Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಿರಹದ ಬೇಗೆ

ನನ್ನ ಕಣ್ಣುಗಳು ಕೈಗೊಂಡಿದೆ ಬೇಹುಗಾರಿಕೆಯನ್ನು
ಆದರೆ ಅದು ಹುಡುಕುತ್ತಿರುವುದಾದರು ಏನನ್ನು
ನಿನ್ನ ಕಂಡು ಕಾಣದೇ ಕಣ್ಮರೆಯಾದ ಕಣ್ಣುಗಳನ್ನ?
ಅಥವಾ ನಕ್ಕು ನೆನೆಗುದಿಗೆ ಬಿದ್ದ ನಿನ್ನ ತುಟಿಗಳನ್ನ?
ಅಥವಾ ಮುತ್ತುದುರಿಸಿ ಮರೀಚಿಕೆಯಾದ ನಿನ್ನ ಮಾತುಗಳನ್ನ?
ತಿಳಿಯುತ್ತಿಲ್ಲ ಗೆಳತಿ ಇದಾವುದೂ ನನಗೆ
ಆದರೆ ತಟ್ಟುತ್ತಿರುವುದಂತೂ ನಿಜ ನಿನ್ನ ಕಾಣದ ವಿರಹದ ಬೇಗೆ
ತಿಳಿದಿಲ್ಲ ಎಂದು ಒಂದು ಮಾಡುವುದೋ ನಮ್ಮಿಬ್ಬರನ್ನು ಪ್ರೀತಿ ಬೆಸುಗೆ.....‌‌.

- ಅಕವಿ

27 Mar 2017, 08:00 pm

ಈ ಪ್ರೀತಿಗೆ ನೀ ತಾನೆ ಕಾರಣ

ನೀ ನಾನಾಗಲು
ನಾ ನೀನಾಗಲು
ಪ್ರೀತಿ ಕಾರಣ

ನೀ ನನ್ನ ಕನಸಾಗಲು
ಆ ಕನಸು ನನಸಾಗಲು
ಪ್ರೀತಿ ಕಾರಣ

ಮನಸು ಮೃದುವಾಗಲು
ಮೃದುವಾಗಿ ಮರೆಯಾಗಲು
ಪ್ರೀತಿ ಕಾರಣ

ಹೃದಯ ಹಗುರಾಗಲು
ಹಗುರಾಗಿ ಹಕ್ಕಿಯಂತೆ ಹಾರಲು
ಪ್ರೀತಿ ಕಾರಣ

ನಿನ್ನೆಸರು ನನ್ನುಸಿರಾಗಲು
ನನ್ನುಸಿರು ನೀನಾಗಲು
ಪ್ರೀತಿ ಕಾರಣ

ನೀ ನನ್ನ ಬಡಿತವಾಗಲು
ಆ ಬಡಿತ ಹೃದಯದ ಧನಿಯಾಗಲು
ಪ್ರೀತಿ ಕಾರಣ

ನೀ ನನ್ನ ಮಿಡಿತವಾಗಲು
ಆ ಮಿಡಿತ ಪ್ರತೀ ನಾಡಿಯಲ್ಲು ಸೆರೆಯಾಗಲು
ಪ್ರೀತಿ ಕಾರಣ

ಆ ಪ್ರೀತಿಗೆ ನೀ ತಾನೇ ಕಾರಣ!!!!!!!!!!

- ಅಕವಿ

27 Mar 2017, 07:43 pm

ಪ್ರೀತಿಯ ಸ್ವಾರ್ಥ

ನಿನ್ನ ಪ್ರೀತಿಸಿದ ಮೇಲೆ
ನಾನಾಗಿದ್ದೇನೆ ಸ್ವಾರ್ಥಿ!!

ನನ್ನ ನೋಡೋ ಕಣ್ಣುಗಳು
ನಿನ್ನದೇ ಆಗಿರಬೇಕು
ನನ್ನ ಸ್ಪರ್ಶಿಸೋ ಕೈಗಳು
ನಿನ್ನದೇ ಆಗಿರಬೇಕು
ನನ್ನ ಕಂಡಾಗ ಮೂಡುವ ನಗು
ನಿನ್ನದೇ ಆಗಿರಬೇಕು
ನಾ ಕೇಳಿದ ಪ್ರತೀ ಧ್ವನಿ
ನಿನ್ನದೇ ಆಗಿರಬೇಕು
ನಾ ಕಾಣುವ ಪ್ರತೀ ಕನಸು
ನಿನ್ನದೇ ಆಗಿರಬೇಕು
ನನ್ನ ಹೃದಯದ ಪ್ರತೀ ಕಣ
ನಿನ್ನದೇ ಆಗಿರಬೇಕು
ನನ್ನ ಜೀವನದ ಪ್ರತೀ ಕ್ಷಣ
ನಿನ್ನದೇ ಆಗಿರಬೇಕು
ನನ್ನ ಪ್ರೀತಿಸುವ ಏಕೈಕ ಹೃದಯ
ನಿನ್ನದೇ ಆಗಿರಬೇಕು...........

ನಂತರ ನನಗೊಂದು ತಿಳಿಯಿತು
ಸ್ವಾರ್ಥಿ ನಾನಲ್ಲ ಪ್ರೀತಿ!!!!!!

- ಅಕವಿ

27 Mar 2017, 07:36 pm

ಯಾರಯ್ಯ

ನಾನೊಬ್ಬ ಗಾಯಕನೂ ಹೌದು
ಅದಕ್ಕೆ ಸಂಗಿತವನ್ನು ಬಲ್ಲವರು
ಯಾರಯ್ಯ......

ನಾನೊಬ್ಬ ಕವಿಯೂ ಹೌದು
ಅದಕ್ಕೆ ನನ್ನನ್ನು ಕವಿತೆಯಿಂದ ವರಣಿಸುವವರು
ಯಾರಯ್ಯ.......

ನಾನೊಬ್ಬ ಬಡವನೂ ಹೌದು
ಅದಕ್ಕೆ ಸಿರಿತನದ ದಾರಿ ಬೆಳಗಿಸುವರು
ಯಾರಯ್ಯ.....

ಜೀವನ ಒಂದು ಬೆಸರದ ಅಲೆಮಾರಿ ಆಗಿದೆ
ಅದಕ್ಕೆ ನೆಲೆ ಕೊಡುವವರು
ಯಾರಯ್ಯ........

ಎಲ್ಲರೂ ಇದ್ದು ನಾನೊಬ್ಬ ಅನಾಥನೂ ಹೌದು
ಅದಕ್ಕೆ ಆರು-ಮೂರು ಅಡಿ ಜಾಗ ಕೊಡುವವರು
ಯಾರಯ್ಯ.....

ಯಾರಯ್ಯ.....

ಯಾರಯ್ಯ....

-

27 Mar 2017, 07:06 pm

ಶ್ಯಾಮ ...

ಕಾದಳು ಶಬರಿಯಂತೆ, ರಾಮ ಬರುವವರೆಗೆ
ಕಾದು ಸತಿಯಂತಾದಳು ಶಿವನ ಸೇರುವವರೆಗೆ
ಕಾದಳು ಮೀರೆಯಾಗಿ ಶ್ಯಾಮನೊಲಿಯುವವರೆಗೆ
ಕಾಯುತ್ತಲೇ ಕರಗಿದಳು ಮೇಣದಂತೆ
ಅವನೋ ಮೇಣದಿಂದ ಆಕೃತಿಯ ಮಾಡುವಾತ
ಮತ್ತೇ ಮೇಣಕ್ಕೆ ಆಕೆಯ ರೂಪವ ಕೊಟ್ಟು, ಜೀವತುಂಬಿ
ಸದಾ ಉರಿಯುವ ಪ್ರೀತಿಯ ದೀಪವಾಗಿಬಿಟ್ಟ

- poorni

27 Mar 2017, 03:14 pm

...ವಸುಂಧರೆ...

ವಸುಂಧರೆಗೂ ದುಃಖ
ಕಾರಣ... ಅವಳೊಡಲಿಗೆ ನಾವು ಸುರಿಯುತ್ತಿರುವ ವಿಷದ ನೋವಿಗಲ್ಲ
ಬದಲಾಗಿ
ಅದರ ಪರಿಣಾಮ
ಅದೇಷ್ಟೊ ಜೀವ ಸಂಕುಲಕ್ಕೆ ಇನ್ನು
ತನ್ನ ಮಡಿಲು ಸುರಕ್ಷಿತವಲ್ಲ ಎಂದು...

ಅಂದು ರತ್ನಗರ್ಭಿತ ವಸುಂಧರೆ.....
ಇಂದು ದುಃಖತಪ್ತ ವಸುಂಧರೆ.....!!!

..... ಪಿ ಅನಿ.....

- ಪಿ ಅನಿ...

27 Mar 2017, 01:12 pm

ಚಡಪಡಿಕೆ

ಮನಸು ಮುರಿಯೋರಿಗೆನು ಗೊತ್ತು ಹ್ರದಯದ ನೋವು
ಜಗತಿನ ಜನರಿಗೆನು ಗೊತ್ತು ಪ್ರೀತಿಯ ನಿಯಮ

ಗೋರಿಯ ಮೇಲೆ ಹೂವು ಇಡುವವರಿಗೆನು ಗೊತ್ತು
ಒಳಗಿನ ಜೀವದ ಚಡಪಡಿಕೆ...ಆದಿಲ್

- adilsha

27 Mar 2017, 12:22 pm

ಈ ಪ್ರೇಮವೊ...

ಈ ಪ್ರೇಮವೋ ದೇವರಾ ಹಾಗೆ....
ನನ್ನೊಳ ಮನಸು ಪರಿಶುಧ್ದ ಗಂಗೆ....
ಉಸಿ ಮಾಡದೇ ನಾನಿಟ್ಟ ನಂಬಿಕೆ...
ಉಸಿರಾಗುತಾಳೇ ಈ ನನ್ನ ಜೀವಕೇ...........
ಅನು..

- Anu...

27 Mar 2017, 12:15 pm

ವಿರಹದ ಇರುಳು

ಬೆಳಗುತಿರುವ ಹಣತೆ ನೀನೆ ನನ್ನ ಗೆಳತಿ
ಅರಳುತಿರುವ ಕಮಲ ನಿನ್ನ ಕಡೆಗೆ ನನ್ನ ಗಮನ!!
ನೀ ದಾರದಲ್ಲಿ ಪೋಣಿಸಿರುವ ಮುತ್ತ ಮಾಲೆ
ನಾ ಧರಿಸಿಕೊಳ್ಳಲು ಬಳಸ ಬಾ ನೀ ನನ್ನ ಕೊರಳ!!

ನೀ ಗಗನದಲ್ಲಿ ಮಿನುಗುವ ತಾರೆಯೇನು
ನಾ ಬಳಿಗೆ ಬರಲು ಹೇಳು ನೀ ದಾರಿಯನ್ನು!!
ತಿಳಿಯದೇ ನಿನ್ನನು ನಾನು ಪ್ರೀತಿಸಿ ಬಿಟ್ಟೆನು
ವಿರಹದ ಬಾಗಿಲ ಎದುರು ಕಾಯುತ್ತ ನಿಂತೆನು!!

ನನ್ನ ಬಾಳ ಬಂಗಾರದ ಅರಮನೆಗೆ ರಾಣಿ ನೀನು
ಬರಬೇಕು ಬಲಗಾಲನ್ನಿಟ್ಟು ಒಮ್ಮೆ ನೀನು!!
ನೀ ಕಳೆಯ ಬಾರೇ ಇಂದು ಈ ಏಕಾಂಗಿಯ ಬದುಕಲಿ ಕವಿದಿರೋ ಈ ವಿರಹದ ಇರುಳ !!

- ಪಿ.ಜಿ.ಜ್ಯೋತಿ

27 Mar 2017, 09:36 am

ಸಿಹಿ ವಿಷ

ಪ್ರೀತಿಯ ನೋವಿಗೆ ವಿಷ ಕಾರುತಿದೆ ಮನಸು
ಅಶ್ರುಧಾರೆ ತುಂಬಿ ಕತ್ತಲು ಅವರಿಸಿದೆ ಜಗವು
ಹ್ರದಯದ ನರಳಾಟಕ್ಕೆ ಹೇತ್ತಬೆಯ ಮಡಿಲು ಬರಿದಾಗಿದೆ.

ಹ಼ಲವು ವರುಶ ಮಮತೆಯ ಮಳೆಯಲ್ಲಿ ಮಿಂದ ಜೀವವ
ಕೆಲವು ಕ್ಷಣದ ಪ್ರೇಮದ ಸುಳಿಗೆ ಸಿಲುಕಿಸಿ ಕೋಂದಿದೆ...ಆದಿಲ್

- adilsha

27 Mar 2017, 08:41 am