Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಬ್ಬಲಿ

ಬಂಧು ಬಳಗ ಇದ್ದು ತಬ್ಬಲಿ ನಾನು
ನನ್ನ ನೆರಳ ಕಾಯುವ ಜೀವವಿಲ್ಲದೆ.
ಎರಡು ಕಣ್ಣುಗಳಿದ್ದು ಕುರುಡಿ ನಾನು ಕಣ್ಣೀರು
ಒರೆಸುವ ಪ್ರೀತಿ ಇಲ್ಲದೆ.

ಬಿಡಿ ಬಿಡಿ ಬದುಕುಗಳು ಒಟ್ಟಿಗೆ ಉಸಿರಾಡುತ್ತಿದ್ದರು ಒಂದೇ ಉಸಿರಂತೆ ನಾವಿಲ್ಲ , ಕಮರಿ ಹೋದ ಆಸೆಗಳು ಬೆಚ್ಚಿ ಬೀಳಿಸುವ ಸತ್ಯಗಳು.

ಕಾಣದಿರುವ ಕಣ್ಣೀರ ವ್ಯತೆಯಿಲ್ಲದ ಸವಿಯದಿರುವ ಕಂಬನಿಯ ರುಚಿ ಇಲ್ಲ ,
ಯಾರಿಗಾಗಿ ದಿನನಿತ್ಯದ ಹೋರಾಟ ಕ್ಷಣಮಾತ್ರ ಸಮಯವಿಲ್ಲದೆ ಸತ್ತ ಕನಸುಗಳ ಎತ್ತಿ ಬಿಸಾಕಲು.

- ಚುಕ್ಕಿ

06 Dec 2017, 09:22 am

ಮೂಖ ಪ್ರೇಮಿ

ದಿನಾ ಬೆಳಗಾಯಿತೆಂದರೆ
ಅವಳ ಮನೆ ಮುಂದೆ ನಾನು
ಕಿಟಕಿಯಲ್ಲಿ ಅವಳು
ಕಣ್ಣ ಸನ್ನೆ , ಕೈ ಸನ್ನೆ
ಮೈ ಕೈ ತಾಕಿಸದೆನೆ
ಎದೆ ಗೂಡಲ್ಲಿ ಬಚ್ಚಿಡುವ ಹಠ
ಚಂದ್ರನ ಕಿವಿಯಲ್ಲಿ ಗುಟ್ಟು
ಹೇಳಿ ಕಳಿಸುವಳು
ನದಿ ಅಲೆಯ ರಮಿಸಿ
ನನ್ನ ಅತ್ತ ಕಳುಸುವಳು
ಪ್ರೀತಿ ನೀವೇದಿಸಲು
ಮಾತಿಲ್ಲ ಬರಿ ಕೈ ಸನ್ನೆ ಕಣ್ಣ ಸನ್ನೆ
ಮರಿಗುಬ್ಬಚ್ಚಿ ಅವಳು
ಹಾಲನೊರೆಯ ಕೆನೆಯವಳು
ಪತಂಗದೊಡನೆ ಪತ್ರಕಳಿಸಿ
ವಿಚಾರಿಸುವಳು ಮೂಖ ಪ್ರೇಮಿ ಅವಳು
ಹಠಕ್ಕೆ ಕೌರವನನ್ನೆ ಮೆಚ್ಚಿದಳು

- ಕೌರವ

06 Dec 2017, 04:32 am

ಸೃಷ್ಟಿ ರಹಸ್ಯ

ಬ್ರಹ್ಮಾಂಡವ ಸೃಷ್ಟಿಸಿದವರಾರು
ಕೋಟ್ಯಾಂತರ ಜೀವರಾಶಿಗಳ ಕರ್ತರಾರು
ಅಗಣಿತ ದೇವರುಗಳನಿಳೆಗೆ ತಂದವರಾರು
ಅಪರಿಮಿತ ವಿಷಯಗಳ ಜನಕರಾರು
ಯಾರು ....ಯಾರು.....ಅಗೋಚರರಾರು?

ಆಗಸವ ಅಳತೆ ಮಾಡುತ್ತ
ಆನಂದದಿ ಹಾರಾಡುವ ಹಕ್ಕಿಗೆ
ಯುಕ್ತಿ- ಶಕ್ತಿಯನಿತ್ತವರಾರು?
ಮುತ್ತಿನ ರಾಶಿ ಕದಡುತ;
ಹೊಂಬೆಳಕ ಚೆಲ್ಲುತ ಬರುವ
ಭಾನುವ- ಬಾನಲಿ ತಂದವರಾರು?

ಬಿರು ಬೇಸಗೆಯಲ್ಲು ,ಸತ್ವವಿಹೀನ
ವಾಗಿಹ ತರು ಲತೆಗಳು ತಂಪಾದ
ಚಾಮರವ ಬೀಸುತಿರಲು ನಿಸ್ವಾರ್ಥ
ಸೇವೆಗೆ ಸಮನಾವುದಿಹುದೀಜಗದಿ

ಮಾಂಸದ ಮುದ್ದೆಯಾಗಿ ಜನಿಸಿದನು
ಮುಲ್ಲೊಕಗಳ ಸಂಪರ್ಕಹೊಂದಿಹನು
ಕಲೆ,ತತ್ವ,ವಿಜ್ಞಾನಾದಿಗಳ ಕರ್ತನಿವನು
ಸಕಲವ ಸೃಷ್ಟಿಸುವ ಸೃಷ್ಟಿಕರ್ತನ ಸೃಷ್ಟಿಸುವನು

ಲೆಕ್ಕವಿಲ್ಲದಷ್ಟು ನಿಯಮಗಳ ಮಾಡಿಹನು
ಲೆಕ್ಕವಿಲ್ಲದಷ್ಟು ಶಾಸ್ತ್ರ-ಪುರಾಣಗಳ ರಚಿಸಿಹನು
ತನ್ನ ಸಾಹಸದಿ ಇತಿಹಾಸ ಸೃಷ್ಟಿಸಿಹನು
ಸೃಷ್ಟಿ ನಿಯಮಗಳ ತಲೆಕೆಳಗಾಗಿಸಿಹನಿಂದು

ಸಹಜತೆಗೆ ಸೆಡ್ಡೋಡೆದು ಬೆಳೆದಿಹುದೀಧರೆ
ಅಸಹಜವಾಗಿ ,ನಿಸರ್ಗವು ನಿಂದಿಹುದು
ಸಂಹಾರಕಾಗಿ,ಮಾನ ರಕ್ಷಣೆಗೆಂದು
ಮಾನ ರಕ್ಷಿಸಿದರೆ ಉಳಿಯುವುದು
ನಮ್ಮೆಲ್ಲರ ಪ್ರಾಣವಿಂದು


ಶಾರಧ

- ಶಕುಂತಲಾ

05 Dec 2017, 09:56 pm

ಆಸೆ

*೧.ಆಸೆ*

ಉಕ್ಕುವ ಸಾಗರವ ಸೇರುವ ತವಕದಲಿ
ಹರಿಯುತ್ತಿದ್ದಾಳೆ ತನ್ನೆಲ್ಲ ಆಸೆಗಳ ಜೊತೆಯಲ್ಲಿ
ಹಸಿರುಗಳ ನಡುವಲ್ಲಿ ತನ್ನದೇ ದಾರಿಯಲ್ಲಿ
ಸಾಗುತಿಹಳು ಬೆಟ್ಟ ಗುಡ್ಡದ ಕಣಿವೆಯಲಿ!

ಬರಡು ಭೂಮಿಯನ್ನು ಸ್ಪರ್ಶಿಸಿ
ಬಳಲಿದ ಜೀವಗಳಿಗೆ ತಂಪೆರೆದು
ಸೋತ ಹೃದಯಗಳಿಗೆ ಮುದನೀಡಿ
ಧುಮುಕುತ್ತಿದ್ದಾಳೆ ಶರವೇಗದಲಿ ತನ್ನಿನಿಯನ ಸೇರಲು!

ಜುಳುಜುಳು ನಾದದಲಿ ಸಂಗೀತವ ಗುನುಗುತ
ಅಂಕುಡೊಂಕಿನ ದಾರಿಯಲಿ ನರ್ತನವ ಮಾಡುತ
ನಿಸರ್ಗದ ಸೊಬಗಿನಲಿ ತಾನು ಒಂದಾಗುತ್ತ
ಕಾಣಿಸುತ್ತಿರುವಳು ಕಣ್ಣು ಕೋರೈಸುವಂತೆ!

ಜಲಚರ ಜೀವಿಗಳನ್ನು ತನ್ನಲ್ಲೇ ಹೊತ್ತುಕೊಂಡು
ಬೆಳದಿಂಗಳ ರಾತ್ರಿಯಲ್ಲಿ, ನಿಶ್ಶಬ್ಧದ ಮಡಿಲಿನಲ್ಲಿ
ಚುಕ್ಕಿ ಚಂದ್ರಮರ ಸಾಕ್ಷಿಯಾಗಿ
ಸಾಗರವ ಸೇರಿದಳು ತುಸುನಾಚುತಲಿ!

ಪ್ರಿಯಾಂಕ✍

- ಪ್ರಿಯಾಂಕ

05 Dec 2017, 09:55 pm

ಕಿಡಿ

ನನ್ನೊಳಗಿನ ಕಿಡಿ ಹಾರಿ
ಊರ ಸುಡದಿರಲಿ
ಅವಿತಿಡುವೆ ಕಿಡಿಯನ್ನ
ಅದು ದ್ವೇಷದ್ದು ಅಸೂಯೆದ್ದು
ಕಾಡ ಸುಡುವ ಬೆಂಕಿಯದು
ಲೋಭದ್ದು ಮೋಹದ್ದು
ಮನ ಮನದಿಂದ ಊರು ಊರಿಂದ
ಹಬ್ಬಿ ಉರಿಸುವ ಕಿಡಿಯದು
ಅವಿಚಿಡುವೆ ಎದೆಯಲ್ಲಿ
ಆಚೆ ಹೊಗದಂತೆ
ನೀರ ಸುರುವಿಯರೊ ಅದಕ್ಕೆ
ಎಣ್ಣೆ ಹೂಯಿವೆರೊ ದಗಿಸಲಿಕ್ಕೆ
ಹೊತ್ತಿದರೊಮ್ಮೆ ಉರು ಊರ ಸುಡುವುದು ಮತ್ಸ್ಯೆರ್ಯದ ಮದದಿಂದ
ನನ್ನೊಳಗಿನ ಕೌರವನ ಎದೆಯಿಂದ

- ಕೌರವ

05 Dec 2017, 09:55 pm

ಅರುಣಾ ರಾಗ..ಹಾಡುವ..

ಏನೀ .. ಮನಸ .. ಭಾಷೆ...
ಏನೀ ..ಹೃದಯದ..ಆಸೆ..
ಮನದಿಂಗಿತ ಹೇಳೊ ಬಯಕೆ
ಹೇಗೆ ಏಳಲಿ ಹೆದರಿಕೆ....

ಮನದಲ್ಲಿ, ಏನೋ ಹುಚ್ಚು ತುಡಿತ|
ಹೆಚ್ಚಾಗಿದೆ ನನ್ನ ಹೃದಯದ ಬಡಿತ|
ನನ್ನ ನೋಡಿ ನಗುತ್ತಿದೆ ದಿಗಂತ|
ಮತ್ತೇ ಬರಬಾರದೇ ವಸಂತ..
ನನ್ನ ಇನಿಯನ ಕೂಗಿ ಕರೆಯುತಾ..|

ತಂಗಾಳಿಯಲಿ...ಕುಳಿತು.. ಹಾಗೆ..
ಪಿಸು ಮಾತಲಿ ಹೇಳಲೇ ಒಮ್ಮೆ..
ಚಿಲಿಪಿಲಿ ಗುಟ್ಟುವ..ಹಕ್ಕಿಯ ...ಹಾಗೆ..
ನಿನ್ನ ಹೆಸರನ್ನ ಕೂಗಲೇ ಒಮ್ಮೆ..
ಸಮುದ್ರವ ಸೇರುವ ನದಿಯ ಹಾಗೆ..
ನಿನ್ನ ಬಂದು ಸೇರುವೇ.. ಒಮ್ಮೆ..
ಇನಿಯಾ...ಮನ ಬಯಸಿದೆ....ಈಗೇ..
ಇಬ್ಬರು ಸೇರಿ,ಹಾಡಲು.....
ಅರುಣಾ ರಾಗವ ಒಮ್ಮೆ....
ಅದುವೇ,ಒಲವಿನ........ಮಹಿಮೆ
ನನ್ನ ಪ್ರೀತಿಗೆ.... ಹಿರಿಮೆ...

- Bhagya Girish

05 Dec 2017, 09:36 pm

ಕಣ್ಣಾಮುಚ್ಚಾಲೆ.....

ಓ ಇರುಳೆ ಕಣ್ಣಾ ಮುಚ್ಚಾಲೆ
ಆಡುವೆಯೇನೆ ಬೆಳಕಲ್ಲೆ ಕಾಣದ
ಮೋಸಗಳು ನಿನ್ನ ಇರುಳಲ್ಲಿ ಹೇಗೆ
ತಾನೆ ಕಂಡವು ಓ ಇರುಳೆ
ಸಾಕು ಈ ಕಣ್ಣಾ ಮುಚ್ಚಾಲೆ
ಅಲೆದು ಅಲೆದು ಸಾಕಾಗಿದೆ
ಕಣ್ಣಿಗೆ ಕಾಣದ ಕಪಟಗಳು
ಎಷ್ಟೋ ಇದ್ದರೂ ನಾ ಎಡವಿ ಬಿಳುವ
ಮುನ್ನ ನಿಲ್ಲಿಸಿ ಬಿಡೇ ಈ ಕಣ್ಣಾಮುಚ್ಚಾಲೆ ಆಟವನ್ನ.....
ಕಂಡರು ಕಾಣದಂತೆ ಅವಿತು
ಕೋಂಡಿರುವವು ಮೋಸದ
ಬುತಗಳು ನಾ ಎಲ್ಲಿ ಹುಡುಕಲಿ
ಬೇಳಕನ್ನ ನಿನ್ನ ಇರುಳಲ್ಲಿ ......
ಆ ಬುತಗಳು ನನ್ನ ಹಿಡಿದು
ನುಂಗುವ ಮುನ್ನ ನಿಲ್ಲಿಸೆ
ಈ ಕಣ್ಣಾಮುಚ್ಚಾಲೆಯನ್ನ......

- ರಾಗಸಿರಿ....

05 Dec 2017, 06:38 pm

ಕಣ್ಣೀರೆ

ಕಣ್ಣೀರೆ ಬಿಟ್ಟು ಬದುಕೇ ನನ್ನ ,
ನಿನ್ನ ಒಲವಿನ ಸುರಿ ಮಳಯಲ್ಲಿ ಪ್ರತಿಕ್ಷಣ
ನನ್ನ ಕಟ್ಟಿ ಹಾಕುತ್ತಿರುವೆ ಬಂಧನದ ಮಗ್ಗುಲಲ್ಲಿ.

ಸ್ವಾರ್ಥಿ ಆಗದಿರು ಇನ್ನು ಚುರು
ನೀನು ನನ್ನ ಆಂಟಿ ಬದುಕಬೇಕೆಂದು.
ನನಗೆ ತಿಳಿಯದ ಹಾಗೆ ಬಂದಿಸಿರುವೆ ನನ್ನ ನಗೆಯನ್ನು ಅವುಡಿನ ಹಿಂದೆ.

ಮಂದಹಾಸ ನನ್ನ ನೋಡುವ ಆಸೆಯಾಗಿ
ನಿನ್ನ ಕಣ್ಣ ತಪ್ಪಿಸಿ ನನ್ನೊಳಗೆ ನುಗ್ಗಿ ಬಂತು, ಅರೆಕ್ಷಣ ಹಾಯಾಗಿರಲು ನನ್ನಲ್ಲಿ ಅಷ್ಟರಲ್ಲೇ ನಿನ್ನ ಕಣ್ಣು ಕುಗ್ಗಿ ಹೋಯಿತೆ ,
ನಿನ್ನ ಮುನಿಸು ಕೊಂದು ಹಾಕಿದೆ ಅದರ ಕನಸು.

- ಚುಕ್ಕಿ

05 Dec 2017, 05:11 pm

ಅವಸ್ಥೆ

ಅದೆಷ್ಟು ಉಸಿರು ಬಿಗಿ ಹಿಡಿದು
ಮಾತು ತಡೆಹಿಡಿದು ಬದುಕಲಿ
ವ್ಯವಸ್ಥೆಯ ಎದರು ನನ್ನ ಹಠ
ಉಣ್ಣುವನಿಗೆ ಅನ್ನವಿಲ್ಲ
ಉಣ್ಣದ ದೇವರಿಗೆ ಹಾಲನ್ನ ನೈವೇದ್ಯ
ದುಡಿಮೆಗೆ ಫಲವಿಲ್ಲ
ತಲೆ ಒಡೆದು ತಿರುಗುವನಿಗೆ ಎಲ್ಲ
ರಾಮ ಕೃಷ್ಣ ಅಲ್ಲಾ ಯೇಸು
ಬಡವರ ಪಾಲಿಗೆ ದೇವರೆ ಅಲ್ಲ
ಹಾಡಿಗೂ ಪಾಡಿಗೂ ಸಂಬಂಧವೆ ಇಲ್ಲ
ಕಾಸಿಗೆ ಹಾಸಿಗೆ ವ್ಯಾಪಾರ
ಸುಮ್ಮನೆ ಕುಂತನೆ ಯುವ ನೇತಾರ
ದುಳ್ಳರು ದುಷ್ಟರ ಹುನ್ನಾರಾ
ಸೀಡಿದೆಳುವುದೆಂದು ನೆತ್ತಾರ
ಭಿತ್ತಲಿ ಭತ್ತಲಿ ಕ್ರಾಂತಿಯ ದೀವಿಗೆ
ಸರಿ ಹೊತ್ತಲಿ ಮೊಳಗಲಿ ಏಳಿಗೆ ಬೆಸುಗೆ
ಕಿಡಿ ಹಬ್ಬುವದೆಂದು ಹೊಸ ಸತ್ಕಾರ

- ಕೌರವ

05 Dec 2017, 02:40 pm

ನಿವೇದನೆ

ಕಲ್ಲನ್ನೂ ತಟ್ಟಿ-ತಟ್ಟಿ
ಮಾತನಾಡಿಸುವ ನೀನೇ
ಕಲ್ಲಾದರೆ ಗೆಳತಿ.....
ಹೇಳು.. ಹೇಗೆತಾನೆ
ಉಸಿರಾಡೀತು ಪ್ರೀತಿ.!
ಉಳಿದೀತೆ ಹೇಳು..
ಎದೆಗೂಡಿನ ಜ್ಯೋತಿ.!

- ನಾಗರಾಜ್

05 Dec 2017, 02:21 pm