Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ವಾರ್ಥಲೋಕ

ಮೌನ ಮಾತನ್ನು ಬಂದಿಸುತ್ತಿದೆ
ನಿಶಬ್ದ ಮನಸನ್ನು ಉಸಿರಾಡಂತೆ ಕಟ್ಟಿ ಹಾಕುತ್ತಿದೆ............

ಕನಸು ನನಸನ್ನು ನೋಯಿಸಿ ಬದುಕುತ್ತಿದೆ ನಿಜವಾದರೆ ನಾನು ಕನಸಾಗಿ ಉಳಿಯುವುದಿಲ್ಲ ನಿನ್ನಲ್ಲಿ ಎಂದು..................

ಭೂಲೋಕವಲ್ಲವಿದು ಸ್ವಾರ್ಥಲೋಕ
ಅವರಸಕ್ಕೆ ಮನುಶ್ಯರು ಕೆಲಸವಿದ್ದರೆ ಮಾತುಗಳು....................

ಸಿಹಿ ಜೇನಿಗಿಂತ ಸವಿಯಾದ ಮಾತುಗಳು ಮನದಲ್ಲಿ ಎಂದಿಗೂ ತೊಳೆಯಲಾಗದ
ಕಲ್ಮಶ ಸುಟ್ಟರು ಹೋಗುವುದಿಲ್ಲ ಈ ಸ್ವಾರ್ಥ ಜನರಲ್ಲಿ...................

ಮಣ್ಣಿಗಿಲ್ಲದ ಸ್ವಾರ್ಥ ಗಾಳಿಗಿಲ್ಲದ ಸ್ವಾರ್ಥ
ನೀರಿಗಿಲ್ಲದ ಸ್ವಾರ್ಥ ಅವುಗಳ ಮೇಲೆ
ಆಧರಿತವಾಗಿ ಬದುಕುವ ಈ ಅನ್ಯಾಯದ ಪಾಪಿ ಜನರಿಗೆತಕೆ ಎಂದು ತಿಳಿಯಲ್ಲ ನನಗೆ..............

ಒಬ್ಬರ ಸಂತೋಷ ನೋಡಲಾರರು
ತಾವೆಂದು ಸಂತೋಷವಾಗಿರಲಾರರು
ಮಾತು ಬಾರದ ಲೋಕವೊಂದಿದ್ದರೆ ಎಷ್ಟು ಚಂದ ಆಗೇನಾದರು ಇದ್ದಲ್ಲಿ ಯಾವ ಮನುಷ್ಯನು ಜೀವಂತವಾಗಿ ಸತ್ತ ಮನಸ್ಸಿನೊಡನೆ ಬದುಕುವ ಪರಿಸ್ಥಿತಿ ಬರಲಾರದು ಎಂದಿಗೂ..............

- ಚುಕ್ಕಿ

17 Aug 2017, 11:02 am

ಗಲ್ಲದ ಮೇಲಿ‌ನ ಕಪ್ಪು ಮಚ್ಚೆ

ಬೆಳ್ಳಗಿನ ಮೊಗದಲ್ಲೊಂದು
ಗಲ್ಲದ ಮೇಲಿನ ಕಪ್ಪು ಮಚ್ಚೆ!!
ಹುಣ್ಣಿಮೆಯ ಚಂದಿರನಿಗೆ
ದೃಷ್ಟಿಯ ಬೊಟ್ಟು ಇಟ್ಟಂತೆ!!

ವಿಪರೀತವಾದ ಆ ಸೌಂದರ್ಯ
ಅಪರೂಪದ ಸೃಷ್ಟಿಯ ವೈಭವ!!
ಮೊಗದಲ್ಲಿನ ಆ ಕಪ್ಪು ಮಚ್ಚೆಯ
ವಿವರಿಸಲು ಪದಗಳೇ ಸಾಲದು!!

ಚಂದಿರನ ಕಾಂತಿಯ ಚಲುವಿಗೆ
ಚಂದವು ಈ ಗಲ್ಲದ ಕಪ್ಪು ಮಚ್ಚೆ!!
ಅಂದವಾದ ರೂಪವ ಆಳುವ
ಸುಂದರ ಈ ಗಲ್ಲದ ಕಪ್ಪು ಮಚ್ಚೆ!!

ಸಲ್ಲದು ಯಾರ ಚಂದದ ರೂಪ
ತಡೆವುದು ಎಲ್ಲ ದೃಷ್ಟಿಯ ಕೂಪ!!
ಅಂದವ ಕಾಯುವ ಕಾವಲು ತಂತ್ರ
ದೃಷ್ಟಿ ಬೊಟ್ಟಿದು ನುಡಿಸಿತು ಮಂತ್ರ!!

- ಪಿ.ಜಿ.ಜ್ಯೋತಿ

17 Aug 2017, 10:56 am

ಸೂರ್ಯ ನಲಿದು ಬರಲು

ಕತ್ತಲು ಮೆಲ್ಲ ಸರಿಯುತಿದೆ
ಬೆಳಕು ಎಲ್ಲೆಡೆ ಪಸರಿಸುತಿದೆ
ಹಕ್ಕಿಯ ಗಾನವು ಸ್ವಾಗತ ಕೋರಿ
ಮೂಡಣದಿ ಉಷೆಯ ಕರೆಯಿತು

ಹೊನ್ನತೇರಿನಲಿ ರಾಜ ಗಾಂಭೀರ್ಯದಲಿ
ರವಿ ತೇಲಿಬಂದ ಆಗಸದಲ್ಲಿ
ಜಗವೆಲ್ಲ ಝಘಮಗಘಿಸಿತು
ಬೆಳ್ಳಂಬೆಳಕು ಈಗಾಯ್ತು

ಬಿರಿದ ಮೊಗ್ಗು ದಳ ಬಿಚ್ಚಿ
ದುಂಬಿ ಮಧುಹೀರಿತು ಝೇಂಕರಿಸಿ
ಬೀಸೋ ತಂಗಾಳಿ ಚಾಮರ ಬೀಸಿ
ಮೆಲ್ಲ ಜಗದ ತಲೆ ನೇವರಿಸಿತು

ಸಾಗರದ ನೀರಿಗೆ ಹೊಂಬಣ್ಣ ಚೆಲ್ಲಿ
ಎಲೆಯ ಮೇಲೆಲ್ಲಾ ಇಬ್ಬನಿ ಹರಡಿ
ಹರಿವ ನೀರಿನ ನಿನಾದಕೆ ಮರುಳಾಗಿ
ಸೂರ್ಯ ನಲಿದು ಬರಲು ಹಗಲಾಯ್ತು

ನಿಸರ್ಗದ ಈ ವಿದ್ಯಮಾನ
ಕವಿಗಾಯಿತು ಚೇತನ
ಕಲ್ಪನೆಯ ಕೂಸು ಹಡೆದವನ
ಬರಹದಲ್ಲಿ ಸುಂದರ ಕವನ ಜನಿಸಿತು

0537ಎಎಂ17082017

*ಅಮುಭಾವಜೀವಿ*

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

17 Aug 2017, 05:58 am

ನಿನ್ನ ನೆನೆ ನೆನೆದು

#ಕೊನೆಗೂ ಸಿಲಿಕಿತು ಇ ಹೃದಯಪ್ರೀತಿಯ ಸುಳಿಗೆ
ಈ ಸೃಷ್ಟಿಯ 7 ಅದ್ಭುತಗಳಲ್ಲಿ ನೀನೊಂದು ಅದ್ಬುತವು ನನಗೆ
ಪ್ರತಿ ರಾತ್ರಿಯೂ ನಿನ್ನ ಕನಸುಗಳು ಬಗೆ ಬಗೆ
ನಿನ್ನಜೊತೆ ಕಳೆಯೋ ಪ್ರತಿ ಕ್ಷಣವೂ ಸಂತೋಷದ ಗಳಿಗೆ

ಯಲ್ಲು ಬಿರಾದರ್

- ಯಶ್ ಗೌಡ - S.B

16 Aug 2017, 11:18 pm

ಪ್ರೇಮದ ಓಲೆ

ನಿನ್ನ ಪ್ರೀತಿ ಇಲ್ಲದ ಮೇಲೆ
ಕಾರಣವಿಲ್ಲದೇ ಹರಿಯುತ್ತಿದೆ ಕಣ್ಣೀರಿನ ಹೊಳೆ.
ಸಾಕೆನಿಸಿದೆ ಈ ಮಹತ್ತರ ಜೀವನದ ಸಂಕೋಲೆ
ಇಷ್ಟಾದರೂ ಮತ್ತೆ ಮತ್ತೆ ಬರೆಯಬೇಕೆಂದೆನಿಸಿದೆ ನಿನಗಾಗಿ,
ಪ್ರೇಮದ ಓಲೆ!

- ಪ್ರಿಯಾಂಕ

16 Aug 2017, 10:16 pm

ಆ ಕಿರು ನಗೆ

ನೀ ಪರಿಚಯಿಸಿದ ಆ ಕಿರು ನಗೆಯು
ಅಪಹರಿಸಿತೇ ನನ್ನ ಈ ಹೃದಯವನ್ನ!!
ನಾ ಪರಿಚಯಿಸಿದ ಈ ನನ್ನ ಮನವು
ಸ್ವಾಗತಿಸಿ ಕಾದಿದೆ ನಿನ್ನ ಆಗಮನವನ್ನ!!

ನಿನ್ನ ಪ್ರೀತಿಯ ಅಲಂಕಾರದ ಕೈಗನ್ನಡಿ
ತೋರು ಬಾ ನೀ ಈ ಸವಿ ಬದುಕಿಗೆ!!
ನಾನು ಇಡುವ ಪ್ರತಿ ಹೆಜ್ಜೆಗೂ
ಜೊತೆಯಾಗಿ ಬಾ ನೀ ಅಳಿಸದೇ!!

ಹೊಸ ಹುರುಪಿನ‌ ಸಂತಸವ ನೀನು
ಮೀಟಿ ನುಡಿಸಿದೆ ನನ್ನ ಎದೆಯೊಳಗೆ!!
ಮರೆಯಾಗಿ ಹೋಗದಂತ ಸಂಗತಿಯ
ಆಣತಿಯು ನೀನು ಈ ನನ್ನ ಬದುಕಿಗೆ!!

- ಪಿ.ಜಿ.ಜ್ಯೋತಿ

16 Aug 2017, 05:24 pm

ಮಗಳೇ

ಕಂದ ನಿನ್ನ ನೆನಪಲ್ಲಿ
ನನ್ನ ಪೂರ್ತಿ ಜೀವನ ಕಳೆಯಲಿ..........

ಮುದ್ದು ಮುಖದ ಗಂಧದ
ಗೊಂಬೆ ನೀನು ಕಿರುನಗೆಯ ಕಿನ್ನರಿ
ತೊದಲು ಮಾತನಾಡುವ ಬಂಗಾರಿ.........

ಕಾಲ್ಗೆಜ್ಜೆ ಸದ್ದು ಕದ್ದು ಕದ್ದು ನಿನ್ನ
ಪುಟ್ಟ ಪುಟ್ಟ ಪಾದಗಳನ್ನು ಮುದ್ದಾಡುತ್ತಿದೆ
ನನ್ನ ಕಣ್ಣು ಮುಚ್ಚಿ ಮಗಳೇ.............

ನವ ಮಾಸಗಳೊತ್ತರೇನು
ಮಲ್ಲಿಗೆಯಂತೆ ಮೃದು ನೀನು
ಈ ಅಮ್ಮನಿಗೆ ಮರು ಜನ್ಮ ಕೊಟ್ಟ
ತಾಯಿ ನೀನು..............

ಅಳುತ ನೀನು ನಗುತ ನೀನು
ನನ್ನ ಗಮನವ ಸೆಳೆಯುವೆ ಪುಟ್ಟ
ಕಡೆವೆರೆಗೂ ನಿನ್ನೊಡನೆ ನಾನಿಲ್ಲದಿದ್ದರು
ನನ್ನುಸಿರ ಹೆಸರು ಬೆರೆಸಿಕೊಡುವೆ ಗಾಳಿಗೆ ನೀನಿರುವವರೆಗೂ ನನ್ನ ಮಗಳ ಕಾಯೆ ಗಾಳಿ ಎಂದು..................

ನಿನ್ನ ಆದಿಯಲ್ಲಿಂದ ಮುಳ್ಳುಗಳೆಲ್ಲಾ ನನ್ನ ಕಣ್ಣೀರ ಹನಿಗಳಾಗಿ ನೆಲ ಸೇರಲಿ ನಿನ್ನ ಪ್ರತಿ ಹೆಜ್ಜೆಗೆ ದುಂಬಿಮುಟ್ಟದ ಹೂವಾಗಿ ಮಗಳೇ......

ಮಾನ್ವಿತಾ ಎಲ್ಲರ ಮನದಲ್ಲಿ
ಅರಳಿದ ಮೊಗ್ಗಾಗಿ ನಿ ಬಾಳು ನಿನ್ನ ನೆನೆದ ಕ್ಷಣಮಾತ್ರದಲ್ಲಿ ಮಂದಹಾಸದ ಸವಿಯಾಗಿ ನೀ ಸೇರು ನನ್ನಲ್ಲಿ ನೀನಿರುವ ನನ್ನ ಹೃದಯದಲ್ಲಿ............

- ಚುಕ್ಕಿ

16 Aug 2017, 04:43 pm

ಪ್ರೀತಿಯಲ್ಲಿ

ಪ್ರೀತಿಯಲ್ಲಿ ಚಿಗುರಿತು
ನನ್ನ ಕನಸು
ಆಸೆಯಲ್ಲಿ ಅರಳಿತು
ನನ್ನ ವಯಸು!!
ಬಯಕೆಯಲ್ಲಿ ಬಿದ್ದಿತು
ನನ್ನ ಮನಸು
ದಯಮಾಡಿ ನೀ ಬಂದು
ನನ್ನ ಸಹಕರಿಸು!!

- ಪಿ.ಜಿ.ಜ್ಯೋತಿ

16 Aug 2017, 02:39 pm

ಈ ಜೀವಕ್ಕೆ

ಈ ಜೀವಕ್ಕೇ ಅವನ ತೇಜಸ್ಸು
ಕಳೆಯಿತು ಬದುಕಿನ ತಮಸ್ಸು!!

ಪ್ರೀತಿಯಲ್ಲಿ ಜಾರಿದ ವಯಸ್ಸು
ಹೆಚ್ಚಿಸಿತು ನನ್ನಯ ಮೇದಸ್ಸು!!

ಅವನಿಗಾಗಿ ಮಾಡಿದ ತಪಸ್ಸು
ಒಲವಿಂದ ತಂತು ಹುಮ್ಮಸ್ಸು!!

ನಾ ಸೇರಲು ಅವನ ಮನಸ್ಸು
ಹೆಚ್ಚಾದಂತೆ ಈ ನನ್ನ ಆಯಸ್ಸು!!

- ಪಿ.ಜಿ.ಜ್ಯೋತಿ

16 Aug 2017, 02:37 pm

ಮಮತೆಯ ಮಾತೆಗೆ ಜನ್ಮದಿನದ ಶುಭಾಶಯಗಳು....

ಸ್ವರ್ಗದ ಸಾಮ್ರಾಜ್ಯದ
ಹೊನ್ನಿನ ಸಿಂಹಾಸನದ
ಹಚ್ಚನೆಯ ಸ್ವಚ್ಚದ
ವಸ್ತ್ರಧಾರಿಣಿ ನೀನಂದು.....

ನಿನ್ನ ವೈಭವಭರಿತ ದೇಗುಲದತ್ತ
ನೈರುತ್ಯ ಅನ್ವೇಷಣೆಗಳ ಮಾರುತ
ನುಗ್ಗಿಬಂದರು ಪೋರ್ಚುಗೀಸರಂದು
ವಾಸ್ಕೋಡಿಗಾಮನೆ ಮುಂದು......

ಗಾಮನ ಬೆನ್ನಟ್ಟಿ ಬಂದವರು
ಹಲವರು........
ಠಕ್ಕುಕಾರರಾಗಿ ಉಳಿದವರು
ಬಿಳಿಯರು.........

ಮಡಿಲಲ್ಲಿ ಮಕ್ಕಳಾಗಿ
ಬೆಳೆದರು ಹುಲುಸಾಗಿ
ಮನೆಯ ವಿಘಟಿಸುತ್ತ
ಮೆರೆದರು ನಿನ್ನ ತುಳಿಯುತ್ತ.....

ನೆರಳು ನೀಡಿದ ಮರದ
ಮೂಲೋಚ್ಚಾಟನೆ ಮಾಡುತ
ಮುನ್ನೂರು ವರ್ಷ ಮೆರೆದ
ಆಂಗ್ಲರು ನಮ್ಮ ತುಳಿಯುತ.....

ನಿನ್ನ ದಾಸ್ಯ ವಿಮೋಚನೆಗಾಗಿ
ಕರುಳ-ಕುಡಿಗಳು ಬಲಿಯಾಗಿ
ತಂದರು ಸ್ವತಂತ್ರ ನಮಗಾಗಿ
ಕಾಯುತಿರುವೆವು ಸಾರ್ಥಕತೆಗಾಗಿ.....

ನಿನ್ನ ಮಮತೆಯ ಕುಡಿಗಳೆ
ನಿನಗೆ ವೈರಿಗಳಾಗಿ ಬೆಳೆ
ವೈಷಮ್ಯದಿ ತುಂಬಿದೆ ಇಳೆ
ಎಲ್ಲೆಲ್ಲು ಸ್ವಾರ್ಥದ ಕೊಳೆ......

ಅಮ್ಮ ನೀ ಬಾಳು ನೂರುಕಾಲ
ಮುತ್ತೈದೆಯಾಗಿ ಸದಾಕಾಲ
ಹರಸು ನಿನ್ನ ಮಕ್ಕಳ
ಉಳಿಸು ಒಳ್ಳೆತನಗಳ.......

ಎಪ್ಪತ್ತೊಂದೆಯ ವಸಂತದ ಶುಭಾಶಯಗಳು



ಶಾರಧ

- ಶಕುಂತಲಾ

16 Aug 2017, 01:53 pm