Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

*ನೆನಪುಗಳ ಜೊತೆಯಲ್ಲಿ*

ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ...
ನಿನ್ನ ನೆನಪಿನ ಕ್ಷಣಗಳನ್ನು
ಜೋಪಾನಮಾಡಿ
ಬಚ್ಚಿಟ್ಟಿರುವೆನು...
ನಿನ್ನ ನೆನಪಿನಂಗಳದಿಂದ
ನನ್ನ ನೆನಪುಗಳು
ಮರೆಯಾಗುವ ಮುನ್ನ
ಸೇರಬಾರದೇ ನನ್ನ...

ಪ್ರಿಯಾಂಕ✍

- ಪ್ರಿಯಾಂಕ

26 Sep 2017, 02:53 pm

ಕರಿ ನೆರಳು......

ಚಿಗುರುವ ಪೈರಿಗೆ........
ಬರಬಿಸಿಲು ಬಡಿದಿರಲು
ಮಳೆಯೇ ಕರಿ ನೆರಳಾಗಿ ಕಾಡಿದೆಯ
ಬೆಳೆವ ಪೈರಿಗೆ .........

ನಮ್ಮ ಪ್ರಾಚೀನ ಸಂಸ್ಕೃತಿಯು
ಅವನತಿಯೆಡೆಗೆ ತಲುಪಿರಲು
ಆಧುನಿಕತೆಯ ಕರಿನೆರಳೆ ತಳ್ಳಿದೆಯ
ಸಂಸ್ಕೃತಿಯ ಅವನತಿಗೆ.......

ಅಗಾಧ ಅರಣ್ಯ ಸಂಪತ್ತು.......
ಕ್ಷೀಣಿಸುತ್ತಿರಲು ಮಾನವನ
ಆಸೆ ದೂರಸೆಗಳ ಕರಿನೆರಳೆ ಕಾರಣವಾಗಿದೆಯ
ಅರಣ್ಯ ಸಂಪತ್ತಿನ ನಾಶಕ್ಕೆ...........

ಅನ್ನದಾತನ ಸಾವು...........
ನೋವುಗಳಿಗೆ ಪ್ರಕೃತಿಯ ವಿಕೋಪವೋ
ದುರುಳರ ಕಪಟಳವೇ ಕರಿನೆರಳಾಗಿ ಬಾದಿಸಿದೆಯ
ಅನ್ನ ನೀಡುವ ದೇವರಿಗೆ. .....

ವೈದರಿಗೆ ಸವಾಲೊಡ್ಡುವ.....
ಕಾಯಿಲೆಗಳು ಹುಟ್ಟಿಕೊಂಡಿರಲು
ಮನುಶ್ಯನ ಚಟಗಳ ಕರಿನೆರಳೆ ಕಂಟಕವಾಗಿದೆಯ
ವೈದ್ಯರ ಲೋಕಕ್ಕೆ..........

ನಮ್ಮ ಹೆಮ್ಮೆಯ ಕನ್ನಡಕ್ಕೆ.......
ಕನ್ನಡಿಗರಿಗೆ ಸಂತುಷ್ಟ ನ್ಯಾಯ ದೊರಕದಿರಲು
ಪರಭಾಷಿಗರ ಅನ್ಯಭಾಷೆಗಳ ದಬ್ಬಾಳಿಕೆಯ
ಕರಿನೆರಳೇ ಕ್ಯಾನ್ಸರ್ ನಂತಾಗಿದೆಯ...
ನಮ್ಮ ನೆಲದಲ್ಲಿ ನಮ್ಮವರಿಗೆ..............


:-------- ಮಂಜು

- ಮಂಜು

26 Sep 2017, 09:14 am

ತರ ತರ

ಎಷ್ಟೋ ದಿನಗಳ ನಂತರ
ಮತ್ತೆ ಬಂದಿರುವೆ
ಏತಕ್ಕಾಗಿ ಈ ಅಂತರ
ಸೇರಲು ಮನಸಲ್ಲಿ ಕಾತರ
ಆತರ ಇತರ ತರ ತರ
ಬಂದಿರುವೆ ಗೆಳತಿ
ಕೊಡಲು ನಿನ್ನೆಲ್ಲ ಪ್ರಶ್ನೆಗಳಿಗೆ ಉತ್ತರ
ಇನ್ನಾದರೂ ಬರುವೆಯ ಹತ್ತಿರ

~ ಹರ್ಷ ಹೆಚ್ ಎಲ್

- HarshaHL

26 Sep 2017, 09:10 am

ನೆಪಕೆ ಬಲಿಯಾದ ಬದುಕಿನ ಧ್ಯೇಯ!

ಬದುಕಿನ ಬಯಲಲಿ
ಬದುಕುವ ತವಕದಲಿ
ಗುರಿಯ ಹಿಂಬಾಲಿಸುತಲಿ
ಕಟ್ಟಿದೆನು,ಹೀಗೆ ಬಾಳಬೇಕೆಂಬ
ಕನಸೊಂದನು ನಾನಂದು!

ಸವಿಸಿದ ಬಾಳ ಬಟ್ಟೆಯ
ತಿರುವುಗಳದೆಷ್ಟೊ ಅರಿಯೆ
ಕಲ್ಪನೆಗಳಲ್ಲೆ ಕಳೆದೆನೆಷ್ಟೊ ಸಮಯ
ಮೂಕ ದೇವರ ಮುಂದೆ ಕೂತು ಮಾಡಿದೆ
ಅರ್ಥವಿಲ್ಲದ ವ್ಯರ್ಥವಚನಗಳ ನಾನಂದು!

ಬಯಸಿದಂತೆ ನಡೆಯುವುದೆಲ್ಲ
ಜಗವ ಬದಲಿಸುವ ಯುಕ್ತಿ ನನಗಿದೆಯಲ್ಲ
ಜಂಬದಿ ಭವಿಷ್ಯವ ಕಲ್ಪಿಸಿಕೊಂಡೆನಲ್ಲ
ಸಮಯ ಜಾರಿದಂತೆಲ್ಲ,ಕಲ್ಪನೆಗಳು ಜಾರಿ ನೆಪಹೊಡ್ಡಿ ಗುರಿಯಿಂದ ಜಾರುತಿಹೆನಿಂದು!

ಸಮಾಜ ಬದಲಿಸುವ ಛಲ ಅಂದು
ನವಸಮಾಜದ ಹರಿಕಾರಳ ಕನಸೊಂದು
ಚಿಗುರಿ-ಒತ್ತಡಗಳಿಗೆ ಮಣಿದು ನಶಿಸಿತಿಂದು
ಹೀಗೆ ಸಾಗಬೇಕೆಂಬ ನಿಯಮಗಳ ಮುರಿದು
ಹೇಗೋ ಬಾಳಿದರೆ ಸಾಕೆಂಬ ಸಂಕಲ್ಪ
ತೊಟ್ಟು ಸಾಗುತಿಹೆನಿಂದು!



ಶಾರಧ

- ಶಕುಂತಲಾ

26 Sep 2017, 02:33 am

ಕೆಂಪು ಗುಲಾಬಿ

ಅರಳು ಮಲ್ಲಗೆಯಂತೆ ಅರಳಿನಿಂತಿರುವೆ ಚಂದ್ರಮುಖಿಯಂತೆ ರೂಪ ತುಂಬಿಕೊಂಡಿರುವೆ ನೀ ಯಾವ ಊರ ಚಲುವೆ ನಾ ಹೇಳುವೆ ತೋಟದ ತೊಪ್ಪಲಲ್ಲಿ ಬೆಳೆದು ನಿಂತಿರುವ ಕೆಂಪು ಗುಲಾಬಿಯೇ
ಮಧುಸೂಧನ ಗೌಡ

- madhusudhanagowda@gmail.com

25 Sep 2017, 10:42 pm

ಏಕಾಂತ

ಮನಸು ಬಯಸುತಿದೆ ಏಕಾಂತ
ತಿಳಿಯದಾಗಿದೆ ನನಗೂ‌ ಏಕಂತ
ಎಲ್ಲಾದರು ಓಡಿ ಹೋಗಿಬಿಡಬೇಕೆಂಬಂತ ಧಾವಂತ
ಈ ಭಾವ ಒಳಗೆ ಆಗಿಬಿಡುವುದೇನೊ ಅನಂತ

ಎಂದಿಗೂ ಬಿಡಲಾರೆ ನಿನ್ನ ಎಂದಪ್ಪಿದೆ ಈಗೀಗ
ಬೇಡವೆನಿಸುತ್ತದೆ ಈ ಏಕಾಂತ ಆಗಾಗ
ಇದರಿಂದ ಬಿಡುಗಡೆ ಸಿಗುವುದು ಯಾವಾಗ
ಹೇಗೆ ಹೇಳವುದು ಇದರ ಮಡಿಲಲಿ‌ದ್ದಾಗ ಆಗುವ ಆವೇಗ

ಈ ಏಕಾಂತದು ಪ್ರತಿ ಬಾರಿ ಬೇರೆ ಬೇರೆ ವೇಷ
ಕೆಲವೊಮ್ಮೆ ಎದೆಯೊಳಗೆ ಎಂಥದೊ ಆವೇಶ
ಸತ್ತು‌‌ ಪುನರ್ಜನ್ಮ ಪಡೆದಂತನಿಸುವುದು ಒಂದು ನಿಮಿಷ
ಒಮ್ಮೆ ಅದರಲೆ ಖುಷಿಯ ಕಂಡು ಮನಸಾಗುವುದು ಹರುಷ

ನನ್ನೊಳಗೆ ಇದೆಂದೂ ಬಿಟ್ಟು ಬಿಡದ ಮಾಯೆ
ಆಗಾಗ ತೋರಿ ಹೋಗುವುದು ತನ್ನ ಛಾಯೆ
ಮತ್ತೆ ಮತ್ತೆ ಕಾಡಿದಾಗ ಸತ್ತಾಂತಾದರು ನಾ ಸಾಯೆ
ಏಕಾಂತವೆ ನೀನಾದರೂ ಬಂದು ನೀನೆನೆಂದೂ ಹೇಳಲಾರೆಯೆ ?

- ಶ್ರೀಕಾವ್ಯ

25 Sep 2017, 08:47 pm

ನಾ ದೇಶ ಕಾಯೋ ಯೋಧ ಗೆಳತಿ

ನಾ ದೇಶ ಕಾಯೋ ಯೋಧ ಗೆಳತಿ‌
ನೀ‌ನು ಯಾಕೆ ಹಿಂಗೆ ನನ್ನ ತಡೆಯುತಿ
ನೀನೇನೆ ಎಂದೂ ನನ್ನ ಉಸಿರಿಗೊಡತಿ
ನಾನಿಂದು ಹೋಗದಿದ್ದರೆ ಎಷ್ಟೋ ಮುಗ್ಧ ಜೀವ ಮಣ್ಣಾಗುತೈತಿ

ನೀನಿರಲು ಸನಿಹ ಬರದಿರಬಹುದೇನೊ ನನಗೆ ವಿರಹ
ನಾನಿಂದು ಹೋಗದೆ ಅಳಿಸಿ ಹೋದರೆ ಜೀವಗಳ ಹಣೆಬರಹ
ನಾನಿಲ್ಲಿ ಕೊರಗಿ‌ ಕರಗಿ ಮಣ್ಣ ಸೇರುವೆ ಸೋತವನ‌ ತರಹ
ಆಗ ನೀ‌‌ ನಗುತ ಬಾಳಲಾಗುವುದೆ ನನ್ನ ಜೊತೆ ಮಾಡಿ ಕಲಹ

ನಿನ್ನೊಲವ ಪ್ರೇಮದ ರಕ್ಷೆ ಇದ್ದರೆ ನನ್ನೀ ಜೀವಕೆ ಚಿನ್ನ
ಹೇಗೆ ಕರೆದೊಯ್ಯುವನೆ ಜವರಾಯ ನಿನ್ನಿಂದ ದೂರ ನನ್ನ
ನಾ ಬಂದು ಮತ್ತೊಮ್ಮೆ ನಿನ್ನ ಸೇರುವ ಮುನ್ನ
ಗೆದ್ದು ಬಾರೊ ಗೆಳೆಯ ನಿನಗಾಗೆ ಕಾದಿರುವೆನೆಂದು ಹಾರೈಸಿ ಕಳಿಸೆ ನನ್ನ

ನಾ‌ ಬಂದೆ ಬರುತೀನಿ ಬಂದು ನಿನ್ನ ಸೇರುತೀನಿ‌
ಬರದಿದ್ದರೆ ಕೊರಗದಿರು ಕಣ್ಣೀರ ಜಾರಿಸದಿರು
ವೀರ ಮರಣ ನನ್ನವ‌ನದೆಂದು ಹೆಮ್ಮಯಲಿ ಬದುಕಿರು
ಗೆದ್ದು ಬರಲಿ‌ ನನ್ನಿನಿಯ ಎಂದು ದೇವರ ಬೇಡುತಿರು ನೀ

- ಶ್ರೀಕಾವ್ಯ

25 Sep 2017, 08:33 pm

ಯಾರೇ ನೀನು...!!

ಕನಸಾಗಿ ಬಂದವಳು ನನಸಾಗುವ ಮುಂಚೆನೇ ಮಾಯವಾದಳು..
ಪದೇ ಪದೇ ಕಾಡುವ ಅವಳ ಕಣ್ಣುಗಳು ನನ್ನ ಹೃದಯ ದೋಚಿತ್ತು..
ನಾನು ಓದುವ ಪುಸ್ತಕದಲ್ಲೂ ಅವಳದೇ ಕಾಡುವ ಮುಗುಳ್ನಗೆ..

- ನಮಿತ ಗಟ್ಟಿ

25 Sep 2017, 08:33 pm

ವಿಶ್ವಮಾನವನಾಗು..

ವಿಶ್ವಮಾನವ

ಏನಾದರು ಸಾಧಿಸಬೇಕೆಂಬುದು ಎಲ್ಲರ ಹಂಬೋಣ
ಏನು ಸಾಧಿಸಬೇಕೆಂದು ತಿಳಿಯದೇ ಹೈರಾಣ..!!!
ಭಿತ್ತಿದ ಬೀಜವ ಮೊಳಕೆಯೊಡೆಯಲು ಬಿಡದೇ
ಕಿತ್ತು ಕಿತ್ತು ಬೇರೆಡೆ ಭಿತ್ತುತ್ತ ಹೊದೆಡೆ ಫಸಲು ಬರುವುದೇ!!
ಇಟ್ಟ ಹೆಜ್ಜೆಯ ಬದಲಿಸುತ, ಮರಳಿ ಬದಲಿಸುತ ಸಾಗಿದೊಡೆ
ಹರಿ ಮೆಚ್ಚುವನೆನು..!!!!
ಇಟ್ಟ ಗುರಿಯು ತಪ್ಪಿದರೂ ಚಿಂತೆಯಿಲ್ಲ..
ಗುರಿ ಬದಲಿಸುತ ಚಿಂತೆಯ ಚಿತೆ ಏರಿ
ವೃಥಾ ಕಾಲಹರಣಕ್ಕಿಂತ...
ಪ್ರಯತ್ನನಿಸಿದೆನೆಂಬ ಆತ್ಮ ತೃಪ್ತಿ ಸಾಕು.

ಬದುಕು ಶುರುವಾದಾಗ ಸಾವಿನ ಭಯ
ಸಾವು ಸಮೀಪಿಸಿದಾಗ ಬದುಕಿನ ಆಸೆ
ಇದ್ದಾಗ ಉಣಬೇಕು, ಉಡಬೇಕು ಕಾಯಕ ಮಾಡಬೇಕು
ಇಲ್ಲದಾಗ ಶಿವನಿಚ್ಚೆ ಎಂದು ಮೂಟೆ ಕಟ್ಟುತಿರಬೇಕು

ಆರಂಭದ ಪಯಣ ಹೆತ್ತ ತಾಯಿಯ ಒಡಲಲ್ಲಿ
ಅಂತ್ಯದ ನಿಲುಗಡೆ ಹೊತ್ತ ಭೂ ತಾಯಿಯ ಮಡಿಲಲ್ಲಿ
ಎಲ್ಲರನ್ನು ಮೆಚ್ಚಿಸಲು ಹೊರಟ ನೀ ಮೆಚ್ಚಿಸಿದ್ದೇನು
ನಾನು ನನದೆಂದು ಬಡಿದಾಡಿ ಹೋರಾಡಿದವನಿಗೆ ಸಿಕಿದ್ದೇನು

ನಿನ್ನೆ ಮರೆಯುವರು ಮುಂದೆ ನಿನ್ನ ಪೀಳಿಗೆಯವರು
ಯಾರಿಗಾಗಿ ದುಡಿದೆ ನೀ ನಿದ್ದೆಗೆಟ್ಟು, ಕಷ್ಟಪಟ್ಟು
ಅಳಿಲು ಸೇವೆಯ ಮಾಡು ನೀ ನಿನ್ನವರಿಗೆ, ನೆರೆಹೊರೆಯವರಿಗೆ, ಕುಲಭಾಂಧವರಿಗೆ, ಸಮಾಜಸೇತುವೆಗೆ
ಉಳಿಯುವೆ ನೀನು
ವಿಶ್ವಮಾನವನಾಗಿ, ಮುಂದಿನ ಪೀಳಿಗೆಗಾಗಿ

- ರಾಘವ್ ರಾಕೇಶ್ ( ನೀನು )

- ರಾಘವ್ ರಾಕೇಶ್

25 Sep 2017, 05:26 pm

ಹೆಣ್ಣು ಮಗುವಿಗಾಗಿ ಒಂದು ದಿನ

#ಹ್ಯಾಪಿ #ಡಾಟರ್ಸ #ಡೇ

#ಅವಳೆಂದರೆ...

ಮುದ್ದು ಬಂಗಾರಿ
ನನ್ನೊಲವಿನ ಸಿಂಗಾರಿ
ತೊದಲ ಮಾತಲಿ
ಅಮ್ಮಾ ಎನಲು
ಹೊಮ್ಮಿತು ಮನದಲಿ
ಸಂತಸದ ಹೊನಲು
ಪುಟ್ಟ ಹೆಜ್ಜೆಯನ್ನು ಇಟ್ಟು
ತುಂಟಾಟ ಮಾಡಲು
ಬಾಲಕೃಷ್ಣನ ಸೊಬಗು
ನನ್ನಾಸೆಯ ಕವಲೊಡೆದ ದಿನ
ಶಿಕ್ಷಣಕೂ ಸೈ ನೃತ್ಯಕೂ ಸೈ
ಅನಾರೊಗ್ಯದಿ ಬಳಲಿದಾಗ
ಮತ್ತೊಮ್ಮೆ ಅಮ್ಮನ ಆರೈಕೆ
ಅವಳ ಕಣ್ಣಲ್ಲಿ ಕಂಡೆ
ಹೆಣ್ಣೆಂದರೆ ಮೂಗು ಮುರಿಯವ
ಜನರೇ ಹೆಚ್ಚು ಜಗದಲಿ
ಹೆಣ್ಣಿರದಿದ್ದರೆ ಎಲ್ಲಿಂದ
ಸಿಗುತ್ತಿತ್ತು
ಕವಿಕಾವ್ಯಕೆ ಸ್ಪೂರ್ತಿ
ಸೌಂದರ್ಯಕೆ ಪ್ರತೀತಿ
#ಹೆಣ್ಣನ್ನು #ಗೌರವಿಸಿ #ಆದರಿಸಿ

#ಮಾನಸಾ #ಎಪಿ

- ಮಾನಸಾ ಎಪಿ

24 Sep 2017, 11:50 pm