Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭಾರತೀ

ತಾನಿಂದು ತನ್ನವರ ನೋವೆಲ್ಲಾ
ತನ್ನದೆಂದು ತಿಳಿದು ನರಳುತಿಹಳು
ಈ ಭಾರತಿ ಮೂಕಳಾಗಿ.

ಎಲ್ಲ ಭಾಷೆಗಳಿಗೆ ಏಕ ಲೇಖನವಾಗಿ
ಸಂಪ್ರದಾಯಗಳಿಗೆ ಸಾಮ್ರಾಗ್ನಿಯಾಗಿ
ಉಡುಪುಗಳಲ್ಲಿ ಹೊಸದಾದ ಹೊಳಪಾಗಿ
ಕಂಗೊಳಿಸುತ್ತಿರುವಳು.

ತನ್ನ ವಿಶಾಲವಾದ ಒಡಲಲ್ಲಿ ಬಂದವರ ಬರುವವರ ಅಸ್ತಿತ್ವಕ್ಕೆ ಒಂದು ಹೆಸರು
ಕೊಡುವಳು ಭಾರತಿಯರೆಂದು.

ಎಷ್ಟು ಉದಾರಿ ಆದರೂ ಇವಳ ಒಡಲಳಲ್ಲಿ
ಕಿಚ್ಚು ಹಚ್ಚುವವರು ಮಾತ್ರ ತಾನೆತ್ತ ಮಕ್ಕಳೇ.
ಸ್ವದೇಶವ ತೊರೆದು ವಿದೇಶದಲ್ಲಿ ಕಾಲಿಡುವ ಆಸೆ ಇವರಿಗೆ ಅವರಿಟ್ಟ ಎಂಜಲುಂಡು ಕಾಲು ತೊಳೆಯುವಾಸೆ.

ತಾಯಿಯಾ ಕಣ್ಣೀರೊರಿಸಿ ತಾವು ಕಲಿತ ವಿದ್ಯೆಯನ್ನು ತನ್ನ ದೇಶದ ಹಿರಿಮೆಯ ಹೆಚ್ಚಿಸಲು
ಬಳಸದೆ ವಿದ್ಯಾವಂತರ ನೆಲವೆಂದಿಗೂ ಪರಕೀಯ ಪಾದಗಳಿಗೆಂದು ಪರೆದಾಡುವರು ಈ ದೇಶ ದ್ರೋಹಿಗಳು ನಮ್ಮವರೆಂಬ ಮುಸುಕನ್ನು ಹಾಕಿಕೊಂಡು.

ಇವೆಲ್ಲವೂ ತಿಳಿಯ ನಮ್ಮ ಭಾರತಿ ಸ್ವಾರ್ಥವಿಲ್ಲದ
ಅಕಾಶದಂತೆ ಎಲ್ಲರಿಗೂ ಜೀವ ಹೋಗುವವರೆಗೂ ತಂಗುದಾಣವಾಗುವಳು ಅವಳಲ್ಲಿನ ಮಮತೆಯಂಚುತ ಮಾತೆಯಾಗಿ ಮಕ್ಕಳಿಗೆಲ್ಲಾ.

ಭಾರತಿ ಭಾವಿ ಭವಿಷ್ಯದ ಸಾರಥಿ ಸಾಹಿತ್ಯ ಸಂಪತ್ತಿನ ತುಂಬ ತುಂಬಿರುವ ದಿವ್ಯಹಾರತಿ
ನೋಮೊಸ್ತುತಿ ನೋಮೊಸ್ತುತಿ ಭಾರತಿ.

- ಚುಕ್ಕಿ

24 Jul 2017, 07:54 am

ಮಳೆಗೆ ಮನುಷ್ಯನ ಆಲಾಪವೇನ!

ಕಣ್ಣೀರ ಇಟ್ಟರೇನ
ಪನ್ನೀರ ಮಡಿಯಾದರೇನ
ಎಲ್ಲಾ ದೇವರ ಪೂಜಿಸಿದರೇನ
ವರುಣ ಧರೆಗಿಳಿದು ಬರುವನೇನ

ನಾವು ಬೇಡಂದರ ಬಿಡತಾನೇನ
ಬಾ ಎಂದರ ಬರತಾನೇನ
ಬದುಕಿಗೆ ಅವನೆ ಆಧಾರಲ್ವೇನ
ಅವನಿಲ್ಲೆಂದರ ನಾವು ಎಲ್ಲಿತನ ಇರತಿವಿಯೇನ

ಅವನು ಬಂದರ ಹರ್ಷವೇನ
ಅತಿಯಾದರೆ ತೆಗಳಿಕೆಯೇನ
ಎಲ್ಲರಿಗೂ ಅವನು ಇಲ್ಲಾಂದರ ಕಷ್ಟಾನ
ಅವನು ಆಗತಾನೋ ಇಲ್ಲೋ ಅಂತ ಸಂಶೇನ

ಮಳೆರಾಯ ಮಾತ್ರ ಯಾರದ ಕೈಯಾಗ ಇರದವನ!
ನರಜೀವ ಅವನಿಗಾಗಿ ಕೋರಗುವದೇನ
ಧರೆಗೆ ಬಾ ಎಂದು ಹಂಬಲಿಸುವದೇನ
ಹಿರೇಉಳ್ಳಿಗೇರಿ ಕರೆಮ್ಮ ನಿನೇ ಕಾಪಾಡು ನಮ್ಮ ಇನ್ನ!

- MB

23 Jul 2017, 11:36 pm

ಕಣ್ಣಲ್ಲಿ ನಿನ್ನ ಬಿಂಬ

ಕಣ್ಣಲ್ಲಿ ಕಣ್ಣಿಟ್ಟು ನೋಡುತಿರು ನೀನು
ನನ್ನ ಹಿಡಿ ಜೀವನ ನಲಿವು ನೋವು ಎಲ್ಲವೂ ಕಾಣುತ್ತೆ ನಾನು ಕಂಡ ರೀತಿಯಲ್ಲೇ ನಿನಗೆ ಗೆಳೆಯಾ..................

ನೋಡುತ್ತಾ ಕೂತರೆ ನೀನು ನಿನ್ನ ರೂಪವು ಅದರಲ್ಲೇ ಅಡಗಿದೆಯೆಂದು ತಿಳಿಯುತ್ತದೆ ಆ ಕ್ಷಣದಲ್ಲಿ ಗಮನಿಸು ನನ್ನ ನ ಯನಗಳು ನಗುತ್ತಿರುತ್ತವೆ ನಿನ್ನ ನೋಡಿ ನೀನೇ ನನ್ನ ನಗುವೆಂದು...................

- ಚುಕ್ಕಿ

23 Jul 2017, 08:05 pm

"ಒಡೆದು ಚೂರಾದ ದರ್ಪಣ"...

ಗೆಳತಿ/ಯ...

ಕದ್ದುಮುಚ್ಚಿದ ನೋಟದ ಹೋರಾಟಕ್ಕೆ
ನೀ ಕೊಟ್ಟೆ ನ್ಯಾಯ,
ಅಲ್ಲಿಂದ ಶುರು ನಮ್ಮ ಪ್ರೀತಿಯ ವ್ಯವಸಾಯ,
ಬೆಳೆದು ನಿಂತ ಪೈರಂತೆ ನಮ್ಮಿಬ್ಬರ ನೆನಪುಗಳ ಪರಿಚಯ.

ಎಲ್ಲೇ ನೋಡು ಹಳೆಯ ನೆನಪಿನ ಗುರುತು,
ಬಾಳೋದೇಗೆ ಎಲ್ಲಾ ಮರೆತು,
ಬಯಸದೆ ಇತ್ತು ಎಲ್ಲಾ ಅಂದು,
ಬೇಡಿದರೂ ಏನೂ ಇಲ್ಲ ಇಂದು.

ಈಜುವುದೇಗೆ ಹರಿಯೊ ನದಿಯ,
ನಾ ಹೇಗೆ ಸಾಗಿಸಲಿ ನೀನಿಲ್ಲದ ಬದುಕಿನ ಬಂಡಿಯ,
ಮರೆತ್ತಿಲ್ಲ ನನಗಾಗಿ ನೀ ಕೊಟ್ಟ
ನಿನ್ನ ಈ ಪ್ರೀತಿಯ.

ನನ್ನ ಮನದ ಬೇಸರದ ಈ ದಿನ,
ಊಹಿಸಲಾರೆ ನೀ ನನ್ನ ಬಿಟ್ಟು ಹೋದ
ಆ ಕ್ಷಣ,
ಕಾಡುತಿದೆ ನನ್ನ ಮನದಲ್ಲಿ ಇಂದಿಗೂ ಅದೇ ಪ್ರತಿ ದಿನ, ಪ್ರತಿ ಕ್ಷಣ,
ಗೆಳತಿ ನೀನಿಲ್ಲದ ನನ್ನ ಈ ಜೀವನ ,

"ಒಡೆದು ಚೂರಾದ ದರ್ಪಣ"...

Spb..@#

- Spb...@#

23 Jul 2017, 05:58 pm

ಗಳಿಗೆ ತಡಮಾಡು ಒಡೆಯ

ಉಸಿರಿನಂತೆ ಸರ್ವಾಂತರ್ಯಾಮಿಯಾದ ಸಾವೇ ನೋವಾದ ಅರಿವಾಗದೆ ಆರಿಸಿಕೋ ತಂದೆ

ಎಲೆ ಉದುರುವಷ್ಟು ಹಗುರವಾಗಿ ಇಬ್ಬನಿ ಕರಗುವಷ್ಟು ಹಿತವಾಗಿ ಬಿಡಿಸಿಕೋ ತಂದೆ ನಿನ್ನ ಬನದ ಕುಸುಮಗಳನು

ಆಡಲು ಬಿಟ್ಟು ಬೆನ್ನ ಹಿಂದೆಯೇ ನಿಂತಿರುವೆ ತುಸು ತಾಳು ತಂದೆ ಕರುಳಿಗೊಂದು ಪದ ಕಟ್ಟಿಬಿಡುವ

ಪ್ರಶಾಂತ ಕಡಲಾದ ನಿನ್ನೆಡೆಗೆ ನಾನೂ ಹರಿಯಲೇಬೇಕು ಎಲ್ಲ ನದಿಗಳಂತೆ ಅವಳೊಡನೆ ಮಾತೊಂದು ಬಾಕಿಯಿದೆ ಗಳಿಗೆ ತಡಮಾಡು ಒಡೆಯ


# ದೊಡ್ಡ ಕಲ್ಲಹಳ್ಳಿ ನಾರಾಯಣಪ್ಪ

- ದೊಡ್ಡಕಲ್ಲಹಳ್ಳಿನಾರಾಯಣಪ್ಪ

23 Jul 2017, 05:42 pm

ಏಕಾಂಗಿ

ಕಾರ್ಮೋಡ ಕವಿದಿದೆ ನನ್ನ ಬಾಳಿನಲಿ
ಕಾಣಿಸುವುದು ಇದು ನನ್ನ ಮನದಲಿ
ಬದುಕನ್ನು ಸಾಕೆನಿಸಿ ಮುಗಿಸುವ ಹೊತ್ತಲ್ಲಿ
ನೆನಪಿಗೂ ಬರಲಿಲ್ಲ ಯಾರೂ ಹತ್ತಿರದಲಿ
ಈಗ ಗೊತ್ತಾಯಿತು ಯಾರೂ ನನ್ನವರು ಇಲ್ಲ ನನಗಿಲ್ಲಿ

- ಎಸ್.ಬಿ

23 Jul 2017, 04:57 pm

ಮನಸಿದು ರಿಂಗಣಿಸುತಿದೆ...

ಮನಸಿದು ರಿಂಗಣಿಸುತಿದೆ
ಕೂಗಿ ಹೇಳುತ ನಿನ್ನದೆ ಹೆಸರ
ನನ್ನೊಳಗಿನ ನಾನೆ ತಿಳಿಯದಾಗಿದೆ
ಕದ್ದು ಹೋಗಿರಲು ನೀನು ನನ್ನಯ ಉಸಿರ

ನೀನಂತು ಮನಸಲಿ ಅತಿ ಪ್ರಭಾವಿ
ಎದುರಿಸಲಾರೆ ನಾನಂತು ಅನನುಭವಿ
ನಿನ್ನ ಹೆಸರ ಗುನುಗುವುದೆ‌ ಆಗಿದೆ ಖಯಾಲಿ‌
ಹೀಗೂ ಉಂಟೆ ಪ್ರೀತಿಯ ಮಾಯೆಯಲಿ

ಜಾರುವ ಮುಂಗುರುಳಿಗೂ ನಿನ್ನಲೆ ಸೆಳೆತ
ಮೈ ಸವರಿದ ಗಾಳಿಯಲಿ ನಿನ್ನದೇ ಉಸಿರಿನ ಮಿಳಿತ
ನಿನ್ನದೇ ಮೊಗವು ನಡೆದಾಡುವ ದಾರಿಯಲಿ
ದಿಟ್ಟಿಸಿ ನೋಡುವವರಿಗೆ ಏನೆಂದು ಹೇಳಲಿ

ಬೇಡವೆಂದರು ಬಿಡದು ನಿನ್ನಯ ಮಾಯೆ
ದೂರ ಸರಿಸವುದು ಹೇಗೆ ನಾನು ನಿನ್ನಯ ಛಾಯೆ
ಹುಡುಕಲೇನು ನಿನ್ನ ಬದುಕಲೆ ನನ್ನ‌ ಸುಖ
ಉತ್ತರಿಸುವವರು ಇಲ್ಲಿ ಯಾರಿಲ್ಲ ನನ್ನ ಸಖ

- ಶ್ರೀಕಾವ್ಯ

23 Jul 2017, 03:02 pm

ಆತ್ಮಹತ್ಯೆ

ಮನಸ್ಸು ನೋವನ್ನು ಎದುರಿಸದಾಗ
ಸಮಾಧಾನಿಸುವವರು ಹತ್ತಿರ ಇಲ್ಲದಾಗ
ಒಂಟಿತನ ಸಾಕದಾಗ
ನೋವಿನ ಹಿಂದೆ ನೋವು ನುಸಿಳಿದಾಗ
ಯಾತನೆಗಳು ಯಾಮಾರಿಸಿದಾಗ
ನನ್ನವರು ಯಾರೂ ಇಲ್ಲ ಎಂದದಾಗ
ಹಗಲು -ರಾತ್ರಿ ಕಣ್ಣೀರೆ ಜೊತೆಯಾದಾಗ
ಮನದ ದುಗುಡನ್ನು ಹೇಳಿಕೊಳ್ಳಲು ಆಗದಾಗ
ಕೊನೆಯ ಕ್ಷಣಕ್ಕೆ....ಮೌನವಾಗಿ ತಗೊಳ್ಳುವ
ದೃಢ ನಿರ್ಧಾರ....'!!

- ಎಸ್.ಬಿ

23 Jul 2017, 02:37 pm

ನಯನ

ಮೂರಕ್ಷರದ ಮುದ್ದಾದ
ತಾರೆಯು ನೀನು
ಪಂಚೇಂದ್ರಿಗಳಲ್ಲಿ ಒಂದಾದ
ನಿನ್ನ ಆಶ್ರಯಿಸಿರುವೆ ನಾನು

ಚಿಗುರೊಡೆದ ತರು- ಲತೆಗಳ
ಚಂದನದ ವನ- ಬನಗಳ
ಸೌಂದರ್ಯ ಸವಿಯುವೆ
ನಿನ್ನಿಂದ ನಾ ನೋಡುತ್ತ

ಮಾಮರಗಳಲಿ ಮನೆಮಾಡಿ
ಬಳಗದವರೊಡಗೂಡಿ
ಆಡಿ ನಲಿವ ಪಕ್ಷಿ ಸಂಕುಲಗಳ
ಆನಂದವ ನೋಡಿ ನಲಿವೆ ನಿನ್ನಿಂದ

ಗತಕಾಲದ ಘಟನೆಗಳ
ಸಾರುವ ಶಿಲ್ಪಕಲೆಗಳ
ಇತಿಹಾಸ ಸಾರುವ ತಾಣಗಳ
ಸೌಂದರ್ಯ ಉಣಿಸುವೆ ನೀ ಎನಗೆ

ನೀನಿಲ್ಲದೆ ಈ ಬದುಕು ಶೂನ್ಯ
ನಿನಗೆ ನೀನೆ ಅನನ್ಯ
ನೀನೊಂದು ಅನಗ್ರ್ಯರತ್ನ
ನಿನ್ನ ರಕ್ಷಣೆಯತ್ತ ನಮ್ಮ ಪ್ರಯತ್ನ



ಶಾರಧ

- ಶಕುಂತಲಾ

23 Jul 2017, 12:49 pm

ನೀ ಬೇಕೆಂದು

ಮನದ ಹಂಚಿನ ಮಾತೊಂದು ಮೌನವಾಗಿ
ನಿನ್ನ ಕರೆಯುತ್ತಿದೆ ಬಾರೋ ಗೆಳೆಯ ನಾನಿಂದು ಒಬ್ಬೊoಟಿ ನೀನಿಲ್ಲದೆ ಎಂದು.............

ಮಂಜನಂತೆ ಮನದಲ್ಲಿ ಕಂಡು ಮೊಡದಂತೆ ಮರೆಯಾಗುವೆ ಮಾತಿಲ್ಲದೆ ಮೌನಿಯಾಗಿ ಇನಿಯಾ...............

ಕರೆ ಕರೆದು ನಿನ್ನನ್ನಿಂದು ಮರೆಯಾಯಿತು ಮಾತಿನ ಮಾಲೆ ಅಕ್ಷರಗಳಲ್ಲಿ ಅರಳಿದ ಮಧುರವಾದ ಭಾವನೆ ನೀ ಬೇಕೆಂದು.........

- ಚುಕ್ಕಿ

23 Jul 2017, 12:35 pm