ದಿನಾ ಬೆಳಗಾಯಿತೆಂದರೆ
ಅವಳ ಮನೆ ಮುಂದೆ ನಾನು
ಕಿಟಕಿಯಲ್ಲಿ ಅವಳು
ಕಣ್ಣ ಸನ್ನೆ , ಕೈ ಸನ್ನೆ
ಮೈ ಕೈ ತಾಕಿಸದೆನೆ
ಎದೆ ಗೂಡಲ್ಲಿ ಬಚ್ಚಿಡುವ ಹಠ
ಚಂದ್ರನ ಕಿವಿಯಲ್ಲಿ ಗುಟ್ಟು
ಹೇಳಿ ಕಳಿಸುವಳು
ನದಿ ಅಲೆಯ ರಮಿಸಿ
ನನ್ನ ಅತ್ತ ಕಳುಸುವಳು
ಪ್ರೀತಿ ನೀವೇದಿಸಲು
ಮಾತಿಲ್ಲ ಬರಿ ಕೈ ಸನ್ನೆ ಕಣ್ಣ ಸನ್ನೆ
ಮರಿಗುಬ್ಬಚ್ಚಿ ಅವಳು
ಹಾಲನೊರೆಯ ಕೆನೆಯವಳು
ಪತಂಗದೊಡನೆ ಪತ್ರಕಳಿಸಿ
ವಿಚಾರಿಸುವಳು ಮೂಖ ಪ್ರೇಮಿ ಅವಳು
ಹಠಕ್ಕೆ ಕೌರವನನ್ನೆ ಮೆಚ್ಚಿದಳು
ಮನದಲ್ಲಿ, ಏನೋ ಹುಚ್ಚು ತುಡಿತ|
ಹೆಚ್ಚಾಗಿದೆ ನನ್ನ ಹೃದಯದ ಬಡಿತ|
ನನ್ನ ನೋಡಿ ನಗುತ್ತಿದೆ ದಿಗಂತ|
ಮತ್ತೇ ಬರಬಾರದೇ ವಸಂತ..
ನನ್ನ ಇನಿಯನ ಕೂಗಿ ಕರೆಯುತಾ..|
ತಂಗಾಳಿಯಲಿ...ಕುಳಿತು.. ಹಾಗೆ..
ಪಿಸು ಮಾತಲಿ ಹೇಳಲೇ ಒಮ್ಮೆ..
ಚಿಲಿಪಿಲಿ ಗುಟ್ಟುವ..ಹಕ್ಕಿಯ ...ಹಾಗೆ..
ನಿನ್ನ ಹೆಸರನ್ನ ಕೂಗಲೇ ಒಮ್ಮೆ..
ಸಮುದ್ರವ ಸೇರುವ ನದಿಯ ಹಾಗೆ..
ನಿನ್ನ ಬಂದು ಸೇರುವೇ.. ಒಮ್ಮೆ..
ಇನಿಯಾ...ಮನ ಬಯಸಿದೆ....ಈಗೇ..
ಇಬ್ಬರು ಸೇರಿ,ಹಾಡಲು.....
ಅರುಣಾ ರಾಗವ ಒಮ್ಮೆ....
ಅದುವೇ,ಒಲವಿನ........ಮಹಿಮೆ
ನನ್ನ ಪ್ರೀತಿಗೆ.... ಹಿರಿಮೆ...
ಓ ಇರುಳೆ ಕಣ್ಣಾ ಮುಚ್ಚಾಲೆ
ಆಡುವೆಯೇನೆ ಬೆಳಕಲ್ಲೆ ಕಾಣದ
ಮೋಸಗಳು ನಿನ್ನ ಇರುಳಲ್ಲಿ ಹೇಗೆ
ತಾನೆ ಕಂಡವು ಓ ಇರುಳೆ
ಸಾಕು ಈ ಕಣ್ಣಾ ಮುಚ್ಚಾಲೆ
ಅಲೆದು ಅಲೆದು ಸಾಕಾಗಿದೆ
ಕಣ್ಣಿಗೆ ಕಾಣದ ಕಪಟಗಳು
ಎಷ್ಟೋ ಇದ್ದರೂ ನಾ ಎಡವಿ ಬಿಳುವ
ಮುನ್ನ ನಿಲ್ಲಿಸಿ ಬಿಡೇ ಈ ಕಣ್ಣಾಮುಚ್ಚಾಲೆ ಆಟವನ್ನ.....
ಕಂಡರು ಕಾಣದಂತೆ ಅವಿತು
ಕೋಂಡಿರುವವು ಮೋಸದ
ಬುತಗಳು ನಾ ಎಲ್ಲಿ ಹುಡುಕಲಿ
ಬೇಳಕನ್ನ ನಿನ್ನ ಇರುಳಲ್ಲಿ ......
ಆ ಬುತಗಳು ನನ್ನ ಹಿಡಿದು
ನುಂಗುವ ಮುನ್ನ ನಿಲ್ಲಿಸೆ
ಈ ಕಣ್ಣಾಮುಚ್ಚಾಲೆಯನ್ನ......
ಕಣ್ಣೀರೆ ಬಿಟ್ಟು ಬದುಕೇ ನನ್ನ ,
ನಿನ್ನ ಒಲವಿನ ಸುರಿ ಮಳಯಲ್ಲಿ ಪ್ರತಿಕ್ಷಣ
ನನ್ನ ಕಟ್ಟಿ ಹಾಕುತ್ತಿರುವೆ ಬಂಧನದ ಮಗ್ಗುಲಲ್ಲಿ.
ಸ್ವಾರ್ಥಿ ಆಗದಿರು ಇನ್ನು ಚುರು
ನೀನು ನನ್ನ ಆಂಟಿ ಬದುಕಬೇಕೆಂದು.
ನನಗೆ ತಿಳಿಯದ ಹಾಗೆ ಬಂದಿಸಿರುವೆ ನನ್ನ ನಗೆಯನ್ನು ಅವುಡಿನ ಹಿಂದೆ.
ಮಂದಹಾಸ ನನ್ನ ನೋಡುವ ಆಸೆಯಾಗಿ
ನಿನ್ನ ಕಣ್ಣ ತಪ್ಪಿಸಿ ನನ್ನೊಳಗೆ ನುಗ್ಗಿ ಬಂತು, ಅರೆಕ್ಷಣ ಹಾಯಾಗಿರಲು ನನ್ನಲ್ಲಿ ಅಷ್ಟರಲ್ಲೇ ನಿನ್ನ ಕಣ್ಣು ಕುಗ್ಗಿ ಹೋಯಿತೆ ,
ನಿನ್ನ ಮುನಿಸು ಕೊಂದು ಹಾಕಿದೆ ಅದರ ಕನಸು.
ಅದೆಷ್ಟು ಉಸಿರು ಬಿಗಿ ಹಿಡಿದು
ಮಾತು ತಡೆಹಿಡಿದು ಬದುಕಲಿ
ವ್ಯವಸ್ಥೆಯ ಎದರು ನನ್ನ ಹಠ
ಉಣ್ಣುವನಿಗೆ ಅನ್ನವಿಲ್ಲ
ಉಣ್ಣದ ದೇವರಿಗೆ ಹಾಲನ್ನ ನೈವೇದ್ಯ
ದುಡಿಮೆಗೆ ಫಲವಿಲ್ಲ
ತಲೆ ಒಡೆದು ತಿರುಗುವನಿಗೆ ಎಲ್ಲ
ರಾಮ ಕೃಷ್ಣ ಅಲ್ಲಾ ಯೇಸು
ಬಡವರ ಪಾಲಿಗೆ ದೇವರೆ ಅಲ್ಲ
ಹಾಡಿಗೂ ಪಾಡಿಗೂ ಸಂಬಂಧವೆ ಇಲ್ಲ
ಕಾಸಿಗೆ ಹಾಸಿಗೆ ವ್ಯಾಪಾರ
ಸುಮ್ಮನೆ ಕುಂತನೆ ಯುವ ನೇತಾರ
ದುಳ್ಳರು ದುಷ್ಟರ ಹುನ್ನಾರಾ
ಸೀಡಿದೆಳುವುದೆಂದು ನೆತ್ತಾರ
ಭಿತ್ತಲಿ ಭತ್ತಲಿ ಕ್ರಾಂತಿಯ ದೀವಿಗೆ
ಸರಿ ಹೊತ್ತಲಿ ಮೊಳಗಲಿ ಏಳಿಗೆ ಬೆಸುಗೆ
ಕಿಡಿ ಹಬ್ಬುವದೆಂದು ಹೊಸ ಸತ್ಕಾರ