ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ...
ನಿನ್ನ ನೆನಪಿನ ಕ್ಷಣಗಳನ್ನು
ಜೋಪಾನಮಾಡಿ
ಬಚ್ಚಿಟ್ಟಿರುವೆನು...
ನಿನ್ನ ನೆನಪಿನಂಗಳದಿಂದ
ನನ್ನ ನೆನಪುಗಳು
ಮರೆಯಾಗುವ ಮುನ್ನ
ಸೇರಬಾರದೇ ನನ್ನ...
ವೈದರಿಗೆ ಸವಾಲೊಡ್ಡುವ.....
ಕಾಯಿಲೆಗಳು ಹುಟ್ಟಿಕೊಂಡಿರಲು
ಮನುಶ್ಯನ ಚಟಗಳ ಕರಿನೆರಳೆ ಕಂಟಕವಾಗಿದೆಯ
ವೈದ್ಯರ ಲೋಕಕ್ಕೆ..........
ನಮ್ಮ ಹೆಮ್ಮೆಯ ಕನ್ನಡಕ್ಕೆ.......
ಕನ್ನಡಿಗರಿಗೆ ಸಂತುಷ್ಟ ನ್ಯಾಯ ದೊರಕದಿರಲು
ಪರಭಾಷಿಗರ ಅನ್ಯಭಾಷೆಗಳ ದಬ್ಬಾಳಿಕೆಯ
ಕರಿನೆರಳೇ ಕ್ಯಾನ್ಸರ್ ನಂತಾಗಿದೆಯ...
ನಮ್ಮ ನೆಲದಲ್ಲಿ ನಮ್ಮವರಿಗೆ..............
ಎಷ್ಟೋ ದಿನಗಳ ನಂತರ
ಮತ್ತೆ ಬಂದಿರುವೆ
ಏತಕ್ಕಾಗಿ ಈ ಅಂತರ
ಸೇರಲು ಮನಸಲ್ಲಿ ಕಾತರ
ಆತರ ಇತರ ತರ ತರ
ಬಂದಿರುವೆ ಗೆಳತಿ
ಕೊಡಲು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರ
ಇನ್ನಾದರೂ ಬರುವೆಯ ಹತ್ತಿರ
ಬದುಕಿನ ಬಯಲಲಿ
ಬದುಕುವ ತವಕದಲಿ
ಗುರಿಯ ಹಿಂಬಾಲಿಸುತಲಿ
ಕಟ್ಟಿದೆನು,ಹೀಗೆ ಬಾಳಬೇಕೆಂಬ
ಕನಸೊಂದನು ನಾನಂದು!
ಸವಿಸಿದ ಬಾಳ ಬಟ್ಟೆಯ
ತಿರುವುಗಳದೆಷ್ಟೊ ಅರಿಯೆ
ಕಲ್ಪನೆಗಳಲ್ಲೆ ಕಳೆದೆನೆಷ್ಟೊ ಸಮಯ
ಮೂಕ ದೇವರ ಮುಂದೆ ಕೂತು ಮಾಡಿದೆ
ಅರ್ಥವಿಲ್ಲದ ವ್ಯರ್ಥವಚನಗಳ ನಾನಂದು!
ಬಯಸಿದಂತೆ ನಡೆಯುವುದೆಲ್ಲ
ಜಗವ ಬದಲಿಸುವ ಯುಕ್ತಿ ನನಗಿದೆಯಲ್ಲ
ಜಂಬದಿ ಭವಿಷ್ಯವ ಕಲ್ಪಿಸಿಕೊಂಡೆನಲ್ಲ
ಸಮಯ ಜಾರಿದಂತೆಲ್ಲ,ಕಲ್ಪನೆಗಳು ಜಾರಿ ನೆಪಹೊಡ್ಡಿ ಗುರಿಯಿಂದ ಜಾರುತಿಹೆನಿಂದು!
ಸಮಾಜ ಬದಲಿಸುವ ಛಲ ಅಂದು
ನವಸಮಾಜದ ಹರಿಕಾರಳ ಕನಸೊಂದು
ಚಿಗುರಿ-ಒತ್ತಡಗಳಿಗೆ ಮಣಿದು ನಶಿಸಿತಿಂದು
ಹೀಗೆ ಸಾಗಬೇಕೆಂಬ ನಿಯಮಗಳ ಮುರಿದು
ಹೇಗೋ ಬಾಳಿದರೆ ಸಾಕೆಂಬ ಸಂಕಲ್ಪ
ತೊಟ್ಟು ಸಾಗುತಿಹೆನಿಂದು!
ನಾ ದೇಶ ಕಾಯೋ ಯೋಧ ಗೆಳತಿ
ನೀನು ಯಾಕೆ ಹಿಂಗೆ ನನ್ನ ತಡೆಯುತಿ
ನೀನೇನೆ ಎಂದೂ ನನ್ನ ಉಸಿರಿಗೊಡತಿ
ನಾನಿಂದು ಹೋಗದಿದ್ದರೆ ಎಷ್ಟೋ ಮುಗ್ಧ ಜೀವ ಮಣ್ಣಾಗುತೈತಿ
ನೀನಿರಲು ಸನಿಹ ಬರದಿರಬಹುದೇನೊ ನನಗೆ ವಿರಹ
ನಾನಿಂದು ಹೋಗದೆ ಅಳಿಸಿ ಹೋದರೆ ಜೀವಗಳ ಹಣೆಬರಹ
ನಾನಿಲ್ಲಿ ಕೊರಗಿ ಕರಗಿ ಮಣ್ಣ ಸೇರುವೆ ಸೋತವನ ತರಹ
ಆಗ ನೀ ನಗುತ ಬಾಳಲಾಗುವುದೆ ನನ್ನ ಜೊತೆ ಮಾಡಿ ಕಲಹ
ನಿನ್ನೊಲವ ಪ್ರೇಮದ ರಕ್ಷೆ ಇದ್ದರೆ ನನ್ನೀ ಜೀವಕೆ ಚಿನ್ನ
ಹೇಗೆ ಕರೆದೊಯ್ಯುವನೆ ಜವರಾಯ ನಿನ್ನಿಂದ ದೂರ ನನ್ನ
ನಾ ಬಂದು ಮತ್ತೊಮ್ಮೆ ನಿನ್ನ ಸೇರುವ ಮುನ್ನ
ಗೆದ್ದು ಬಾರೊ ಗೆಳೆಯ ನಿನಗಾಗೆ ಕಾದಿರುವೆನೆಂದು ಹಾರೈಸಿ ಕಳಿಸೆ ನನ್ನ
ನಾ ಬಂದೆ ಬರುತೀನಿ ಬಂದು ನಿನ್ನ ಸೇರುತೀನಿ
ಬರದಿದ್ದರೆ ಕೊರಗದಿರು ಕಣ್ಣೀರ ಜಾರಿಸದಿರು
ವೀರ ಮರಣ ನನ್ನವನದೆಂದು ಹೆಮ್ಮಯಲಿ ಬದುಕಿರು
ಗೆದ್ದು ಬರಲಿ ನನ್ನಿನಿಯ ಎಂದು ದೇವರ ಬೇಡುತಿರು ನೀ
ಏನಾದರು ಸಾಧಿಸಬೇಕೆಂಬುದು ಎಲ್ಲರ ಹಂಬೋಣ
ಏನು ಸಾಧಿಸಬೇಕೆಂದು ತಿಳಿಯದೇ ಹೈರಾಣ..!!!
ಭಿತ್ತಿದ ಬೀಜವ ಮೊಳಕೆಯೊಡೆಯಲು ಬಿಡದೇ
ಕಿತ್ತು ಕಿತ್ತು ಬೇರೆಡೆ ಭಿತ್ತುತ್ತ ಹೊದೆಡೆ ಫಸಲು ಬರುವುದೇ!!
ಇಟ್ಟ ಹೆಜ್ಜೆಯ ಬದಲಿಸುತ, ಮರಳಿ ಬದಲಿಸುತ ಸಾಗಿದೊಡೆ
ಹರಿ ಮೆಚ್ಚುವನೆನು..!!!!
ಇಟ್ಟ ಗುರಿಯು ತಪ್ಪಿದರೂ ಚಿಂತೆಯಿಲ್ಲ..
ಗುರಿ ಬದಲಿಸುತ ಚಿಂತೆಯ ಚಿತೆ ಏರಿ
ವೃಥಾ ಕಾಲಹರಣಕ್ಕಿಂತ...
ಪ್ರಯತ್ನನಿಸಿದೆನೆಂಬ ಆತ್ಮ ತೃಪ್ತಿ ಸಾಕು.
ಬದುಕು ಶುರುವಾದಾಗ ಸಾವಿನ ಭಯ
ಸಾವು ಸಮೀಪಿಸಿದಾಗ ಬದುಕಿನ ಆಸೆ
ಇದ್ದಾಗ ಉಣಬೇಕು, ಉಡಬೇಕು ಕಾಯಕ ಮಾಡಬೇಕು
ಇಲ್ಲದಾಗ ಶಿವನಿಚ್ಚೆ ಎಂದು ಮೂಟೆ ಕಟ್ಟುತಿರಬೇಕು
ಆರಂಭದ ಪಯಣ ಹೆತ್ತ ತಾಯಿಯ ಒಡಲಲ್ಲಿ
ಅಂತ್ಯದ ನಿಲುಗಡೆ ಹೊತ್ತ ಭೂ ತಾಯಿಯ ಮಡಿಲಲ್ಲಿ
ಎಲ್ಲರನ್ನು ಮೆಚ್ಚಿಸಲು ಹೊರಟ ನೀ ಮೆಚ್ಚಿಸಿದ್ದೇನು
ನಾನು ನನದೆಂದು ಬಡಿದಾಡಿ ಹೋರಾಡಿದವನಿಗೆ ಸಿಕಿದ್ದೇನು
ನಿನ್ನೆ ಮರೆಯುವರು ಮುಂದೆ ನಿನ್ನ ಪೀಳಿಗೆಯವರು
ಯಾರಿಗಾಗಿ ದುಡಿದೆ ನೀ ನಿದ್ದೆಗೆಟ್ಟು, ಕಷ್ಟಪಟ್ಟು
ಅಳಿಲು ಸೇವೆಯ ಮಾಡು ನೀ ನಿನ್ನವರಿಗೆ, ನೆರೆಹೊರೆಯವರಿಗೆ, ಕುಲಭಾಂಧವರಿಗೆ, ಸಮಾಜಸೇತುವೆಗೆ
ಉಳಿಯುವೆ ನೀನು
ವಿಶ್ವಮಾನವನಾಗಿ, ಮುಂದಿನ ಪೀಳಿಗೆಗಾಗಿ