Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ-ಬೇರೇನು ಹೆಸರುಂಟು ನಿನಗೆ

ಬೇರೇನು ಹೆಸರುಂಟು ನಿನಗೆ

ಸಂಸಾರದ ಕಣ್ಣು ಬೆಂಗಾವಲ ಬೆನ್ನು
ಎರಡು ಕುಟುಂಬಕ್ಕೆ ಸೇತುವೆಯು
ಬೆಳೆದ ಮನೆಗೆ ಹೊನ್ನು
ಹೋದ ಮನೆಯ ಗೃಹಲಕ್ಷ್ಮಿ
ಬೇರೇನು ಹೆಸರುಂಟು ನಿನಗೆ!

ತಾಳ್ಮೆಯ ಸಿರಿ, ಪ್ರೀತಿಯ ಗರಿ
ನೋವ ನುಂಗಿ ನಗೆ ಚೆಲ್ಲುವ ಪರಿ
ಇತರರಿಗಾಗಿ ಕಷ್ಟ ಸಹಿಸುವ ಧರೆ
ಮಕ್ಕಳು ಮರಿ ಬೆಳೆಸುವ ನಾರಿ..
ಮತ್ತೇನು ಹೆಸರುಂಟು ನಿನಗೆ!!!

ಹೃದಯವದು ವಿಶಾಲ, ಸಹನೆಗೆ ಮೀಸಲು
ಗಹನತೆಯ ಅಂತರಾಳ ತನ್ಮಯತೆಯು ಬಹಳ
ತನ್ನವರ ಬದುಕ ಕಟ್ಟುವ ಮಹಿಳೆ
ಬೇರೇನು ಹೆಸರುಂಟು ನಿನಗೆ!

ಇನಿಯನ ಪ್ರಾಣ, ಸಹೋದರರ ನಯನ
ಅಪ್ಪನ ಮುದ್ದು ಅಮ್ಮನ ಪೆದ್ದು
ಮಧುರ ಸೊಸೆ, ಕತೆ ವ್ಯಥೆಗಳ ಅಜ್ಜಿ
ಮತ್ತೇನು ಹೆಸರುಂಟು ನಿನಗೆ..

ತಾಯಿ ಭಾರತಿ, ಕಾವ ಭುವನೇಶ್ವರಿ
ಶಕ್ತಿ ದೇವತೆ, ಮಾತೃ ವಾತ್ಸಲ್ಯ ದಾತೆ
ದುಷ್ಟ ಸಂಹಾರಿಣಿ, ಶಿಷ್ಟ ರಕ್ಷಿಣಿ
ಸಲಿಲ ವಾಹಿನಿ , ವೀಣಾಪಾಣಿ
ಇನ್ನೇನು ಹೆಸರುಂಟು ನಿನಗೆ!
@ಪ್ರೇಮ್@
10.03.2019

- PremUdayKumar

10 Mar 2019, 02:14 pm

ಹೆಣ್ಣೇ ಸೃಷ್ಟಿಯ ಮೂಲ

ಹೆಣ್ಣೇ ಸೃಷ್ಟಿಯ ಮೂಲ
ಶೋಷಣೆ ಮಾಡ್ಬಾರ್ದಲ್ಲ...
ಹೆಣ್ಣಿಗೆ ನಾವೆಲ್ಲ ಗೌರವ ಕೊಡೋಣ
ಹೆಣ್ಣು ಸಮಾಜದ ಕಣ್ಣು
ಹೆಣ್ಣು ಬಾಳಿನ ಹೊನ್ನು....

ಕೊಲ್ಲಬೇಡ ಹೆಣ್ಣನು
ಮಾರಬೇಡ ಹೆಣ್ಣನು
ಹೆಣ್ಣಿನ ಮಾನ ಹಾನಿ ಮಾಡ ಬ್ಯಾಡ...
ಹೆಣ್ಣಿಗೆ ವಂಚನೆ
ಹೆಣ್ಣಿಗೆ ನಿಂದನೆ
ಹೆಣ್ಣಿಗೆ ಯಾತನೆ ನೀ ಮಾಡ ಬ್ಯಾಡ...

ಮಹಿಳಾ ಸಬಲೀಕರಣ
ಹೆಣ್ಣಿನ ಉನ್ನತೀಕರಣ
ಮಹಿಳಾ ಕಲ್ಯಾಣ ನಾವ್ ಮಾಡಬೇಕು ಬೇಕು ಓ....
ಸಮಾಜದ ಮುಂದೆ
ಹೆಣ್ಣುಗಂಡು ಒಂದೇ
ಅಂದುಕೊಂಡು ನಾವು ಬಾಳಬೇಕು ಬೇಕು ಓ.....

- suresh

07 Mar 2019, 08:36 am

ಮಳೆಯ ಮೋಡವೆ

ಮಳೆಯ ಮೋಡವೆ
ಮುನಿದು ನೀ
ಸರಿಯದಿರು ದೂರ
ನಿನ್ನ ಹನಿ ಸಿಂಚನವೇ
ಕಳೆವುದು ಮನ ಭಾರ
ಒಂದೆರಡು ಹನಿಯಾದರೂ
ಚಿಮುಕಿಸಿ ಎದೆಯ
ಹಸಿರನುಳಿಸು ಬಾರ..
ಬೆಂಗಾಡು ನನ್ನೆದೆಯು
ವಿರಹದಾ ಉರಿ ಬಿಸಿಲಿಗೆ
ತಾನಾಗಿ ಹೊತ್ತಿ
ಉರಿದಿಹುದು ಮೆಲ್ಲಗೆ..
ಬೆಂಕಿ ಆರಿಸುವರಿಲ್ಲ
ಸುಟ್ಟು ಕಮರುತಿಹ
ಮನಸಿಗೆ ಕಿಂಚಿತ್ತು ನೆದರಿಲ್ಲ..
ಬಿರುಗಾಳಿ ನೆವಕೆ ನೀ
ಬಿಟ್ಟು ಓಡಿದೆಯಲ್ಲ
ಸುಳಿಗಾಳಿಯಲಿ ಸಿಲುಕಿ
ನಾ ಸುರುಟಿ ಸೊರಗಿದೆನಲ್ಲ..

- ಶ್ರೀಗೋ.

07 Mar 2019, 05:28 am

ಯೋಧ ಯೋಧ ಯೋಧ

ಯೋಧ ಯೋಧ ಯೋಧ
ನೀನೇ ದೇಶದ ಕೆಚ್ಚೆದೆಯ ಕಂದ...
ನಿನ್ನ ವೀರ ದೇಶಾಭಿಮಾನದಿಂದ
ನಾವೆಲ್ಲರು ಚಿರಕಾಲ ಆನಂದ....
ನಿನ್ನ ತ್ಯಾಗ ಬಲಿದಾನದಿಂದ
ಮೆರೆದಾಡುವುದು ತ್ರಿವರ್ಣ ಧ್ವಜ ಹೆಮ್ಮೆಯಿಂದ...‌‌
ನಿನಗೆ ಕೋಟಿ ಕೋಟಿ ನಮನ
ನಿನ್ನ ಹೆಸರು ಎಂದೆಂದೂ ಮನನ||ಪ||

ನಾನು ನನ್ನದು ಎಂಬ ಮೋಹ ದೂರ
ತನುಮನ ದೇಶಪ್ರೇಮ ಸಾಗರ...
ದೇಶದ ರಕ್ಷಣೆ ಅಂದುಕೊಂಡೆ ತಂದೆ ತಾಯಿ
ರಾಷ್ಟ್ರದ ಐಕ್ಯತೆ ನಿನಗಾಯಿತು ಬಂಧುಬಳಗ...
ಘೋರ ಕದನಕೂ ಸೈ, ವೀರ ಮರಣಕೂ ಸೈ
ಭರತ ಭೂಮಿಗೆ ಬರೆದೆ ನಿನ್ನ ಭವಿಷ್ಯ
ದೇಶಾನೇ ಮುಖ್ಯ ದೇಶಾನೇ ನಿತ್ಯ.....

ಚಳಿ ಬಿಸಿಲು ಎಷ್ಟೇ ಇದ್ದರೇನು
ಛಲ ಬಿಡದ ಎಂಟೆದೆಯ ಬಂಟ ನೀನು...
ಮದ್ದುಗುಂಡು ಸಿಡಿದು ಬಂದರೇನು
ದಂಗು ಬಡಿಸುವ ಧೈರ್ಯಶಾಲಿ ನೀನು..
ದೇಹ ತುಂಡಾದರೂ ನಿನಗಿಲ್ಲ ಲೆಕ್ಕ
ದ್ರೋಹಿಗಳ ದಂಡು ನಾಶವಾಗುವ ತನಕ
ವಿಜಯ ಪತಾಕೆ ಹಾರುವ ತನಕ

- suresh

03 Mar 2019, 10:07 pm

ಕಲ್ಲು ಹೃದಯದ ಪ್ರೀತಿ

ಕಲ್ಲು ಹೃದಯದ ಮೇಲೆ ಕೆತ್ತನೆಯ ಪ್ರೀತಿ
ಎಂದಿಗು ಅಳಿಸಲಾಗದ ವಿಶ್ವಾಸ ಪುಸ್ತಕದ ನೀತಿ
ಜಗಳ ಮನಸ್ತಾಪದ ನಡುವೆಯೂ ಅರುಳುವದು ಸುವಾಸನೆಯ ರೀತಿ
ಇಬ್ಬರ ನಡುವಿನ ಪ್ರೀತಿ ಕ್ಷಮೆಯಲಿ ನಿಲ್ಲುವದು ಮೂರ್ತಿ.....

ಕೆಲವಮ್ಮೆ ಅನಿಸುವದು ಕಳೆದುಕೊಂಡನೆಂಬ ಭೀತಿ
ಮತ್ತೆ ಮತ್ತೆ ಮನಸು ಗಟ್ಟಿಗೊಳಿಸುವ ಪರಿಯ ರೀತಿ
ಅಳುಕಿದರು ಬಳುಕಿದರು ಮತ್ತೆ ಎದ್ದು ನಿಲ್ಲುವದು ಪ್ರೀತಿ
ಇತಿಹಾಸ ಪುಟಗಳ ತಿರುವಿ ಹಾಕಿದರು ಬರೀ ಕಥೆಗಳ ನೀತಿ.....

✍.....ಈಶ್ವರ ಬಿ

- ishwar

03 Mar 2019, 02:10 am

ಬಿಳಿ ತಾವರೆಗಳು



ಅಮ್ಮ ಎಲ್ಲಿ ಅಪ್ಪ ಎಲ್ಲಿ!
ಬಿಳಿ ತಾವರೆಗಳು ಕೊಲೆ ಆಯಿತೇ ಇಲ್ಲಿ ,ಹೃದಯಗಳು ನುಚ್ಚು ನೂರಾಗಿ ಬಿದ್ದಿವೆ
ರಕ್ತದ ಮಡಿಲಲ್ಲಿ!!

ಯಾರ ಬಂಧುಗಳು ಇವರು, ಯಾರ ಶತ್ರುಗಳು ಅವರು, ಬಂದೂಕುಗಳ ಹಿಡಿದು ತಲೆಗಳ ಕಡಿದು,ಬಿಸಾಡಿಹರು ಮೂಲೆ ಮೂಲೆಗಳಲ್ಲಿ ಯುದ್ಧವೆಂದು ಹೇಳಿ ಪುಟ್ಟ ಕಂದಮ್ಮನ ಬಿಟ್ಟು ಆಕ್ರಂದನದಲ್ಲಿ!!

ಯಾರಿಗಾಗಿ ಹೊಡೆದಾಟ ಯಾರಿಗಾಗಿ ಜೀವ ತೆಗೆಯುವ ಚಟ, ಮಣ್ಣಿಗೋ ಅದರಲ್ಲಿನ ಹೊನ್ನಿಗೋ!!

ಮಣ್ಣಲ್ಲಿ ಮಣ್ಣಾಗಿ ಹೋಗುವ ಜೀವಕೆ ಇನ್ನೊಂದು ಜೀವ ತೆಗೆಯುವ ಪಾಪವೇತಕೆ? ಎಲ್ಲರಂತೆ ಉಸಿರಾಡುವ ಯೋಧರ ಸಾವು ಏತಕೆ?

ಇನ್ನಾದರೂ ಸುಮ್ಮನಾಗಲಿ
ಸ್ವಲ್ಪವಾದರೂ ಶಾಂತವಾಗಲಿ
ಕಟ್ಟುಸಿರು ಕಣ್ಮರೆಯಾಗಲಿ
ನಿಟ್ಟುಸಿರು ನೆಮ್ಮದಿಯಾಗಲಿ
ನೊಂದ ಮನಗಳ ಆಕ್ರಂದನ ಸಡಿಲವಾಗಲಿ.

- ಚುಕ್ಕಿ

01 Mar 2019, 09:17 pm

ಮೂರು ಬಣ್ಣವನು ಎತ್ತಿ ಹಿಡಿಯಲು

ಮೂರು ಬಣ್ಣವನು ಎತ್ತಿ ಹಿಡಿಯಲು
ನೆತ್ತರು ಹರಿಸಿದ ಮಹನಿಯರೇ!!
ಮಡಿದರೂ ಮಿಡಿಯುವ ದೇಶಪ್ರೇಮದ
ಕಿಚ್ಚಿನ ನಡುವಲಿ ನಡೆದವರೇ!!

ನೀಲಿಯ ಬಣ್ಣದ ಶೌರ್ಯ ಚಕ್ರದ
ನಡುವಲಿ ಜನಿಸಿ ಬಂದವರೇ!!
ನಾಲ್ಕು ದಿಕ್ಕಿನಲಿ‌ ಸಿಂಹದಂತೆಯೇ
ಕಾದು ಘರ್ಜಿಸಿಹ ರಕ್ಷಕರೇ!!

ರಾಷ್ಟ್ರಗೀತೆಯಲಿ ದೇಷ ಪ್ರೇಮದ
ಉಸಿರನು ಹೊತ್ತ ನಾಯಕರೇ!!
ಬೇಧ ಭಾವವ ಕಾಣಲಾರದೇ
ಈ ದೇಷವ ಕಾಯುವ ಸಹೋದರರೇ!!

ನಿಮ್ಮ ಶಕ್ತಿಯಲಿ ನಿಮ್ಮ ಯುಕ್ತಿಯಲಿ
ಗೆಲುವದು ನೆಲೆಸಲಿ ಧೀರಜರೇ!!
ಸೋಲನು ದಹಿಸುವ ಕೀರ್ತಿ ಪತಾಕೆ
ಮುಗಿಲನು ಮುಟ್ಟಲಿ ಸೈನಿಕರೇ!!

- ಪಿ.ಜಿ.ಜ್ಯೋತಿ

01 Mar 2019, 12:35 pm

ಅನಿಕೇತನ

ಅನಿಕೇತನ ನೀನಾಗು
ನನ್ನ ಪಾಲಿನ ಚೇತನ
ಬೆಳಗಲಿ ನಿನ್ನಿಂದ ನನ್ನ ಜೀವನ

ಮರೆಯಲಾಗದ
ಅನುಭವ ನೀನಿತ್ತೆ
ತೊರೆಯಲಾಗದ
ಬಾಂದವ್ಯ ನೀ ಬೆಸೆದೆ
ನಾನೆಂದು ನಿನ್ನ ನೆನೆವೆ

ಕಲಿಕೆಗೆ ಸಹಕರಿಸಿ
ತಪ್ಪುಗಳ ಸರಿಪಡಿಸಿ
ಮಮತೆಯಲಿ ಬೆಳೆಸಿ
ಸರಿದಾರಿಯಲಿ ನಡೆಸಿದೆ
ನಾನೆಂದು ನಿನ್ನ ನೆನೆವೆ

ನಿನ್ನಲ್ಲೆ ನಾನಿರುವೆ
ಎಂದೆಂದೂ ಒಂದಾಗಿರುವೆ
ನೀ ಮೌಲ್ಯಗಳ ಬೆಳೆಸಿರುವೆ
ಇದೋ ನಾನಿನಗೆ ನಮಿಸುವೆ
ನಾನೆಂದು ನಿನ್ನ ಮರೆಯೆ






ಶಾರದ

- ಶಕುಂತಲಾ

01 Mar 2019, 09:19 am

ಪರೀಕ್ಷೆ ಬಂತು ಹತ್ತಿರ

ನನ್ನ ನೆಚ್ಚಿನ ಗುರುಗಳೇ
ಪರೀಕ್ಷೆ ಬಂತು ಹತ್ತಿರ
ಓದುವುದಿದೆ ಬೃಹತ್ ಸಾಗರ..
ಪ್ರಶ್ನೆಗಳಿವೆ ನೂರಾರು ಸಾವಿರ
ನೆನಪಿಗೆ ಬರುತ್ತಿಲ್ಲ ಉತ್ತರ..
ನನ್ನ ನೆಚ್ಚಿನ ಗುರುಗಳೇ
ಓದಲು ಪುಸ್ತಕ ತೆರೆದರೆ ತಲೆಯಲಿ ನೂರೆಂಟು ವಿಚಾರ
ಬರೆಯಲು ಪೆನ್ನು ಹಿಡಿದರೆ ಮನದಲಿ ಆಡುವ ಆಸೆ ಅಪಾರ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..|ಪ|

ಉತ್ತರಗಳು ನೋಡಿದರೆ ಮಾರುದ್ದ
ಲೆಕ್ಕಗಳೆಂದರೆ ನನಗೆ ವಿರುದ್ಧ..
ವಿಷಯದ ಅರ್ಥ ಅರ್ಧಂಬರ್ದ
ಗುರುಗಳು ಕಲಿಸೋಕೆ ಸದಾಸಿದ್ಧ
ನಾನು ಪಾಸಾಗೋಕೆ ಕಟಿಬದ್ಧ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಅನುಸರಿಸು ಮನೆಯಲಿ ಓದುವ ವೇಳಾಪಟ್ಟಿ
ಶಿಕ್ಷಕರು ಹೇಳುವರು ನಾಕೈದು ತಟ್ಟಿ..
ಓದಿದರೆ ನಾವ್ ಇವತ್ತು ಬೇಕಾಬಿಟ್ಟಿ
ನಾಳೆ ಫೇಲಾಗೋದು ಗ್ಯಾರಂಟಿ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ನೆಂಟರ ಮನೆಕಡೆ ತಿರುಗಿ ನೋಡಬೇಡ
ನೆಟ್ಟಗೆ ಶಾಲೆಗೆ ಬರೋದು ಮರಿಬೇಡ..
ಆಟ ಆಡುವುದಕ್ಕಂತೂ ಹೋಗಲೇ ಬೇಡ
ಹೋಂವರ್ಕ್ ಬರೆಯುವುದನ್ನು ತಪ್ಪಿಸಲೇ ಬೇಡ..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಟಿವಿ ಮೊಬೈಲ್ ನೋಡುವುದು ಮರೆತು ಬಿಡು
ಉತ್ತರ ಹತ್ತುಸಲ ಬರೆದು ಕಲಿತು ಬಿಡು..
ಆರೋಗ್ಯದ ಕಡೆ ಹೆಚ್ಚು ಒತ್ತು ನೀಡು
ಬೆಳಿಗ್ಗೆ ಬೇಗ ಎದ್ದು ಓದಲು ಕುಂತು ಬಿಡು..
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಓದಲೇಬೇಕು ಇಲ್ಲಾಂದ್ರೆ ಬಿಡಲ್ಲ ಈಜನ
ಬರ್ತಾವೆ ನೂರಾಒಂದು ಬೈಗುಳ ಪ್ರತಿದಿನ..
ಅದಕ್ಕೆ ಪಾಸ್ ಆದ್ರೆ ಸಮಾಧಾನ
ಏನಾದ್ರೂ ಫೇಲಾದ್ರೆ ಅವಮಾನ
ಫಸ್ಟ್ ಬಂದ್ರೆ ಬಹುಮಾನ
ನನಗೂ ಬೇಕು ಒಂದು ಸ್ಥಾನಮಾನ
ಹೇಗೆ ಓದಲಿ ಅವನ ತರ
ಏನು ಬರೆಯಲಿ ಇವನ ತರ
ನೀವು ಹೇಳುವಿರಿ ನಾನಾತರ..

ಅನುಭವಿಸಿದವರು ಅರಿತು ಹೇಳುವರು
ಕೈಕೆಸರಾದರೆ ಬಾಯಿ ಮೊಸರು..
ವಿವೇಕರು ಸಂದೇಶ ಸಾರುವರು
ಏಳುಎದ್ದೇಳು ಗುರಿ ಮಟ್ಟುವ ತನಕ ನಿಲ್ಲದಿರು..
ಹೆತ್ತವರು ಬುದ್ಧಿಮಾತು ಹೇಳುವರು
ಈಗ ಕಷ್ಟಪಟ್ಟವರು ಮುಂದೆ ಸುಖವಾಗಿರುವರು..
ಶತೃಗಳು ದ್ವೇಷದಿಂದ ಹೇಳುವರು
ನಿನ್ನ ಕೈಯಲ್ಲಿ ಆಗಲ್ಲ ನೋಡ್ತಾ ಇರು..
ಗೆಳೆಯರು ಧೈರ್ಯದಿಂದ ಹೇಳುವರು
ಏನೇ ಆಗಲಿ ನಾವ್ ಇರ್ತಿವಿ ಮಾಡು ಗುರು..

ನಿಲ್ಲೋದಿಲ್ಲ ಎಂದು ಈ ಜಗದ ಕಾಲ ಚಕ್ರ
ಬಿಡೋದಿಲ್ಲ ನಿನ್ನ ಏಳುಬೀಳಿನ ಈ ಜೀವನಚಕ್ರ..
ನಿಲ್ಲದೆ ಅಳುಕದೆ ಈಜು ವಿದ್ಯೆಯ ಸಮುದ್ರ
ತಪ್ಪದೆ ಸೇರುವೆ ನೀನು ಗೆಲುವಿನ ತೀರ..

- ಸುರೇಶ್ ಟಿ ವಿ

28 Feb 2019, 08:58 pm

ನಿನ್ನವಳು


ಯಾವ ಜನ್ಮದ ಪುಣ್ಯದ ಫಲವೋ ನಿನ್ನ ಪ್ರೀತಿಯ
ಆಸರೆ ಹೃದಯಕೆ,ಕಂಬನಿಯ ಉಳಿಸದಷ್ಟು, ನಗುವನ್ನು ಅಳಿಸದಷ್ಟು, ಕನಸುಗಳಿಗೆ ನಿಲುಕದಷ್ಟು, ಕಲ್ಪನೆಗೂ ಅರಿಯದಷ್ಟು ಪ್ರೀತಿಸುವೆ ಹುಡುಗ ನಿನ್ನನು.

ಒಲವಿನ ಓಲೆಗಳ ರಾಶಿ ತುಂಬಿ ಕಣ್ಣಲಿಟ್ಟಿರುವೆ ಸಮಯ ಸಿಕ್ಕಾಗಲೆಲ್ಲ ಓದಿ ಮುಗಿಸು, ಇನ್ನೂ ಉಳಿದಿವೆ ತುಟಿಯ ಅಂಚಲ್ಲಿ ಮಾತುಗಳಂತೆ ಮೌನವಾಗಿ ನಿನ್ನ ಸೇರಲು.

ಅರ್ಧಕ್ಕೆ ನಿಲ್ಲಿಸಿದ ಕವಿತೆಗಳ ಪೂರ್ಣ ರೂಪ ನೀನು,ನೆನ್ನೆಯ ಕನಸುಗಳಿಗೆ ನಾಳೆಯ ನನಸು ನೀನು,ಇರಲಿ ಒಂದಿಷ್ಟು ವಿರಹ ನಿನ್ನೆದೆಯಲಿ ಹುದುಗಿಹೋಗುವ ಮುನ್ನ ಸಿಹಿಯಾದ ನೋವಾಗಿ.

ನಿನ್ನ ತುಂಟ ಕಂಗಳು ಕಲಿಸುತ್ತಿರುವ ಒಲವ ಪಾಠಗಳು,ಬಾಯಿಗಿಡುವ ಮುನ್ನ ದೇವರಿಗಿಟ್ಟ ತುತ್ತುಗಳು,ಸವಿ ಸವಿದು ಕೊಡಬೇಕಿಸುತ್ತಿದೆ
ನಿನಗಾಗಿ ಬಚ್ಚಿಟ್ಟ ಮುತ್ತುಗಳು.

ಹೆಜ್ಜೆಗಳ ಎಣಿಸುತ್ತಾ ಗೆಜ್ಜೆ ಸದ್ದು ಮಾಡುತಿರಲು,
ಲಜ್ಜೆ ಇಲ್ಲದ ಮನಸು ನಿನ್ನ ಮನವ ಕದ್ದು ಮುದ್ದಾಡುತಿರಲು, ಸಿಕ್ಕು ಬಿಡು ಇಂದೊಮ್ಮೆ ಬಿಗಿದಪ್ಪಿಕೊಳ್ಳಲು.
❤️❤️❤️❤️❤️❤️

- ಚುಕ್ಕಿ

28 Feb 2019, 05:19 pm