Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಓ ಪ್ರೇಮದ ಶ್ವೇತಾಂಬರಿ
ನೀ ಬಾಳಿನ ಕಾದಂಬರಿ!!
ಮುಂಗುರುಳು ತೂಕಡಿಸುವ
ಮಗುವಂತಿದೆ
ಆ ಮಗುವೀಗ ಇರುಳಲ್ಲಿ
ನನ್ನ ಕೆಣಕಿದೆ!!
ಈ ಪ್ರೀತಿಯ ಹೊಸ ಆಸೆಯ
ಚಪ್ಪಾಳೆಗೆ
ಕಣ್ಣ ರೆಪ್ಪೆಯು ಒಪ್ಪಿಗೆಯ
ತಾ ನೀಡಿದೆ!!
ಓ ಪ್ರೇಮದ ಶ್ವೇತಾಂಬರಿ
ನೀ ನನ್ನಯ ಕಾದಂಬರಿ!!
ಹುಸಿ ಮುನಿಸಿನ ಸವಿನುಡಿಗಳ
ಒಡನಾಟಕೆ
ಮಿತಿ ಮೀರಿದ ಒಲವಿಂದು
ನನ್ನ ಕಾಡಿದೆ!!
ಸಂಭ್ರಮಿಸುವ ಈ ನಮ್ಮಯ
ಸಮ್ಮಿಲನಕೆ
ಮುಗಿಲೇರಿರೋ ಆ ಚಂದ್ರನ
ಸಾಕ್ಷಿ ಇದೆ!!
- ಪಿ.ಜಿ.ಜ್ಯೋತಿ
21 Jun 2017, 05:25 pm
ಪರಿಶೀಲನೆಯಲ್ಲೆ ಮುಗಿಯುವುದು
ನಾಡಿನ ಬರಗಾಲ.....
ಪರಿಹಾರ ಘೊಷಣೆಯಲ್ಲೆ ಮುಗಿಯುವುದು ಮಳೆಗಾಲ.......
ಇದ ಪಡೆಯಲು ಜೀವನವೇ
ಮುಗಿಯುವುದು ಅಲೆದಾಟದಲ್ಲಿ.....
ಇವರನ್ನು ಕೆಳಲು,ಅವರಲ್ಲಿಗೆ
ಅವರನ್ನು ಕೇಳಲು, ಇವರಲ್ಲಿಗೆ
ತಿರುಗಿಸುತ್ತಾ......ಮಾಡುವರು
ಇರಿಸು- ಮುರಿಸು ಪಡೆಯುವಲ್ಲಿಗೆ
ಎಲ್ಲಿಗೋದರು ಇಲ್ಲ ಎಂಬ
ನುಡಿ ಕೇಳಲು, .......
ಜನಿಸಿತು ಸಂಶಯದ ಗೂಡು
ಎಲ್ಲಿಗೋಯಿತು.........
ಆಯಿತೆ ಮೂಷಿಕನ ಪಾಲು....
ಹುಡುಕಲು ಅದರ ಜಾಡು
ದೊರೆಯಿತು ತಿಮಿಂಗಿಲಗಳ ಗೂಡು...
ಬೇಡುವ ಕೈಗಳು ನೂರಾರು
ನೀಡುವ ಕೈಗಳು ಕೆಲವಾರು
ದೋಚುವ ಕೈಗಳು ಸಾವಿರಾರು
ರಕ್ಷಿಸುವರು ಇದರಡಿ ಮರೆಯಾದರು!
ನೀಡುವ ರೈತ ಶಾಪವ
ಪಡೆಯಲಾಗದೆ ಹಿಡಿ ಅನ್ನವ
ನೀಡುವವರಾರು ಮರುಜನ್ಮವ!!
ಅರಿಯಲಾಗದು ಜಗದ ಮರ್ಮವ!!
ಶಾರಧ
- ಶಕುಂತಲಾ
21 Jun 2017, 04:13 pm
ಮನಸಿನಲ್ಲಿ ತುಂಬಿರುವ ಕಠೋರವಾದ ಮೌನ ಉಳಿಸಿತು ನನ್ನಲ್ಲಿ ಅಳಿಯಾದ ಅಳುವನ್ನು.........
ಕೇಳಿ ಕೇಳಿ ಈ ಮೌನದ ಕರ್ಕಶವಾದ ಧ್ವನಿಯನ್ನು
ಮಾತಿನ ಮಾತನು ಕೇಳುವ ತಾಳ್ಮೆಯೇ ಇಲ್ಲದಾಯ್ತು ನನ್ನಲ್ಲಿ.................
ಯಾಕೇ ಮೌನವೇ ನೀನಿಗ ಮೌನಿಯಾದೆ ನೀನು ನನ್ನ ಮಾತನ್ನು ನುಂಗಿ ....................
ನನಗೆ ಕೊಟ್ಟ ಹಿಂಸೆ ಸಾಲಲಿಲ್ಲವೇ ನಿನಗೆ ನೆಮ್ಮದಿಯಾಗಿ ನೀ ನಿದ್ರಿಸಲೂ ನನ್ನ ನಿದ್ದೆಯೂ ಕೆಡಿಸುತ್ತಿರುವೆಯಲ್ಲಾ.............
ತಲೆಯ ಮುಟ್ಟಿನೊಡೆ ಅದರಲ್ಲಿನ ನರ-ನಾಡಿಗಳು
ತಮ್ಮ ರಕ್ತದ ಚಲನವಲನವನ್ನು ನಿಲ್ಲಿಸಿ ನನಗೆ ನೋವು ಕೊಟ್ಟು ನರಕ ತೋರುತ್ತಿವೆ ನಿನ್ನ ಜೊತೆಗೂಡಿ................
ನೂರು ಶಬ್ದಗಳನ್ನು ಕೇಳುತ್ತಿದ್ದರು ನನ್ನ
ಬಿಡದೆ ಕಾಡುತ್ತಿರುವೆ ನೀನು...........
ನನಗಂತೂ ತಿಳಿದಿಲ್ಲ ನಿನ್ನಿಂದ ತಪ್ಪಿಸಿಕೊಳ್ಳುವ ದಾರಿ ಏನಿದೆ ಎಂದು.............
ಕಣ್ಣೀರಿಗೂ ನಿನ್ನ ಮೇಲೆ ಪ್ರೀತಿಯೇ ಇಲ್ಲದ ಮೇಲೆ ಹೇಗೆ ಇಡಬೇಕು ನಿನ್ನ ನನ್ನೊಳಗೆ ಹೇಳೇ ಮೌನವೇ ನಿನ್ನಲ್ಲಿ ಏತಕೆ ಈ ಮೌನ................
- ಚುಕ್ಕಿ
21 Jun 2017, 04:08 pm
ಲೋಕವೆಲ್ಲಾ ಕೆಟ್ಟದೆಂದು ಕಪ್ಪಾಗಿ ನೋಡುವ
ಬದಲು ನಿನ್ನ ಕಣ್ಣಲ್ಲಿ ನೆಲೆಯಾಗಿರುವ
ಬಿಳುಪನ್ನು ನೋಡು ಮೊದಲು............
ಅದರಲ್ಲೇ ಕಲ್ಮಶವಿಲ್ಲವೆಂದ ಮೇಲೆ
ನಿನ್ನ ದೃಷ್ಟಿ ದೋಷ ತಿಳಿದು ಬದುಕು
ಮನದಲ್ಲಿನ ಕಲ್ಮಶಗಳನ್ನು ಕಿತ್ತುಹಾಕು........
ಬಂಡೆಕಲ್ಲುಗಳಿರುವ ಬರಡು ಭೂಮಿ ಎಂದು ನೋಡುವ ಬದಲು ಅದರಲ್ಲಿ ಜೀವ ಪಡೆದುಕೊಂಡಿರುವ ಪುಟ್ಟಗಿಡಗಳನ್ನು ನೋಡು ಯಾರ ಮೇಲೂ ಆಧಾರವಾಗದೆ ಅವು ಬೆಳೆದು ಮರವಾಗುವ ಶೈಲಿಯ ನೋಡು............
ಸಮುದ್ರದಲ್ಲಿನ ಉಪ್ಪುನೀರು ನಿರುಪಯೋಗ
ಎನ್ನುವ ಬದಲು ಆ ಸಾಗರದಿಂದ ಪಡೆದ ಉಪ್ಪು ಬೆರೆಸಿ ಮಾಡುವ ನೂರು ರುಚಿಕರವಾದ ಅಡಿಗೆಗಳನ್ನು ನೋಡು...................
ಜೀವನ ನೀನು ನೋಡಿವ ದೃಷ್ಟಿಕೋನದಿಂದಲೇ
ನಿನ್ನನ್ನು ನೋಡುತ್ತದೆ.........................
ಒಳ್ಳೆಯ ಆಲೋಚನೆಗಳನ್ನು ಮಾಡು ಒಳ್ಳೆಯ ಕೆಲಸಗಳನ್ನು ಮಾಡು ನಿನ್ನ ಸುತ್ತಲಿನ ಸಮಾಜವೂ
ನಿನ್ನ ಒಳ್ಳೆಯ ವ್ಯಕ್ತಿಯಾಗಿ ಗುರ್ತಿಸುತ್ತದೆ ನಿನಗೆ ಒಳಿತನ್ನು ಬಯಸುತ್ತದ್ದೆ...........
- ಚುಕ್ಕಿ
21 Jun 2017, 03:11 pm
ನೀನಿನ್ನ ಹೊಗಬೇಡ ದೂರ
ಕಡಿದೆನ್ನ ಮನಸಿನ ದಾರ
ನಿ ಹೀಗೆ ತೊರೆದರೆ ಊರ
ನನಗಿನ್ನಾರು ಆದಾರ
ಬರಬೇಕೆಂದು ನಿ ಹೊದ ದೂರ
ನನ್ನ ಕಣ್ಣಿಗೆ ಬಂದಿದೆ ಬಾರ
ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರ
ಕೊರಳಲ್ಲಿಡುವೆ ನಾ ಮುತ್ತಿನ ಹಾರ?
ನಿನ್ನ ಹುಡುಕುತಾ ನಾ ಬಂದಾಗ
ನನ್ನ ನಿ ಹಿಂದೆ ಕಳುಹಿಸು ಬೇಗ
ತುಂಬಿದ ಕಣ್ಣ ಸೆರಗಲ್ಲೊರಿಸಿ
ನಸುನಕ್ಕಿದೆ ನೊವನು ಮರೆಸಿ
- ಹೇಮಚಂದ್ರ
21 Jun 2017, 12:11 pm
ಲಕ್ಷ್ಮಣ ರಕ್ಷಿತ ಲಕ್ಷ್ಮಣ ರೇಖೆಯ
ದಾಟುವ ಮುನ್ನ...
ಓ ಸೀತೆ..!
ಹೇಳು ನೀ ಆ ಕ್ಷಣಗಳ ಮನಸಿನ ತುಮುಲವ...
ರೇಖೆಯ ಮಹಿಮೆ ಅರಿತೂ ದಾಟಿದೆಯಾ ?
ಭಿಕ್ಷೆ ನೀಡಿ ಪುಣ್ಯ ಪಡೆಯುವ ಬಯಕೆಯಾ ?
ಅಥವಾ..
ಧರ್ಮಪಾಲನೆಯ ನಿಯಮಕೆ ಸಿಲುಕಿದೆಯಾ ?
ಭಿಕ್ಷೆ ಬೇಡಲು ಬಂದ ಕಾಮರೂಪದ
ಸೂಕ್ಷ್ಮ , ಸುಳಿವು ಕಾಣದೆ ಹೋದೆಯಾ ?
ಅಥವಾ..
ರಾಮ ನಾಮದ ಮಹಿಮೆ ತಿಳಿಯೆಯಾ ?
ಅರಿವ ಗುರು ಲಕ್ಷ್ಮಣನ ಮೇಲೆ ಅನುಮಾನವಾ ?
ಅಥವಾ..
ನಿನ್ನ ನೀ ಮರೆತೆಯಾ ?
ಹೇಳು ನೀ ಸೀತೆ ?
ಲಕ್ಷ್ಮಣ ರೇಖೆಯ ದಾಟುವ
ಆ ಕ್ಷಣಗಳ ಮನಸಿನ ತುಮುಲವ...
- Indushekar Chinivar
21 Jun 2017, 10:01 am
ದಿನ ರಾತ್ರಿ ನಾ ಮಲಗಿರಲು
ನನ್ನನ್ನು ಎಬ್ಬಿಸಿ
ಹಗಲುಗನಸಿಗೆ ಬಾ ಎಂದು
ಕರೆಯುವುದು ನಿನ್ನ ನೆನಪು!!
ರಾತ್ರಿ ನಿದ್ದೆಯಲ್ಲಿರುವಾಗ
ತಿಗಣೆ ಕಾಟದ ಬಾಧೆಯನ್ನಾದರೂ
ಸಹಿಸಬಹುದು ಆದರೆ
ನಿನ್ನ ನೆನಪಿನ ಬಾಧೆಯನ್ನಲ್ಲ!!
ನಿನ್ನ ನೆನಪಿನಲ್ಲಿ ನಾ
ಅದೆಸ್ಟೋ ರಾತ್ರಿಗಳನ್ನು ಕಳೆದಿರುವೆ
ಆದರೆ ಇಂದೇಕೋ ಮನ
ನಿನ್ನ ತುಂಬಾ ಹಂಬಲಿಸುತ್ತಿದೆಯಲ್ಲ!!
- ಪಿ.ಜಿ.ಜ್ಯೋತಿ
21 Jun 2017, 04:35 am
ಮೋಡದ ಮರೆಯಲಿ
ಸೂರ್ಯನ ಕಿರಣಗಳಂತೆ
ಮನಸ್ಸಿನ ಆಳಕೆ ನೀ ಇಳಿದೆ
ಮನಸ್ಸಿಗ ಎಲ್ಲೊ ಮರೆಯಾಗಿದೆ
ನಿನ್ನ ಹೆಸರೀಗ ನನ್ನ ಉಸಿರಾಗಿದೆ...
- Devu.M
20 Jun 2017, 07:45 pm
ಕೆರೆಯ ತಾವರೆ ತಂದು
ಕಡಲಿನ ಆಸರೆ ಇಡಲು
ಬೆಳೆವುದೇ..... ?
ಆ ತಾವರೆಯ ಬಯಲು
ಉಳಿವುದೇ.....?
ಆ ತಾವರೆಯ ನೆರಳು!!
- ಪಿ.ಜಿ.ಜ್ಯೋತಿ
20 Jun 2017, 06:50 pm
ತೆರೆದ ಮನಸಿನ ಪುಟವ
ನೀ ಓದಲು ಅರಿಯದೇ ಹೋದೆ....
ತೆರೆದುಕೊಂಡಿಹುದು
ಈ ನನ್ನ ಮನಸು.........
ಹಿಂತಿರುಗಿ ಬಂದೊಮ್ಮೆ
ನೀ ನನ್ನ ಸ್ವೀಕರಿಸು......
- ಪಿ.ಜಿ.ಜ್ಯೋತಿ
20 Jun 2017, 06:41 pm