ಅದೋ,ದೂರದಿಂದ ಕೇಳಿ
ಬರುತ್ತೆ ಮಸಣದ ಕವಿತೆ
ಆಹ್ಲಾದಕರ ಶುಶ್ರಾವ್ಯ
ಇನ್ನು ಏನೇನೋ
**
ಬದುಕಿಗೆ ಆಸೆಯ ವೈನ್
ಕುಡಿಸಿದ್ದಾದರೂ ಏಕೆ!?
ಥೂ,ಅಮಲಿನ್ನು ಇಳಿದಿಲ್ಲ
ಹೊಟ್ಟೆ ತುಂಬಿದ ಮೇಲಿನ
ಹಸಿವು ಕವಿತೆ
**
ಈ ಜೇಬಿನಲಿ
ಅನಾಥ ಮೌನಗಳನ್ನು
ಮಾತ್ರ ಶೇಖರಿಸಲಿರುವುದಲ್ಲ
ಥತ್ ನಿಮ್ ಮುಖಕ್ಕೆ
ಸಾಯೋ ನೆನಪಿಗೆ
ಅವಳೊಂದು ಕವಿತೆ
**
ಎರ್ರಾಬಿರ್ರಿ ಏರಿದೆ
ಅಮಾಯಕ ಬಯಕೆಯ
ಅರ್ಧ ಕವಿತೆಗಳು
ಪದಗಳನ್ನು ಜೋಡಿಸಿ
ಬೇಕಾದವರು ಕವಿತೆಯಾಗಿಸಿ
ದಯವಿಟ್ಟು
**
ಅವನ್ಯಾರದೋ
ಕವಿತೆಯಲಿ ಹೋದ
ನೋಡಿ ಅದೇ ದಾರಿ
ಮಸಣ ಜೋಪಡಿಯೊಳಗೆ
ಇಷ್ಟು ಮಾತ್ರ ಹೇಳಬಲ್ಲ
ನನ್ನೀ ಅಂತಿಮ
ಕವಿತೆ..!!
ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ. ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.
ಹೆತ್ತವರಿಗರಿವಿಲ್ಲ ಜಾತಿಯೊಂದು ಪಿಡುಗು,
ಅವರ ಹೆತ್ತವರು, ಇನ್ನಾರನೋ ಅನುಸರಿಸಿ,
ಸ್ಪಷ್ಟಹುರುಳಿಲ್ಲ, ಈ ಜಾತಿ ವ್ಯವಸ್ಥೆಗೆ,
ಇರುವರೀರ್ವ ಸ್ತ್ರೀ ಪುಲ್ಲಿಂಗ,
ಜಾತಿ ಫಲಕ ತೊಟ್ಟು ಭಾವಭಂಗ..!
ಲೇಖನಿಯೊಳಗಪ್ಪಿ
ಬಿಳಿ ಹಾಳೆಗಪ್ಪುತಿರುವದು ಕಪ್ಪು ವರ್ಣದ ಇಂಕಲ್ಲಾ
ಕಣ್ಣಿಗು ಕಾಣದ ಬಿಳಿ
ರೂಪದ ಕಂಗಳ ನೀರಾ ಹನಿ
ಅದರೆ ಇನ್ನು ಕೇಲ ದೀನಗಳಲ್ಲೆ ಬಿಚ್ಚಲಿದೆ
ಸಮಾಜ ಸೆವೆಯೆಂ ಮುಖವಾಡವನೊತ್ತಾ ಮುರ್ಖಾ ಮುಖಗಳ
ಎಚ್ಚೇರ ವಿರಲಿ
ಬಿಳಿ ಹಾಳೆಯಾ ಮೇಲೆ ಅರ್ಭಟಿಸಲು ಸಜ್ಜಾಗುತಿದೆ
ಬಿಳಿ ಕಂಗಳ ನಿರಾ ಸುನಾಮಿ .....
ಬಾಳೊಂದು ಗೋಳು ನೂರಾರು ಸೋಲು
ಸೋತೆನೆಂದು ನೊಂದರೆ ಬೆಳಗದು ನಿನ್ನ ಬಾಳು
ಗೆದ್ದೆನೆಂದು ಗರ್ವಿಸಿದರೆ ಆಗುವುದು ಹಾಳು
ಓ ನನ್ನ ಮನವೇ ಕೇಳು ಪ್ರೀತಿಗಾಗೆ ಪ್ರತಿಜನ್ಮ ನೀ ತಾಳು||ಪ||
ಅನ್ಯರು ಏನೆಂದರೂ ನಿನ್ನ ಮನವೇ ನೊಂದರೂ
ಕೊನೆಗೆ ನಿನ್ನೇ ಕೊಂದರೂ ಪ್ರೀತಿಯ ಮರೆಬೇಡ ನೀತಿಯ ಬಿಡಬೇಡ| ದಿಕ್ಕಿಲ್ಲದೆ ಸಾಗುವ ಪಯಣ ಗುರಿಯೆಂದು ತಲುಪದು ಉತ್ತಮ ಗುರಿಯೆಡೆಗೆ ಸಾಗಲಿ ಜೀವನ ಗುರಿಯಿಂದ ಜನ್ಮ ಆಗುವುದು ಪಾವನ| ಮನಸ್ಸಿದ್ದರೆ ಕಲ್ಲುಕೂಡಾ ಕರುಗುವುದು ಕೃಷಿ ಇದ್ದರೆ ಶಿಲೆಕೂಡ ಶಿಲ್ಪವಾಗುವುದು| ಆಸೆಯ ಬಿಡು ನೀ ಆಶಯ ಕೈ ಹಿಡಿ ಸಾಧನೆಯ ಮೆಟ್ಟಿಲು ಹತ್ತಿ ಎಲ್ಲರ ಪ್ರೀತಿಯ ಪಡಿ||೧||
ಶತ್ರುಗಳು ಯಾರು ಇಲ್ಲ ನಮಗೆ ನಾವೇ ಕತೃಗಳು ಯಾರೋ ಕಲ್ಲು ಎಸೆದರೆಂದೂ ಅವ ನೀ ದ್ವೇಷಿಸಬೇಡ ಅವನೆಸೆದ ಕಲ್ಲೆ ನಿನ್ನ ಸಾಧನೆಯ ಮೆಟ್ಟಿಲು ಎಂಬುದನ್ನು ಮರೆಯಬೇಡ| ಜೀವನವ ಚಿಂತಿಸಬೇಡ ಬೆನ್ನೇ ತೋರದೆ ಮುನ್ನುಗ್ಗುತ್ತಿದ್ದರೆ ಸೋಲೇ ನಿನಗಿಲ್ಲ ನೀ ಇಟ್ಟ ಪ್ರತಿ ಹೆಜ್ಜೆ ಗೆಜ್ಜೆ ಸದ್ದಾಗಿ ಮನವ ಕದಿಯುವುದು|ಕಾರ್ಯವಿದ್ದರೆ ಕನಸ್ಸು ಕೂಡ ನನಸ್ಸಾಗುವುದು ಕೈ ಹಾಕಿದರೆ ಕಸ ಕೂಡ ರಸವಾಗುವುದು| ನೆನ್ನೆಯ ನೆನ್ನೆಗೆ ಮರೆತು ಬಿಡು ನಾಳೆಯೆಂದು ತಿಳಿಯದ ನಮಗೆ ಈ ಕ್ಷಣವೇ ನೀ ಬದಲಾಗಿ ಕಾರ್ಯಪ್ರವೃತ್ತನಾಗು||೨||