Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇದಕ್ಕೆಲ್ಲ ಉತ್ತರ

ಸಾಯಬೇಕೆಂದು ಕೊಂಡೆ ಸಾವು
ಸುಳಿಯಲಿಲ್ಲ ನನ್ನ ಹತ್ತಿರ,
ನಡುಗಬೇಕೆಂದುಕೊಂಡೆ ಚಳಿಯು
ಸುಳಿಯಲಿಲ್ಲ ನನ್ನ ಹತ್ತಿರ,
ಅಳಬೇಕೆಂದ್ರು ದುಃಖ
ಸುಳಿಯಲಿಲ್ಲ ನನ್ನ ಹತ್ತಿರ,
ಇದಕ್ಕೆಲ್ಲ ಉತ್ತರ
ಇದಕ್ಕೆಲ್ಲ ಉತ್ತರ
ತಾಯಿ ಇರುವಳು ನನ್ನ ಹತ್ತಿರ.
:-ವೀಣಾ ಲಿಂಗಣ್ಣ

- Veena

08 Sep 2019, 10:14 am

ನನ್ನ ಬದುಕಿಸಿ (ಭ್ರೂಣ )

ಮುಂದುವರೆದಿದೆ ವಿಜ್ಞಾನ,
ಮುಂದುವರಿಯುತ್ತಲೇ ಇದೇ ತಂತ್ರಜ್ಞಾನ,
ಇದರಿಂದಲೇ ಹೆಚ್ಚುತ್ತಲಿದೆ ಭ್ರೂಣ ಹತ್ಯೆ ಪ್ರಕರಣ.

:--ವೀಣಾ ಲಿಂಗಣ್ಣ
ರಾಯಚೂರು.

- Veena

07 Sep 2019, 09:20 pm

ನನ್ನರಸಿ - ನಿನ್ನರಸಿ

ಆಕಾಶಕ್ಕೊಂದಷ್ಟುದ್ದ ಏಣಿ ಹಾಕಿಸಿ
ಸೂರ್ಯನ ಸ್ವಲ್ಪ ಪಶ್ಚಿಮದಲ್ಲಿ ಕೂರಿಸಿ
ರೌರವ ಬಿಸಿಲಿಗೆ ಟಾಟ ಮಾಡಿ ತಣಿಸಿ
ಗಗನದ ತುಂಬೆಲ್ಲ ತಿಳಿ ಕೆಂಪು ಬಣ್ಣ ಬಳಿಸಿ
ತುದಿಗೆಲ್ಲ ಬೆಳ್ಳಿ ಕಪ್ಪು ಮೋಡಗಳ ಜೋಡಿಸಿ

ಮಳೆರಾಯನ ಅಷ್ಟೊತ್ತು‌ ಇಷ್ಟೊತ್ತೆನದೆ ಕರೆಸಿ
ಹಸಿರು ಎಲೆಗಳ ಮೇಲೆ ಕೂತ ಧೂಳ‌ ತೊಳೆಸಿ
ಕನ್ನಡೀಲಿ‌ ಲಕಲಕ ಹೊಳೆಯೋದ ತೋರಿಸಿ
ಅಲ್ಲಲ್ಲಿ ಬಣ್ಣಬಣ್ಣದ ಹೂವಗಳಲಿ ಅಲಂಕರಿಸಿ
ಹಾದಿ ಬೀದಿಯಲ್ಲೆಲ್ಲ ದೀಪವ ಬೆಳಗಿಸಿ

ಹಕ್ಕಿ ಪಿಕ್ಕಿಗಳ ಗಾನ ಬಜಾನ ಹಾಡಿಸಿ
ಎಳೆ ಐಕ್ಳ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಸಿ
ತಂಗಾಳಿ ತಂದು ದಾರಿ ತುಂಬೆಲ್ಲ ಸೂಸಿ
ಚಂದಮಾಮನ ಊಟಕ್ಕೆ ಆಹ್ವಾನಿಸಿ
ಚುಕ್ಕಿಗಳಿಗೆ ಬೆಳಕಿನ ಅಲಂಕಾರ ವಹಿಸಿ

ಎದೆಯೊಳಗೆ ಪ್ರೇಮ ರಂಗಮಂಟಪ ಕಟ್ಟಿಸಿ
ನಿನ್ನ ಸವಿ ಮಾತಿನ ನಿನಾದ ಬಯಸಿ
ಅನುರಾಗದ ಆಲಿಂಗನದ ನೆನಪ ರಮಿಸಿ
ನೀ ಬರುವ ದಾರಿಯಲೇ ನಿನ್ನ‌ ಹರಸಿ
ಕಾದು ಕುಳಿತಿರುವೆ ನಿನಗಾಗಿ ತಪತಪಿಸಿ ನನ್ನರಸಿ

- ಶ್ರೀಕಾವ್ಯ

07 Sep 2019, 06:20 pm

ಕಂಡೆನಾ ಶ್ಯಾಮನ...

ಕಂಡೆನಾ ಶ್ಯಾಮನ
ಮುರಳಿ ಮೋಹನ
ಮಾಧವ ಮುಕುಂದನ
ಹೃದಯ ಕಾಯುವ ಗೋಪಾಲನ

ಮುಗ್ಧ ಮನವ ಗೆದ್ದು
ಮೃದು ಪ್ರೇಮವ ಮೆದ್ದು
ನಿದಿರೆ ಕನಸುಗಳೆಲ್ಲ ಕದ್ದು
ಏನು ತಿಳಿಯದವನಂತೆ ನಟಿಸುವವನ

ತುಟಿಯಂಚಲಿ ನಗುವ ಹರಿಸಿ
ಕಣ್ಣಂಚಲೆ ಒಲವ ಸ್ಫುರಿಸಿ
ಮಾತಲೆ ಮುರಳಿ ನುಡಿಸಿ
ಮೋಡಿ ಮಾಡಿ ಸೆಳೆಯುವವನ

ಕುಂಟು ನೆಪವ ತೋರಿ
ಬಳಿಗೆ ಬಂದು ಜಾರಿ
ತನುವ ಸೋಕಲು ನಾರಿ
ಅವಳನೇ ಅಪಹರಿಸುವ ತುಂಟನ

ನಲುಮೆಯಲಿ ಕೈ ಹಿಡಿದು
ಹುಸಿಮುನಿಸಲಿ ಮನವ ಮಿಡಿದು
ನೋವುನಲಿವಿನಲಿ ಬಾಳ ಹೊಸೆದು
ಹೆಜ್ಜೆಹೆಜ್ಜೆಗೆ ಜೊತೆಯಾಗಿ ಹೊರಟವನ

ಕಂಡೆನ ಶ್ಯಾಮನ
ಮುರುಳಿ ಮೋಹನ
ಮಾಧವ ಮುಕುಂದನ

- ಶ್ರೀಕಾವ್ಯ

06 Sep 2019, 04:41 pm

ನನ್ನಯ ಚಿಟ್ಟೆ

ನಿನ್ನನು ನೋಡಿದ ಮೊದ ಮೊದಲು
ಕಂಡೆನು ಮೊಗದಿ ಚಿಟ್ಟೆಯ ಚೆಲುವು
ಹಿಡಿಯಲು ಕಾತುರ ನಾ ನಿನ್ನನ್ನು
ದೂರಕೆ ಸಾಗಿದೆ ನೀ ಇನ್ನಿನ್ನು

ಸಿಕ್ಕಿದೆ ನೀನು ದಿನಗಳಲೆಲ್ಲೊ
ಆಗಲೂ ನಿನ್ನಲಿ ಚಿಟ್ಟೆಯ ಚೆಲುವು
ಆದೆವು ನಾವು ಜೀವದಿ ಒಂದು
ಹತ್ತಿರವಿದ್ದೆ ನೀನೂ ಅಂದು

ಹೀಗೆ ಕಳೆಯಿತು ದಿನಗಳು ಹೇಗೋ
ಅಳಿದಿದೆ ಚಿಟ್ಟೆಯ ಪಕ್ಕಗಳೆರಡು
ಕಂಡೆನು ನಿನ್ನಲಿ ಕೋಪದ ಮೊಗವು
ಹಿಂದಕೆ ಇಟ್ಟೆನು ಹೆಜ್ಜೆಗಳೆರಡು.

ಕೋಪವು ಕೆಲವು ಸಮಯದಿ ಒಂದೆ
ಉಳಿದಿದೆ ಪ್ರೀತಿಯು ಮೊದಲಿನ ಹಂಗೆ

- arun

05 Sep 2019, 08:00 pm

ಶಿಕ್ಷಕ

ನಾ ಕಂಡ ಎರಡನೆ ದೇವರೇ
ಆ ನನ್ನ ಗುರು

ಆ ತಾಯಿ ಜನ್ಮ ನೀಡಿದರೆ
ಗುರು ನೀಡಿದರು ಜೀವನ

ಬದುಕಿನಲ್ಲಿ ನಾ ಕಲಿತ ಪಾಠ
ಆ ಗುರು ನೀಡಿದ ಶಿಕ್ಷಣ
ಎನ್ನುವ ಅಮೂಲ್ಯ ಪಾಠ

ಶಿಕ್ಷಕರು ಜ್ಞಾನದೇಗುಲ ಇದ್ದಂತೆ
ಆ ನಿನ್ನಲ್ಲಿರುವ ಜ್ಞಾನವನ್ನು
ಚಿಣ್ಣರು ಎಂಬ ಶಿಲೆಗೆ ನೀ ಆಸರೆಯಾಗಿ
ಅವರನ್ನು ಹೂವಿನಂತೆ ಅರಳಿಸಿದ
ವಿಶ್ವದ ಮಹಾನ್ ಗುರು ನೀನು

ನಿನಗಿದೋ ನನ್ನ ನಮನ

ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️

- An

05 Sep 2019, 10:25 am

ಗುರು ಇದು ನಿಮಗೆ ಶರಣುಶರಣಾರ್ಥಿ

ಪುಸ್ತಕದ ಪುಟದಲ್ಲಿನ ಪ್ರತಿ ಸಾಲುಗಳನ್ನು ತಿಳಿಸಿದ...
ಮನದೊಳಗೆ ಜ್ಞಾನದ ಅರಿವನ್ನು ಬೆಳೆಸಿದ...
ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ...
ಜೀವನದುದ್ದಕ್ಕೂ ನಡೆ-ನುಡಿಯನ್ನು ಕಲಿಸಿದ...
ನುಡಿಯೊಂದಿಗೆ ಉತ್ತಮ ವಿಚಾರವನ್ನು ತಿಳಿಸಿದ...
ಬೋಧನೆಯ ಮೂಲಕ ಸಾಧನೆಯ ಹಾದಿಯಲ್ಲಿ ನಡೆಸಿದ...
ನನ್ನ ಎಲ್ಲ ಗುರುಗಳಿಗೆ ಸಾವಿರ ಸಾವಿರ ಶರಣು ಶರಣಾರ್ಥಿ

- amar kalashetti

05 Sep 2019, 08:19 am

ಗುರುಗಳು

ಮಕ್ಕಳೆಂಬ ಶಿಲೆಗಳ ಕತ್ತಲೆ ಕಡೆದು ಪ್ರಜ್ವಲಿಸಿ ಪ್ರಕಾಶಿಸುವ ಜ್ಞಾನದ ಮೂರ್ತಿಯನ್ನಾಗಿ ಮಾಡುವಾತ ಗುರೂ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಪ್ರೀತಿಯಿಂದ ಅಕ್ಷರದ ಸುಧೆಯ ಉಣಿಸಿ ಎಡವಿದರೆ ತಡೆದು ಸಹನೆ ತಾಳ್ಮೆ ಕರುಣೆ ಎಂತಹ ಮಾನವೀಯ ಮೌಲ್ಯಗಳ ಮಕ್ಕಳ ಹೃದಯದೊಳಗೆ ಬೆಳೆಸಿ ಸ್ನೇಹ ಸೌಹಾರ್ದದ ಜೀವನವ ತಿಳಿಸಿ ದೇಶ ಕಾಯುವ ಶಿಸ್ತಿನ ಸಿಪಾಯಿಯಂತೆ ಹೆತ್ತವರ ಉಸಿರಾಗಿ ಊರಿಗೆ ಹೆಸರಾಗಿ ಭಾರತಾಂಬೆಯ ಸುಸಂಸ್ಕೃತ ಸತ್ಪ್ರಜೆಯಾಗಿ ಬದುಕಲು ನಮ್ಮ ಭವಿಷ್ಯ ರೂಪಿಸಿ ದಾತ ಗುರೂ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

- nagamani Kanaka

04 Sep 2019, 09:18 pm

ನೀನಾದರೂ ಇರಬೇಕಿತ್ತು

ಒಂಟಿ ಜೀವ ಭಾವ
ತುಂಬಿ ಮನವ
ಕೊಡುವಾಗ ನೋವ
ನೀನಾದರೂ ನೋಡಬೇಕಿತ್ತು

ದಿಕ್ಕು ಕೆಟ್ಟ ಹೆಜ್ಜೆ
ಒಂಟಿಯಾದ ಕೈಗಳ
ಜೊತೆ ಜೊತೆಯಾಗಿ
ನೀನಾದರೂ ಬರಬೇಕಿತ್ತು

ಕಣ್ಣುಮುಚ್ಚಿ ಕಂಬನಿಯಲಿ
ಎದೆಯ ಭಾರವ ಇಳಿಸುವಾಗ
ಕೊನೆಯ ಪಕ್ಕ ಕಣ್ಣೀರ ಒರೆಸಲು
ನೀನಾದರೂ ಸನಿಹವಿರಬೇಕಿತ್ತು

ಮಾತಾಗದ ಭಾವವನ್ನೆಲ್ಲ
ಗಂಟಲೊಳಗೆ ಉದುಗಿಸಿ
ಮೌನದಲಿ ಹುಸಿನಗುವಾಗ ನಿಜವ
ನೀನಾದರೂ ತಿಳಿಯಬೇಕಿತ್ತು

ಮನವ ಬೆತ್ತಲಾಗಿಸಲಾಗದೆ
ಕತ್ತಲಲಿ ನಿಟ್ಟುಸಿರ ಜೊತೆ
ಸರಸವಾಡುವಾಗ ಬೆಳಕಿಡಿಯಲು
ನೀನಾದರೂ ಇರಬೇಕಿತ್ತು

ಕೈಗಳ‌ ಹಿಡಿದು
ಎದೆಗಪ್ಪಿ ಹೂಮುತ್ತಿಟ್ಟು
ನಿನ್ನೊಡನೆ ನಾನಿರುವೆನೆಂದು
ನೀನಾದರೂ ಹೇಳಬೇಕಿತ್ತು
ಚಂದಿರ ನೀನಾದರೂ ಹೇಳಬೇಕಿತ್ತು

- ಶ್ರೀಕಾವ್ಯ

04 Sep 2019, 07:55 pm

ನನ್ನಪ್ಪ (ಅಪ್ಪ )

ಸೂಟು ಬೂಟು ತೊಟ್ಟು ಆಫೀಸಿಗೆ ಹೋಗಲಾರನು ನನ್ನಪ್ಪ,
ಎಲ್ಲರಂತೆ ಮಕ್ಕಳ ಮುದ್ದು
ಮಾಡಲಾರಿಯನು ನನ್ನಪ್ಪ,
ದೇವರ ಕರೆಗೆ ಊss ಗೊಟ್ಟು ನಮ್ಮನ್ನೆಲ್ಲ
ಆಗಲಿದ ಸತ್ಯವಂತ ನನ್ನಪ್ಪ.....

:-ವೀಣಾ ಲಿಂಗಣ್ಣ

- Veena

02 Sep 2019, 10:18 pm