ್ನ ಮೈಯಿ.
ಬೆರಳುಗಳ ಶೃಂಗಾರ, ಯಾಕೆ ಬೇಕು ಬಂಗಾರ||
ಮರಳಿ ನೋಡಿಕೊ ನಿನ್ನ ಕರವ
ಅರಳಿ ನಿಂತಿಹುದಲ್ಲೇ ಕೆಂಪು ಹೂವ ||

ಚೆಲುವಾತಿ ಚೆನ್ನಿಯೇ ಕೇಳು,
ನಿನ್ನ ಮದರಂಗಿ ಗುಟ್ಟು ಕೊಂಚ ಹೇಳು.
ಒಬ್ಬಳೇ ಇರುವಾಗ, ದೇವ ಕಿನ್ನರ ಬಂದು||
ಬರೆದು ಹೋದನೋ ಏನೋ ಹೂವ.
ನೀ ಜಾರಿ ಬಿಡಲಿಲ್ಲ ತಾನೇ ಮನವ||

- ಶ್ರೀಗೋ.

10 Oct 2017, 08:52 pm

ಪ್ರೀತಿ ಶಾಶ್ವತನಾ...??

ಮರೆತರು ಮರೆಯಲಾಗದ ನೆನಪು,ಸುಟ್ಟರೂ ಸುಡದಿರುವ ಕನಸು,ಕೊಂದರು ಸಾಯದ ಮನಸ್ಸು,ಇದಕ್ಕೆ ಕರಣ ನೀನ್ನ ಪ್ರೀತಿ,ಕೆಲವೊಮ್ಮೆ ಹೇಳದೆ ಕೇಳದೆ ಬಂದೆ,ಹೋಗುವಾಗ ಕಣ್ಣೀರಿನ ಜೋತೆಗೆ ಜೀವನವನ್ನೇ ಕೊಂದೆ....ಪ್ರೀತಿ ನೀ ಶಾಶ್ವತನಾ...??

- Mutturaj

10 Oct 2017, 06:49 pm

ಎನು ಇಲ್ಲದ ಕಥನ.....

ಪದಗಳೆ ಇಲ್ಲದ ಸಾಲು ಎಕೆ ಹೀಗೆ
ಬರೆಯುವುದಾದರು ಹೇಗೆ
ತಿಳಿಸುವಿರ ನನಗೆ.....

ಕಥೆಯೆ ಇಲ್ಲದ ಬದುಕು ಎಕೆ ಹೀಗೆ
ಅರ್ಥ ವಾಗುವುದಾದರು ಹೇಗೆ
ತಿಳಿಸುವಿರ ನನಗೆ........

ಉಸಿರೆ ಇಲ್ಲದ ಜೀವ ಎಕೆ ಹೀಗೆ
ಬದುಕುವುದಾದರು ಹೇಗೆ
ತಿಳಿಸುವಿರ ನನಗೆ.........
ಎನು ಇಲ್ಲದ ಮೇಲೆ......

- ರಾಗಸಿರಿ....

10 Oct 2017, 05:56 pm

ನಾವೆಲ್ಲರು ಒಂದೆ

ಅವ್ವ ಹಚ್ಚಿಟ್ಟಿದ್ದಾಳೆ ಹಟ್ಟಿಯಲ್ಲೊಂದು ದೀಪ
ಅಮ್ಮ ಹಚ್ಚಿಟ್ಟಿದ್ದಾಳೆ ಮನೆಯಲ್ಲೊಂದು ದೀಪ‌
ಮಾ‌ ಹಚ್ಚಿಟ್ಟಿದ್ದಾಳೆ ಬಂಗಲೆಯಲ್ಲೊಂದು ದೀಪ
ಕತ್ತಲೆಯ ಕಳೆದು ಮನೆಯ ಬೆಳಗುವ ದೀಪ

ದೀಪಕ್ಕೆ ಎಣ್ಣೆ, ಎಣ್ಣೆಯೊಳಗೊಂದು ಬತ್ತಿ
ಹತ್ತಿಯ ಬತ್ತಿಯ ತುದಿಯಲಿ ನಗುವ ಜ್ಯೋತಿ
ಹಚ್ಚಿರುವರು ಬೇಡಿ ಮನೆಯಲಿರಲೆಂದು ಸುಖ ಶಾಂತಿ
ನೋಡಿ ಹರುಷ‌‌ ಪಡುವರು ದೀಪದ ಕಾಂತಿ

ಮಾನವನ ಅಂತಸ್ತು,ಆಲೋಚನೆಗಳಿರುವಂತೆ ಬೇರೆ ಬೇರೆ
ಹಟ್ಟಿ, ಮನೆ, ಬಂಗಲೆಯ ದೀಪಗಳು ಬೇರೆ ಬೇರೆ
ಆ ಎಲ್ಲ ದೀಪದ ಎಣ್ಣೆ, ಬತ್ತಿ, ಬೆಳಗುವ ಬೆಳಕು ಎಂದೂ ಒಂದೆ
ಎಂದಮೇಲೆ ಮಾನವನೇಕೆ ಸಾರುತ್ತಿಲ್ಲ ಇನ್ನೂ ನಾವೆಲ್ಲರು ಒಂದೆ

ಹಚ್ಚೋಣ‌ ಹಣತೆ ಮನೆಯಂಗಳದಲಿ
ಇನ್ನೆಂದೂ ನಾವೆಲ್ಲರು ಒಂದೆ ಎಂದೂ ಏಕತೆಯಲಿ
ತೊಲಗಲಿ ಮಾನವನೆ ಮಾನವನ ನಾಶ ಮಾಡುವ ಅಸಮಧಾನ
ಒಬ್ಬರೊನ್ನೊಬ್ಬರ ಅಪ್ಪಿ ಸಾರೋಣ ನಾವೆಲ್ಲರು ಸಮಾನ

ಮೂಡಲಿ ಮೊಗದಲಿ ‌ಪ್ರೇಮ‌‌ ತುಂಬಿದ ನಗೆ
ದುಷ್ಟ ತನವೆಲ್ಲ ಒಮ್ಮೆಲೆ‌ ಮನಸಿಂದ ಹಾರಿಹೋಗುವ ಹಾಗೆ
ದೀಪದ ಬೆಳಕು ಬೆಳಗಲಿ ಮನಸೊಳಗೆ
ತೊಲಗಲಿ‌ ಎದೆಯೊಳಗೆ ಉಳಿದ ಕತ್ತಲೆಯ ಸೋಗೆ

- ಶ್ರೀಕಾವ್ಯ

10 Oct 2017, 05:55 pm

ನೀನಚ್ಚಿಟ್ಟ ದೀಪ

ನನ್ನೆದೆಯ ಅಂಗಳದಲಿ
ನೀನಚ್ಚಿಟ್ಟ ಪ್ರೀತಿಯ ದೀಪ
ನನ್ನೊಲವ ಬೆಳಗುತಿದೆಯೊ ಸುಡುತಿದೆಯೊ
ಅರೆಯದಾಗಿರುವೆನು ನಾನೀಗ
ಬೇಗ ಬಂದು ನೋಡಲಾರೆಯ ನೀನೀಗ

ಸುಡುವಾಗ ದೀಪವ ಆರಿಸುವ ಬಯಕೆ
ಆರಿದರೆ ಕತ್ತಲಾವರಿಸುವದೆಂದು ಹೆದರಿಕೆ
ಏನು ಮಾಡಲಿ ತೋಚದಾಗಿದೆ ನನ್ನೊಳಗೆ ಹೀಗೆಕೆ
ಬುದ್ಧಿ ಹೇಳುತಿದೆ ನಿನ್ನದೆಯ ನೀನೆ ಸುಡುತಿರುವೆ ಜೋಕೆ
ಅನಂತರ ನೀನೆ ಪಶ್ಚತ್ತಾಪ ಪಡುಬೇಕು ತಿಳಿಯೆ ‌ಮಂಕೆ

ಶುರುವಾಗಿದೆ ಏನೇನೊ ಅಂಜಿಕೆ ನನ್ನಲಿ
ನಿನ್ನೊಲವ ಪ್ರೇಮದ ದೀಪ ನನ್ನ ಬಾಳ ಬೆಳಗಲಿ
ಬೇಗ ಬಂದು ಉಸಿರಿಬಿಡು ಬೆಳಗುವ ಬೆಳಕು ಈ ದೀಪ‌ ನಿನ್ನ ಬಾಳಲಿ
ನಾನೆಂದು‌ ಹುಡುಕೆನು ಹುಳುಕು ‌ನನ್ನೆದೆಯ ಸುಟ್ಟರು‌ ಸುಡಲಿ
ನಗುನಗುತ ಬಾಳ ಕಳೆಯುವೆನು ಪ್ರೀತಿಯಿಂದ ನಿನ್ನ ತೋಳಲಿ

- ಶ್ರೀಕಾವ್ಯ

10 Oct 2017, 05:55 pm

ನಿನ್ನೊಲವು

ನಿನ್ನೊಲವು ಪ್ರೀತಿ ತುಂಬಿದ ಒರತೆ
ಬೆಳಗುತಿದೆ ನನ್ನೊಲವ ದೀಪದಂತೆ
ನೀನಿರಲು ಎಂದಿಗೂ ನನ್ನ ಜೊತೆ
ಬಾಳಲಿ ನನಗೆಲ್ಲಿಹುದು‌ ಕೊರತೆ

ಕನಸಿರಲಿ‌‌ ನನಸಿರಲಿ ಅದರಲಿ‌ ನಿನ್ನದೆ ಹೆಸರಿರಲಿ
ಸರಸವೋ ವಿರಸವೋ ನೀನೆ ಅದರಲಿ ಆವರಿಸಿರಲಿ
ಸೋಲೊ ಗೆಲುವೋ ಎಲ್ಲವೋ ನಿನಗಾಗಿಯೆ ನನ್ನಲಿ
ನನ್ನ ಉಸಿರು ಸೇರಿ ಹೋಗಲಿ ಕೊನೆಯವರೆಗೆ ನಿನ್ನುಸಿರಲಿ

ತಾಯ ಮಡಿಲು ಅಪ್ಪನ ಕೋಪದ ಸಿಡಿಲು
ಗುರು ತೋರೊ ದಾರಿ, ಗೆಳತಿಯ ಸ್ನೇಹದಮಲು
ನೀನೆ ಎಲ್ಲಾ ನನ್ನ ಬಾಳ ಹಾದಿಗೆ ದೀವಟಿಗೆ ಹಾಗೆ
ಮುನ್ನಡೆಸು ನನ್ನ ಹೀಗೆ ಎಂದೂ ಬೆಳಕಿಗೆ ಕೊನೆಯಿರದ ಹಾಗೆ

- ಶ್ರೀಕಾವ್ಯ

10 Oct 2017, 05:55 pm

*ಮಾತಾಡು ಗೆಳತಿ......

ನಿನ್ನ ಮಾತನು ಕೇಳದ ಈ ದಿನವು
ನೆನೆದು ಅಳುತಿದೆ ನನ್ನ ಮನವು
ನೀ ಕಾಡುವುದು ಕಾಡಿಸುವುದು
ಯಾಕೆಂದು ನನಗೆ ತಿಳಿಯದು...

ಕಾರಣವಾ ಹೇಳಿ ಬಿಡು ನೀನೊಮ್ಮೆ
ಎನಾದರು ತಪ್ಪನು ನಾ ಮಾಡಿದರೆ
ನಾ ಮಂಡಿಯೂರಿ ಅಂಗಲಾಚಿ
ಕ್ಷೇಮಿಸೆಂದು ನಿನ್ನಲಿ ಕೇಳುವೆ ನಾನೊಮ್ಮೆ..

ಆಗದು ಗೆಳತಿ ನಿನ್ನ ಮುದ್ದು
ಮಾತನು ಕೇಳದೆ ನನಗಿರಲು
ಪ್ರತಿಕ್ಷಣವು ಪ್ರತಿಘಂಟೆ ತವಕಿಸುತಿದೆ
ಮನವು ನಿನ್ನ ಜೊತೆಯಲಿ ಮಾತಾಡಲು..

ಹೇ ಮನವೆ ಹೇ ಓಲವೆ
ದೂರಾಗದಿರೂ ನೀ ನನ್ನನು ಬಿಟ್ಟು
ಮುಕ್ಕೋಟಿ ದೇವರ ಮೇಲಾಣೆ ಹೇಳುವೆ
ಬದುಕಲು ಆಗದು ನನಗೆ ನಿನ್ನನು ಬಿಟ್ಟು...

- ಮಳೆಯಲ್ಲಿ ಜೋತೆಯಲ್ಲಿ

10 Oct 2017, 05:05 pm