Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಂದವನ ತೊಟ

( ಚಂದವನ ತೊಟ )

ಚಂದವನ ತೋಟದಲ್ಲಿ.
ಚೆಂದುಳ್ಳಿ ಚೆಲುವೆ ನೀನೆಲ್ಲಿ. ನಿನ್ನನ್ನು ಬಯಸಿ ಬಂದಿರುವೆ ನಾನಿಲ್ಲಿ ಇ ಚಂದವನ ತೋಟದಲ್ಲಿ. //

ನೀ ಅಡಗಿ ಕುಳಿತಿರುವೆ ಈ ವನದಲ್ಲಿ. ಕತ್ತಲೆಯಿಂದ ಕೂಡಿರುವ ಸಮಯದಲ್ಲಿ.
ಎತ್ತ ನೊಡಿದರೂ ದಾರಿ ಕಾಣದಂತಾಗಿದೆ.
ಸುತ್ತಲೂ ಮಿಂಚುಳ್ಳಿ ಹುಳುಗಳು ಬೆಳಕನ್ನು ಚೆಲ್ಲುತಿವೆ .ಇ ಚಂದವ ತೊಟದಲ್ಲಿ.||

ಅಂಗೈಯಲ್ಲಿ ಮಿಂಚುಳ್ಳಿ ಇಡಿದು ಮಿಂಚಂತೆ ಹೊಳೆಯುವ ನಿನ್ನ ಮೂಗುತಿ ಬೆಳಕನ್ನು ಸ್ಪರ್ಷಿಸಿ.ಅದರ ಹೊಳಪನ್ನು ಹರಿಸಿ.
ಇ ಚಂದವನ ತೋಟದ. ಸುಂದರ ಮೈ ಮಾಟದ. ಸೌಂದರ್ಯದ ಸೊಬಗನ್ನು ಹೊರಚೆಲ್ಲುವುದು.ಚೆಲುವೆ.
ನೀನೆ ನನ್ನ ಚಂದನವನದಲ್ಲಿ ಅರಳಿರುವ ತಾವರೆಯ ಹೂವೆ.


( ಸಂತೋಷ್ // ಜೀತು )

- ಸಂತೋಷ್//ಜೀತು

06 Jul 2017, 09:52 pm

ನಿರಾಕರಿಸದಿರೆ ಗೆಳತಿ

ಕಣ್ಣಲ್ಲಿ ನಿನ್ನಿಟ್ಟು ನನ್ನ ಮಗುವಂತೆ
ಕಾಪಡಲೆಂದು ನಿರ್ಧರಿಸಿದ್ದೆ ನಾನು
ಪ್ರೀತಿಯೆಯ ಗೆಳತಿ............

ತಿಳಿಸಿದ್ದೆ ನನ್ನ ಮನಸು ನಿನ್ನ
ಮೌನಕ್ಕೆ ಮಾತು ಕೊಟ್ಟು ನನ್ನ
ಸ್ವೀಕರಿಸಲು ನಿನ್ನಲ್ಲಿ ಮೊರೆಯಿಟ್ಟಿದ್ದೆ..........

ನಿನ್ನ ತೊರೆದು ಹೋಗುವ ಆಸೆಯಂತೂ ನನಗಿಲ್ಲ ಕನಸಲ್ಲೂ ನಿನ್ನ ಕಣ್ಣಲ್ಲೇ ಕನಸಾಗಿ ಉಳಿಯಲು ನಾನು ಆಸೆ ಪಟ್ಟಿದ್ದೆ ನನ್ನೊಳವೆ ನಿನ್ನೊಳಗೆ...................

ನಿನ್ನ ನಿರಾಕರಣೆ ಕೇಳಿದ ಕಿವಿಗಳಿಂದ
ಅತ್ತು ನನ್ನ ಕಣ್ಣೀರು ನೊಂದಿಹುದು
ಆದರೆ ನೀನಿಲ್ಲವೆಂಬ ಕಟುವಾದ ಸತ್ಯವನ್ನು
ನಂಬದ ನನ್ನ ಹೃದಯ ಇಂದಿಗೂ ನಿನಗಾಗಿ ತಾನಿರುವೆನೆಂದು ಬಡೆದುಕೊಳ್ಳುತ್ತಿರುವುದೇ ಗೆಳತಿ............

ನನ್ನೊಳವಿನ ಸಂಗಾತಿ ಮರೆಯದಿರೆ ನನ್ನನೆಂದು ನಿನ್ನ ಕಾಳಕೆಲಗಿನ ಮಣ್ಣಾಗಿಯಾದರು ನೆನಪಿಟ್ಟುಕೊ ನನ್ನ ಮನಸು ಹಾಸಿದ ಪುಷ್ಪರಾಶಿಯ ಹೆದ್ದಾರಿಯಲ್ಲಿ ನಡೆದು ಕೋಣೆಗಾದರು ನನ್ನ ಸೇರಿ ಮುದ್ದಾದ ಗೆಳತಿ.......

- ಚುಕ್ಕಿ

06 Jul 2017, 08:05 pm

ನಮ್ಮ ಸೈನಿಕರು‌

ನಮ್ಮ ಸೈನಿಕರು‌ ಭಾರತ ಮಾತೆಯ ವೀರರು
ದೇಶದ ಗಡಿಯನ್ನು ಕಾಯುವ ಮಹಾ ಯೋಧರು

ತಂದೆ ತಾಯಿಯ ಮುಖವನ್ನು ನೋಡದೆ
ಮಡದಿಯ ಜೊತೆ ಬಾಳದೆ
ಮಕ್ಕಳೊಂದಿಗೆ ಆಟವಾಡದೆ
ನಮ್ಮನ್ನು ಪರಿಪೋಷಿಸುವರು ತಮ್ಮ ಕಾಳಜಿ ವಹಿಸದೆ.

ರಕ್ತವನ್ನು ಬೆವರಿನಂತೆ ಸುರಿಸುವರು
ಋತುಗಳನ್ನು ಲ್ಕೆಕಿಸದೆ ನಮ್ಮನು ಕಾಯುವರು
ತೊಂದರೆ ಕೊಡುವ ವೈರಿಗಳನ್ನು ಸದೆ ಬಡಿಯುವರು...
ಬಂದೂಕುಗಳನ್ನು ಹಿಡಿದು ನಮ್ಮನು ರಕ್ಷಿಸುವರು.

ಶಾಂತಿಯುತ ದೇಶಕ್ಕೆ ಕಾರಣ ನಮ್ಮ ಯೋಧರು
ನಮ್ಮ ಸೈನಿಕರು‌ ಭಾರತ ಮಾತೆಯ ವೀರರು.

-Aish

- aish

06 Jul 2017, 06:32 pm

ಹೇಳಿ ಬಿಡಲೆ ಒಮ್ಮೆ !!!!

ನನ್ನೊಳಗಿನ ನನ್ನೊಲವೆ
ನನ್ನೆದೆಯೊಳಗಿನ ನನ್ನಕ್ಷರವ
ನನ್ನನುಭವದ ಪ್ರಕಾರ
ನಿನ್ನನಡಿಗೆಯ ಬಗ್ಗೆ
ನನ್ನೆರಡು ಮಾತುಗಳನ್ನ ನಿಂಗ್ಹೇಳಿ ಬಿಡಲೇ!!

ನಿನ್ನ ರೂಪ ಲಾವಣ್ಯಕ್ಕೆ
ನಿನ್ನಂತರಂಗದ ಒಳ್ಳೆತನಕ್ಕೆ
ನಿನ್ನೀ ಪ್ರೀತಿ ವಾತ್ಸಲ್ಯಕ್ಕೆ
ನಿಬ್ಬೆರಗಾಗಿ ನಿಂತಿರುವ ನನಗೆ
ನೀನೊಬ್ಬಳೆ ನಿತ್ಯ ನಿರಾಭರಣ ಸುಂದರಿ!!

ಇಂತಿ ♡ಸ್ನೇಹ ಸಿಂಚನ♡
ನಾಗರಾಜ ಬಿ {9743216235}

- ನಾಗರಾಜ ಬಾಕೆ೯ರ್

06 Jul 2017, 04:32 pm

ಜಾಣ್ಮೆ ....

ಜಾರಿದ ಜಗದಲ್ಲಿ ಜಾಣ್ಮೆಯ ಜಾಗ
ಮುರಿದ ನೊಗದಲ್ಲಿ ಜಾಣ್ಮೆಯ ಉಳುಮೆ
ಹರಿದ ಹರಿವೆಗೆ ಜಾಣ್ಮೆಯ ಹೊಲಿಗೆ
ಕರೆವ ಮನಗಳಿಗೆ ಜಾಣ್ಮೆಯ ಪ್ರೀತಿ .....

- ಈಶ,ಎಂ.ಸಿ.ಹಳ್ಳಿ

06 Jul 2017, 03:01 pm

ನಿನ್ನುಸಿರು ನಾನು ಮರೆತಿರುವೆ ನೀನು.....

ಆಮ್ಲಜನಕದ ಜನಕನು ನಾನು
ಈ ಧರೆಯೊಳು
ನಿನ್ನೆಲ್ಲ ಮಲಿನವ ನುಂಗುವೆನು
ಹಗಲಿರುಳು!

ಇಂಪಾದ ಗಾನದಿ ನಿನ್ನ ತಣಿಸುತ್ತ
ಮುಂಜಾನೆಯ ಸಿಹಿಯುಣಿಸುತ್ತ
ಮೈ ಮರೆಸುವ ವಿಧ- ವಿಧದ
ಪಕ್ಷಿ ಸಂಕುಲದ ತವರು ನಾನು!

ಸುಡುವ ನೇಸರನು ಮುನಿದು
ನೆತ್ತಿಗೇರಿದಾಗ
ತಂಪಾದ ಗಾಳಿಯ ಸವಿದು
ತಣಿವೆ ನೀನಾಗ!

ಕುಲ,ಮತಗಳ ಬೇದ ನನಗಿಲ್ಲ
ಮೃಗ -ಪಕ್ಷಿ, ನರರಿಗೆಲ್ಲ
ಮಾಡುವೆನು ಒಳಿತೆಂದು
ಬಯಸೆನು ಕೆಡುಕೆಂದೆಂದು!

ನಿನ್ನ ಜನನದಿ ಮೊದಲಿಗೆ
ಮಲಗುವೆ ನನ್ನ ಮಡಿಲಲ್ಲಿ
ಜೀವನ ಯಾತ್ರೆಯ ಕೊನೆಗೆ
ಸಾಗುವೆ ನೀನು ನನ್ನ ಕರದಲ್ಲಿ!

ನನ್ನ ಕೊಂದು ನಿರ್ಮಿಸುವೆ
ವೈಭವದ ಮನೆಯ ನಿರ್ಜೀವದ ಕರಕುಶಲ ವಸ್ತುಗಳಿಗಾಗಿ
ನನ್ನ ಉಸಿರ ನೀ ತೆಗೆವೆ!

ನಗರೀಕರಣದ ನೆಪದಲ್ಲಿ
ಬಗೆಯುತಿರುವೆ ನನ್ನ ತವರಲ್ಲಿ
ರಸ್ತೆಯ ಹಗಲೀಕರಣದಲ್ಲಿ
ಮಾಡುವೆ ಮಾರಣಹೋಮವನಿಲ್ಲಿ!

ನಿನ್ನ ದುರಾಸೆಯಿಂದ
ನಾ ಬಿಡುವೆ ನನ್ನ ಪ್ರಾಣವ
ನನ್ನ ನಂಬಿದ್ದವರು
ನಿರಾಶ್ರಿತರು ನಿನ್ನಿಂದ!

ನಾ ಕಾಯುವೆ ನಿನ್ನುಸಿರ
ನನ್ನುಸಿರ ಕೊನೆಯವರೆಗೆ
ನೀ ತೆಗೆವೆ ನನ್ನುಸಿರ
ಮರೆಯದಿರು, ನೀಕೊರಗುವೆ ಕೊನೆಗೆ!

ಶಾರಧ

- ಶಕುಂತಲಾ

06 Jul 2017, 01:30 pm

ಹೊಸ್ತಿಲ‌ ದಾಟಿ....

ಹೊರಟಿರುವೆನಮ್ಮ ಹೊಸ್ತಿಲ‌ ದಾಟಿ
ಎಲ್ಲರದೆಯಲ್ಲೂ ಬೀಳ್ಕೊಡುವ ನೋವ ಮೀಟಿ
ನಾ ಕಂಡ ತಾಯ‌‌ ಮಡಿಲಾಗುವುದಿನ್ನು ಅಪರಿಚಿತ
ಎತ್ತಾಡಿಸಿದ ಅಪ್ಪನು ದೂರಾಗುವುದು ಖಚಿತ
ಈ ಎಲ್ಲ ನೋವುಗಳು ನಂಟಿನ ಹೆಸರಲಿ ನನಗೆ ಉಚಿತ

ಹೇಳಿ‌ರುವರು ಕೊಟ್ಟ ಹೆಣ್ಣು ಕುಲಕೆ ಹೊರಗೆಂದು
ತಾವು ಕಂಡ ಕೂಸೆ ನಮ್ಮವಳಲ್ಲವೆಂದು ನೊಂದು
ಪರರ ಮನೆಯ ಸೊತ್ತಂತೆ ಇನ್ನೂ ನಾನೆಂದು
ಆಡಸಿ ಬೆಳೆಸಿದವರೆ ಪರರಾಗುತಿರುವರು ನನಗಿಂದು
ಹುಟ್ಟಿದ ಮನೆಗೆ ಅತಿಥಿಯಾಗುವೆ ತಿಳಿಯೆನು ಯಾಕೆಂದು

ಉಡುಗೆ ತೊಡುಗೆ ಬದಲಾಗಬೇಕಿದೆ ಅಪ್ಪನ ಬೀಳ್ಕೊಡುಗೆಯಲಿ
ಇನ್ಯಾರೊ ಜೊತೆಯಾದವರ‌ ಸಲಹಬೇಕು ಅಮ್ಮನ ಕಾಳಜಿ ಅಕ್ಕರೆಯ ನೆನಪಿನಲಿ
ಒಡಹುಟ್ಟಿದವರು ಕಾಣೆಯಾಗುವರು ಬೇರೆ ಮನೆಯ ಸ್ವತ್ತೆಂಬ ಆತಂಕದಲಿ
ನನ್ನೊಳಗಿನ ನನ್ನನೆ ಮರೆಯಬೇಕಿದೆ ಇನ್ಯಾರದೊ ಮನೆಯ ಸೇರುವ ನೆಪದಲಿ......

- ಶ್ರೀಕಾವ್ಯ

06 Jul 2017, 10:32 am

|| ಮೊದಲ ಮಳೆ ||

ಮೊದಲ ಮಳೆಯ ಮಣ್ಣಿನಿಂದ
ಕಂಪು ಬೀಸಿದೆ ಘಮ್ಮನೆ.
ಮನದ ಹೆಗಲಿಗೆ ಮೃಣ್ಮಯವು
ಹೆಗಲಿಟ್ಟು ನಡೆದಿದೆ ಸುಮ್ಮನೆ.

ಮೊದಲ ಮಳೆ ಮೊದಲಲ್ಲ ತಿಳಿ
ಯುಗಯುಗಗಳಡಗಿದೆ ಕಂಪಲಿ.
ಆಘ್ರಾಣಿಸುತ ಪಯಣಿಸಿದೆ ಮನ
ಗತಕಾಲದೂರಿನ ಬಯಲಲಿ.

ನೂರು ಮರ್ಮರ ಮಾತನಾಡಿದ
ಹಳೆಯ ಎಲೆಗಳ ಧನಿಯಿದೆ.
ಭೀಮ ಮರವು ಜನ್ಮ ತಾಳಿದ
ಬೀಜ ಬಿರಿದ ಸದ್ದಿದೆ.

ಕಂಪು ಕಾರುವ ತಂಪಿನಲ್ಲಿ
ಉತ್ತ ರೈತನ ಉಸಿರಿದೆ.
ದೇಶಸೇವೆಗೆ ದೇಹ ತ್ಯಜಿಸಿದ
ವೀರ ರಕ್ತದ ಬಿಸಿಯಿದೆ.

ಪಥನಗೊಂಡ ರಾಜಕುಲವಿವೆ
ಸಾಮ್ರಾಜ್ಯಗಳಳಿವಿವೆ.
ಕೋಟೆ ಕೊತ್ತಲ ಗುಡಿ ಮನೆ ಮಠ
ಮಣ್ಣಿಗಿಳಿದ ಕುರುಹಿದೆ.

ಭುವಿಯ ಉತ್ಕ್ರಾಂತಿ ಕ್ರಿಯೆಯಲಿ
ಮೊದಲ ಮಳೆಯೆ ಅತಿಥಿಯು.
ಜೀವದುಗಮದ ದಿವ್ಯ ಕಥೆಯನು
ಸಾರುತಿದೆ ಮಣ್ಗಂಧವು.

ಬಿಸಿ ಮಣ್ಣಿನಲಿ ಹುಸಿಯಿರದ ಕಥೆ
ಹೊಸ ಮಳೆಗೆ ತೆರೆದಿದೆ ಮೆಲ್ಲನೆ.
ಮನ ನೆಲದಲಿ ಕವಿಶಿಶುವು ಮುಕ್ಕಿದೆ
ಭಾವಗಳ ಹಸಿ ಮಣ್ಣನೆ!

- ಚಂದ್ರಹಾಸ

- Chandrashekar

06 Jul 2017, 09:46 am

ಒಂಟಿ ಬದುಕು

ಅಳಿಸಿಬಿಡಲೇ ನಿನ್ನ ಹೆಸರು
ಬಿಗಿ ಹಿಡಿದು ಈ ನನ್ನ ಉಸಿರು
ಮರೆತಂತ ನೆನಪು ಸಾಲಾಗಿ ನಿಂತಿದೆ
ಕನಸಲ್ಲಿ ಆಗಾಗ ಎದುರು
ಮನಸಲ್ಲಿ ನೀನಿನ್ನು ಹಸಿರು
ನೀ ಮಾಡಿ ಹೋದಂತ ಕತ್ತಲ ಬದುಕಿಂದ
ಅಳಿಸಿಬಿಡಲೇ ನಿನ್ನ ಹೆಸರು
ಬಿಗಿ ಹಿಡಿದು ಈ ನನ್ನ ಉಸಿರು


ತೊರೆದುಬಿಡಲೇ ಬೇಗ ನಿನ್ನ
ನೀ ಸನಿಹ ಬರುವ ಮುನ್ನ
ಕರೆದಂತೆ ನೀನು ದೂರದಿ ಎಲ್ಲೋ
ನನ್ನನ್ನೇ ಮತ್ತೆ ಮತ್ತೆ ಈಗ
ಕಾಣಿಸು ನೀ ಒಮ್ಮೆ ಬೇಗ
ಒಂಟಿಯಾಗಿ ಸಾಗುವ ಈ ನನ್ನ ಬದುಕಿಂದ
ತೊರೆದುಬಿಡಲೇ ಬೇಗ ನಿನ್ನ
ನೀ ಸನಿಹ ಬರುವ ಮುನ್ನ

ಮನ್ನಿಸಲೇ ನಾನೇ ಸೋತು
ಕೈ ಚಾಚಲೇ ಎಲ್ಲಾ ಮರೆತು
ಹಿಂತಿರುಗಿ ತೆಗೆದ ಪುಟಗಳಲ್ಲಿ ಮಲಗಿದೆ
ನನ್ನೆದೆಯ ಮೊದಮೊದಲ ಮಾತು
ಅಳುತ್ತಲಿದೆ ನೆನಪೊಂದು ಕುಳಿತು
ನೀ ಬಿಟ್ಟು ಹೋದಂತ ಕುಂಟು ಕನಸೊಂದನ್ನು
ಮನ್ನಿಸಲೇ ನಾನೇ ಸೋತು
ಕೈ ಚಾಚಲೇ ಎಲ್ಲಾ ಮರೆತು

- Jayanthi

06 Jul 2017, 07:19 am

ಆಕರ್ಷಣೆ...... ಪ್ರತಿಷ್ಠೆಯ.......

ರಜ ತುಂಬಿದ ಕೋಣೆ
ವಾರಗಳೆ ಕಳೆದಿದಿಯೇನೋ
ಮಜ್ಜನ ಮಾಡಿ ಆ ಕೋಣೆ,
ಆದರು ಅದು ವಿದ್ಯಾ ಕೋಣೆ!

ತಡವರಿಸಿದೆನು ನೋಡಿ
ಅಂದು......
ಇದೇನ ಮುಖ್ಯೋಪಾಧ್ಯಾಯರ ಕೋಣೆ ಎಂದು.....
ಆದರು ಕಲಿಕೆಗೇನು ಕೊರತೆಯಿಲ್ಲ!

ಇಲ್ಲಿ ಓದಿದವರು ನಿಲ್ಲಬಲ್ಲರು
ದೇಶದ ಮುಖ್ಯ ವಾಹಿನಿಯಲ್ಲಿ
ಖಾಸಗಿ ತನದ ನಯ- ನಾಜೂಕ
ಆಕರ್ಷಣೆಯ ಇವರೆಂದು ತೋರರು!

ಯಾರ ಮೆಚ್ಚುಗೆ ಗಳಿಸುವ
ಪ್ರಸಕ್ತತೆ ಅವರಿಗಿಲ್ಲ....
ಜನರ ಮರುಳಾಗಿಸಿ ಕಿಸೆ
ತುಂಬಿಸಿಕೊಳ್ಳುವ ಪ್ರಸಕ್ತತೆಯು ಇಲ್ಲ‌

ಜ್ಞಾನಾರ್ಜನೆಯ ಕೇಂದ್ರ
ಅಂದ- ಚಂದ ಕಾಣದ ಮಂದಿರ
ದುಡಿಯಲು ಸರ್ಕಾರಿ ಕೇಂದ್ರ
ಓದಲು ಬೇಕು ಖಾಸಗಿ ಮಂದಿರ!

ನಯನ ಮನೋಹರವಾದ ಕಟ್ಟಡ
ಆಟಾಟೋಪದ ಸಂಗಡ
ಮೈ ಜುಮ್ ಎನಿಸುವ
ಹೊತ್ತಿಗೆಗಳ ಭಾರ , ತೋರಿಸಿ
ಪಡೆವರು ಲಕ್ಷ - ಲಕ್ಷ ದೇಣಿಗೆಯ!

ಪ್ರತಿಷ್ಠೆಯ ಸಂಗತಿಯಾಗಿದೆ
ಕಲಿಕೆ ಕೆಳಮಟ್ಟದ್ದಾದರು....
ಕಲಿಕಾ ಕೇಂದ್ರದ ನಾಮ
ಪ್ರತಿಷ್ಠೆಯದ್ದಾಗಿರಬೇಕು!


ಶಾರಧ

- ಶಕುಂತಲಾ

05 Jul 2017, 11:03 pm