Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಲ್ಕಟ್ ಕವಿತೆ

ಅದೋ,ದೂರದಿಂದ ಕೇಳಿ
ಬರುತ್ತೆ ಮಸಣದ ಕವಿತೆ
ಆಹ್ಲಾದಕರ ಶುಶ್ರಾವ್ಯ
ಇನ್ನು ಏನೇನೋ
**
ಬದುಕಿಗೆ ಆಸೆಯ ವೈನ್
ಕುಡಿಸಿದ್ದಾದರೂ ಏಕೆ!?
ಥೂ,ಅಮಲಿನ್ನು ಇಳಿದಿಲ್ಲ
ಹೊಟ್ಟೆ ತುಂಬಿದ ಮೇಲಿನ
ಹಸಿವು ಕವಿತೆ
**
ಈ ಜೇಬಿನಲಿ
ಅನಾಥ ಮೌನಗಳನ್ನು
ಮಾತ್ರ ಶೇಖರಿಸಲಿರುವುದಲ್ಲ
ಥತ್ ನಿಮ್ ಮುಖಕ್ಕೆ
ಸಾಯೋ ನೆನಪಿಗೆ
ಅವಳೊಂದು ಕವಿತೆ
**
ಎರ್ರಾಬಿರ್ರಿ ಏರಿದೆ
ಅಮಾಯಕ ಬಯಕೆಯ
ಅರ್ಧ ಕವಿತೆಗಳು
ಪದಗಳನ್ನು ಜೋಡಿಸಿ
ಬೇಕಾದವರು ಕವಿತೆಯಾಗಿಸಿ
ದಯವಿಟ್ಟು
**
ಅವನ್ಯಾರದೋ
ಕವಿತೆಯಲಿ ಹೋದ
ನೋಡಿ ಅದೇ ದಾರಿ
ಮಸಣ ಜೋಪಡಿಯೊಳಗೆ
ಇಷ್ಟು ಮಾತ್ರ ಹೇಳಬಲ್ಲ
ನನ್ನೀ ಅಂತಿಮ
ಕವಿತೆ..!!

#ಅವಿಜ್ಞಾನಿ

- ಅವಿಜ್ಞಾನಿ

04 Apr 2017, 11:01 am

ಸಯಾಮಿ ಕವಿತೆ (ಗಾಲಿಬ್ ಪ್ರೇರಿತ)

ನಾನು ಕವಿತೆ ಕಟ್ಟುವಾಗ
ಸಂಜೆಯ ಪ್ರಸ್ತವಾಗುತ್ತದೆ
ಕತ್ತಲು ಗರ್ಭಧರಿಸಿ ಸೀಮಂತಕೆ
ಚಂದಿರನ ಕಾಯುತ್ತದೆ
ಅವಳ ನೆನಪ ಸೂಲಗಿತ್ತಿಯಿಂದ
ವಿರಹ ವೇದನೆಯೆಂಬ
ಸಯಾಮಿ ಕವಿತೆಯ ಹೆರಿಗೆ ಆಗೋದು ಆಗಲೇ

ನನ್ನ ಕವಿತೆಗೆ ಹೆಸರಿಡಲು
ಅಲೆಯ ಬಾಡಿಗೆ ಪಡೆದು
ಮೂಗಿಲೂರಿಗೆ ಹೊರಡುತ್ತೇನೆ
ಉಬ್ಬಸದ ಕಡಲು ನಗುವ
ಜಾಯಮಾನವ ಪ್ರಕಟಿಸುವಾಗ
ಕವಿತೆಯ ಹೆಸರು ಮೊಳಕೆ
ಹೊಡೆಯದ ಮರವಾಗುತ್ತದೆ

ನನ್ನ ಕನಸಿನ ಕದ ತಟ್ಟುವ
ಅವಳ ಕಿರು ಬೆರಳಿಗೆ ನಾನಿಡುವ
ಮುತ್ತು ಓದಿದರೂ ಮುಗಿಯದ ಕಾವ್ಯವಾಗುತ್ತದೆ
ಪದಗಳ ತುಂಬಿದ ಎದೆಯೊಳಗಿನ
ಹಣತೆ ಮಿನುಗಿ ಅವಳ
ಮೌನಕೆ ಬಲಿಯಾಗುತ್ತದೆ

ಹಣತೆಯ ಗೋರಿಗೆ ಪದಗಳ
ಕಫನ್ ಹೊಲಿದು
ನೋವಿನ ಮಿಝಾನ್ ಮೇಲೆ
ನನ್ನ ಕವಿತೆಯು ಮರು ಹುಟ್ಟು
ಪಡೆಯುತ್ತದೆ


ಹಲ್ಕಟ್

*ಅವಿಜ್ಞಾನಿ*

- ಅವಿಜ್ಞಾನಿ

02 Apr 2017, 10:21 pm

ಒಳಗಣ್ಣು

ನಮಗೆ ಕಾಣುವುದಷ್ಟೆ ನೋಟವೆಂದರೆ ಹೇಗೆ ?ಕಂಡ ನೋಟಗಳೆಲ್ಲ ರೇಷ್ಮೆ ವಸ್ತ್ರದ ಮೇಲೆಮುತ್ತ ಚೆಲ್ಲಿದ ಹಾಗೆ ! ಕಣ್ಣಿರುವ ತನಕನೋಡಿದ್ದಾಯ್ತು ಅದನಿದನು : ಬೇಕಾದ್ದು, ಬೇಡದ್ದು.ನೋಟ ಒಳಮುಖವಾಯ್ತು, ಅಲ್ಲಿ ಕಂಡದ್ದೇನು?ಚೆಂಜೇನು ಕಾಣಿಸಿತು ಗೂಡಿನ ಚಿಟ್ಟಿಜೇನು,ಅಂಚೆ ಪೆಟ್ಟಿಗೆಯಲ್ಲಿ ಅದರದ್ದೆ ಝಂಕಾರ.ಅರಿಯದೆಯೆ ಕೈಯಿಟ್ಟರಾಗ ಅವು ಕಚ್ಚುವುವು :ಕಚ್ಚಿದ ಬೆರಳಿಗುಂಟು ಅಂಥಿಂಥ ಔಷಧ. ಕಣ್ಣೇ ಹೋಯಿತೆಂದು ನನಗೆ ಬಂದಿದೆ ಚಿಂತೆ.ಒಳಗಣ್ಣು ಕವಿತೆಯನು ನೇಯುವುವು ಒಳಗೊಳಗೆ :ಪ್ರಾಸಗಳು ಬಂದು ನಿಲ್ಲುವುವು ಮಲ್ಲಿಗೆಯಂತೆ.ಬಿರುಗಾಳಿಯಲ್ಲಿ ಉಯ್ಯಾಲೆಯಾಡುವ ಹುಡುಗಿನನ್ನನ್ನು ಕಂಡು ನಕ್ಕಂತೆ ತೋರಿತು ನನಗೆ !ಒಂದೊಂದು ಪಂಕ್ತಿಗೂ ಛಂದಸ್ಸು ಉಂಟು,ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೆ ಇಲ್ಲ ;ಒಳಗಣ್ಣ ಮುಂದೆ ನಾನು ನನ್ನ ಕವಿತೆಯ ಕಂಡೆ,ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.

- nagaraj

02 Apr 2017, 05:39 pm

ಜಾತಿ

ನಿನ್ನ ಜನನವಾದೊಡೆ
ಜಾತಿ ಫಲಕ ನಿನ್ನೊಡೆ
ಭಂದನವಾದೆ ಅಂದಿನಿಂದೆ
ಜಾತಿನಿನ್ನೊಡಂ ವಿಲೀನವಾಗೆ.

ಅಜ್ಞಾನವ ತೊಡೆವಂ ಬ್ರಾಹ್ಮಣವರ್ಣಂ,
ಅನ್ಯಾಯವ ತೊಡೆವಂ ಕ್ಷತ್ರಿಯಂ,
ಅಭಾವವ ತೊಡೆವಂ ವೈಶ್ಯಂ,
ಆಲಸ್ಯವ ತೊಡೆವಂ ಶೂದ್ರಂ,
ಜಾತಿ ಎಲ್ಲಿಹುದೋ ಇಲ್ಲಿ,
ಇವೆಲ್ಲವುಗಳು
ಅವರವರ ಗುಣವನಾದರಿಸೆ,
ಅವರವರ ಕೆಲಸವನಾದರಿಸೆ,
ಅವರವರ ಸ್ವಭಾವವನಾಧರಿಸೆ
ಅವರವರ ಖರ್ಮವನಾದರಿಸಿ ವಿಂಗಡಿಸಿರೆ, ಹೊರತು ಹುಟ್ಟಿನಿಂದುದಯಿಸಿದಲ್ಲ..!!

ಹೆತ್ತವರಿಗರಿವಿಲ್ಲ ಜಾತಿಯೊಂದು ಪಿಡುಗು,
ಅವರ ಹೆತ್ತವರು, ಇನ್ನಾರನೋ ಅನುಸರಿಸಿ,
ಸ್ಪಷ್ಟಹುರುಳಿಲ್ಲ, ಈ ಜಾತಿ ವ್ಯವಸ್ಥೆಗೆ,
ಇರುವರೀರ್ವ ಸ್ತ್ರೀ ಪುಲ್ಲಿಂಗ,
ಜಾತಿ ಫಲಕ ತೊಟ್ಟು ಭಾವಭಂಗ..!

-ಕನ್ನಡದ ಭಕ್ತ

- ಕನ್ನಡದ ಭಕ್ತ

02 Apr 2017, 04:54 pm

ದಿಬ್ಬಣ

ಅತ್ತ‌ ರಾಜನ ಮದುವೆಯ ದಿಬ್ಬಣದ ಧನಿ ಕೇಳಿ
ಸುತ್ತ ಊರಿನ ಜನರು ದಂಡೆತ್ತಿ ಹೊರಟಿಹರು!!
ಎತ್ತ ನೋಡಿದರತ್ತ ದೀಪಗಳ ಆರತಿ
ಬೆಳಕ ತೋರಿಹುದು ದಿಬ್ಬಣದ ಊರಿಗೆ!!

ತಳಿರು ತೋರಣಗಳಲಿ ಆ ಊರ ಸಿಂಗಾರ
ಮುಗಿಲೆತ್ತರ ಚಪ್ಪರವು ಅರಮನೆಯ ಅಂಗಳದಿ!!
ರತ್ನ ಖಚಿತ ರಥವನ್ನು ಹೊತ್ತು ನಿಂತಿಹವು
ಜೋಡಿ ನಕ್ಷತ್ರದ ಹೊಳಪುಳ್ಳ ಕುದುರೆಗಳು!!

ಸಂಗೀತ ನರ್ತನವು ವಾದ್ಯ ಸಂತೋಷ
ರಾಣಿಗೆ ಏಕಿಂದು ಇಂತಹ ಸಂಕೋಚ!!
ಮುತ್ತು ರತ್ನದ ಒಡವೆ ಈ ಚಂದ‌ ವಧುವಿಗೆ
ಸ್ವಚ್ಛ ವಸ್ತ್ರದ ಉಡುಪು ನವ ವಧು ವರರಿಗೆ!!

ದಿಬ್ಬಣದ ಊರಲ್ಲಿ ಸಂತಸದ ಸಂಭ್ರಮ
ಸುತ್ತ ಊರ ಜನಕೆ ಭೋಜನ ಉಡುಗೊರೆಯು!!
ಎತ್ತ ನೋಡಿದರತ್ತ ದಿಬ್ಬಣದ ಸಡಗರ
ಗುಂಪು ಗುಂಪಲಿ ಜನರ‌ ಸಂತಸದ ವಿನಿಮಯ!!

- ಪಿ.ಜಿ.ಜ್ಯೋತಿ

02 Apr 2017, 03:19 pm

ತೊಗಟೆ ಕಳಚುವ ಮುನ್ನ (ಗಿಬ್ರಾನ್ ಪ್ರೇರಿತ)

ಪ್ರೇಮ ಎಳೆಯಾಗಿ ನಿನ್ನೊಳಗೆ
ಬೆಳೆಯ್ಪಡುತ್ತದೆ
ಕಣ್ಣೀರಾದರೂ ಹಾಕಿ ಪೋಷಿಸು
ಚಿಗುರುವಾಗ ಮುಳ್ಳುಗಳೂ ಬರಬಹುದು
ಕಾಯಲು ಹುಟ್ಟಿವೆಯೆಂದು
ತಿಳಿದುಕೋ..

ಹಗಲು ರಾತ್ರಿ ಮರವಾಗಿ
ಎದುರು ನಿಂತಿರುತ್ತದೆ
ನೆನಪುಗಳ ಕೊಂಬೆಗಳಲ್ಲಿ
ಕನಸುಗಳು ಕಾಯಿಯಾಗುತ್ತದೆ
ಇಗೋ,ಕೆಲವರಿಗೆ ವಿರಹವೆಂಬ
ಬರಗಾಲ ಎರಗುತ್ತದೆ
ಮೌನದ ಬಿಸಿಲು ಅದಕೆ ಕಾರಣವಾಗಿರುತ್ತದೆ

ನೆನಪಿಡು,ಕಳೆಯಂತೆ ಕೆಲವು
ಬೇನಾಮಿ ಬಳ್ಳಿಗಳೂ ಮುತ್ತುತ್ತವೆ
ನಿನ್ನೊಡಲ ಸಾವಧಾನ ಎಡೆಕೊಡಲಿ
ತಪ್ಪಿಲ್ಲ
ಬಳ್ಳಿಯೂ ಹೂ ಬಿಡವುದಾದರೆ
ಎಚ್ಚರವಾಗಿರು,ಘಮಿಸಿ ರಮಿಸಿ
ಏಕಸ್ವಾಮ್ಯ ಮಾಡಿಕೊಳ್ಳಬಹುದು
ಕ್ರಮೇಣ ಒಣತೊಗಟೆಗಳ ಕಳಚಿಬಿಡು
ಬಳ್ಳಿಯೂ ಪಾಶವಾಗದಿರಲಿ

ನೀ ಬೆಳೆಯಲು ನಿನಗೊಬ್ಬ ಒಡೆಯನಿರುತ್ತಾನೆ ಆ ಅಂಗಳದ
ಕೃಷಿ ನೀನಾಗಿರುತ್ತಿ ನೋಡಿಕೋ,
ಎಂದೆಂದೂ ನಿನ್ನನ್ನು ಸಮೃದ್ಧವಾಗಿಸಲು ಆಶಿಸುವವ

ಕೃತಜ್ಞನಾಗಿರು,
ಕತ್ತರಿಸಲು ಬರದಿರುವವರೆಗೂ,
ಎಳೆಯನ್ನು ಚಿಗುರಿಸುವೆಯೋ
ಚಿವುಟಿ ಹಾಕುವೆಯೋ
ಅಂತಿಮ ತೀರ್ಮಾನ ನಿನ್ನದೇ
ದೇವರು ನನ್ನ ಪರವಾಗಿ ಚಿಂತಿಸಲು
ದಾರಿ ತೋರಲಿ..

*ಅವಿಜ್ಞಾನಿ*

- ಅವಿಜ್ಞಾನಿ

02 Apr 2017, 02:43 pm

ಕಂಗಳ ನೀರಾ ಹನಿ

ಲೇಖನಿಯೊಳಗಪ್ಪಿ
 ಬಿಳಿ ಹಾಳೆಗಪ್ಪುತಿರುವದು ಕಪ್ಪು ವರ್ಣದ ಇಂಕಲ್ಲಾ
  ಕಣ್ಣಿಗು ಕಾಣದ ಬಿಳಿ
  ರೂಪದ ಕಂಗಳ ನೀರಾ ಹನಿ

 ಅದರೆ ಇನ್ನು ಕೇಲ ದೀನಗಳಲ್ಲೆ ಬಿಚ್ಚಲಿದೆ
 ಸಮಾಜ ಸೆವೆಯೆಂ ಮುಖವಾಡವನೊತ್ತಾ ಮುರ್ಖಾ ಮುಖಗಳ
 ಎಚ್ಚೇರ ವಿರಲಿ
 ಬಿಳಿ ಹಾಳೆಯಾ ಮೇಲೆ ಅರ್ಭಟಿಸಲು ಸಜ್ಜಾಗುತಿದೆ
 ಬಿಳಿ ಕಂಗಳ ನಿರಾ ಸುನಾಮಿ .....

ಪ್ರವೀಣ್ ಯಾದವ್

- ಪ್ರವೀಣ್ ಯಾದವ್

02 Apr 2017, 02:40 pm

ನಮ್ಮ ಜವಾಬ್ದಾರಿ ಯಾರದು

ಇಷ್ಟ ಪಟ್ಟು ಮದುವೆ ಆಗಿಲ್ಲ ನೀವು
ನಮಗೆ ಯಾವ ಪ್ರೀತಿಯು ಕೊಟ್ಟಿಲ್ಲ ನೀವು .
ಯಾಕೆ ಈಗಾಯ್ತು ಎಂದು ಕೇಳಲು
ನಮಗೆ ತಿಳಿದಿಲ್ಲ ಅಪ್ಪ-ಅಮ್ಮ .

ಮಕ್ಕಳಾಗುವ ತನಕ ನಿಮ್ಮ ಸ್ವಾರ್ಥ ನಿಮ್ಮದು .
ಆದರೆ ನಿಮಗಾಗಿ ನಾವು ಇದ್ದಮೇಲೆ ನಿಮ್ಮ ಪ್ರಪಂಚವೇ ನಾವಾಗಬೇಕಲ್ಲ .

ಇನ್ನು ನಿಮಗಾಗಿ ನೀವಿದ್ದರೆ ನಾವ್ಯಾಕೆ ನಿಮಗೇ ........
ಅಪ್ಪನ ಪ್ರೀತಿ ಅಮ್ಮನ ಅಕ್ಕರೆ
ಎರಡು ಇಲ್ಲ ನಮಗೆ .

ನಾವು ಎಲ್ಲರ ತರ ಮಕ್ಕಳಲ್ಲವೇ
ನಮಗೂ ಎಲ್ಲರಹಾಗೆ ನೂರು
ಆಸೆಗಲಿಲ್ಲವೇ .........

ಇಬ್ಬರ ಸಂತೋಷಕ್ಕೂ ನಾವು
ಪ್ರತಿರೋಪವಾದಾಗ ಒಬ್ಬರೇ
ನಮ್ಮ ಜವಾಬ್ದಾರಿ ಏಕೆ ವಹಿಸಬೇಕು.

ಎಲ್ಲರೂ ಅನ್ನಬಹುದು ಇದು ನಿಮ್ಮ ವಿಧಿ ಬರಹವೆಂದು ಆದರೆ ನಮಗೆ ಗೊತ್ತು ಅದು ನಮ್ಮ ತಂದೆ-ತಾಯಿ ನಮಗಿಟ್ಟ ಶಾಪವೆಂದು.

- ಚುಕ್ಕಿ

02 Apr 2017, 12:25 pm

ಬಾಳೊಂದು ಗೋಳು... ನೂರಾರು ಸೋಲು...

ಬಾಳೊಂದು ಗೋಳು ನೂರಾರು ಸೋಲು
ಸೋತೆನೆಂದು ನೊಂದರೆ ಬೆಳಗದು ನಿನ್ನ ಬಾಳು
ಗೆದ್ದೆನೆಂದು ಗರ್ವಿಸಿದರೆ ಆಗುವುದು ಹಾಳು
ಓ ನನ್ನ ಮನವೇ ಕೇಳು ಪ್ರೀತಿಗಾಗೆ ಪ್ರತಿಜನ್ಮ ನೀ ತಾಳು||ಪ||

ಅನ್ಯರು ಏನೆಂದರೂ ನಿನ್ನ ಮನವೇ ನೊಂದರೂ
ಕೊನೆಗೆ ನಿನ್ನೇ ಕೊಂದರೂ ಪ್ರೀತಿಯ ಮರೆಬೇಡ ನೀತಿಯ ಬಿಡಬೇಡ| ದಿಕ್ಕಿಲ್ಲದೆ ಸಾಗುವ ಪಯಣ ಗುರಿಯೆಂದು ತಲುಪದು ಉತ್ತಮ ಗುರಿಯೆಡೆಗೆ ಸಾಗಲಿ ಜೀವನ ಗುರಿಯಿಂದ ಜನ್ಮ ಆಗುವುದು ಪಾವನ| ಮನಸ್ಸಿದ್ದರೆ ಕಲ್ಲುಕೂಡಾ ಕರುಗುವುದು ಕೃಷಿ ಇದ್ದರೆ ಶಿಲೆಕೂಡ ಶಿಲ್ಪವಾಗುವುದು| ಆಸೆಯ ಬಿಡು ನೀ ಆಶಯ ಕೈ ಹಿಡಿ ಸಾಧನೆಯ ಮೆಟ್ಟಿಲು ಹತ್ತಿ ಎಲ್ಲರ ಪ್ರೀತಿಯ ಪಡಿ||೧||

ಶತ್ರುಗಳು ಯಾರು ಇಲ್ಲ ನಮಗೆ ನಾವೇ ಕತೃಗಳು ಯಾರೋ ಕಲ್ಲು ಎಸೆದರೆಂದೂ ಅವ ನೀ ದ್ವೇಷಿಸಬೇಡ ಅವನೆಸೆದ ಕಲ್ಲೆ ನಿನ್ನ ಸಾಧನೆಯ ಮೆಟ್ಟಿಲು ಎಂಬುದನ್ನು ಮರೆಯಬೇಡ| ಜೀವನವ ಚಿಂತಿಸಬೇಡ ಬೆನ್ನೇ ತೋರದೆ ಮುನ್ನುಗ್ಗುತ್ತಿದ್ದರೆ ಸೋಲೇ ನಿನಗಿಲ್ಲ ನೀ ಇಟ್ಟ ಪ್ರತಿ ಹೆಜ್ಜೆ ಗೆಜ್ಜೆ ಸದ್ದಾಗಿ ಮನವ ಕದಿಯುವುದು|ಕಾರ್ಯವಿದ್ದರೆ ಕನಸ್ಸು ಕೂಡ ನನಸ್ಸಾಗುವುದು ಕೈ ಹಾಕಿದರೆ ಕಸ ಕೂಡ ರಸವಾಗುವುದು| ನೆನ್ನೆಯ ನೆನ್ನೆಗೆ ಮರೆತು ಬಿಡು ನಾಳೆಯೆಂದು ತಿಳಿಯದ ನಮಗೆ ಈ ಕ್ಷಣವೇ ನೀ ಬದಲಾಗಿ ಕಾರ್ಯಪ್ರವೃತ್ತನಾಗು||೨||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

02 Apr 2017, 12:23 pm

ಸ್ವಾರ್ಥ

ಯಾಕೆ ಈ ಜನರು ಇಗೆ
ತಮ್ಮ ಸ್ವಾರ್ಥ ತಮ್ಮದೆ
ಉಳಿದವರ ಯಾರ ನೋವು
ಇವರಿಗೆ ಕಾಣಲ್ಲ .

ನೊಂದವರ ನೋವಿಗೆ ಸಮಾಧಾನ
ಹೇಳುವುದು ಹಾಗಿರಲಿ
ಅದನ್ನು ಇವರ ಮಾತಿನಿಂದ
ಇನ್ನು ಹೆಚ್ಚಿಸುತ್ತಾರೆ.

ಮಾನವತ್ವ ಎಂಬ ಪದಕ್ಕೆ
ಅರ್ಥವೇ ಗೊತ್ತಿಲ್ಲ ಇವರಿಗೆ .
ಯಾವ ದೇವರು ಇವರನ್ನು
ಕೇಳುವುದಿಲ್ಲವೆಂಬ ಧರ್ಯ ಇವರಲ್ಲಿ.

- ಚುಕ್ಕಿ

02 Apr 2017, 11:23 am