Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಮುದ್ದು ರನ್ನ.....

ಹೆಲೊ ಹೆಲೊ ನೀನೆ ನನ್ನ ಮುದ್ದು ರನ್ನ
ಓಡಿ ಬಂದು ಅಪ್ಪಿಕೊ ಬಾರದೆ ಒಮ್ಮೆ ನನ್ನ
ಬಂದಿರುವೆನು ನಾನು ನಿನ್ನ ಹೃದಯಕ್ಕೆ ಹಾಕಲೆಂದು ಕನ್ನ
ತೋರು ಬಾರೆ ನಿನ್ನ ಮನಸಿನ ಮನೆಗೆ ದಾರಿಯನ್ನ

ನೀ‌ ಮಾಡಿರುವೆ ಮನಸನ್ನು ಬಲೂನನ್ನ
ನಾ ತುಂಬಿರುವೆ ‌ಪ್ರೀತಿಯ ಗಾಳಿಯನ್ನ
ಒಪ್ಪಿ ಬಂದು ಹಾರಿ ಬಿಡು ನನ್ನ ಹೃದಯವನ್ನ‌
ಒಡೆದಾಕ ಬೇಡ ‌ನೀ ಚುಚ್ಚಿ ಗುಂಡುಪಿನ್ನ

ಯಾಕೆ ಇನ್ನು ನಿನ್ನದು‌ ಇಂತ ದಿವ್ಯಮೌನ
ಇರಬಹುದೆ ನಿನಗೆ ನನ್ನ ಮೇಲೆ ಅನುಮಾನ
ನಾನು‌‌‌ ತುಂಬಾನೆ‌ ಒಳ್ಳೆ‌ ಹುಡುಗ‌ ಚಿನ್ನ
ಒಮ್ಮೆ ಕೇಳಿ‌ ಬಾ ಊರಲ್ಲಿರೊ ಎಲ್ಲರನ್ನ

ಹಿಂದೆ ಬಿದ್ದಿರುವೆ ವರಿಸಲೆಂದೆ ನಿನ್ನ
ಒಪ್ಪಿಗೆ ಕೇಳಿ‌ ಬರೋಣ ನಿನ್ನ ಅಪ್ಪ‌ ಅಮ್ಮನ್ನ
ಬುಕ್ ಮಾಡಿರುವೆ ಕಲ್ಯಾಣ ‌ಮಂಟಪವನ್ನ
ನಾ‌ ಕಟ್ಟಿ ಬಿಡುವೆ ಈಗಲೆ ‌ತಾಳಿಯನ್ನ

- ಶ್ರೀಕಾವ್ಯ

28 May 2017, 11:28 am

ಜಡಿ ಮಳೆ

ಜಡಿ ಮಳೆ ಧರೆಗಿಳಿದು ಬಂದಿದೆ
ಘಲ್ಲು ಘಲ್ಲೆಂದು ಸದ್ದು ಮಾಡುತ್ತಾ......
ಸುಮಧುರ ಸಂಗೀತವ
ಹೊತ್ತು ತಂದಿದೆ ತನು ಮರೆಸಲು......

ಅನುಕಂಪದ ಮಳೆ ಬಂದಿದೆ
ಭುವಿಗೆ ಬರಗಾಲ ಓಡಿಸಲು .......
ಸೊಗಸಾದ ಮಂದಹಾಸವ ಎಲ್ಲರ
ಮುಖದಲ್ಲಿ ತುಂಬಿ ಹೋಗಳು........

ಬೆಳೆಗಳಿಗೆ ಮಳೆಗಾಗಿ
ಗಗನಕ್ಕೆ ಕೈಚಾಚಿ ಕುಳಿತಿದ್ದ
ರೈತನ ಹೊಟ್ಟೆ ತುಂಬಿಸಲು
ಬಂದಿದೆ ಅವಣಿ ಗೆ ಜಡಿಮಳೆ......

ತಲೆಮೇಲೆ ಸೆರೆಗೊತ್ತು ನೀರಿಗಾಗಿ
ಅಲೆದಾಡಿದ ಹೆಣ್ಣು ಮಗಳ
ಕಷ್ಟ ನೋಡಲಾಗದೆ ಬಂದಿದೆ
ಜಡಿಮಳೆ ಕೆರೆಗಳಿಗೆ ನೀರು ತುಂಬಲು......

ಸೂರ್ಯನ ಶಾಖಕ್ಕೆ ಮೊಡದಲ್ಲಿ
ಅಡಗಿದ್ದ ಜಲವನ್ನು ಪೃಥ್ವಿಯ
ಮಡಿಲು ಸೇರಿಸಲು ಬಂದಿದೆ
ಮುಂಗಾರು ಮಳೆ ನೂತನ ಆಸೆಗಳೊತ್ತು..........

- ಚುಕ್ಕಿ

28 May 2017, 10:13 am

ಕಲ್ಲು ಮನಸು

ನಿನ್ನ ಮರಿಯಲು
ಮನಸನ ಕಲ್ಲು ಮಾಡಿದೆ
ಆದರೆನ್ನು ಮಾಡಲಿ ಗೆಳ್ತಿ
ಆ ಕಲ್ಲೇ ಶಿಲೆಯಾಗಿ
ಅದರ ಮುಖವೆ ನಿನ್ನದಾದರೆ
ಹೇಗೆ ಮರೆಯಲಿ ನಾ ನಿನ್ನ.....

- ಜ್ಯೋತಿ

28 May 2017, 09:02 am

ಭಗವಂತ

ನನ್ನದೆಂಬ ಆತ್ಮಕೊಟ್ಟ ಭಗವಂತ
ದೇಹ ನನ್ನನ್ನೆತ್ತ ಪರಕಿಯರಿದೆಂದು ತಿಳಿಸಿಬಿಟ್ಟ.
ಸ್ವಾತಂತ್ರ್ಯವಿಲ್ಲದೇ ನನ್ನೊಳಗೆ ನಾ ನೊಂದುಕೊಳ್ಳುವ ಹಣೆ ಬರಹ ಬರೆದಿಟ್ಟ.

ಜ್ಯೋತಿಯ ಕೈಗಿಟ್ಟು ಇತರರ ಜೀವನ
ಬೆಳಗಿಸುವುದನ್ನು ಕಳಿಸಿಕೊಟ್ಟ.
ಅದೇ ಜ್ಯೋತಿಯನ್ನು ನನ್ನ ಜೀವನದವೆಂಬ
ಸಿರಿವನದ ತುದಿಯಲಿಟ್ಟು ಕಾಡ್ಗಿಚ್ಚಾಗಿ ಬಡಳಿಸಿಬಿಟ್ಟ.

ಸದಾ ನಿನ್ನ ನೆರಳಲ್ಲೇ ಇರುವೆನೆಂದು
ಮಾತುಕೊಟ್ಟ ಇರುಳುಬಂದು
ಸೇರುವಷ್ಟರಲ್ಲಿ ನನ್ನ ಮರೆತುಬಿಟ್ಟ.

ಕನಿಷ್ಠ ಕನಸಲ್ಲಾದರು ನಗು ಎಂದು
ವರವಕೊಟ್ಟ ನೋವಿಲ್ಲದೆ ನಗುವಷ್ಟರಲ್ಲಿ
ಬೆಳಕರಿಸಿ ಬಿಟ್ಟ.

- ಚುಕ್ಕಿ

28 May 2017, 06:37 am

ಇಳೆಯ ಅನುಜಿ

ಎಷ್ಟು ಸುಂದರ ಸೃಷ್ಟಿ
ಪ್ರಕೃತಿ ದೇವತೆಯ ತಿಲಕ
ವಜ್ರಮೋಡದಿಂದುದುರುವ
ಮುತ್ತಿನ ಹನಿಯ ಮಾಲೆ..!!!

ಎಲ್ಲಿ ಒಮ್ಮೆ ಎಲ್ಲರೂ
ಚಪ್ಪಾಳೆ ತಟ್ಟಿ!!
ಮಳೆ ಹನಿಗಳು ಆಯೋಜಿಸಿರುವ
ಮೇಳಕ್ಕೆ..!!

ಭಾನು ಭೂಮಿಯ
ಪ್ರೇಮಾಂಕುರದ ಸಂಕೇತ,
ಚುಂಬಿಸಿ ಚಿಮ್ಮುವ
ಪುಳಕದಲೇನೋ ರೋಮಾಂಚನ..!!

ದಿಟ್ಟಿಸಿ ನೋಡಿರೊಮ್ಮೆ,
ವೃಕ್ಷಕ್ಕೆ ನೆತ್ತರ ನೀಡುವ ಪರಿ,
ಚಿಗುರುಗಳ ಚೈತನ್ಯ ಬಿಂದು,
ರೈತಭಂದು..!!

ಮಳೆ ಹಾಡುವ ಸುಪ್ರಭಾತಕೆ
ಎಲೆಗಳ ನಿದ್ರೆಯು ಹಾರಿ,
ತುದಿಯಲಿ ಹನಿಯ ತೊಟ್ಟುಗಳು ಜಾರಿ,
ಶುರು ಮಾಡುವವು ಆಮ್ಲದ ತಯಾರಿ..!!

-ಕನ್ನಡ ಭಕ್ತ

- ಕನ್ನಡದ ಭಕ್ತ

28 May 2017, 01:11 am

ಗೆಜ್ಜೆ ನಾದ.....

ಇಚೀಚೆ ಮನಸ್ಯಾಕೊ ಹತೋಟಿಯಲಿಲ್ಲ ,
ನಿನ್ನೆಡೆಗೆ ಸುಳಿದಾಡಿದೆಯಲ್ಲ..
ನನ್ನವನಿಗೆ ಪೈಪೋಟಿ ಯಾರೂ ಇಲ್ಲ ಜಗದಲಿ,
ಅವನೇ ಸರ್ವಸ್ವ ನನ್ನೀ ಬಾಳಿನಲಿ..
ಬಂಧಿಸಲೆ ನಿನ್ನ ಮನಸ್ಸಲ್ಲೆ,
ಬಂದು ನಾ ಸೇರಲೆ ನಿನ್ನಲ್ಲೆ..
ನಮ್ಮುಸಿರೇ ಒಂದಾಗಿರುವಾಗ,
ನಿನ್ನೆಸರ ನೀಡದಿರುವೆಯ ಕೊನೆಯಾಗ..
ಅರಮನೆ ಬೇಕಿಲ್ಲ ನನಗೆ,
ರಾಣಿಯಾಗ ಬೇಕಿದೆ ನಿನ್ನ ಮನಸ್ಸಿಗೆ..
ಕೇಳೆನು ಬೇರೇನನು,
ಪೂರ್ತಿ ಮಾಡೆಯ ಮಾತೊಂದನು..
ಕಯ್ಯಾರೆ ತೊಡಿಸು ನೀ ಗೆಜ್ಜೆಯ,
ಜೊತೆಯಿಡಬೇಕು ಪ್ರತಿ ಹೆಜ್ಜೆಯ..

- Acchu love

27 May 2017, 11:48 pm

ಓ ಜೀವವೇ ನೀ ಮರೆಯುವೆಯಾ........

ನಾ ನೋಡಲಿಲ್ಲ ನಿನ್ನ ಕಣ್ಣಿನಲ್ಲಿ ಕಣ್ಣಿಟ್ಟು ಅಂದು.
ಗುಂಡಿಗೆಯ ಗೂಡು ಬಿಚ್ಚಿ ಹೇಳಲಾರದೆ ಹೋದೆ ಪ್ರೀತಿಯಾ....
ಈ ಹೃದಯ ಹಾಡುವ ಉಸಿರ ಲಾಲಿಗೆ ನಾ ಹೇಗೆ ಸ್ಪಂದಿಸಲಿ ....?
ಹುಚ್ಚು ಮನಸು ಕೇಳುವ ನೂರಾರು ಆಸೆಗಳಿಗೆ ಬೇಲಿ ನಾ ಹೇಗೆ ಹಾಕಲಿ ಇಂದು........


ಹೊಸದಾಗಿ ಶುರುವಾಯಿತಾ ನಮೊಳಗೆ ಈ ಗೆಳೆತನ .
ಈ ನೆನೆಪುಗಳ ನೆರಳಿಲ್ಲದೆ ನೆನಪುಗಳು ಕಾಡುತಿದೆ ದಿನೇ-ದಿನೇ...
ನಾ ಮರೆಯುವೆನೆಂದರೂ ನೀನಿಗಾ ಮರೆಯಲಾಗುತಿಲ್ಲ ಆ ನೋವಾ ,,,,
ನೋವಾ ಎದೆಯೊಳಗೆ ಬಚ್ಚಿಟ್ಟು ನೀ ಪಡೆಯುವುದಾದರೂ ಏನು ......?


ಓ ಜೀವವೇ ಈ ಮನಸಿನ ಮಾತನ್ನು ಒಮ್ಮೆ ನೀ ಕೇಳ ಬಾರದೆ..
ಬಾನೆರೋ ಆ ಮೋಡವು ಹನಿಯಾಗಿ ದರೆಗಿಳಿಯದೆ ಹೊಯ್ತೆ......
ಈ ಹೃದಯ ಚೂರಾದರು ನಿನ್ನ ಪ್ರೀತಿಯ ಮರೆಯುವುದೇ.......
ನಾನಾ ರೂಪದ ತಿರುವಲ್ಲಿ ಎಲ್ಲೋ ಕಾಣದ ನಿಲ್ದಾಣ ,ಮರಳನ್ನು ಕೂಡ ಕದಡುವಾಸೆ ಇನ್ನೂ ತಿರಲಿಲ್ಲವೇ..........

ಜೀವಕ್ಕೆ ಇಂದು.........

- Acchu love

27 May 2017, 11:16 pm

ಮರೆವು

ನಾನು ನನ್ನನ್ನು ಅದೆಂದು ಮರೀತಿನೋ
ಗೊತ್ತಿಲ್ಲ ನನಗೆ ಏಕೆಂದರೆ ಹಾಗಾತಾನೆ
ನಿನ್ನ ನೋವು ನನಗೆ ತಿಳಿಯುವುದಿಲ್ಲ.........

ನೀನು ಸುರಿಸುವ ಪ್ರತಿ ಕಣ್ಣೀರಿಗೂ
ಕಾರಣ ನಾನೇ ತಾನೇ ನಾನೇ............
ಕಲ್ಲು ನಾನಲ್ಲ ಆದರೂ ನನ್ನ ಮನಸು
ಮಾತ್ರ ಕರಗುತಿಲ್ಲ ಈ ಕ್ಷಣ ಕರಗುತಿಲ್ಲ......

ನಿನ್ನ ಹಾಗೆ ನಾನಿರಳು ಸಾಧ್ಯವಾಗುತ್ತಿಲ್ಲ
ಜನರ ಸ್ವಾರ್ಥಕ್ಕೆ ನನ್ನ ಮನಸ್ಸು ಅತ್ತು ಅತ್ತು
ಕಲ್ಲಾಗಿದೆ ಅದು ನನ್ನ ಕರಗದ ಶಿಲೆಯಾಗಿಸಿದೆ......

- ಚುಕ್ಕಿ

27 May 2017, 08:34 pm

ಬದುಕೆಂಬ ಅಂಗಡಿ........

ಬದುಕೆಂಬ ಅಂಗಡಿಯಲ್ಲಿ
ಭಾವನೆಗಳನ್ನು ಮಾರಾಟಕ್ಕಿಟ್ಟರೆ
ಮೊದಲು ಮಾರಟವಾಗುವುದು ಸಂತೋಷ...

ನಮ್ಮ ಜೊತೆಗಿರುವುದು ದುಃಖ
ಬೆಳೆಕಟ್ಟಲಾಗುವುದು ಪ್ರೀತಿ.........
ಕೊನೆಗೆ ನಮ್ಮ ಜೊತೆಗೂಳಿಯುವುದು ನೆನಪು..........

ಕೊನೆಗೆ ಉಳಿದ ಕಹಿ ನೆನಪುಗಳನ್ನು ಇಟ್ಕೊಂಡು ಜೀವನದ ಬಗ್ಗೆ ಮೂಡಿದ ಬೇಜರಾದ ಉಳಿದ ಕಾಲ ಕಳೆಯೋದು ಜೀವನ........

ನಮ್ಗೆ ಇಷ್ಟ್ ಅದವರು ನೊಂದುಕೊಳ್ಳಬಾರದು ಅಂತ ನಗುವನ್ನು ನಟಿಸಿ ದಿನಬೆಳಗಾದರೆ ಮನಸಲ್ಲಿ ಅಳುತ್ತಾ ಬದುಕುವುದೇ ಸರೀನಾ...............

- ಚುಕ್ಕಿ

27 May 2017, 02:06 pm

ಅವಿತಿಡುವುದ ಕಂಡುಕೊಂಡಿರುವೆ....

ಸಣ್ಣ‌ ಸಣ್ಣ ನೋವುಗಳಿಗೂ ನೊಂದು
ಅಮ್ಮನ‌ ಮಡಿಲ ಸೇರಿ
ಮೊಗವ ತೋರದೆ ಅತ್ತ ಕ್ಷಣಗಳು ನೆನಪಿನಲ್ಲಿ ಇಟ್ಟಿರುವೆ....

ಯಾರೇನೊ‌ ಎಂದರೆಂದು ಕಣ್ಣಾಲಿಗಳಲಿ ನೀರು ತುಂಬಿ
ಅಮ್ಮನ ಮುಖವ ನೋಡುತ‌ ನಿಂತಾಗ
ಕಣ್ಣಲ್ಲೆ ಕಣ್ಣೀರ‌ ಒರೆಸಿದ‌ ನೆನಪುಗಳ‌ ಮರೆಯಲಾರದಾಗಿರುವೆ...

ಕಂಡ ನೋವುಗಳ ಲೆಕ್ಕವಿಟ್ಟಿಲ್ಲ
ಮಾಡಿದ ಅಪಮಾನ ಅನುಮಾನಗಳ ನೆನಪಗಳು ನನ್ನ ಬಿಟ್ಟಿಲ್ಲ
ಸೋಲುಗಳೆಲ್ಲ ಜೀವನದ ಮುಖವ ತೋರಿಸುವ ಪಾಠವಾಗಿ ಕಲಿತಿರುವೆ....

ಮನಸಲಿ ಅಗ್ನಿಪರ್ವತವೇ ಹೊತ್ತಿ ಉರಿಯುತ್ತಿದ್ದರು
ಕಣ್ಣಲಿ ನದಿಯೆ ಹರಿದು ಹೋಗಲು‌‌ಕಾಯುತ್ತಿದ್ದರು
ಅಮ್ಮನ ಮಡಿಲ ಸೇರದೆ ಅವಳಿಗೆ ನಾ ಧೈರ್ಯವಂತೆಯಾಗಿರುವೆ ಎಂದು ನೆಮ್ಮದಿ ಕೊಟ್ಟಿರುವೆ .....

ನೋವುಗಳೆಲ್ಲ ಏನೇನು ಅಲ್ಲವೆಂಬಂತೆ ಕಾಣುವ ಸ್ಥೈರ್ಯವಿಲ್ಲ
ಕಣ್ಣಂಚಲಿ‌ ಅವು ಬಂದು ಜಾರದಂತೆ
ಮರೆಮಾಚಿ ನಗುತ ಎಲ್ಲವ ಮರೆಸುವುದ ಕಲಿತಿರುವೆ ...

ಕಣ್ಣ ಹನಿಗಳಲಿ ಅವುಗಳು ಬಾರದಂತೆ‌ ಬೀಗ ಜಡಿದು
ನಗುವುದ ಕಲಿತು , ನಗಿಸುವುದ ಕಲಿಯುತ್ತಿರುವೆ
ಅದರೊಳಗೆ‌ ಕಾಣದ ಮುಖವ ಅವಿತಿಡುವುದ ಕಂಡುಕೊಂಡಿರುವೆ
ಆದರೆ ನನ್ನ ಮನಸೊಳಗೆ ಅವುಗಳು ಪ್ರವಾಹಿಸಿ ಕಾಡಿಸುವುದ ತಡೆಯಲಾರದೆ ಸೋತಿರುವೆ....

- ಶ್ರೀಕಾವ್ಯ

27 May 2017, 01:25 pm