Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಜ್ಜೆಯ ಗುರುತು...

ನಿನ್ನ ಉಸಿರು ನನ್ನ ಉಸಿರಾಗುತ...
ನಿನ್ನ ನೆನಪಲ್ಲೇ ನಾ ಸಾಗುತ...
ಪ್ರತಿ ಕ್ಷಣವು ಸತ್ತುಬದುಕುತ
ಅಚ್ಚಳಿಯದ ನಿನ್ನ ಹೆಜ್ಜೆಯ ಗುರುತು
ಹೇಗೆ ಬದುಕಲಿ ನಿನ್ನ ಮರೆತು...

ನನ್ನದಲ್ಲದ ಬದುಕು ನಡೆಸುತ
ಇರುವೆ ನೋವಿನಲಿ ಬೆಯುತ
ಮೌನಿಯಾಗಿ ಮುಗಿಲೆಡೆ ನೊಡುತ
ದೂರ ಮಾಡಿರುವ ಆ ದೇವರನು ನಿಂದಿಸುತ...

- Pb

01 Jun 2017, 03:31 pm

ನೋಡುವ ಆಸೆಯಾಗಿ

ನಿನ್ನ ನೋಡುವ ಕಾತುರದಲ್ಲಿ
ಮರತೆನಾನು ನನ್ನ ನೆಲವನ್ನು
ಈ ಕ್ಷಣ ನಿನ್ನ ನಗುವಲ್ಲೀ..........

ನೀನು ಕಾಣದ ಈ ಕ್ಷಣ ಕರೆಮಾಡಿದೆನು
ತಕ್ಷಣ ನೆನಪಾಗಿ ನಿನ್ನ ಧ್ವನಿ ಕೇಳಲು
ಆಸೆಯಾಗಿ ..............

ಮಲಗಿರುವೆ ನೀನು ಮಾತಿಲ್ಲದೆ ಮಗುವಾಗಿ
ಕರೆಮಾಡಲೇನು ನಿನ್ನ ಮನಸ್ಸಿಗೆ ನೇರವಾಗಿ
ಹೆಚ್ಚರವಾದ ತಕ್ಷಣ ನನ್ನ ನೋಡಲು ಬಾ ಎಂದು ನಗುವಾಗಿ..............

- ಚುಕ್ಕಿ

01 Jun 2017, 03:24 pm

ಒಂಟಿ ನಾನಲ್ಲ? ^|^|^|^|^|^|^|^|^

" ನೀನಿಲ್ಲದಿರುವಾಗ ನಲ್ಲೇ?
ಒಂಟಿಯಾಗಿರುವುದ ನಾ ಬಲ್ಲೇ!
ಸವಿಯುವೆನು ಕ್ಷಣ-ಕ್ಷಣಕ್ಕೂ
ಆ ನಿನ್ನ ನೆನಪುಗಳೆನೆಗೆ?
ರಸ ತುಂಬಿದ ಸಿಹಿ-ಕಬ್ಬಿನ ಜಲ್ಲೆ!."


ಸಾಮಾನ್ಯ ಕನ್ನಡಿಗ
ರಾಮಪ್ಪ ದುಮ್ಮಾಡಿ

- RAMAPPA DUMMADI

01 Jun 2017, 11:49 am

ಈಗಂತೂ ಪೀಲಾಗೋ........

ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲ
ಒಬ್ಳು ಹಾಯ್ ಅಂತಳೆ
ಇನೋಬ್ಳು ಬಾಯ್ ಅಂತಳೆ
ಹಾಯ್ ಅಂದೋಳ್ ಲವ್ ಯು ಅಂತಳೆ
ಬಾಯ್ ಅಂದೋಳ್ ಅಣ್ಣ ಅಂತಳೆ......

ಇವನೇನು ಕಮ್ಮಿ ಇಲ್ಲ
ಮೋದೆಲೆಲ್ಲಾ ಲವರ್ ಅಂತನೆ
ಎಲ್ಲನೂ ಮುಗಿದ ಮೇಲೆ
ತಂಗಿ ಅಂತನೇ......

ಈಗಂತೂ ಪೀಲಾಗೋ
ಲವ್ವಂತು ಯಾರ್ದೂ ಇಲ್ಲ

ಸಿನಿಮಾ ಹೋಗ್ ತಳೆ
ಪಾರ್ಕ್ ಸುತ್ ತಳೆ
ಹಳೇ ಬಾಯ್ ಪ್ರೆಂಡ್ ಬೈಕಲಿ
ಜಾಲಿ ರೈಡ್ ಅಂತು ಹೋಗೆ ಇರ್ ತಾಳೆ
ಆದ್ರೂನು ಎಲ್ಲಾನು ಮಗಿದು ಹೋದ
ಅಧ್ಯಾಯ ಅಂತ ಹೇಳೆ ಬಿಡ್ ತಳೆ
ಹೋಸ ಲವರ್ ಯಾರು ಅಂದರೆ
ಅವನು ಅಣ್ಣ ಅಂತ ಹೇಳೆ ಹೇಳ್ತಳೆ

ಇವನಗಂತು ಮೋದಲೇನೆ ಇಲ್ಲಾ ಗೋತ್ತು
ಆದ್ರೂನು ಸುಮ್ ಸುಮ್ ನೆ ನಾಟಕ ಆಡ್ತಾನೆ
ಹಕ್ಕಿನ ನೋಡೋಕೆ ಮುಂಚೇನೆ....
ಯಾವನು ಕಲ್ಲು ಹೋಡೆಯೋಕ್ ಹೋಗೋದಿಲ್ಲ

ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲ

ಮನೇಲಿ ಮದುವೆ ಅಂತರೆ
ಇವಳು ಯಾರು ಅಂತಳೆ
ಅವನು ಪೇಮಸ್ ಅಂತ ಗೋತ್ತದ ಕೂಡ್ಲೆನೆ
ಎಲ್ಲಾನು ಮುಗಿದಿದ್ರು ಒಕೆ ಅಂತಳೆ

ಇವನೇನೋ ಪೀಲಾಗೋ ನಾಟಕ ಆಡ್ತನೆ
ಅವಳು ಬಿಟ್ಟೋದ ಕೂಡ್ಲೆನೆ
ಬಲೆಯಂತು ಎಣೆದೆ ಇರ್ ತನೆ
ಹಕ್ಕಿನ ಬೀಳ್ಸೋಕೆ ಕಾಯ್ತ ಇರ್ ತನೆ

ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲಾ
ಲವ್ ಅಂತು ಟೈಮ್ ಪಾಸ್ ಗೋತ್ತಾಯ್ತಲ್ಲಾ
ಲವ್ ಮಾಡೋರ್ ಟೈಮ್ ಪಾಸು ಮಾಡ್ತಾರೆ
ಟೈಮ್ ಪಾಸ್ ಮಾಡೋರ್ ಲವ್ವು ಮಾಡ್ತಾರೆ
ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲಾ.......ಯಾರ್ದೂ ಇಲ್ಲಾ ...........ಯಾರ್ದೂ ಇಲ್ಲಾ........

- ಅಗಸ್ತ್ಯ

01 Jun 2017, 09:09 am

ಸವಿ ಬೆಳಗು

ಚುಮು ಚುಮು ಮುಂಜಾನೆಯಲಿ
ತಂಪಾದ ತಂಗಾಳಿ ಬೀಸುತ್ತಿರಲು...
ಮೈಯಿಗೆ ಮುದವೆನಿಸಿ ಕಣ್ಣಿಗಳು ಮತ್ತೆ
ನಿದ್ದೆಗೆ ಜಾರುತಿರಲು...
ತುಂಟ ನೇಸರ ಕಿಟಕಿಯಿಂದ ಒಳನುಸುಳಿ
ಕಚಗುಳಿ ಇಡುತಿಹನು...

- chinmayi

01 Jun 2017, 08:50 am

ನೀರವ ಇರುಳ ಅಪ್ಪುಗೆಯಲಿ..

ದೂರ ಸರಿದರೂ ಕಾಡುವೆ
ನೀ ಏಕಾಂತದಲಿ
ಹರಿದಿದೆ ಕಂಬನಿಯ ಧಾರೆ
ನೆನೆಯುತ ನಿನ್ನ ವೇದನೆಯಲಿ
ಮರೆಯಲಾಗದೆ ನಾ
ಮುಳುಗಿರುವೆ ಮತ್ತಿನಲಿ

ತಾಳ ತಪ್ಪಿದ ಎದೆಯ
ಭಾವಗಳ ಸಂತೈಸಲು
ಮಾತಿಗೆಳೆಯುವೆ ತಾರೆಗಳ
ಹೆಪ್ಪುಗಟ್ಟಿದ ಮೌನದಲಿ
ನೀರವ ಇರುಳ ಅಪ್ಪುಗೆಯಲಿ..

- Indushekar Chinivar

31 May 2017, 10:21 pm

ಸೀತೆ...

ರಾಮ ದಂಡಿಸಿದ ಸೂರ್ಪನಕಿಯ
ಕತ್ತರಿಸಿ ಅವಳ ಮೂಗು ಕಿವಿಯ
ನೆನೆದು ತಾನುಂಡ ನೋವಿನ ಕಹಿಯ
ಬಂದಳು‌ ಸಹೋದರನಲಿ, ಅವನು ಲಂಕೆಗೆ ಒಡೆಯ
ಕಂಡನು ದಶಮುಖ ಒಡಹುಟ್ಟಿದವಳ ಸ್ಥಿತಿಯ
ರಾಮನಿಗೆ ಕಲಿಸುವೆನು ಪಾಠವನೆಂದು ಇತ್ತನು ಭಾಷೆಯ
ಕಳುಹಿಸಿದ ರಾವಣ ಮಾರೀಚನ ಮಾಡಿ ಬಂಗಾರ ಜಿಂಕೆಯ
ಸೋತಳು‌ ಜಾನಕಿ ನೋಡಿ ಮಾಯ ಮರೀಚಿಕೆಯ
ನಡೆದನು ರಾಮ ಜಿಂಕೆ ಹರಸಿ ಸಮಾಧಾನಿಸಲು ಮನದರಸಿಯ
ಕೊಟ್ಟು ಲಕ್ಷ್ಮಣನಿಗೆ ಅವಳ ಕಾಯುವ ಹೊಣೆಯ
ಕೊಲ್ಲಲು ರಾಮ ಜಿಂಕೆಯ, ಮಾರೀಚ ಕೂಗಿರಲು ರಾಮನಂತೆ ಲಕ್ಷ್ಮಣ ಸೀತೆಯ
ಜಾನಕಿ ಕಳುಹಿಸಿದಳು ಲಕ್ಷ್ಮಣನ ನೋಡಿ ಬರಲೆಂದು ಅಣ್ಣನ ಇತ್ತು ಆಜ್ಞೆಯ
ಹೊರಟನು ರಾಮನ ಅನುಜ ಎಳೆದು ಲಕ್ಷ್ಮಣ ರೇಖೆಯ
ಇತ್ತ ಕಂಡಳು ಜಾನಕಿ ಸನ್ಯಾಸಿಯ
ದಾಟಿದಳು ರೇಖೆಯ ಕೊಡಲು ಭಿಕ್ಷೆಯ ಅರಿಯದೆ ಸನ್ಯಾಸಿ ಅಲಂಕೃತ ಕಪಟಿಯ
ಹೊತ್ತೊಯ್ದನು ದಶಕಂಠ ರಾಮನ ಅರಸಿ ಮೈಥಿಲಿಯ
ಸೆರೆಯಾಗಿಸಿದನು ರಾವಣನ ಅಯೋಧ್ಯೆಯ ರಾಣಿಯ
ಅಶೋಕವನದ ಮರಗಿಡಗಳ ಹೊರತು ಯಾರಿರಲಿಲ್ಲ‌ ಕೇಳಲವಳ ವ್ಯಥೆಯ
ಅನುಭವಿಸಿದಳು‌ ನೋವ ಕಂಡು ಅವಳ ಮೇಲಿನ ದಶಕಂಠನ ಆಸೆಯ
ಹುಡುಕಿದನು ರಾಮ ಅವಳ‌, ಪಡೆದು ಹನುಮಂತನ ಸೇವೆಯ
ಕಟ್ಟಿದರು ರಾಮಸೇತುವ ಪಡೆದು ಕೋತಿ‌ ಸೇನೆಯ ಸಹಾಯ
ರಾವಣನ‌ ಕೊಂದು‌‌‌ ಬಿಡಿಸಿದನು ಸೆರೆಯಿಂದ ಸೀತೆಯ
ಆದರೂ ಕಾಪಾಡಲಿಲ್ಲ‌ ರಾಮನ ಪ್ರೀತಿ ಜಾನಕಿಯ
ಸಾಬೀತು ಮಾಡಲೆ ಬೇಕಾಯಿತು ಅವಳನ್ನೆ ಅವಳು‌ ಪ್ರವೇಶಿಸಿ ಅಗ್ನಿಯ

- ಶ್ರೀಕಾವ್ಯ

31 May 2017, 09:07 pm

ಏತಕೆ.......

ಕಣ್ಣಿಗೆ ಕಾಣದ ನೋವನ್ನು
ಕಣ್ಣು ಸ್ವಾರ್ಥವಿಲ್ಲದೆ ನನ್ನ
ಜೊತೆ ಹಂಚಿಕೊಳ್ಳುವುದ್ಯೆಕೆ............

ನಡಿಗೆ ತಿಳಿಯದ ಕಾಲು
ನನಗಾಗಿ ನಡಿಯುವುದೇಕೆ.......

ಕೆಲಸ ಅರಿಯದ ಕೈ ನನ್ನ ಕೆಲಸ
ಮಾಡುವುದೇಕೆ...........

ನನಗಾಗಿ ಇರುವ ಮನಸ್ಸು
ಇತರರ ಕಷ್ಟಕ್ಕೆ ಸ್ಪಂದಿಸುವುದೇಕೇ........

ಬಂಧಿಸಲು ಆಸೆಯಾಗಿದೆ ನನ್ನ
ನೋವನ್ನು ಬಿರುಗಾಳಿ ಮಧ್ಯೆದಲ್ಲಿ.....

ಮಳೆ ಬರುವ ರಭಸದಲ್ಲಿ ಚಿದ್ರಿಸಿ
ಹೋಗುತ್ತೆ ನನ್ನ ವ್ಯಥೆಯೂ
ಕಣ್ಣಲ್ಲಿ ಉಳಿಯದೆ.........

- ಚುಕ್ಕಿ

31 May 2017, 01:15 pm

ನಾಡು -ಕಾಡು

ನಾಲ್ಕು ಜನ ಮಧ್ಯೆ ಇದ್ದು
ನೊಂದು ಸಾಯುತ್ತ ಬದುಕುವ
ನಾಡಿಗಿಂತ...................

ಯಾರು ಇಲ್ಲದೆ ನಗುತ್ತಾ
ಸಾಯುವ ಕಾಡು ಉತ್ತಮ...............

ನೂರು ಮಾತನಾಡಿ ಬೆಸೆತ್ತು
ನಮ್ಮಲ್ಲೇ ನಾವು ನರಳುವುದಕ್ಕಿಂತ............

ಒಂದು ಮಾತನಾಡದೆ ಮೌನದಲ್ಲಿ
ಮನಸ್ಸಿನ ಜೊತೆ ಮಾತನಾಡುವುದು
ಅತ್ಯುತ್ತಮ..........

ನೋವನ್ನು ಎಲ್ಲರ ಜೊತೆ ಹಂಚಿಕೊಂಡು
ಮನಸ್ಸು ಹಗುರ ಮಾಡಿಕೊಂಡು ಅವರ
ಕರುಣೆಗೆ ಪಾತ್ರರಾಗುವುದಂಕಿಂತ......

ನಮ್ಮಲ್ಲೇ ಇಟ್ಟು ಕಣ್ಣೀರಿನ ಜೊತೆ
ಹೇಳಿಕೊಳ್ಳುವುದು ಶ್ರೇಷ್ಠ.........

ಏಕೆಂದರೆ ಕಂಬನಿಯು ನಮ್ಮಲ್ಲೇ
ಇರುವುದರಿಂದ ಅದಕ್ಕೆ ತಿಳಿಯುತ್ತೆ
ನಮ್ಮ ನೋವಿನ ಅನುಭವ........

ನಲಿವಿನ ಸಂಭ್ರಮ..........

- ಚುಕ್ಕಿ

31 May 2017, 11:44 am

ನನ್ನವಳೇ ನನ್ನ ಕನ್ನಡಿ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನಿನ್ನ ನಗುವ ಕಂಡು
ನನ್ನ ನೋವು ಮರೆತೆನೇ
ಆ ನಗುವು ಕೂಡ ಬಾನಿಗೆ ಹಾರಿತೆ
ನಾ ಸೋತಲೆಲ್ಲಾ
ಆ ಕಣ್ಣಲ್ಲಿ ಕಂಬನಿ ಜಾರಿತೆ
ಈ ಕಂಬನಿಯೇ ನನ್ನ ಸ್ಪೂರ್ತಿಯಾಯಿತೆ
ಆ ಸ್ಪೂರ್ತಿ ಕೂಡ ಇಂದು ಕಾಣದಾಯಿತೆ
ನನ್ನ ಮೌನವೆಲ್ಲಾ ನೀನು ತಿಳಿದುಕೋಂಡೆಯೇ
ನಿನ್ನ ಮಾತು ನನ್ನ ಖುಷಿಯ ಪಡಿಸಿತೇ
ಆ ಮಾತೇ ಇಂದು ನನ್ನ ದೂರ ತಳ್ಳಿತೇ
ರೂಪದಲ್ಲಿ ನನ್ನ ಬಿಂಬ ಅವಳು
ಮಾತಿನಲ್ಲಿ ನನ್ನ ಜವಳಿ ಅವಳು
ಇಂದು ನನ್ನವಳೇ ನನ್ನ ಬಿಟ್ಟು ಹೋದಳೇ

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ನೀನು ನನ್ನವಳು ಎಂಬ ಆಸೆಯೋಂದು
ಕನಿಸಿನಲ್ಲಿ ಚಿಗುರು ಹೋಡೆಯಿತೇ
ಮನದಲ್ಲಿ ಹೂವು ಅರಳಿತೇ
ಆ ಹೂವ್ವಿಗೇನೆ ಕೋಳ್ಳಿಯಿಟ್ಟು
ನನ್ನವಳು ಹೋರಟು ಹೋದಳೇ

ಸಾವು ಬಂದು ತಲೆಯ ಮೇಲೆ ಕುಂತಿದೆ
ಆ ಸಾವಿಗೇನೆ ಹೇಳಿಬಿಡಲೇ
ಒಮ್ಮೆ ನನ್ನವಳ ಬಳಿ ಹೋಗಿಬರುವೆ
ಆ ಸಾವು ಕೂಡ ಬಿಟ್ಟು ಕೋಟ್ಟಿತೇ
ನನ್ನವಳೇ ನನ್ನ ಬಳಿ ಬರದೇ ಹೋದಳೇ
ಸಾವಿನ ಜೋತೆ ಇಂದು ನಾನು ಹೋಗಿ ಬಿಡಲೇ.....

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ.......

ಕನ್ನಡಿಯೇ ನನ್ನ ಕನ್ನಡಿಯೇ
ಇಂದು ನನ್ನ ಬಿಟ್ಟು ನೀನು
ಎಲ್ಲಿ ಹೋದೆಯೇ......

- ಅಗಸ್ತ್ಯ

31 May 2017, 10:08 am