ತಾನಿಂದು ತನ್ನವರ ನೋವೆಲ್ಲಾ
ತನ್ನದೆಂದು ತಿಳಿದು ನರಳುತಿಹಳು
ಈ ಭಾರತಿ ಮೂಕಳಾಗಿ.
ಎಲ್ಲ ಭಾಷೆಗಳಿಗೆ ಏಕ ಲೇಖನವಾಗಿ
ಸಂಪ್ರದಾಯಗಳಿಗೆ ಸಾಮ್ರಾಗ್ನಿಯಾಗಿ
ಉಡುಪುಗಳಲ್ಲಿ ಹೊಸದಾದ ಹೊಳಪಾಗಿ
ಕಂಗೊಳಿಸುತ್ತಿರುವಳು.
ತನ್ನ ವಿಶಾಲವಾದ ಒಡಲಲ್ಲಿ ಬಂದವರ ಬರುವವರ ಅಸ್ತಿತ್ವಕ್ಕೆ ಒಂದು ಹೆಸರು
ಕೊಡುವಳು ಭಾರತಿಯರೆಂದು.
ಎಷ್ಟು ಉದಾರಿ ಆದರೂ ಇವಳ ಒಡಲಳಲ್ಲಿ
ಕಿಚ್ಚು ಹಚ್ಚುವವರು ಮಾತ್ರ ತಾನೆತ್ತ ಮಕ್ಕಳೇ.
ಸ್ವದೇಶವ ತೊರೆದು ವಿದೇಶದಲ್ಲಿ ಕಾಲಿಡುವ ಆಸೆ ಇವರಿಗೆ ಅವರಿಟ್ಟ ಎಂಜಲುಂಡು ಕಾಲು ತೊಳೆಯುವಾಸೆ.
ತಾಯಿಯಾ ಕಣ್ಣೀರೊರಿಸಿ ತಾವು ಕಲಿತ ವಿದ್ಯೆಯನ್ನು ತನ್ನ ದೇಶದ ಹಿರಿಮೆಯ ಹೆಚ್ಚಿಸಲು
ಬಳಸದೆ ವಿದ್ಯಾವಂತರ ನೆಲವೆಂದಿಗೂ ಪರಕೀಯ ಪಾದಗಳಿಗೆಂದು ಪರೆದಾಡುವರು ಈ ದೇಶ ದ್ರೋಹಿಗಳು ನಮ್ಮವರೆಂಬ ಮುಸುಕನ್ನು ಹಾಕಿಕೊಂಡು.
ಇವೆಲ್ಲವೂ ತಿಳಿಯ ನಮ್ಮ ಭಾರತಿ ಸ್ವಾರ್ಥವಿಲ್ಲದ
ಅಕಾಶದಂತೆ ಎಲ್ಲರಿಗೂ ಜೀವ ಹೋಗುವವರೆಗೂ ತಂಗುದಾಣವಾಗುವಳು ಅವಳಲ್ಲಿನ ಮಮತೆಯಂಚುತ ಮಾತೆಯಾಗಿ ಮಕ್ಕಳಿಗೆಲ್ಲಾ.
ಭಾರತಿ ಭಾವಿ ಭವಿಷ್ಯದ ಸಾರಥಿ ಸಾಹಿತ್ಯ ಸಂಪತ್ತಿನ ತುಂಬ ತುಂಬಿರುವ ದಿವ್ಯಹಾರತಿ
ನೋಮೊಸ್ತುತಿ ನೋಮೊಸ್ತುತಿ ಭಾರತಿ.
ಕಣ್ಣಲ್ಲಿ ಕಣ್ಣಿಟ್ಟು ನೋಡುತಿರು ನೀನು
ನನ್ನ ಹಿಡಿ ಜೀವನ ನಲಿವು ನೋವು ಎಲ್ಲವೂ ಕಾಣುತ್ತೆ ನಾನು ಕಂಡ ರೀತಿಯಲ್ಲೇ ನಿನಗೆ ಗೆಳೆಯಾ..................
ನೋಡುತ್ತಾ ಕೂತರೆ ನೀನು ನಿನ್ನ ರೂಪವು ಅದರಲ್ಲೇ ಅಡಗಿದೆಯೆಂದು ತಿಳಿಯುತ್ತದೆ ಆ ಕ್ಷಣದಲ್ಲಿ ಗಮನಿಸು ನನ್ನ ನ ಯನಗಳು ನಗುತ್ತಿರುತ್ತವೆ ನಿನ್ನ ನೋಡಿ ನೀನೇ ನನ್ನ ನಗುವೆಂದು...................
ಕಾರ್ಮೋಡ ಕವಿದಿದೆ ನನ್ನ ಬಾಳಿನಲಿ
ಕಾಣಿಸುವುದು ಇದು ನನ್ನ ಮನದಲಿ
ಬದುಕನ್ನು ಸಾಕೆನಿಸಿ ಮುಗಿಸುವ ಹೊತ್ತಲ್ಲಿ
ನೆನಪಿಗೂ ಬರಲಿಲ್ಲ ಯಾರೂ ಹತ್ತಿರದಲಿ
ಈಗ ಗೊತ್ತಾಯಿತು ಯಾರೂ ನನ್ನವರು ಇಲ್ಲ ನನಗಿಲ್ಲಿ
ಮನಸ್ಸು ನೋವನ್ನು ಎದುರಿಸದಾಗ
ಸಮಾಧಾನಿಸುವವರು ಹತ್ತಿರ ಇಲ್ಲದಾಗ
ಒಂಟಿತನ ಸಾಕದಾಗ
ನೋವಿನ ಹಿಂದೆ ನೋವು ನುಸಿಳಿದಾಗ
ಯಾತನೆಗಳು ಯಾಮಾರಿಸಿದಾಗ
ನನ್ನವರು ಯಾರೂ ಇಲ್ಲ ಎಂದದಾಗ
ಹಗಲು -ರಾತ್ರಿ ಕಣ್ಣೀರೆ ಜೊತೆಯಾದಾಗ
ಮನದ ದುಗುಡನ್ನು ಹೇಳಿಕೊಳ್ಳಲು ಆಗದಾಗ
ಕೊನೆಯ ಕ್ಷಣಕ್ಕೆ....ಮೌನವಾಗಿ ತಗೊಳ್ಳುವ
ದೃಢ ನಿರ್ಧಾರ....'!!