ಪ್ರೀತಿಯೇ ಹೀಗೇಕೆ ನನ್ನ ನೀನು ಸೆಳೆವೆ,
ಬೇಡ ಬೇಡ ಬೇಡ ಅಂದ್ರು ಬಳಿಯಲ್ಲಿಯೇ ಸುಳಿವೆ,
ಹೃದಯದೊಳಗೆ ಕಿಡಿ ಹೊತ್ತಿಸಿ ಹೀಗೇಕೆ ಸುಡುವೆ,
ಇನ್ನು ಎಷ್ಟು ಕಾಯಬೇಕು ಎಂದು ನನ್ನ ಬಿಡುವೆ?
ಪ್ರೀತಿ ಸತ್ಯ ಎಂಬ ಗಾದೆ ಮಾತ ನಂಬದಾದೆ,,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ಅವಳು ನನ್ನ ಮರೆತರೂ ಮರೆತಿಲ್ಲ ನನ್ನ ಮನಸು,
ಈಗಲಾದ್ರೂ ಮಾತು ಕೇಳು ನೆನಪ ದೂರ ಕಳಿಸು,
ಹೃದಯದೊಳಗೆ ಇರುವ ಭಾರ ಬೇಗ ಕೆಳಗೆ ಇಳಿಸು,
ಇಲ್ಲದಿದ್ರೆ ನೋವಿನ ಜೊತೆ ಬದುಕೋ ಪಾಠ ಕಲಿಸು.
ಕ್ಷಣ ಕ್ಷಣ ಪ್ರತಿಕ್ಷಣವು ನಾನು ಅವಳಿಗಾಗಿ ಕಾದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ನನ್ನ ಹಾಗೆ ಪ್ರೀತಿಯಲ್ಲಿ ನೊಂದ ಹಲವು ಜನ,
ಕವಿಗಳಲ್ಲದಿದ್ರು ಬರೆಯುವರು ಸಾಲು ಕವನ,
ಒಳಗೆ ಎಷ್ಟೇ ನೋವಿದ್ದರೂ ಹೊರಗೆ ನಗುವ ಕಲೆ,
ಕಲಿಯಬೇಕು ಪ್ರೀತಿಯಲ್ಲಿ ಸೋತವರಿಂದಲೇ.
ಪ್ರೀತಿ ಉಕ್ಕಿ ಹರಿಯುತ್ತಿರಲು ಜೀವ ಉರಿಯುತ್ತಿದೆ,
ಸಾಕು ಇನ್ನು ತಾಳಲಾರೆ ಈ ಪ್ರೀತಿ ಬಾಧೆ.
ಬರೆಯುತ್ತಿದ್ದೆ ಯಾವಾಗಲು ನಾ ಕವಿತೆಯನ್ನ
ಆದರೂ ಗುರಿತಿಸಲಿಲ್ಲ ಯಾರು ನನ್ನ ಪ್ರತಿಭೆಯನ್ನ
ಅದರು ನಿಲ್ಲಿಸಲಿಲ್ಲ ನಾ ಬರೆಯುವುದನ್ನ
ಮುಂದಾದರು ಗುರಿತಿಸಬಹುದೇನೋ ಎಂದುಕೊಂಡಿದ್ದೇನೆ ನನ್ನ ಪ್ರತಿಭೆಯನ್ನ.
ಗುರಿತಿಸಿ ಕೊಡಿ ನನಗೆ ಪ್ರೋತ್ಸಾಹವನ್ನ. ನಿಮಗೆ ಕವಿಯಾಗ ಬಯಸುವ ನನ್ನ ನಮನ.
:-ವೀಣಾ ಲಿಂಗಣ್ಣ (ರಾಯಚೂರು )
ಸೂತಕದ ಮನೆಯಲ್ಲೊಂದು
ನೋವಿನ ಚೀಲ ಗಂಟು ಕಟ್ಟಿ
ಇಟ್ಟಿಹರು ಯಾರಿಗೂ ಕಾಣದ ಹಾಗೆ
ಒಂದೊಂದೆ ಅಣಕ ಮಾತುಗಳು ಇಣುಕಿ
ಇಣುಕಿ ನೋಡುತಿವೆ ಹೊರಬಂದು
ಶಾಂತದಿಂದಿರುವ ಮನಸ್ಸನ್ನು
ಕೆಣಕಿ ಎಬ್ಬಿಸಿ ಮನೆಮಂದಿಯನ್ನೆಲ್ಲ
ಕಾಣದೂರಿಗೆ ಸಾಗಿಸಲೆಂದು .............
ಬಚ್ಚಿಟ್ಟು ಕೊಂಡಿದ್ದ ನೋವಿನ ಚೀಲ
ಬಿಚ್ಚಿಟ್ಟು ಕೊಂಡು ಉಸಿರುಗಟ್ಟಿಸುವಂತಾಗಿದೆ
ಮನೆ ಮಂದಿಗೆಲ್ಲ......
ಸಂಬಂದಗಳ ಸೂಳಿಯಲ್ಲಿ ನಿಂತಿರುವಾಗ
ಬೇರೋಂದು ಎದ್ದು ಮರವನ್ನೆ ಮಸಣದೆಡೆಗೆ
ಸಾಗಿಸಿದಂತಾಗಿದೆ ಇಗ.......
ಹುಟ್ಟುವವರಾರು ಸಾಯುವವರಾರು
ಹುಟ್ಟು ಸಾವಿನ ನಡುವೆ ಬದುಕಿ ನರಳುವವರಾರು
ಇಂತವರ ನಡುವೆ ಸತ್ತುಬದುಕುವವರೆ ಹೆಚ್ಚು...
ನಡುವಲ್ಲಿ ಇರುವವರಿಗೆ ಬಂದಿದೆ ಕಂಟಕದ ನಂಟು ಬಿಡಿಸಿಕೊಳ್ಳುವ ಹಾಗಿಲ್ಲ ಉಸಿರುಗಟ್ಟಿ ಸಾಯುವ ಹಾಗು ಇಲ್ಲ ಇದ್ದು ನರಕ ಅನುಭವಿಸಬೇಕಿದೆ ಇಗ.........
ಕಾಡುತಿದೆ ಈ ಬೇಸರ
ತಿಳಿಯದು ಈ ಮನಸ್ಸಿನ ಭಾವ
ಮರೆಯಾಯಿತು ಈ ಸಂತಸ ಸಮಯ
ಕಾಯುತಿರುವೆ ನಾ ಖುಷಿಯ ದಿನವ
ಮನದ ಕನ್ನಡಿಯ ಒಳಗೆ ಆವರಿಸಿತು
ಈ ಬೇಸರದ ಮುಗುಳು ನಗು
ಅರಿಯಿತು ನನಗೀಗ ಕೌತುಕದ ಭಾವ
ನೋವುನಲಿವುಗಳ ಜೊತೆ ಬೆರೆಯಿತು
ಈ ಬೇಸರ.......
ತಿಳಿ ಮೌನದ ಜೊತೆಗೂಡಿತು ಈ ಬೇಸರ
ನನ್ನ ನೆರಳಾಗಿ ಬಂತು ಸಂತೋಷದ ಭಾವನೆಯಲ್ಲಿ ಜೊತೆಗೂಡಿತು
ಬಿಡುಗಡೆಯ ಹಾದಿಯಲ್ಲಿ
ಕೊನೆಗೂ ಒಂದು ದಿನ ಮರೆಯಾಗಲಿ
ಈ ಬೇಸರ........