ರಾಮ ದಂಡಿಸಿದ ಸೂರ್ಪನಕಿಯ
ಕತ್ತರಿಸಿ ಅವಳ ಮೂಗು ಕಿವಿಯ
ನೆನೆದು ತಾನುಂಡ ನೋವಿನ ಕಹಿಯ
ಬಂದಳು ಸಹೋದರನಲಿ, ಅವನು ಲಂಕೆಗೆ ಒಡೆಯ
ಕಂಡನು ದಶಮುಖ ಒಡಹುಟ್ಟಿದವಳ ಸ್ಥಿತಿಯ
ರಾಮನಿಗೆ ಕಲಿಸುವೆನು ಪಾಠವನೆಂದು ಇತ್ತನು ಭಾಷೆಯ
ಕಳುಹಿಸಿದ ರಾವಣ ಮಾರೀಚನ ಮಾಡಿ ಬಂಗಾರ ಜಿಂಕೆಯ
ಸೋತಳು ಜಾನಕಿ ನೋಡಿ ಮಾಯ ಮರೀಚಿಕೆಯ
ನಡೆದನು ರಾಮ ಜಿಂಕೆ ಹರಸಿ ಸಮಾಧಾನಿಸಲು ಮನದರಸಿಯ
ಕೊಟ್ಟು ಲಕ್ಷ್ಮಣನಿಗೆ ಅವಳ ಕಾಯುವ ಹೊಣೆಯ
ಕೊಲ್ಲಲು ರಾಮ ಜಿಂಕೆಯ, ಮಾರೀಚ ಕೂಗಿರಲು ರಾಮನಂತೆ ಲಕ್ಷ್ಮಣ ಸೀತೆಯ
ಜಾನಕಿ ಕಳುಹಿಸಿದಳು ಲಕ್ಷ್ಮಣನ ನೋಡಿ ಬರಲೆಂದು ಅಣ್ಣನ ಇತ್ತು ಆಜ್ಞೆಯ
ಹೊರಟನು ರಾಮನ ಅನುಜ ಎಳೆದು ಲಕ್ಷ್ಮಣ ರೇಖೆಯ
ಇತ್ತ ಕಂಡಳು ಜಾನಕಿ ಸನ್ಯಾಸಿಯ
ದಾಟಿದಳು ರೇಖೆಯ ಕೊಡಲು ಭಿಕ್ಷೆಯ ಅರಿಯದೆ ಸನ್ಯಾಸಿ ಅಲಂಕೃತ ಕಪಟಿಯ
ಹೊತ್ತೊಯ್ದನು ದಶಕಂಠ ರಾಮನ ಅರಸಿ ಮೈಥಿಲಿಯ
ಸೆರೆಯಾಗಿಸಿದನು ರಾವಣನ ಅಯೋಧ್ಯೆಯ ರಾಣಿಯ
ಅಶೋಕವನದ ಮರಗಿಡಗಳ ಹೊರತು ಯಾರಿರಲಿಲ್ಲ ಕೇಳಲವಳ ವ್ಯಥೆಯ
ಅನುಭವಿಸಿದಳು ನೋವ ಕಂಡು ಅವಳ ಮೇಲಿನ ದಶಕಂಠನ ಆಸೆಯ
ಹುಡುಕಿದನು ರಾಮ ಅವಳ, ಪಡೆದು ಹನುಮಂತನ ಸೇವೆಯ
ಕಟ್ಟಿದರು ರಾಮಸೇತುವ ಪಡೆದು ಕೋತಿ ಸೇನೆಯ ಸಹಾಯ
ರಾವಣನ ಕೊಂದು ಬಿಡಿಸಿದನು ಸೆರೆಯಿಂದ ಸೀತೆಯ
ಆದರೂ ಕಾಪಾಡಲಿಲ್ಲ ರಾಮನ ಪ್ರೀತಿ ಜಾನಕಿಯ
ಸಾಬೀತು ಮಾಡಲೆ ಬೇಕಾಯಿತು ಅವಳನ್ನೆ ಅವಳು ಪ್ರವೇಶಿಸಿ ಅಗ್ನಿಯ
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ನಿನ್ನ ನಗುವ ಕಂಡು
ನನ್ನ ನೋವು ಮರೆತೆನೇ
ಆ ನಗುವು ಕೂಡ ಬಾನಿಗೆ ಹಾರಿತೆ
ನಾ ಸೋತಲೆಲ್ಲಾ
ಆ ಕಣ್ಣಲ್ಲಿ ಕಂಬನಿ ಜಾರಿತೆ
ಈ ಕಂಬನಿಯೇ ನನ್ನ ಸ್ಪೂರ್ತಿಯಾಯಿತೆ
ಆ ಸ್ಪೂರ್ತಿ ಕೂಡ ಇಂದು ಕಾಣದಾಯಿತೆ
ನನ್ನ ಮೌನವೆಲ್ಲಾ ನೀನು ತಿಳಿದುಕೋಂಡೆಯೇ
ನಿನ್ನ ಮಾತು ನನ್ನ ಖುಷಿಯ ಪಡಿಸಿತೇ
ಆ ಮಾತೇ ಇಂದು ನನ್ನ ದೂರ ತಳ್ಳಿತೇ
ರೂಪದಲ್ಲಿ ನನ್ನ ಬಿಂಬ ಅವಳು
ಮಾತಿನಲ್ಲಿ ನನ್ನ ಜವಳಿ ಅವಳು
ಇಂದು ನನ್ನವಳೇ ನನ್ನ ಬಿಟ್ಟು ಹೋದಳೇ
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ನೀನು ನನ್ನವಳು ಎಂಬ ಆಸೆಯೋಂದು
ಕನಿಸಿನಲ್ಲಿ ಚಿಗುರು ಹೋಡೆಯಿತೇ
ಮನದಲ್ಲಿ ಹೂವು ಅರಳಿತೇ
ಆ ಹೂವ್ವಿಗೇನೆ ಕೋಳ್ಳಿಯಿಟ್ಟು
ನನ್ನವಳು ಹೋರಟು ಹೋದಳೇ
ಸಾವು ಬಂದು ತಲೆಯ ಮೇಲೆ ಕುಂತಿದೆ
ಆ ಸಾವಿಗೇನೆ ಹೇಳಿಬಿಡಲೇ
ಒಮ್ಮೆ ನನ್ನವಳ ಬಳಿ ಹೋಗಿಬರುವೆ
ಆ ಸಾವು ಕೂಡ ಬಿಟ್ಟು ಕೋಟ್ಟಿತೇ
ನನ್ನವಳೇ ನನ್ನ ಬಳಿ ಬರದೇ ಹೋದಳೇ
ಸಾವಿನ ಜೋತೆ ಇಂದು ನಾನು ಹೋಗಿ ಬಿಡಲೇ.....
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......
ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ......