ಅಂದು ನಾ ಕಟ್ಟಿದ ಕಾಲ್ಗೆಜ್ಜೆ ಇಂದು ಅದು ಕಾಡುತ್ತಿದೆ ನನ್ನನ್ನು...!!! ಇಂದು ಅದು ಕಾಡುತ್ತಿದೆ ನನ್ನನ್ನು ಓ ಗೆಳತಿ ಪ್ರೀತಿಯ ನೆನಪಲ್ಲಿ ನಾ ನಿನಗೆ ಕೊಟ್ಟ ಕೊನೆಯ ಕಾಣಿಕೆ...!!! ಎಂದು ಮರೆಯದಿರು ಈ ನನ್ನ ಕಾಣಿಕೆನಾ ಇದೇ ನನ್ನ ಬೇಡಿಕೆ... ಮುಗ್ಧ ಮನಸ್ಸು
ಕಿವಿಗವಡುಚಿಕ್ಕುವ ಜೋರು ಸದ್ದನು ಕೇಳಿ
ಬೆಚ್ಚಿ ಬಿದ್ದು ಎದ್ದು ಕುಳಿತೆ ಈ ನಡು ರಾತ್ರಿಯಲಿ.
ಊರ ಹೊರಗಿನ ನನ್ನ ಒಂಟಿ ಮನೆ ನಡುಗುತ್ತಿದೆ
ತಮಟೆ ಡೋಲು ವಾದ್ಯಗಳ ಸದ್ದು ಗದ್ದಲಕೆ,
ಎದ್ದು ನೋಡಿದರೆ ಸಾಗುತ್ತಿದೆ ದೊಡ್ಡಮ್ಮನ ಜಾತ್ರೆ
ಊರಿಗೆಲ್ಲ ದೊಡ್ಡ ಹಬ್ಬ, ಬೀದಿಯೆಲ್ಲ ಜನ ಜಂಗುಳಿ,
ಮನೆ ಮನೆಗೂ ಮರಿ ಹೊಡೆದು ತಿಂದುಂಡ ಜನರು
ಈ ರಾತ್ರಿಯಿಡೀ ಊರೆಲ್ಲಾ ತಿರುಗಾಡುತ್ತ ಜೀರ್ಣಿಸಿಕೊಳ್ಳುತಿಹರು.
ಹಾರುತ್ತಿವೆ ಬಣ್ಣ ಬಣ್ಣದ ಪಟಾಕಿ
ಅಂಬರಕ್ಕೆ ಮುತ್ತಿಕ್ಕಿ ಸಿಡಿಯುತ್ತಿವೆ ಬಣ್ಣದೋಕುಳಿ ಚೆಲ್ಲಿ,
ಕಿವಿ ತಮಟೆಯನು ಸೀಳಿ ಬೋರ್ಗರೆವ ಸದ್ದು
ಗಾಳಿಯೊಂದಿಗೆ ಬೆರೆಯುತಿರುವ ಗಂದಕ.
ಬೇರೆ ಬೇರೆ ತಂಡಗಳ ವಾದ್ಯ ಗುಂಪು
ಜಾನಪದ, ಆಧುನಿಕ, ಸಿನೆಮಾ ಸಂಗೀತ
ಡಿಸ್ಕೊ ಡ್ಯಾನ್ಸು, ಕರಡಿ ಹುಲಿ ಕುಣಿತ
ಜೊತೆಗೆ ನಡು ನಡುವೆ ಕುಡುಕರ ತಕದಿಮಿತ.
ಲಲನಾಮಣಿಯರೂ ಹೊರಟಿರುವರು ನಿದ್ದೆ ಬಿಟ್ಟು
ವೈಯ್ಯಾರದಿ ಹೊಸ ಜರತಾರಿ ಸೀರೆಗಳನು ಉಟ್ಟು
ಅಂದು ನನ್ನ ನಿದ್ದೆ ಕದ್ದವರೆಷ್ಟೋ,
ಪ್ರೀತಿಗಾಗಿ ಹಂಬಲಿಸಿ ಹೋದಾಗ ತಿರಸ್ಕರಿಸಿ ಮುನ್ನಡೆದವರೆಷ್ಟೋ..
ಎಲ್ಲರಿಗೂ ಅವರವೇ ನೂರಾರು ಕಾರಣಗಳು..
ಎಲ್ಲವನೂ ಮರೆತು ಸಾಗಿದೆ ಜಾತ್ರೆ
ನಡೆಯುತ್ತ ಇರುವ ವರೆಗೂ ಬಣ್ಣಗಳ ನೋಡುತ್ತ
ಅಂದಂದಿನ ಸುಖ ದುಃಖವ ಅಂದಂದೇ ಉಣ್ಣುತ್ತಾ..
ಕೊನೆಗೂ ಜಾತ್ರೆಯ ಜಂಗುಳಿ ದೂರಾಗುತ್ತಿದೆ
ಒಂಟಿ ಮನೆಯ ಬಾಗಿಲಿಗೆ ಮಿಡವೇ ಇಲ್ಲ,
ಜಗದ ಜಂಜಡವಿಲ್ಲದ ಮನೆಗೆ
ಬಾಗಿಲ ಗೊಡವೆಯು ಬೇಕಿಲ್ಲ.
ನಾವು ನಮ್ಮವರು
ಎಂದು ಗರ್ವದಿಂದ
ಹೇಳುವ ಮುನ್ನ
ನಮ್ಮವರು ಯಾರು ಎಂದು ತಿಳಿಯೇ ಓ ಮನಸ್ಸೇ
ನೀ ದುಡಿಯುವಾಗ ಎಲ್ಲರು ನಿನ್ನ ಹಿಂದೆ ಮುಂದಿರುವರು
ನೀ ಕೈ ಕಟ್ಟಿ ಕುಳಿತರೆ
ಯಾರು ಇರುವುದಿಲ್ಲ
ನಿನ್ನ ಹಿಂದೆ ಮುಂದೆ
ಆಗ ತಿಳಿಯುವುದು
ನಿನ್ನವರು ಯಾರು ಎಂದು
ಕವಿದ ಕಾರ್ಮೋಡಗಳು
ನೆನಪಿಸುತಿಹವು
ಕೈಕೈ ಹಿಡಿದು ನಡೆದ ಆ,ಮುಂಗಾರಿನ ದಿನಗಳ
ಚಿಮುಚಿಮು ಜಿಟುಗುಟ್ಟುವ ಆ ಮಳೆ ಹನಿಯಲಿ
ನೆನಪಿದೆ ಬಾಲ್ಯದ
ಚೆಲ್ಲಾಟವಾಡಿದ ಕ್ಷಣಗಳು
ಮತ್ತೆ ಬರಬಾರದೆ ಓ ಬಾಲ್ಯವೇ
ನಿನ್ನೊಂದಿಗೆ ಕವಿಯಾಗುವ ಬದಲು
ಮಗುವಾಗಿರಲೇ ನಾ ಜೊತೆಯಲಿ
ಮತ್ತೆ ನೆನಪಾಗುತಿದೆ ನಿನ್ನೊಂದಿಗೆ ಇಟ್ಟ ಹೆಜ್ಜೆ ಗುರುತುಗಳ ಸಾಲು.....
ಮರೆಯಲಿ ನಾ ಹೇಗೆ ಆ ನಿನ್ನ,ಪಿಸುನುಡಿಯ ಮೆಲ್ನುಡಿಯ ಸಾಲು....
ಕರಗಳ ಜೋಡಿಸಿದ ಆ ದಿನಗಳು ಕರಗಿ ಹೋದಿತೆ ಅಷ್ಟು ಸುಲಭವಾಗಿ...!?
ಕೋಪಿಸಿಕೊಂಡಾಗಲೆಲ್ಲ ಬರೆದ ಕವನಗಳ ಸಾಲು ಮರೆಯಲಿ ಹೇಗೆ ನೀ ಹೇಳು...!?
ನೆನಪುಗಳೊಂದಿಗೆ ನೆನಪು ನೆನಪಿಸುತಿದೆ
ಪ್ರತಿ ಕ್ಷಣ ನಿನ್ನೊಂದಿಗೆ ಕಳೆದ ಹೊಳಪು
ನೀ ಇಲ್ಲದ ಈ ದಿನವೇ ಬರೀ ನೆನಪಾಗಿದೆ
ನೆನಪಲ್ಲೆ ಸಾಗುತಿದೆ ಈ ಬದುಕು
ಬರೆದಷ್ಟು ಮರೆಯದೇ ಹೋಗಿದೆ
ನೀ ಬಿಟ್ಟು ಹೋದ ನೆನಪು
ಪದೇಪದೇ ನೆನಪಿಸುತ್ತಲೇ ಇದೆ ನೀ ಮುದ್ದಾಡಿ ಕಳೆದ ಸಮಯಗಳ ನೆನಪು
ಜಿನುಗುವ ಧರೆಯಂತೆ, ಉರಿಯುವ ರವಿಯಂತೆ
ಬೀಸುವ ಗಾಳಿಯಂತೆ ನೆನಪು ನೆನಪಾಗಿ
ನೋಯಿಸುತಿದೆ, ಬೇಸರಿಸುತಿದೆ , ಮೌನವಾಗಿಸುತಿದೆ ನೆನಪೆಂಬ ನೆನಪು
ದೇಶದ ನಿಜವಾದ ದೇಶಪ್ರೇಮಿ
ದೇಶದ ಗಡಿಕಾಯುವ ಸಿಪಾಯಿ..
ದೇಶಸೇವೆಗೆ ಗರ್ವಪಡುವ ಗವಾಯಿ ಇವನು
ತಾಯ್ನಾಡಿನ ರಕ್ಷಣೆಗೆ ಪ್ರಾಣ ಕೊಡುವ ತ್ಯಾಗಮಯಿ ಇವನು.. " ಪ "
ದೇಶಪ್ರೇಮಿಯ ರಕ್ಷಿಸುವ ಧೀರ ಇವನು
ದೇಶದ್ರೋಹಿಯ ಸಂಹರಿಸುವ ವೀರ ಇವನು..
ನಡೆಸುವನು ಕಠಿಣ ಸಮರಾಭ್ಯಾಸ
ಆಗುವನು ಉಕ್ಕಿನ ಶರೀರದ ಮನುಷ..
ಪ್ರತಿಕ್ಷಣ ಎಚ್ಚರ
ಗನ್ನು ಕ್ಷೀಪಣಿ ಪಿರಂಗಿ ಇವನ ಅಸ್ತ್ರ
ತನುಮನ ದೇಶಪ್ರೇಮದ ಮಂತ್ರ..
ಘೋರ ಕದನಕೂ ಸಿದ್ಧ
ವೀರ ಮರಣಕೂ ಬದ್ಧ..
ದೇಶದಲ್ಲಿ ಶಾಂತಿ ಐಕ್ಯ ಕಾಪಾಡುವ ಧ್ಯೇಯ ಇವನದು..
ಊರನ್ನು ರಕ್ಷಿಸುವ ಶೂರ ಇವನು
ಉಗ್ರನನ್ನು ಬೇಟೆಯಾಡುವ ವ್ಯಾಘ್ರ ಇವನು
ನೆಲ ಜಲ ಗಾಳಿಯಲ್ಲಿ
ಬೆಂಕಿ ಗುಂಡು ಸಿಡಿದು ಬರಲಿ
ಇವ ನುಗ್ಗುವ ಪರಿ ಚಿರತೆಯೇ ಸರಿ..
ಕೊರೆಯೋ ಚಳಿಗೆ ನಡುಗದೆ
ಗುಡುಗೋ ಮಳೆಗೆ ಬಗ್ಗದೆ
ಇವ ಘರ್ಜಿಸುವ ಪರಿ ಸಿಂಹವೇ ಸರಿ..
ರಕ್ತ ಸುರಿಯಲಿ ಮಾಂಸ ಖಂಡ ಉದುರಲಿ
ಇವ ಬಿಡನು ತನ್ನ ಗುರಿ..
ನಗುತ ಪ್ರಾಣ ಬಿಡುವನಿವನು ವಿಜಯ ಪತಾಕೆ ಹಾರಿಸಿ..
ಇವನ ತ್ಯಾಗ ಬಲಿದಾನವನ್ನು ಸ್ಮರಿಸಿ ವಂದಿಸುವ ಕರ್ತವ್ಯ ನಮ್ಮದು..
ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ
ಮುಕುಟದಲ್ಲಿ ಸ್ವರ್ಣ ಕಲಶದ ಶೃಂಗಾರ
ಕಂಬಗಳನ್ನು ಬಿಗಿದಿದ್ದವು ಮುತ್ತಿನ ಹಾರ
ಆ ಮುತ್ತಿನ ಹಾರ ದಲ್ಲಿ ಎರಡು ಪ್ರಕಾರ
ಒಂದು ಕೋಪವೆಂಬ ಮುತ್ತಿನ ಹಾರ
ಮತ್ತೊಂದು ಪ್ರೀತಿವೆಂಬ ಮುತ್ತಿನ ಹಾರ
ಪ್ರೀತಿ ವೆಂಬ ಮುತ್ತಿನ ಹಾರ ಹತ್ತಿರ ಹತ್ತಿರ
ಕೋಪವೆಂಬ ಮುತ್ತಿನ ಹಾರ ದೂರ ದೂರ
ಚಪ್ಪರವ ಕಾಣಲು ಬರುವನು ನೇಸರ
ಇರುಳಲ್ಲಿ ಇಣುಕಿ ನೋಡುವನು ಚಂದಿರ
ರವಿ ಚಂದ್ರರ ನಡುವೆ ಉಂಟು ನಂಬಿಕೆ ಪರಸ್ಪರ
ಆದರೆ ನಮ್ಮಲ್ಲಿ ಪ್ರತಿ ಸಣ್ಣ ವಿಷಯವೂ ಗಂಭೀರ
ಕೊನೆಗೆ ವಚನವು ಆಗುವುದು ಭಯಂಕರ
ದೂರವಾಗಲಿ ಅಸಮಾಧಾನ ಕೋಪ ಅಹಂಕಾರ
ನಂಬಿಕೆ ಗೌರವ ದಿಂದ ನಡೆದರೆ ಪರಸ್ಪರ
ಜೀವನವಾಗುದು ನೆಮ್ಮದಿಯ ಮಹಾಸಾಗರ
ಮರೆತುಬಿಡು ನಿ ಎಲ್ಲವ; ನನ್ನ ಮಧುರ
ಮತ್ತೆ ಆರಂಭವಾಗುದು ಬೇಡ ಶೀತಲಸಮರ
ಬಾ ಸಂಗಾತಿ ಕಟ್ಟುವ ಕನಸಿನ ಚಪ್ಪರ
ಸ್ವರ್ಣ ಕಲಶ ಸ್ಪರ್ಶಿಸಲಿ ಬಾನಂಬರ
ನಾ ಕಟ್ಟಿದ್ದೆ ವಿಶಾಲ ಕನಸಿನ ಚಪ್ಪರ
ಕಂಬವೆಂಬ ನಿನ್ನ ಪ್ರೀತಿಯೆ ಅದಕ್ಕೆ ಆಧಾರ