Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಪ್ರಶ್ನೆ....?

ಕನಸೇ ಕನಸೇ ನನಸಾಗುವೆಯಾ!
ಮನಸೇ ಮನಸೇ ಮನದ
ಮಾತನು ಆಲಿಸೆಯಾ!
ಹೇಳಲು ನೂರಾರೂ
ಮಾತೊಂದಿದೆ
ಹೇಳಲು ಆಗದೆ ಈ ಜೀವ
ನರಳುತ್ತಿದೆ,,,!
ಕಾಡುತ್ತಿರೊ ನೂರಾರು ಪ್ರಶ್ನೆಗೆ
ಉತ್ತರ ನೀ ಹೇಳುವೆಯಾ...!
- ಹರಿಣಿ(ಹನಿ)

- Harini (Hani)

24 Jan 2019, 08:41 pm

ಸ್ವಾರ್ಥಿಗಳು

ಸ್ವಾರ್ಥಿಗಳು ಇವರು ಸ್ವಾರ್ಥಿಗಳು
ಹುಡುಗ ಹುಡುಗಿಯರಿವರು ಸ್ವಾರ್ಥಿಗಳು

ಹದಿಹರೆಯದ ವಯಸ್ಸಿನವರು
ಪ್ರೀತಿ ಪ್ರೇಮದಲಿ ಬಿದ್ದವರು
ಕುರುಡು ಪ್ರೀತಿಯಲಿ ತಿರುಗುವರು
ಜಗವ ಮರತೆ ನಿಂತವರೊ ಇವರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು

ಹುಚ್ಚು ಪ್ರೀತಿಯ ನಂಬಿದರು
ಅಪ್ಪ ಅಮ್ಮನ ಪ್ರೀತಿ ಮರೆತರು
ನೆನ್ನೆ ಮೊನ್ನೆ ಬಂದವರ ಕೈ ಹಿಡಿದರು
ಅವರ ಗುಂಗಲಿ ಇವರನ್ನು ಬಿಟ್ಟರು
ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು

ಪ್ರೀತಿ ಕೈಕೊಟ್ಟಾಗ ಸ್ನೇಹಿತರು ನೆನಪಾದರು
ಅಪ್ಪ ಅಮ್ಮನೇ ಅವರಿಗೆ ದೇವರಾದರು
ಅದೆ ಪ್ರೀತಿ ಮತ್ತೆ ಸಿಕ್ಕಾಗ ಸ್ನೇಹಿತರನು ಮರೆತರು,
ಪ್ರೀತಿ ಒಪ್ಪದಿದ್ದಾಗ ಅಪ್ಪ ಅಮ್ಮನೇ ಶತ್ರುಗಳಾದರು
ಇಂತಹ ಸ್ವಾರ್ಥಿಗಳೊ ಇವರು ಸ್ವಾರ್ಥಿಗಳು
##ರಜನೀಶ##

- RajaneeshNandikolmath

24 Jan 2019, 01:51 am

ಮುಸುಕಿದ ಮಂಜು

ಸುಡುವ ಸೂರ್ಯನು
ಚಂದ್ರನಂತಾದ
ಮುಸುಕಿದ ಮಂಜನು
ಹೊಡೆದೋಡಿಸದಾದ

ಹಿಮದ ರಾಶಿಯಲ್ಲಿ
ರವಿಯ ರಶ್ಮಿಯೆಲ್ಲಿ
ಹರಸುತಿವೆ ನನ್ನೀ ನಯನಗಳು
ಹಿಮಾವೃತವಾಯಿತೆ ಈ ಹಗಲು

ಗ್ರಹಗಳಲ್ಲೆ ಅಗ್ರಗಣ್ಯನು
ಜಗ ಬೆಳಗೋ ಸೂರ್ಯನು
ಬೇದಿಸಲಾರದೆ ನಿಂತನು
ಅರೆಗಳಿಗೆ ಮಂಜೆಂಬ ಶತೃವನು

ಕಷ್ಟ- ನಷ್ಟ ಗಳು ಅಶಾಶ್ವತ
ಸಾಧನೆಯ ಪ್ರಭೆಯೆ ಶಾಶ್ವತ
ಸುಖದ ಸುಪ್ಪತ್ತಿಗೆ ಬರೀ ಕಾಲ್ಪನಿಕ
ಶ್ರದ್ದೆ-ನಿಷ್ಟೆಯಿಂದಿರಬೇಕು ನಮ್ಮೆಲ್ಲರ ಕಾಯಕ




ಶಾರದ

- ಶಕುಂತಲಾ

21 Jan 2019, 04:34 pm

ದೀಪದ ಮಲ್ಲಿ

ಕತ್ತಲ ಅಂಗಳದಲ್ಲಿ ಐದು ಎಸಳಿನ
ಮಿಣುಕು ದೀಪವ ಹಿಡಿದು
ನಿಂತಿರುವಳಿದೋ
ಸಿಂಗಾರಗೊಂಡ ಮನೋಹರಿ,
ಮೆಲ್ಲ ಬೀಸುತ್ತಿದೆ ಗಾಳಿ
ಕೊಂಚ ಕರುಣೆಯನು ತೋರಿ
ತೊಂದರೆಯನೊಡ್ಡದೆ ತರುಣಿಗೆ
ತನ್ನಿರುವಿಕೆಯನು ತೋರದೆ,
ಹಸಿರು ಸೀರೆಯನುಟ್ಟು
ಮುಡಿಗೆ ಮಲ್ಲಿಗೆಯನಿಟ್ಟು
ಗಳಿರು ಹಸಿರು ಬಳೆ
ದೈವ ಭಕ್ತಿಯಲಿ ನವಿರು
ಸಿಂಗಾರಗೊಂಡವಳೇ..
ತುಟಿಯಂಚಲಿ ತುಸು
ನಗುವಿನ ಲೇಪನ,
ಮುಗ್ದ ಮೊಗದಿ ತುಂಬಿದ
ಆಧ್ಯಾತ್ಮ ಪ್ರೇರಣೆಯ ಹೊಳಪು
ಕಿರು ಹಣತೆಯ ಬೆಳಕಿನಲ್ಲಿ
ಮಿರುಗಿಹುದು ಆಕೆಯ
ಶುದ್ಧ ಮನಸಿನ ಮೊಗ.

- ಶ್ರೀಗೋ.

20 Jan 2019, 09:27 pm

ಸಂಕ್ರಾಂತಿ

ಸಂಕ್ರಾಂತಿ ಬಂದಿದೆ ಸಂತೋಷ ತಂದಿದೆ
ಆನಂದ ಇಲ್ಲಿದೆ ಹರುಷ ತಂದಿದೆ

ಎಳ್ಳು ಬೆಲ್ಲ ಹಂಚುತ ಎಲ್ಲರಲೂ ಖುಷಿ ತಂದಿದೆ
ಎಲೆಲ್ಲೂ ಜನರಲ್ಲೂ ಹೋಸದು ತಂದಿದೆ

ಸುಗ್ಗಿ ಸಂಭ್ರಮ ಬಣ್ಣದ ರಂಗೋಲಿ ಸಡಗರ ಎಂದಿದೆ
ಹಬ್ಬ ಆಚರಿಸಿ ಹೋಳಿಗೆ ರುಚಿಯುಣಿಸಿ ಎಂದಿದೆ

ಮಹಿಳೆಯರ ಮುಖದಲ್ಲೂ ನಗು ಚಲ್ಲಿದೆ
ಮಕ್ಕಳ  ಮುಖದ ಕಾಂತಿ ಸಂಕ್ರಾಂತಿಯಲ್ಲಿ ಹೆಚ್ಚಿದೆ

- RAJANI

20 Jan 2019, 05:04 pm

ನೀರಂತೆ ನೀನಾಗು

ನೀರಂತೆ ನೀನಾಗು ಎಗ್ಗು ತಗ್ಗುಗಳಲ್ಲಿ ಹಸನಾಗಿ ಬೆರೆತೊಗು, ಯಾರೂ ನಿನ್ನವರಿಲ್ಲದಿದ್ದರೆ ಎಲ್ಲರೂ ನಿನ್ನವರೆಂದು ತಿಳಿದು ನೀ ಸಾಗು.

ಎಲ್ಲರೂ ನಿಂತ ಸಾಲೆಂದು ದೂರ ನಿಂತರೆ ನೀನು, ದೂರವೇ ನಿಲ್ಲುವೆ ಸಾಲು ಬರಿದಾದರೂನು.

ಬಿಸಿಲಲ್ಲಿ ಬೇಗೆ ಆಗು ಕಡಲು ತನ್ನಲ್ಲಿರಿಸದಿದ್ದಲ್ಲಿ ಮೊಡಕೆ ವಲಸೆ ಹೋಗು, ಮತ್ತೆ ಮಳೆಯಾಗಿ ಭುವಿಯ ಮಡಿಲ ಕೂಸಾಗು.

ಚಳಿಯಲ್ಲಿ ಶೀತವಾಗು ಕರಗದಷ್ಟು ಗಟ್ಟಿಯಾಗು, ಉಸಿರ ಬಿಸಿಗೆ ಕರಗಿಹೋಗು ನಿನ್ನಂತೆ ನೀನಾಗು ನೀರಂತೆ ನೀ ಸಾಗು.

- ಚುಕ್ಕಿ

20 Jan 2019, 04:22 pm

ಗೆಳತಿ

ಸ್ವಲ್ಪ ಕೋಪ, ಜಾಸ್ತಿ ತರಲೆ,
ಮುದ್ದು ಮನಸಿನ ಮುಗ್ದ ಹುಡುಗಿ
ಇವಳ ಕಂಡರೆ ಯಾರಿಗಿಲ್ಲ ಮನಸ್ತಾಪ
ನಗುಮನಸಿನ ಸುಂದರ ಈ ಪುಡುಗಿ

ಮನಸು ಮಗುತರ, ನಿರ್ಮಲ ಹೃದಯ ,
ಯಾರಿಗೂ ನೋಯಿಸಿಲ್ಲ ಹಿಂದೆಂದೂ
ಎಂದೂ ಮರೆಯೋದಿಲ್ಲ ಒಂದು ವಿಷಯ
ಕುಟುಂಬವನ್ನು ಬಿಟ್ಟುಕೊಡಲ್ಲ ಮುಂದೆಂದೂ!

ಸ್ನೇಹಕ್ಕೆ ಬೆಲೆಕೊಡುವಳು,ಪ್ರೀತಿಗೆ ತಲೆಬಾಗುವಳು
ಮಗುವಿನ ಜೊತೆ ಮಗುವಂತೆ ಆಡಬಲ್ಲಳು
ನಗುಮೊಗದಿ ಎಲ್ಲರೊಂದಿಗೆ ಒಂದಾಗುವಳು
ಸುಖ ದುಃಖದಲ್ಲಿ ಸಮಾನ ಭಾಗಿಯಾಗುವಳು!

ನೇರನುಡಿಯಿಂದ ಮನಸ್ಸು ಗೆದ್ದವಳು ನೀನು
ಸತ್ಯದ ಮಾರ್ಗದಲಿ ಗೆಲುವು ಎಂದೂ ನಿನ್ನದಿರಲಿ
ಕನಸುಗಳು ನನಸಾಗಲೆಂದು ಹಾರೈಸುವೆ ನಾನು
ನಮ್ಮಿಬ್ಬರ ಸ್ನೇಹದ ಹೂವು ಎಂದೂ ಬಾಡದಿರಲಿ!

- ಪ್ರಿಯಾಂಕ

20 Jan 2019, 12:59 pm

ಪ್ರಕೃತಿ ಮತ್ತು ಮನುಷ್ಯ.........??

ಕಪಟ ಮೋಸ ವಂಚನೆಯ ಆಸೆಯ ಸುಳಿಯಲ್ಲಿ ಕೆಟ್ಟದ್ದನ್ನು ಮಾಡುತ್ತಿರುವ ಓ ಮನುಷ್ಯನೇ
ಒಂದು ಸಾರಿ ನೀನ್ನ ಕಣ್ಣ ತೆರೆದು ನೋಡು ಮನುಷ್ಯನೇ ಆ ಪ್ರಕೃತಿಗೆ
ಯಾವುದೇ ತರಹದ
ಕಲಾಪ ಗಳಿಲ್ಲದೆ ಪ್ರತಿಬಿಂಬಿಸುತ್ತದೆ.....

"ವಿನೋದ್ ಕುಮಾರ್".........

- ವಿನೋದ್ಕುಮಾರ್

20 Jan 2019, 12:00 am

ಮನಸಿನ ವೇದನೆ......

ಮರೆತರು ಮರೆಯಲಾಗದ ನಿನ್ನ ಪ್ರೀತಿ
ಸುಟ್ಟರು ಸುಡದಿರುವ ಹಳೆ ನೆನಪುಗಳು
ಕೊಂದರೂ ಸಾಯದ ಈ ಹಾಳಾದ ಮನಸ್ಸಿನ ಭಾವನೆಗಳು
ಇದಕ್ಕೆಲ್ಲ ಕಾರಣ ನಿನ್ನ ಪ್ರೀತಿ
ಕೆಲವೊಮ್ಮೆ ಹೇಳದೆ ಕೇಳಿದೆ ಬಂದು ಹೋಗುವ ಪ್ರೀತಿಗೆ ಕಣ್ಣೀರಿನ ಪ್ರೀತಿನೆ ಶಾಶ್ವತ ನಾ.........?

"ವಿನೋದ್ ಕುಮಾರ್".......

- ವಿನೋದ್ಕುಮಾರ್

19 Jan 2019, 11:45 pm

ನೆನಪೆಂಬ ಪುಟದಿಂದ ಮರೆಯಲಿ ಹೇಗೆ ನಿನ್ನ

ಮನಸ್ಸಿನ ದೇವತೆ ನೀನು,ನನ್ನೊಂದಿಗೆ ಇನ್ನಿಲ್ಲ
ಈ ಜೀವಕ್ಕೆ ಸಂಗಾತಿ ನೀ ಇನ್ನೂ ನನಗಿಲ್ಲ
ಈ ಹೃದಯಕ್ಕೆ ಒಡತಿಯೂ ನೀನು ಎಂದೂ ನಂಬಿದೆ ನಾನು
ಈ ಜೀವದ ಭಾವನೆಗಳನ್ನು ತಲ್ಲಿಸಿದವಳು ನೀನು
ಒಬ್ಬಂಟಿ ಆಗಿರಬೇಕು ಜೀವಿಸಲು ಕಲಿಯಬೇಕು
ನೀ ನನ್ನ ಮರೆತಿರುವೆ ಅದನ್ನು ನೆನೆಸಿ ಕೊರಗಬೇಕು
ನೆನಪಿಸೋ ಮಾತೇ
ಇನ್ನಿಲ್ಲ ನಿನ್ನ ನೆನಪಲ್ಲಿ ಕೊರಗುವುದಿಲ್ಲ
ಪ್ರೀತಿ ಮಾಡಿದ ದಿನವ ಯೋಚಿಸಿ ನೀನು ಎಂದೂ ಅಳಬೇಕು
ನಾನು ನೀಡಿದ ಪ್ರೇಮಕ್ಕೆ ಬದಲು ನೋವೇ ನನಗಿನ್ನು ಸಾಕು
ದ್ವೇಷ ನನಗೆ ಇಲ್ಲ ನಿನ್ನಲ್ಲಿ ಕರುಣೆ ಅನ್ನೋದೆ ಇಲ್ಲ
ನಿನ್ನ ಮೋಸಕ್ಕೆ ಬಲಿಯಾದ ಪಾಪಿ ನಾನು ಇನ್ನೊಂದು ನಿನ್ನ ಮುಂದೆಯೇ ಸಾಧಿಸಿ ಬಾಳುವ ಆಸೆ ಇದೆ ಒಂದೂ
ಮರೆಯಬೇಕು ನಿನ್ನ ನಾನು ಮರೆತು ಜೀವನ ಕಳೆಯಬೇಕು ಇನ್ನೂ
ನಿನ್ನ ಕೈ ಹಿಡಿದು ನಡೆಸುವವನು ಭಾಗ್ಯವಂತನಿರಬೇಕು ಜೀವಿಸುವ ಕಾಲ ನೀನಿನ್ನು ಸುಖವಾಗಿ ಇದ್ದರೆ ಸಾಕು ನೋವು ನನಗಿರಲಿ ಖುಷಿಯು ನಿನ್ನ ಜೊತೆಗಿನ್ನು ಬರಲಿ
ನನ್ನೊಂದಿಗೆ ಕಳೆದ ದಿನವನ್ನು ಕನಸು ಎಂದು ನೆನೆಸು ವಿಧಿಯಾಟದಲ್ಲಿ ಬಲಿಯಾದನೆಂಬ ನೋಡಿ ಬದುಕಲೇ ಇನ್ನೂ

- ಎಸ್.ಬಿ

18 Jan 2019, 08:24 pm