ಮನಕ್ಕೆ ಖುಶಿಯ ಕೊಡುವುದು ಆ ನಿನ್ನ ಮುಗುಳ್ನಗೆ
ಮೆರಸುವುದು ಮನದೊಳಗಿನ ದುಗುಡಗಳನೆ
ಕೊಡುವುದೆನಗೆ ಉತ್ಸಾಹ ಹುಮ್ಮಸ್ಸು
ತರಿಸುವುದು ಎನ್ನ ಮೊಗದಲೂ ಅದೆ ಮುಗುಳ್ನಗೆ
ಕಾಯುತಿರುವೆನಾ ಮತ್ತೆ ನೋಡಲು ನಿನ್ನ ಆ ಮುಗುಳ್ನಗೆ
ಪಂಚೆ ಪೈಜಾಮುಗಳ ಮುಂದೆ ಪ್ಯಾಂಟ್ ಟೀ ಶರ್ಟ ಗಳು ಬಂತು...
ಲಂಗ ದಾವಣಿಗಳ ಮುಂದೆ ಜೂಡಿದಾರ
ನೈಟಿಗಳು ಬಂತು
ಅಂಚೆ ತಂತಿಗಳ ಮುಂದೆ ಜಂಗಮವಾಣಿಯ ಅಲೆಯು ಉಂಟಾಯಿತು...
ಯಂತಾ ಕಾಲ ಬಂತು ಸುನಾಮಿ ತರ ಆಧುನಿಕ ಕಾಲ ಬಂತು...||
ಅರಿಶಿನ ಕೇಸರಿಯಾ ಸ್ಥಾನದಲ್ಲಿ ಪೇರ್
ಅಂಡ್ ಲವ್ಲಿ ಬಂತು.
ಕುಂಕುಮ ವಿಭೂತಿಯಾ ಮುಂದೆ ಸ್ಟಿಕ್ಕರ್
ಚುಕ್ಕಿಗಳು ಬಂತು..
ಓಡಾಟ ಅಲೇದಾಟಗಳ ನಡುವೆ ವಿಷ ಉಗುಳುವ ಯಂತ್ರಗಳು ಬಂತು..
ಬಾನೆತ್ತರಕ್ಕೆ ಬೆಳೆದ ಮರಗಳಿಗೆ ಕುತ್ತು
ಉಂಟಾಯಿತು..||
ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು..
ಹಣದಾಸೆಗೆ ಮನುಷ್ಯರನ್ನು ಕೊಲ್ಲುವ ಜರ್ಜರಿತ
ಕಾಲ ಬಂತು..
ಮೊಸ ವಂಚನೆಗಳಿಗೆ ದಾರಿಯು
ಸುಲಭವಾಯಿತು...
ಪಾಪ ಪುಣ್ಯಗಳೆಂಬ ನೆಲೆಯು ಲೆಕ್ಕಕ್ಕೆ
ಸಿಗದಷ್ಟು ಬೇಳೆಯಿತು...
ಆಗಾದರೂ ನಾವ್ ತುಂಬ ಒಳ್ಳೆಯ ಜನ ಎಂದು ಹೇಳಿಕೊಂಡು ತಿರುಗುವ ಕಾಲ ಬಂತು.||
ಯಂತಾ ಕಾಲ ಬಂತು ಸುನಾಮಿಯ ತರ ಆಧುನಿಕ ಕಾಲ ಬಂತು...
ಮಂಗಳಕ್ಕೆ ರಾಕೆಟ್ ಕಳುಹಿಸುವಂತಾ
ಬುದ್ದಿವಂತರ ಕಾಲ ಬಂತು..
ಅಂಗಾದರೂ ಮೂಢನಂಬಿಕೆಗಳನ್ನು ಹೊಗಲಾಡಿಸದಾಯಿತು..
ಕಣ್ಣು ಕಿವಿ ಮೂಗೆಂಬ ಪಂಚೆಂದ್ರಿಯಗಳ ಮೇಲೆ
ಇಡಿತ ಕಡಿಮೆಯಾಯಿತು..
ಇದರಿಂದ ಅತ್ಯಾಚಾರ ಅನಾಚಾರಗಳ ಸಂಖ್ಯೆಯು ಹೆಚ್ಚಾಯಿತು....||
ನಾ ಗಿಚಿದೆ ಒಂದು ಕವಿತೆ
ನನ್ನೆದೇಯ ಪುಟವ ತೆರೆದು
.......................
ಒಲವಿನ ಲೇಖನಿಯ ಹಿಡಿದು
ನನ್ನೋಲವ ಕಥೆಯನ್ನೆಲ್ಲ
ಬರೆಸಿಟ್ಟೆ ಅದರಲ್ಲಿ...
ಅಲೆಯಂತೆ ಬರುತಿಹುದು
ಪದಗಳಾ ಸಾಲು
ಎಷ್ಟು ಗೀಚಿದರು ಮುಗಿಯುತಿಲ್ಲ
ಪದಪುಂಚಗಳ ಸಾಲು
ಪುಟತಿರುಗಿಸಿದಂತೆಲ್ಲ ಮುರುಕಳಿಸುತಿದೆ
ಸಿಹಿಕಹಿ ನೆನಪುಗಳೇಲ್ಲ
ನಾ ಆಡದ ಒಂದೊದು ಮಾತು
ಪದಗಳಂತೆ ಬರೆದಿಡುವ
ಪುಟಗಳ ಸಾಲು......
ಹೋಸ ಚಿಗುರಿನಂತೆ
ಚಿಗುರೊಡೆಯುತಿದೆ ಭಾವನೆಗಳ
ಸಾಲು ದಿನಗಳು ಮುಗಿದಂತೆ
ಹೊಸ ದಿನಗಳೂ ಬರುವಂತೆ
ಎಂದಿಗು ಮುಗಿಯದ ಈ ನನ್ನ ಕವಿತೆ
ಪುಟಗಳು ಮುಗಿಯದಿರಲಿ ಈ
ಒಲವಿನ ಕವಿತೆಗೆ....
ನಾ ಬರೆದಿಟ್ಟ ನನ್ನೋಲವ ಪುಸ್ತಕದಲ್ಲಿ.......