ತುಂಬಾ ತಲೆ ಕೆಡಿಸ್ಕೊ ಬೇಡಿ ನೀವು
ಸ್ವಲ್ಪ ಹಾಳಾಗ್ಬಿಟ್ಟಿದಿವಪ್ಪ ನಾವು
ಅಯ್ಯೋ ಹಾಕ್ರಪ್ಪ ಯೋಚನೆಗೆ ಲಗಾಮು ತಾವು
ಹೇಳೋದು ಬೇಕಾದಷ್ಟಿದೆ ನಿಮಗೆ ನಾವು
ತುಂಬಾನೆ ಒಳ್ಳೆವ್ರಪ್ಪ ಅಂದ್ಕೊಂಡಿದ್ದಕ್ಕಿಂತ ತಾವು
ಕೆಟ್ಟವ್ರಲ್ಲಪ್ಪ ನೀವಂದ್ಕೊಂಡಷ್ಟು ನಾವು
ರೈಡು ಹೆಲ್ಮೆಟಿಲ್ದೆ ತಲೇಲಿ, ತ್ರಿಪ್ಸ್ ಬೈಕಲಿ ಸಿಗಾಕೊಂಡ್ರೆ ಫೈನು
ಚೆಂದದ ಹುಡುಗಿ ಬಂದ್ರೆ ಹಾಕ್ತಿವಪ್ಪ ಒಂದು ಲೈನು
ಆಗಾಗ ಒಂದು ಸ್ಮೋಕು, ಒಂದು ಪೆಗ್ಗು ವೈನು
ನಮಗೂ ಇರಬೋದಲ್ವೆ ಒಳಗೊಳಗೆ ಸ್ವಲ್ಪ ಪೈನು
ಹೇಳ್ರಪ್ಪ ನಾವು ಮಾಡ್ತಿರೊ ಅಂತ ದೊಡ್ಡ ತಪ್ಪೇನು
ನಗ್ತಾ ನಗ್ತಾ ಬದುಕುವುದೆ ಅಲ್ವೇ ಮೈನು
ಯಾಕ್ರಪ್ಪ ಹಿಂಗೆ ನೀವು ನಮ್ನ ಮಾತಲ್ಲೆ ಕೊಲ್ತೀರಿ
ಮಾತು ಮಾತಿಗೂ ಸೋಂಬೇರಿ ಅಂತೀರಿ
ಬಿರುದು ಕೊಡುವಿರಿ ರೋಡ್ ರೋಡ್ ಅಲೆಯೊ ಪೋಕಿರಿ
ಹಾಕ್ತೀರ ಲೆಕ್ಕಕ್ಕೆ ಸಿಗದಷ್ಟು ಛೀಮಾರಿ
ಅಪ್ಪಿ ತಪ್ಪಿ ಸಿಗಾಕೊಂಡರೆ ಯಾಮಾರಿ
ಆಯ್ತು ಪರ್ವಾಗಿಲ್ಲ ಬೇಜಾರಾಗ್ಬೇಡಿ ಬಿಡ್ರಿ
ನಾವು ಇದಕ್ಕೆಲ್ಲ ತಲೆಕೆಡಿಸ್ಕೊಳ್ಳೋದೆ ಇಲ್ಲ ರೀ
ರಾಮಾಯಣದಲ್ಲಿ ಹೆಣ್ಣಿಗಾಗಿ ಹೋರಾಟ
ಮಹಾಭಾರತದಲ್ಲಿ ಮಣ್ಣಿಗಾಗಿ ಕಾದಾಟ
ಕನ್ನಡ ನಾಡಿನಲ್ಲಿ ಕಾವೇರಿಗಾಗಿ ಪರದಾಟ
ವಿಧಾನಸೌಧದಲ್ಲಿ ಕುರ್ಚಿಗಾಗಿ ಚೀರಾಟ
ಚುನಾವಣೆಗೆ ಮಂತ್ರಿಗಳು ಓಟಿಗಾಗಿ ಅಲೆದಾಟ
ಅಧಿಕಾರ ಕೖೆ ಸೇರಿದಾಗ ಬಡ ಜನರ ತುಳಿದಾಟ
ಸಿಗದ ಸರಕಾರಿ ಸವಲತ್ತುಗಳ ಕಳ್ಳಾಟ
ಮುಗಿಯದ ಬದುಕಿಗಾಗಿ ಮುಗ್ಧ ರೈತರ ನರಳಾಟ
ಅಕ್ರಮ ಆಸ್ತಿ ಪಡೆಯುವ ಶಾಸಕರ ಹೆಣಗಾಟ
ಲೋಕಾಯುಕ್ತರ ಬಲೆಗೆ ಬಿದ್ದಾಗ ಒಳಗೊಳಗೆ ಪೇಚಾಟ
ಲಂಚಕ್ಕಾಗಿ ಭ್ರಷ್ಟರ ನಿಯತ್ತು ಮಾರಾಟ
ಕಣ್ತುಂಬಿಕೊಳ್ಳಲೇಬೇಕು ನಮ್ಮ ರಾಜಕಾರಣಿಗಳ ಕೆಸರೆರಚಾಟ
ಹೆಣ್ಣು ಮಕ್ಕಳ ಮೇಲೆ ಪಾಪಿಗಳ ಅಟ್ಟಹಾಸದ ಚೆಲ್ಲಾಟ
ಸರ್ವರಿಗೂ ಕೋಳಿಸಿಯೂ ಕೇಳಿಸದಂತಿರುವ ಶೋಷಿತೆಯರ ಕಿರುಚಾಟ
ಕತ್ತಲಲ್ಲೇ ಕುಣಿದು ಬೆಳಕಿಗೆ ಬಾರದ ನ್ಯಾಯದ ನಲಿದಾಟ
ಸಾಗಲೇಬೇಕು ನಮ್ಮ ಸ್ವತಂತ್ರ ಕಂಡುಕೊಳ್ಳವ ಛಲದಾಟ
ದೇವನೊಬ್ಬ ನಾಮ ಹಲವು
ಎಂದೋ ಸಾರಿದರು ಹಲವರು
ಈ ದೇವರ ನೈವೇದ್ಯ,ಆ ದೇವರಿಗೆ
ಮೈಲಿಗೆ,ಆ ದೇವರ ನೈವೇದ್ಯ
ಈ ದೇವರಿಗೆ ಮೈಲಿಗೆ
ನೀನಗೆ ಇಲ್ಲವಲ್ಲ ಸಮಾನತೆ!
ನಿನ್ನ ನಾಮದಿ ಹಲವು ವ್ರತಗಳ
ಮಾಡಿಸಿ ಇಷ್ಟಾರ್ಥ ಸಿದ್ದಿ ಪ್ರಾಪ್ತಿ
ಎನ್ನುವ ನಮ್ಮ ಆರವರು,
ತಾವೇಕೆ ಪಡೆಯಲಾರರು
ಉತ್ತಮೋತ್ತಮ ಸ್ಥಾನವನ್ನು
ಪೂಜಾ- ವ್ರತಗಳಿಂದ ನಿನ್ನ ಒಲಿಸಿಕೊಳ್ಳಲು ಸಾಧ್ಯವೇ!
ನಿನ್ನ ಮಕ್ಕಳೇ ನಾವೆಲ್ಲ
ಹರಿವ ರಕ್ತ ಒಂದೇಯಲ್ಲ
ಅವರು ಶ್ರೇಷ್ಠ- ನಾವು ಕೀಳು
ಮನುಜನ ಮನಸ್ಸಿಗಿಂತ
ಮೈಲಿಗೆ ಉಂಟೆ ದೇವ!
ಭಕ್ತಿಯಿಂದ ಪೂಜಿಸುವವರು
ಕೆಲವರು........
ಭಯದಿಂದ ಪೂಜಿಸುವವರು
ಬಹುಜನರು.......
ನೀ ಮುನಿಯುವೆ ಎಂಬ ಭಯದಲಿ!
ನಂಬಬೇಕು ದೇವರ
ಮೂಡರಾಗಬಾರದು
ನಂಬಿ ಆರವರ!
ಪ್ರಯತ್ನ ಇಲ್ಲದೆ ಫಲವಿಲ್ಲ
ಕೈ- ಕಟ್ಟಿ ಕೂತರೆ ಹೊಟ್ಟೆ ತುಂಬದು
ಭಯ ಅಳಿಸಿ- ಭಕ್ತಿ ಉಳಿಸಿ!