Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಗುಳ್ನಗೆ

ಮನಕ್ಕೆ ಖುಶಿಯ ಕೊಡುವುದು ಆ ನಿನ್ನ ಮುಗುಳ್ನಗೆ
ಮೆರಸುವುದು ಮನದೊಳಗಿನ ದುಗುಡಗಳನೆ
ಕೊಡುವುದೆನಗೆ ಉತ್ಸಾಹ ಹುಮ್ಮಸ್ಸು
ತರಿಸುವುದು ಎನ್ನ ಮೊಗದಲೂ ಅದೆ ಮುಗುಳ್ನಗೆ
ಕಾಯುತಿರುವೆನಾ ಮತ್ತೆ ನೋಡಲು ನಿನ್ನ ಆ ಮುಗುಳ್ನಗೆ

- ರಘು

22 Dec 2017, 09:27 pm

ಯಂತಾ ಕಾಲ ಬಂತು

ಯಂತಾ ಕಾಲ‌ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು...


ಪಂಚೆ ಪೈಜಾಮುಗಳ ಮುಂದೆ ಪ್ಯಾಂಟ್ ಟೀ ಶರ್ಟ ಗಳು ಬಂತು...
ಲಂಗ ದಾವಣಿಗಳ ಮುಂದೆ ಜೂಡಿದಾರ
ನೈಟಿಗಳು ಬಂತು
ಅಂಚೆ ತಂತಿಗಳ ಮುಂದೆ ಜಂಗಮವಾಣಿಯ ಅಲೆಯು ಉಂಟಾಯಿತು...
ಯಂತಾ ಕಾಲ ಬಂತು ಸುನಾಮಿ ತರ ಆಧುನಿಕ ಕಾಲ ಬಂತು...||

ಅರಿಶಿನ ಕೇಸರಿಯಾ ಸ್ಥಾನದಲ್ಲಿ ಪೇರ್
ಅಂಡ್ ಲವ್ಲಿ ಬಂತು.
ಕುಂಕುಮ ವಿಭೂತಿಯಾ ಮುಂದೆ ಸ್ಟಿಕ್ಕರ್
ಚುಕ್ಕಿಗಳು ಬಂತು..
ಓಡಾಟ ಅಲೇದಾಟಗಳ ನಡುವೆ ವಿಷ ಉಗುಳುವ ಯಂತ್ರಗಳು ಬಂತು..
ಬಾನೆತ್ತರಕ್ಕೆ ಬೆಳೆದ ಮರಗಳಿಗೆ ಕುತ್ತು
ಉಂಟಾಯಿತು..||
ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು..

ಹಣದಾಸೆಗೆ ಮನುಷ್ಯರನ್ನು ಕೊಲ್ಲುವ ಜರ್ಜರಿತ
ಕಾಲ ಬಂತು..
ಮೊಸ ವಂಚನೆಗಳಿಗೆ ದಾರಿಯು
ಸುಲಭವಾಯಿತು...
ಪಾಪ ಪುಣ್ಯಗಳೆಂಬ ನೆಲೆಯು ಲೆಕ್ಕಕ್ಕೆ
ಸಿಗದಷ್ಟು ಬೇಳೆಯಿತು...
ಆಗಾದರೂ ನಾವ್ ತುಂಬ ಒಳ್ಳೆಯ ಜನ ಎಂದು ಹೇಳಿಕೊಂಡು ತಿರುಗುವ ಕಾಲ ಬಂತು.||
ಯಂತಾ ಕಾಲ ಬಂತು ಸುನಾಮಿಯ ತರ ಆಧುನಿಕ ಕಾಲ ಬಂತು...

ಮಂಗಳಕ್ಕೆ ರಾಕೆಟ್ ಕಳುಹಿಸುವಂತಾ
ಬುದ್ದಿವಂತರ ಕಾಲ ಬಂತು..
ಅಂಗಾದರೂ ಮೂಢನಂಬಿಕೆಗಳನ್ನು ಹೊಗಲಾಡಿಸದಾಯಿತು..
ಕಣ್ಣು ಕಿವಿ ಮೂಗೆಂಬ ಪಂಚೆಂದ್ರಿಯಗಳ ಮೇಲೆ
ಇಡಿತ ಕಡಿಮೆಯಾಯಿತು..‌
ಇದರಿಂದ ಅತ್ಯಾಚಾರ ಅನಾಚಾರಗಳ ಸಂಖ್ಯೆಯು ಹೆಚ್ಚಾಯಿತು....||

ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು ..||


ಅಮರ್ತ್ಯ ಮಾರುತಿ ಯಾದವ್..

- ಅಮರ್ತ್ಯ ಮಾರುತಿ

22 Dec 2017, 07:33 pm

ನಿನ್ನ ಹೆಸರು

ಹೇ ಹುಡುಗೀ..!
ಅಲೆ ತಲುಪದ ತೀರದಲ್ಲಿ
ನಿನ್ನ ಹೆಸರ ಬರೆಯ ಹೋದೆ
ಕರಿಗಪ್ಪು ಹಸಿ ಮೋಡವೊಂದು
ನನ್ನ ಅಣಕಿಸಿ ಒಳಗೊಳಗೇ ನಕ್ಕಿತು...

- S@andeeps@ndi

22 Dec 2017, 07:24 pm

ನೀಲವೇಣಿ

ಮೇಘಶ್ಯಾಮನ
ಮುರಳಿ ಲೋಲನ
ಗೊಲ್ಲ ಗೌಡನ
ನಲ್ಲ ನಯನನ
ಧರ್ಮ ಗುರುವಿನ
ಮಧುರ ಮಾತಿನ
ನ್ಯಾಯ ಬೋಧನ
ನೆನೆದು ಹಾಡುತಿರಲು

ನೀಲವೇಣಿಯವಳು ಬಾಗಿ
ಇಣುಕಿ ನೋಡುತಿಹಳು
ಕಣ್ಣ ರಪ್ಪೆಯ ಕುಣಿಸುತಲವಳು
ಅರ್ದಚಂದ್ರನ ಮರೆಮಾಚಿ ನಿಂತು
ಇಂಪ ಧನಿಯ ನಗುವ ಬೀರುತಿಹಳು

ಗೆಜ್ಜೆ ಕಾಲ್ಗಗಳ ಸದ್ದಲೇ ಅವಳು
ಹಿಂದೆಜ್ಜೆ ತಾಳ ಹಾಕುತಲವಳು
ಮಿಂಚಂತೆ ಹೊಳೆದು ಮಾಯವಾದಳು.

- ಡಿ.ಸಿ.ಎನ್@100%

22 Dec 2017, 05:12 pm

ಒಂದು ಕವಿತೆ.......

ನಾ ಗಿಚಿದೆ ಒಂದು ಕವಿತೆ
ನನ್ನೆದೇಯ ಪುಟವ ತೆರೆದು
.................‌‌‌......
ಒಲವಿನ ಲೇಖನಿಯ ಹಿಡಿದು
ನನ್ನೋಲವ ಕಥೆಯನ್ನೆಲ್ಲ
ಬರೆಸಿಟ್ಟೆ ಅದರಲ್ಲಿ...
ಅಲೆಯಂತೆ ಬರುತಿಹುದು
ಪದಗಳಾ ಸಾಲು
ಎಷ್ಟು ಗೀಚಿದರು ಮುಗಿಯುತಿಲ್ಲ
ಪದಪುಂಚಗಳ ಸಾಲು
ಪುಟತಿರುಗಿಸಿದಂತೆಲ್ಲ ಮುರುಕಳಿಸುತಿದೆ
ಸಿಹಿಕಹಿ ನೆನಪುಗಳೇಲ್ಲ
ನಾ ಆಡದ ಒಂದೊದು ಮಾತು
ಪದಗಳಂತೆ ಬರೆದಿಡುವ
ಪುಟಗಳ ಸಾಲು......
ಹೋಸ ಚಿಗುರಿನಂತೆ
ಚಿಗುರೊಡೆಯುತಿದೆ ಭಾವನೆಗಳ
ಸಾಲು ದಿನಗಳು ಮುಗಿದಂತೆ
ಹೊಸ ದಿನಗಳೂ ಬರುವಂತೆ
ಎಂದಿಗು ಮುಗಿಯದ ಈ ನನ್ನ ಕವಿತೆ
ಪುಟಗಳು ಮುಗಿಯದಿರಲಿ ಈ
ಒಲವಿನ ಕವಿತೆಗೆ....
ನಾ ಬರೆದಿಟ್ಟ ನನ್ನೋಲವ ಪುಸ್ತಕದಲ್ಲಿ.......

- ರಾಗಸಿರಿ....

22 Dec 2017, 02:10 pm

ಪುಟ್ಟನ ಮನೆ

ನಮ್ಮನೆ ಒಂದು ಪುಟ್ಟ ಗೂಡು
ಎಲ್ಲರು ಕೂಡಿರೋ ಜೇನುಗೂಡು
ಪ್ರೀತಿ ಮಮತೆಯೆ ಆಧಾರ ನೋಡು
ಕೂಡಿ ಹೇಳುವ ಒಲವಿನ ಹಾಡು

ಅಣ್ಣ ಅಕ್ಕ ಅಮ್ಮ ಅಪ್ಪ
ಚಿಕ್ಕಮ್ಮನ ಜೋತೆ ಚಿಕ್ಕಪ್ಪ
ನನ್ನ ಮುದ್ದಿನ ದೊಡ್ಡಪ್ಪ
ಅಜ್ಜಿಯ ನಗಿಸುವ ತಾತಪ್ಪ
ಇವರ ಕಣ್ಮಣಿ ನಾನಪ್ಪ

ನಮ್ಮ ಮನೆಯಲಿ ಪ್ರತಿದಿನ ಹಬ್ಬವೇ
ನಿತ್ಯವೂ ಸಡಗರ ಸಂಭ್ರಮವೇ
ನಂಬಿಕೆಯ ಹರಸುವ ಮನವದುವೇ
ಸಂಭಂದಗಳ ಗಟ್ಟಿಗೊಳಿಸುವೆ

ಸ್ವಗ೯ವೇ ನಾಚುತ್ತೀದೆ ನಮ್ಮನ್ನು ನೋಡಿ
ನಾನು ಬರಲೇ ನಿಮ್ಮಯ ಜೋಡಿ
ಏನ್ನುತ ಬರುತಿದೆ ಓಡಿ ಓಡಿ
ನಮ್ಮಯ ಜೋತೆಗೂಡಿ
ವಿಶ್ವಾಸದಿ ಕೈ ನೀಡಿ.....
ಪ್ರೀತಿಯೆ ನಮ್ಮ ಒಡನಾಡಿ..

- Bhagya Girish

22 Dec 2017, 11:06 am

ಲಾಲಿಹಾಡು

ಅಮ್ಮ ಮತ್ತೆ ಮತ್ತೆ ಏಕೋ ನೆನಪಾಗುತಿದೆ ಲಾಲಿಹಾಡು
ನಿನ್ನ ಮಡಿಲಲಿ‌ ಮಲಗಿ ಕೇಳಬೇಕೆನಿಸುತಿದೆ ಲಾಲಿಹಾಡು

ಸ್ವರ ಅಪಸ್ವರ ಏನನ್ನೂ ತಿಳಿಯದೆ ನೀ ಹಾಡಿದರೂ ಹಾಡು
ಅದಕ್ಕೆ ಸಾಟಿ ಯಾವುದೂ ಸಿಗದೆ ಮನಸ ಕಾಡುತಿದೆ ಲಾಲಿಹಾಡು

ಚಡಪಡಿಸಲು ಸಾವಿರ ನೋವುಗಳೇ ಇದ್ದರು ಮನಸಲಿ
ನೀ ತಲೆ ಸವರಿ ಹಾಡಿದರೆ ನೋವು ಕೂಡ ಮರೆಸುತದೆ ಲಾಲಿಹಾಡು

ಕಂದನಾಗುವಾಸೆಯಾಗಿ ಎನಗೆ ಮತ್ತೊಮ್ಮೆ ನಿನ್ನ ಮಡಿಲೊಳಗೆ
ಬೇಕು ಬೇಡಗಳ ಅರಿವಿರದೆ ನಗುವಾಸೆಯಾಗಿ ನೆನಪಾಗಿದೆ ಲಾಲಿಹಾಡು

ಪ್ರಪಂಚದಲೇ ತಾಯಿ ಮಡಿಲು, ಲಾಲಿಹಾಡಿಗಿಂತ ಸುಖವಿರಬಹುದೇನೊ
ಆದರೆ ಬೇರೇನು ಬೇಡವಾಗಿದೆ, ಮನಸು ಗುನುಗುತ್ತಿದೆ ಲಾಲಿಹಾಡು

ಮತ್ತೆ ಸೇರುವೆ ಮಗುವಂತೆ ನಿನ್ನ ಪುಟ್ಟ ಮಡಿಲೊಳಗೆ
ಈ ಕಾವ್ಯಳ ಮುದ್ದಿಸಿ, ನಗಿಸಿ ನೀನು ಹಾಡಲಾಗುವುದೆ ಲಾಲಿಹಾಡು

- ಶ್ರೀಕಾವ್ಯ

22 Dec 2017, 01:19 am

ಜನ್ಮ ದೇವತೆ

"ನನ್ನ ಮುದ್ದು ಅಮ್ಮ
ನಿನ್ನ ಮಮತೆಯ ಮರೆಯಲ್ಲಿ ಸಾಗುತ್ತಿರುವೆ
ನಿನ್ನ ಕಂದ ನಾ ಅಮ್ಮ

"ನಿನ್ನ ಪ್ರೀತಿಯ ಪ್ರಣತೆಯಲಿ
ಬೆಳೆಯುತ್ತಿರುವ ಚಂದಿರ
ನಿನ್ನ ಕಂದ ನಾ ಅಮ್ಮ

"ನಿನ್ನ ಕರುಣೆಯ ಕೈಗನ್ನಡಿಯಲ್ಲಿ
ಹೊಳೆಯುತ್ತಿರುವ ನಕ್ಷತ್ರ
ನಿನ್ನ ಕಂದ ನಾ ಅಮ್ಮ

"ನೀ ಕಾಡಿಸಬೇಡ, ನೋಯಿಸಬೇಡ,
ನನ್ನ ಒಬ್ಬಂಟಿ ಮಾಡಿ ದೂರ ಹೋಗುವೆಯ
ನಿನ್ನ ಕಂದ ನಾ ಅಮ್ಮ

ನೀ ಕೊರಗಬೇಡ, ಮರುಗಬೇಡ
ಕಣ್ಣೀರಡಬೇಡ, ನಾ ನಿನೊಂದಿಗಿರುವೆನು ಅನುಗಾಲ
ನಿನ್ನ ಕಂದ ನಾ ಅಮ್ಮ.......

- ರಾಜು ಹಾಸನ

21 Dec 2017, 10:42 pm

ನೋವು

ಮನುಜನೆಂಬ‌ ಪ್ರಾಣಿಯೊಂದು
ಹ್ರುದಯ ಓಡೆದು‌.
ಗೀಜುಗನ ಗೂಡಲ್ಲಿ ಸಿಲುಕಿದಂತೆ‌.
ನುಸುಳಿ‌ ಹೆಸಳನ್ನು ಕಿತ್ತೊಗೆದು
ಮುಗಿಲೆತ್ತರಕ್ಕೆ ಹಾರಲಾರಂಬಿಸಿದ ಕ್ಷಣ.
ರೆಕ್ಕೆ ಮುರಿದು ಪಕ್ಕೆಯೊಡೆದು .
ಪುಕ್ಕ ಎಡೆದು‌ .ಬಿರುಗಾಳಿಗೆ ಸಿಲುಕಿ.
ಧರೆಗೆ ಕಸವಾಗಿ.ಹಸಿದ ಪ್ರಾಣಿಗಳಿಗೆ ಆಹಾರವಾಗಿ.
ಮಡಿದ‌ ಹ್ರುದಯದ ವ್ಯತೆಯ ಹೇಳುತಿರುವೆ ನಾನಿಂದು .

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

21 Dec 2017, 09:16 pm

ನಮ್ಮುರ ಚೆಲುವೆ......

ನಮ್ಮುರ ಚೆಲುವೆ
ಇವಳು ನಡೆದರೆ
ಹುಡುಗರೆಲ್ಲ ಇವಳಿಂದೆ
ಇವಳು ನಕ್ಕರೆ ಮುದುಕರೆಲ್ಲ
ಇವಳ ಮುಂದೆ
ಇವಳು ಕಾಲ್ಗೆಜ್ಜೆ ಸದ್ದಿಗೆ
ಎಲ್ಲರೆದೆಯಲ್ಲ ಡವಡವ
ಇವಳ ನಡುವು ಕಂಡರೆ
ಮನಸೆಲ್ಲ ವಿಲವಿಲ
ಇವಳ ಕಣ್ಣ ನೋಟಕ್ಕೆ
ಪಡ್ಡೆ ಹೈದರೆಲ್ಲ ಬಿದ್ದರಲ್ಲೆ
ಇವಳಾಡೋ ಮಾತಿಗೆ
ಯುವಕರೆಲ್ಲ ಮರುಳಾದರಲ್ಲೆ
ಕೋನೆಗೆ ಎಲ್ಲರ ಪಾಳು
ಬಾವಿಗೆ ನೂಕಿ
ಸಿಟಿ ಹುಡುಗನ ಕೈ
ಹಿಡಿದು ಉರು ಬಿಟ್ಟ ನಲ್ಲೆ.....
ನಮ್ಮುರ ಚೆಲುವೆ....

- ರಾಗಸಿರಿ....

21 Dec 2017, 08:37 pm